No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
  • Advertise With Us
  • Grievances
  • About Us
  • Contact Us
Wednesday, July 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕಾಮಿಡಿ ಲೋಕದಲ್ಲಿ ಚಿಲ್ಲರ್ ಎಂಬ ಬ್ರ್ಯಾಂಡ್ ನಟ

ತಾಯಿಯೇ ಮೊದಲ ಗುರು, ಬಡತನವನ್ನೇ ಎರಡನೆಯ ಗುರುವನ್ನಾಗಿಸಿಕೊಂಡ ಈ ಕಲಾವಿದನ ಕುರಿತು ನೀವು ತಿಳಿಯಲೇಬೇಕು

kalpa News by kalpa News
December 1, 2019
in Special Articles
0
ಕಾಮಿಡಿ ಲೋಕದಲ್ಲಿ ಚಿಲ್ಲರ್ ಎಂಬ ಬ್ರ್ಯಾಂಡ್ ನಟ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಒಂದೂರಲ್ಲಿ ಒಬ್ಬ ಸಾಮಾನ್ಯ ಹುಡುಗ ಇರ್ತಾನೆ. ಆತನ ಮನೆಯಲ್ಲಿ ಟಿವಿ ಇರಲಿಲ್ಲ. ಆದರೆ ಆತನಿಗೆ ಸಿನೆಮಾ ನೋಡುವ ಹುಚ್ಚು. ಟಿವಿ ಇದ್ದವರ ಮನೆಯ ಬಾಗಿಲಲ್ಲಿ ನಿಂತು ಟಿವಿ ನೋಡುತಿದ್ದ. ಆದರೆ ಆ ಮನೆಯ ಮಾಲಕರ ದರ್ಪ, ಸೊಕ್ಕಿನಿಂದ ಅವಮಾನಿತವಾಗಿ ವಾಪಾಸ್ಸು ತಮ್ಮ ಮನೆಗೆ ಬರುತಿದ್ದ. ತುಂಬಾ ಕನಸುಗಳನ್ನು ಕಟ್ಟಿಕೊಂಡವನ ಎದೆಗೆ ಜಾಡಿಸಿ ಒದ್ದಂತೆ ಆಗಿತ್ತು. ಮುಂದೊಂದು ದಿನ ಯಾವ ಮನೆಗಳಿಂದ ಹೊರಗೆ ನೂಕಲ್ಪಟ್ಟಿದ್ದನೋ ಅದೇ ಮನೆಯ ಮಾಲಕರು ಆತ ಟಿವಿಯಲ್ಲಿ ಬರುವುದನ್ನು ನೋಡುತ್ತಿದ್ದಾರೆ.

ಈತ ಕಲರ್ಸ್ ಸೂಪರ್ ಕನ್ನಡ ವಾಹಿನಿಯ ಮಜಾ ಭಾರತ, ಕಾಮಿಡಿ ಟಾಕೀಸ್’ ರಿಯಾಲಿಟಿ ಶೋನ ನಟ. ಆತನ ಹೆಸರು ಮಂಜುನಾಥ್ ಗುಡ್ಡದವರ. ಬಹುಶಃ ನಿಮಗೆ ನೆನಪಿಗೆ ಬರಲಿಕ್ಕಿಲ್ಲ. ಯಾಕೆಂದರೆ ಆತ ಕರ್ನಾಟಕಕ್ಕೆ ಪರಿಚಿತನಾಗಿರುವುದು ಬೇರೆ ಹೆಸರಿನಿಂದ.

ಅದುವೇ ಚಿಲ್ಲರ್ ಮಂಜ. ಇಟ್ಸ್‌ ಎ ಬ್ರ್ಯಾಂಡ್..

ಹೌದು, ಈ ಹೆಸರಿನಿಂದ ಮಂಜುನಾಥ ಗುಡ್ಡದವರ ಕರ್ನಾಟಕದ ಮನೆ ಮನೆಗಳಲ್ಲೂ ಪರಿಚಿತನಾಗಿದ್ದಾರೆ. ನಗಿಸೋಕೆ ಅಂತಾನೇ ಇರುವ ಈ ಶೋನಲ್ಲಿ ಕಾಮಿಡಿ ಮಹಾರಾಜ ಎಂದರೆ ತಪ್ಪಾಗಲಿಕ್ಕಿಲ್ಲ. ಇವರ ಪ್ರತಿಯೊಂದು ಪಂಚ್ ಡೈಲಾಗ್ ನೋಡುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಅವರ ಬಾಡಿ ಲಾಂಗ್ವೇಜ್ ಹಾಸ್ಯಕ್ಕೊಂದು ಪ್ಲಸ್ ಪಾಯಿಂಟ್ ಅಂತಾನೆ ಹೇಳಬಹುದು.

ಇದಷ್ಟೇ ಅಲ್ಲದೇ ಇವರು ತಮ್ಮ ಹಲವಾರು ಸ್ಕ್ರಿಪ್ಟ್‌ ತಾವೇ ರಚಿಸಿ ಅಭಿನಯಿಸಿದ್ದಾರೆ. ಮಜಾಭಾರತದಲ್ಲಿ ಉತ್ತಮ ಪ್ರದರ್ಶನಕ್ಕಾಗಿ ಕೊಡಮಾಡುವ ವಾರದ ಉತ್ತಮ್ಮ ಹಾಸ್ಯನಟ ಕಿರೀಟ ಪ್ರಶಸ್ತಿಗೆ ಅತೀ ಹೆಚ್ಚು ಭಾರಿ ಭಾಜನರಾಗಿದ್ದಾರೆ.

ಲಾಯರ್, ಭಿಕ್ಷುಕ, ರಿಪೋರ್ಟರ್, ಜಡ್ಜ್‌, ಕ್ಯಾಮೆರಾಮ್ಯಾನ್, ಲವರ್ ಬಾಯ್, ಅಜ್ಜ, ಪೋಲಿ ಮುದುಕ, ಹೀಗೆ ಅನೇಕ ಪಾತ್ರಗಳಲ್ಲಿ ನಟಿಸಿ ವೀಕ್ಷಕರನ್ನು ನಗಿಸಿ ಸುಸ್ತು ಮಾಡಿದ್ದಾರೆ.

ಕಲೆಯ ನಂಟು ಅಂಟಿದ್ದು ಹೀಗೆ
ಚಿಲ್ಲರ್ ಮಂಜಾ ಅವರು ಶಿಕ್ಷಕರಾಗಬೇಕು ಎಂಬ ಕನಸಿನೊಂದಿಗೆ ಧಾರವಾಡದಲ್ಲಿ ಶಿಕ್ಷಕರ ತರಬೇತಿ ಪಡೆಯುತ್ತಾರೆ. ಧಾರವಾಡ ಸಾಹಿತಿಗಳ, ರಂಗಕರ್ಮಿಗಳ, ಜಾನಪದಗಾರರ ತವರೂರು. ಅಲ್ಲಿನ ವಿದ್ಯಾವರ್ಧಕ ಸಂಘ, ರಂಗಾಯಣದಲ್ಲಿ ಜರಗುವ ಸಾಂಸ್ಕೃತಿಕ ಕಾರ್ಯಕ್ರಮ ನಾಟಕಗಳಿಂದ ಪ್ರೇರಿತರಾಗಿ ತಾವು ಕಲಾವಿದರಾಗಬೇಕು ಎಂಬ ಆಸೆಗೆ ಮತ್ತಷ್ಟು ನೀರೆರೆಯುತ್ತಾರೆ.

ರಂಗಾಯಣದಲ್ಲಿ ಜರಗುವ ನಾಟಕ ಶಿಬಿರಗಳಿಗೆ ಭಾಗವಹಿಸಿ ತಮ್ಮೊಳಗಿನ ಕಲೆಯನ್ನು ಹೊರಹಾಕುವ ಪ್ರಯತ್ನ ಮಾಡುತ್ತಾರೆ. ಹಲವಾರು ಹವ್ಯಾಸಿ ರಂಗತಂಡಗಳಲ್ಲಿ ಭಾಗಿಯಾಗಿ ಅವರ ಜೊತೆ ನಾಟಕ, ಬೀದಿ ನಾಟಕ, ಜಾಣಪದ ಕುಣಿತ, ಗಾಯನ ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.


ಕೇವಲ ಹವ್ಯಾಸಕ್ಕಾಗಿ ಆರಂಭವಾದ ಈ ಕಲೆಯನ್ನು ವೃತ್ತಿಜೀವನವಾಗಿ ಪರಿಗಣಿಸಿ ಅಪರಿಮಿತ ತಾಳ್ಮೆ ಮತ್ತು ಪರಿಶ್ರಮದಿಂದ ಅಭಿನಯಿಸುವಲ್ಲಿ ಶ್ರಮಿಸುತ್ತಾರೆ. ಅಲ್ಲಿನ ಹವ್ಯಾಸಿ ರಂಗಭೂಮಿ ತಂಡಗಳಲ್ಲಿ, ರೆಪರ್ಟರಿ ತಂಡಗಳಲ್ಲಿ ಕಲಾವಿದನಾಗಿ ಕಾರ್ಯ ನಿರ್ವಹಿಸುತ್ತಾರೆ. ಧಾರವಾಡದ ಟೂರಿಂಗ ಟಾಕೀಸ್, ಆಟಮಾಟ, ಮುಂತಾದ ಕಲಾ ತಂಡಗಳಲ್ಲಿ ಭಾಗವಹಿಸಿ ಕರ್ನಾಟಕದ ತುಂಬಾ ಪ್ರದರ್ಶನ ನೀಡಿದ್ದಾರೆ.

ಬದುಕಿಗೆ ತಿರುವು ನೀಡಿದ ಡಾಕ್ಟರ್
ಮಂಜುನಾಥ್ ಅವರ ಬದುಕಿನಲ್ಲಿ ಮತ್ತೊಂದು ಮಜಲು ಹುಟ್ಟಿಕೊಂಡಿದ್ದು ಡಾಕ್ಟರ್’ನಿಂದ. ಆದರೆ ಈ ಡಾಕ್ಟರ್ ನೀವು ಅಂದುಕೊಂಡಂತೆ ಮಾನವರಲ್ಲ. ಅದು ನಾಟಕದ ಹೆಸರು www.ಡಾಕ್ಟರ್.com.


ಈ ನಾಟಕವು ಅಪ್ಪಟ ನಗೆನಾಟಕವಾಗಿದ್ದು, ಪ್ರತಿಯೊಂದು ಪಾತ್ರಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತದೆ. ಈ ನಾಟಕ ಶುದ್ಧ ಕೌಂಟುಂಬಿಕ ಪ್ರಧಾನವಾಗಿದ್ದು, ಇಲ್ಲಿ ಯಾವುದೇ ಬಗೆಯ ಅಶ್ಲೀಲತೆಯಿಂದ ಕೂಡಿದ ಡಬಲ್ ಮೀನಿಂಗ್ ವಾಕ್ಯ ಇಲ್ಲ. ಈ ನಾಟಕದ ಪಾತ್ರಧಾರಿಗಳ ಸಂಖ್ಯೆ ಕೇವಲ ಆರು ಜನ. ಸತತ ಎರಡು ಗಂಟೆಯ ನಾಟಕದಲ್ಲಿ ನಗುವಿಗೆ ಬರವಿಲ್ಲ. ಈ ನಾಟಕವನ್ನು ಅವರು ಅಮೋಘವಾಗಿ ಕಟ್ಟಿದ್ದಾರೆ.

ಕರ್ನಾಟಕ ನಾಟಕ ಅಕಾಡೆಮಿಯಿಂದ ಸನ್ಮಾನ
www.ಡಾಕ್ಟರ್.com ನಾಟಕವನ್ನು ಕರ್ನಾಟಕ ನಾಟಕ ಅಕಾಡೆಮಿ ಪುಸ್ತಕವನ್ನಾಗಿ ಪ್ರಕಟಿಸಿದೆ. ಅಕಾಡೆಮಿ ವತಿಯಿಂದ ನಡೆದ ನಾಟಕ ಶಿಬಿರದಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ಪಡೆದುಕೊಂಡಿದ್ದಾರೆ ಹಾಗೂ ಅಕಾಡೆಮಿ ಮಂಜುನಾಥ್ ಗುಡ್ಡದವರ ಅವರನ್ನು ನಾಟಕ ರಚನೆ ಮಾಡಿದ್ದಕ್ಕೆ ಸನ್ಮಾನಿಸಿ ಪ್ರೋತ್ಸಾಹ ನೀಡಿದೆ.


ಕಿರುತೆರೆ ಪ್ರವೇಶ
ಚಿಲ್ಲರ್ ಮಂಜಾ ಅವರು ಕಲರ್ಸ್ ಸೂಪರ್ ವಾಹಿನಿ ಮಜಾಭಾರತ ಕಾರ್ಯಕ್ರಮಕ್ಕೆ ನಡೆಸಿದ್ದ ಆಡಿಶನ್’ನಲ್ಲಿ ಭಾಗವಹಿಸಿ ಆಯ್ಕೆಯಾದರು. ಅಲ್ಲಿ ಉತ್ತಮ ಪ್ರದರ್ಶನ ನೀಡಿ ಜನರ ಮನ ಗೆಲ್ಲುವಲ್ಲಿ ಯಶಸ್ವಿ ಯಾದರು.


ತಾಯಿಯೇ ಗುರು
ಈ ಸಾಧನೆಯ ಹಿಂದೆ ಅಮ್ಮನೇ ಗುರು. ತಾಯಿಯೇ ಮೊದಲ ಗುರು, ಮನೆಯೇ ಮೊದಲ ಪಾಠಶಾಲೆ ಎಂಬುದು ಇಲ್ಲಿ ಅಕ್ಷರಶಃ ಸತ್ಯ. ಅಮ್ಮನ ಹೆಸರು ಗಂಗಮ್ಮ. ಹೆಸರಿನಂತೆ ಅವರು ಹರಿಯುವ ಸ್ವಚ್ಛ ಜಲಧಾರೆ. ಅವರು ಜಾನಪದೀಯ ಹಾಡುಗಳನ್ನು ಸುಶ್ರ್ಯಾವ್ಯವಾಗಿ ಹಾಡುತ್ತಾರೆ. ಊರಲ್ಲಿ ಮನೆ, ದೇವಸ್ಥಾನದಲ್ಲಿ, ಪೂಜೆಗಳಲ್ಲಿ ಇವರ ಹಾಡುವಿಕೆ ಇದ್ದಿದ್ದೆ. ಅಮ್ಮನ ಹಾಡುವಿಕೆ ಮತ್ತು ಲವಲವಿಕೆ ಜೀವನ ಇವರ ಸ್ಫೂರ್ತಿ.

ಬಡತನ ಎರಡನೇ ಗುರು
ಪ್ರತಿಭೆ ಎನ್ನುವುದು ಸಿರಿವಂತರ ಸ್ವತ್ತಲ್ಲ ಅದು ಸಾಧಕನ ಸ್ವತ್ತು ಎಂಬುದು ಮಂಜುನಾಥ್ ಅವರು ಸಾಧಿಸಿ ತೋರಿಸಿದ್ದಾರೆ. ಒಂದು ರೂಮಿನ ಪುಟ್ಟ ಮನೆ ಇವರದು. ಅಪ್ಪ ಬಸವಂತಪ್ಪ, ಅಮ್ಮ ಗಂಗಮ್ಮ, ಅರುಣ, ಗಣಪತಿ ಇಬ್ಬರು ತಮ್ಮಂದಿರು ತಂಗಿ ಗುತ್ತೆಮ್ಮ ಇದು ಪುಟ್ಟ ಕುಟುಂಬ. ಕುಟುಂಬದ ಒಬ್ಬರಿಗೊಬ್ಬರ ಪ್ರೋತ್ಸಾಹ, ಪರಸ್ಪರ ವಿಚಾರ ವಿನಿಮಯ ಇವರ ಕುಟುಂಬದ ಆಸ್ತಿ.


ಕಲರ್ಸ್ ಸುಪರ್ ವಾಹಿನಿಯಿಂದ ಟಿವಿ ಉಡುಗೊರೆ
ಹೌದು, ಈ ಮೇಲೆ ಹೇಳಿದಂತೆ ಅವರ ಮನೆಯಲ್ಲಿ ಟಿವಿ ಇರಲಿಲ್ಲ. ಮಂಜುನಾಥ್ ಮಜಾಭಾರತ ಶೋದಲ್ಲಿ ಅಭಿನಯಿಸುವುದು ಅವರ ಕುಟುಂಬದವರು ಇನ್ನೊಬ್ಬರ ಮನೆಯಲ್ಲಿ ವೀಕ್ಷಿಸುತ್ತಿದ್ದರು. ಟಿವಿ ಸ್ಟಾರ್ ಆದವನ ಮನೆಯಲ್ಲಿ ಟಿವಿ ಇರಲಿಲ್ಲ ಎಂಬುದು ಕಲರ್ಸ್ ಸೂಪರ್ ವಾಹಿನಿಗೆ ಗೊತ್ತಾಗಿ ಅವರ ಕುಟುಂಬದವರನ್ನು ಕಾರ್ಯಕ್ರಮಕ್ಕೆ ನೇರವಾಗಿ ಆಹ್ವಾನಿಸಿ ಟಿವಿ ಉಡುಗೊರೆಯಾಗಿ ನೀಡಿದರು.

ಸಿನಿಮಾದಲ್ಲಿ ಮಿಂಚು
ಇವರು ಹಿರಿತೆರೆಯಲ್ಲೂ ತಮ್ಮ ಅಭಿನಯ ನೀಡಿದ್ದಾರೆ. ಸಿಂಗ ಪ್ರದರ್ಶನ ಕಂಡ ಚಿತ್ರ. ಪ್ರೇಮನ್, ಹೈ ಸ್ಕೂಲ್ ಗ್ಯಾಂಗ್, ಚೇಕ್ಮೆಟ್, ಶ್ರೀನಿವಾಸ ಪೂರ, ಇವುಗಳ ಚಿತ್ರಿಕರಣದಲ್ಲಿ ತೊಡಗಿದ್ದಾರೆ.

ಚಿಲ್ಲರ್ ಮಂಜಾ ಅವರು ಮುಂದೆ ದೊಡ್ಡ ನಟರಾಗಿ ಬೆಳೆದು, ಅವರ ಪಂಚ್ ಮಾತುಗಳಿಂದ ಪ್ರೇಕ್ಷಕರ ಮನ ತಣಿಸಲಿ ಎಂದು ಹಾರೈಸೋಣ..

ಕುಟುಂಬ ಸದಸ್ಯರು ಏನೆನ್ನುತ್ತಾರೆ?

ಪ್ರೇಮ ಎಂಬುದೇ ಜೀವನ. ಅವ್ವನಲ್ಲಿ ಸದಾ ಬದುಕಿನ ಬಗ್ಗೆ ಉತ್ಸಾಹ ಕಾಣುತಿತ್ತು. ಬಡತನದ ಬೇಗೆಯಲ್ಲಿ ನಮಗೆ ಯಾವ ಕಷ್ಟದ ಅನುಭವ ನೀಡದೇ ನಮ್ಮನ್ನು ಬೆಳೆಸಿದಳು. ಅವಳ ಬೀಕ್ಷೇಯೇ ನಾನೀಗ ಈ ಮಟ್ಟಕ್ಕೆ ಬಂದಿರುವುದು. ನಾ ಈ ಮಟ್ಟಕ್ಕೆ ಬೆಳೆಯಲು ಕಾರಣರಾದ ಗೆಳೆಯರು, ಮಹಾಭಾರತದ ಎಲ್ಲಾ ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು ಚಿಲ್ಲರ್ ಮಂಜಾ…
ನನ್ನ ಮಗ ನನ್ನ ಹೆಮ್ಮೆ
-ಬಸವಂತಪ್ಪ, ಅಪ್ಪ

ಅಣ್ಣ ನನಗೆ ಬರೀ ಅಣ್ಣನಲ್ಲ ಉತ್ತಮ ಗೆಳೆಯ. ನನ್ನ ಪ್ರತಿಯೊಂದು ಅನಿಸಿಕೆಗಳನ್ನು ಆತನೊಂದಿಗೆ ಯಾವುದೇ ಭಯವಿಲ್ಲದೆ ಹಂಚಿಕೊಳ್ಳುತ್ತೇನೆ – ಗುತ್ತೆಮ್ಮ (ಚಿಲ್ಲರ್ ಮಂಜಾ ಸಹೋದರಿ)

ಮಂಜಣ್ಣ ಮಗು ಮನಸಿನವನು. ನಮ್ಮೊಂದಿಗೆ ಆತ ಅಣ್ಣನೆಂಬ ಅಧಿಕಾರ ಚಲಾಯಿಸಿದ್ದೇ ಇಲ್ಲ. ಎಲ್ಲರನ್ನೂ ಸ್ನೇಹದಿಂದ ನೋಡುತ್ತಾನೆ.
-ಗಣಪತಿ (ಚಿಲ್ಲರ್ ಮಂಜಾ ಸಹೋದರ)

ನನಗೆ ಮಂಜಣ್ಣ ಇಷ್ಟ ಆಗೋದು ಅವನ ಸಿಂಪಲ್ಸಿಟಿಯಿಂದ. ಮುಕ್ತ ಮನಸ್ಸಿನಿಂದ ನಮ್ಮ ಜೊತೆ ಬೆರೆಯುತ್ತಾರೆ.
-ಅರುಣ (ಚಿಲ್ಲರ್ ಮಂಜಾ ಸಹೋದರ)

ಲೇಖನ, ಚಿತ್ರ, ವೀಡಿಯೋ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ

Get in Touch With Us info@kalpa.news Whatsapp: 9481252093

Tags: Chiller ManjaColors Super KannadaDharwadKannada DramaKannada TV ShowManjunath GuddadavaraSpecial ArticleTV Artistಕರ್ನಾಟಕ ನಾಟಕ ಅಕಾಡೆಮಿಕಲರ್ಸ್ ಸೂಪರ್ ಕನ್ನಡಕಾಮಿಡಿ ಟಾಕೀಸ್ಚಿಲ್ಲರ್ ಮಂಜಧಾರವಾಡನಾಟಕಮಜಾ ಭಾರತಮಂಜುನಾಥ್ ಗುಡ್ಡದವರರಂಗಭೂಮಿ
Share214Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ನಿಮಗೆ ಈರುಳ್ಳಿ ಖರೀದಿಸಲು ಲೋನ್ ಬೇಕಾ? ಹಾಗಾದರೆ ಮಾಹಿತಿಗಾಗಿ ಇಲ್ಲಿಗೆ ಸಂಪರ್ಕಿಸಿ

Next Post

ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಂದು, ಅಪಘಾತವೆಂದು ಬಿಂಬಿಸಿ ಕೊನೆಗೂ ಸಿಕ್ಕಿಬಿದ್ದ ನೀಚ ಪತಿ

kalpa News

kalpa News

Next Post
ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಂದು, ಅಪಘಾತವೆಂದು ಬಿಂಬಿಸಿ ಕೊನೆಗೂ ಸಿಕ್ಕಿಬಿದ್ದ ನೀಚ ಪತಿ

ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಂದು, ಅಪಘಾತವೆಂದು ಬಿಂಬಿಸಿ ಕೊನೆಗೂ ಸಿಕ್ಕಿಬಿದ್ದ ನೀಚ ಪತಿ

Leave a Reply Cancel reply

Your email address will not be published. Required fields are marked *

No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL