Sunday, June 1, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Special Articles

ಗುರುಕುಲ ತಿಲಕ ಶ್ರೀಪಾದರಾಯ ಅಮಿತೋದ್ಧಾರ ಶರಣಜನ ಸುರಧೇನು ಭಕ್ತಮಂದಾರ

ಜೂನ್ 16 ಶ್ರೀಪಾದರಾಜರ ಆರಾಧನಾ ಮಹೋತ್ಸವ ತದಂಗವಾಗಿ ಸಕಾಲಿಕ ಚಿಂತನ

June 15, 2019
in Special Articles
0 0
0
Share on facebookShare on TwitterWhatsapp
Read - 4 minutes

ಕನ್ನಡ ದಾಸ ಸಾಹಿತ್ಯಕ್ಕೆ ಶ್ರೀಪಾದರಾಜರ ಕೊಡುಗೆ ಅನನ್ಯ. ಐದು ಶತಮಾನಗಳ ಹಿಂದೆಯೇ ವೈದಿಕ ವಿದ್ವನ್ಮಣಿಗಳಿಗೆ ಕನ್ನಡವೆಂದರೆ ಮೈಲಿಗೆಯೆಂದು ಮೂಗುಮುರಿಯುತ್ತಿದ್ದ ಕಾಲದಲ್ಲಿ, ಪೀಠಾಧಿಪತಿಗಳು ಸಂಸ್ಕೃತ ಬಿಟ್ಟು ಬೇರೆ ಭಾಷೆಯನ್ನು ಉಪಯೋಗಿಸುವುದು ಊಹಿಸಲೂ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಶ್ರೀಪಾದರಾಜರು ಕನ್ನಡಕ್ಕೆ ಅಗ್ರಪಟ್ಟಿ ಕಟ್ಟಿ ಸಿದ್ಧಾಂತವನ್ನು ಸಾಹಿತ್ಯವನ್ನು ಬದುಕಿನ ಮೌಲ್ಯವನ್ನು ಕನ್ನಡದಲ್ಲೇ ಪ್ರಕಟಿಸಿದರು. ತಮ್ಮ ಗಂಡುಧೈರ್ಯದಿಂದ ಕನ್ನಡತನ ಮಹತ್ವವನ್ನು ನಾಡು ನಾಡೇ ಮೊಳಗಿ ರೋಮಾಂಚನಗೊಳ್ಳುವಂತೆ ಪದ ಪದ್ಯ ಸುಳಾದಿ ಉಗಾಭೋಗಗಳನ್ನು ಮೂಲಕ ಸಾರಿ ಹರಿದಾಸ ಸಾಹಿತ್ಯದ ಹರಿಕಾರರಾದರು.

ಶ್ರೀಪಾದರಾಜರು ಸಂಭ್ರಮ ಸಡಗರಗಳ ಸಮಾರಂಭಗಳಲ್ಲಿ ಪೂಜೆ ಉತ್ಸವಗಳ ವೈಭವ ವಿಜೃಂಭಣೆಗಳಲ್ಲಿ ಕನ್ನಡದಲ್ಲಿ ಕೀರ್ತನೆಯನ್ನು ಹಾಡುವ ನರ್ತನಮಾಡುವ ಗಾಯಕರ ಭಾಗವೋತ್ತಮರ ತಂಡವೊಂದನ್ನು ಸಂಘಟಿಸಿ ಹರಿದಾಸ ಸಂಸ್ಕೃತಿಯನ್ನು ನಿರ್ಮಾಣಮಾಡಿದರು.

ಕನ್ನಡ ಭಾಷೆಯಲ್ಲಿ ಹರಿದಾಸ ಸಾಹಿತ್ಯ ಕುಸುಮ ಮಾಲೆ ಮಾಲೆಯಾಗಿ ಹಬ್ಬುವಂತೆ ಮಾಡಿದ ಮಹಾನ್ ತಪಸ್ವಿ ಶ್ರೀ ಶ್ರೀಪಾದರಾಜರು.ವೈದಿಕ ಪರಂಪರೆ ಹಿನ್ನೆಲೆಯಲ್ಲಿ ಬೆಳೆದು ಬಂದ ದಾಸ ಸಾಹಿತ್ಯವು ತನ್ನ ದೇದೀಪ್ಯ ಪ್ರತಿಭೆಯಿಂದಾಗಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದೆ ಹಾಗೂ ನೀಡುತ್ತಲಿದೆ. ಉದಾತ್ತ ವಿಚಾರಗಳನ್ನು ಹೊಂದಿದ ಈ ದಾಸ ಸಾಹಿತ್ಯ ಪ್ರಕಾರವು ವ್ಯಕ್ತಿಯ ದಿನ ನಿತ್ಯದ ಜೀವನಕ್ಕೆ ಪ್ರೇರಣೆಯನ್ನು ನೀಡುತ್ತದೆ. ಈ ಹಿನ್ನೆಲೆಯಲ್ಲಿ ಶ್ರೀಪಾದರಾಜರು ದಾಸ ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯನ್ನು ಅವಲೋಕಿಸೋಣ.


ಗಾನದಲ್ಲಿ ಕಲಿಯುಗದಿ ಕೇಶವನೆನಲು ಕೈಗೊಂಡುವನೊ ರಂಗವಿಠಲ ಎಂದು ತಿಳಿದು ಹೇಳಿದ ಹರಿದಾಸರ ಮುಂಚೂಣಿಯಲ್ಲಿ ಚಿರಂತನವಾಗಿ ನೆಲೆಗೊಳ್ಳುತ್ತಾ ಅಜ್ಞರನ್ನು ಯಾವತ್ತೂ ತಮ್ಮ ವಾತ್ಸಲ್ಯ ಕೃಪೆಗಳಿಂದ ಹರಸಿ, ಬದುಕಲ್ಲಿ ಹಾರೈಸುವ ಹಿರಿಯ ಹರಿಭಕ್ತ ಚೇತನರು ಮೂಡಲಬಾಗಿಲಿನ ಪರಮ ಪೂಜ್ಯ ಶ್ರೀಪಾದರಾಜರು.

ವ್ಯಾಸಕೂಟ-ಸುಜ್ಞಾನ ಸಂಪದ
ಮಹಾ ತಪಸ್ವಿ ಸಕಲ ಶಾಸ್ತ್ರ ವಿಶಾರದ ಸುಮಧ್ವ ಸಿದ್ದಾಂತ ವಿಧ್ವಾಂಸ ಮಹಾರಾಜ ಮಹಾಜನ ಪೂಜಿತ ವಿರಾಜಿತ ಶ್ರೀಪಾದರಾಜರು ಸಕಲ ತೀರ್ಥ ಕ್ಷೇತ್ರ ಸಂಚಾರ ಮಾಡಿ ವಾದಿಗಳನ್ನು ಎದುರಿಸಿ ಮಧ್ವ ಸಿದ್ದಾಂತ ಪದ್ಧತಿಯನ್ನು ಸ್ಥಾಪಿಸಿ ಸಕಲ ಜನ ಸಂಪದಕ್ಕೆ ಶಾಂತಿ ನೆಮ್ಮದಿ ಸಾಮರಸ್ಯ ತಂದಿತ್ತ ಮಹಾ ಸಮಾಜ ಚೇತನರು. ಇವರು ಕರ್ನಾಟಕ ಮುಳಬಾಗಿಲನ್ನು ತಮ್ಮ ಜ್ಞಾನ ಕಾರ್ಯಕ್ಕೆ ಆಯ್ಕೆ ಮಾಡಿದುದು ಈ ನಾಡಿನ ಸುಯೋಗ. ವಿಶ್ವವಿದ್ಯಾಲಯ ಸ್ಥಾಪಿಸಿ ಪಾರಂಪಾರಿಕ ಧರ್ಮ ಸಂಸ್ಕೃತಿಯನ್ನು ತಿಳಿಸುತ್ತಾ ಜೊತೆಗೆ ಧಾರ್ಮಿಕ ಚಿಂತನಕ್ಕೆ ಮುಕ್ತ ಚರ್ಚೆಗೆ ಆಹ್ವಾನಿಸಿ ತರ್ಕ ವ್ಯಾಕರಣ ಕಾವ್ಯ ಯೋಗ ವಿಜ್ಞಾನ ಮುಂತಾದ ಆಧ್ಯಾತ್ಮ ವಿಚಾರಗಳಲ್ಲಿ ಅಧ್ಯಯನಾಸಕ್ತರಿಗೆ ಸಮರ್ಪಕವಾಗಿ ಕಲಿಸಿಕೊಂಡು ಸುವ್ಯವಸ್ಥೆಯನ್ನು ಕುಲಪತಿಗಳಾಗಿ ಅತ್ಯಂತ ದಕ್ಷತೆಯಿಂದ ನಿರ್ವಹಿಸಿದ ಮಹಾಜ್ಞಾನಿಗಳು ಇವರು.

ದೇಶಾದ್ಯಂತ ಅನೇಕ ವಿದ್ಯಾರ್ಥಿಗಳು ಮುಳಬಾಗಿಲಿಗೆ ಕಲಿಕೆಗಾಗಿ ಬರುವಂತಾದುದು ಕಲಿತವರು ಜೀವಕೋಟಿಗೆ ಸುಜ್ಞಾನದ ಬೆಳಕನ್ನು ಪಸರಿಸಲು ಸಮರ್ಥವಾಗಿ ಸೇವೆ ಸಲ್ಲಿಸಲು ಪ್ರೇರಣೆ ನೀಡಿದರು. ವೇದ ಉಪನಿಷತ್ತುಗಳನ್ನು ಕುರಿತು, ನಿರಂತರ ಅಧ್ಯಯನ ನಡೆಸಿದ ವೇದ ವಿಜ್ಞಾನ ಮೂರ್ತಿ ಇವರು ವಾಗ್ವಜ್ರ ಎಂಬ ಅತ್ಯಂತ ಮಹತ್ತರ ಕೃತಿ ರಚಿಸಿದರು. ತಮ್ಮಲ್ಲಿ ಅಧ್ಯಯನಕ್ಕಾಗಿ ಬಂದ ಮಹಾಚೇತನ ವ್ಯಾಸರಾಜರಂತಹ ವೇದಾಂತರತ್ನವನ್ನು ಕರ್ನಾಟಕ ಧರ್ಮ ಸಾಹಸ ಸಾಹಿತ್ಯ ಸಂಸ್ಕøತಿ ನವಶಕ್ತಿಗೆ ನೀಡಲು ಆದೇಶಿಸಿದ ಮುನ್ನಡೆಸಿದ ಸಮರ್ಥ ಮಾರ್ಗದರ್ಶಿ ಗುರುವರ್ಯರು ಶ್ರೀಪಾದರಾಜರ ಸಮಗ್ರ ವಿಚಾರ ಧಾರೆಯ ಹೊಂಬೆಳಕನ್ನು ಯತಿಕುಲತಿಲಕ ವ್ಯಾಸರಾಜರೆಂದರೆ ಸಮಂಜಸವಾಗುವುದು ವ್ಯಾಸಕೂಟ ಬಲಪಡಿಸಿ ಸಂಸ್ಕøತ ವೇದಾಂತವನ್ನು ಶ್ರೀಮಂತಗೊಳಿಸಿದ ಧೀಮಂತರಿವರು.

ಶ್ರೀಪಾದರಾಜರ ಗುರುಕುಲದಲ್ಲಿ ಅರಳಿ ಪಸರಿಸಿದ ಮಹಾಚೇತನ ವ್ಯಾಸರಾಜರು. ಶೃತಿ ಸ್ಮøತಿ ಪುರಾಣ ವ್ಯಾಕರಣ ಛಂದಸ್ಸು ತರ್ಕ ಮೀಮಾಂಸೆಗಳಲ್ಲಿ ತಿಳುವಿಗೆ ಹೊಸ ಆಯಾಮ ನೀಡಿದರು. ವ್ಯಾಸ ಕೂಟ ವಿದ್ಯಾ ವೈಭವದ ಸುಂದರ ಅರ್ಥಪೂರ್ಣ ಜೀವನ ಧರ್ಮವಾಗುವಂತೆ ಮಾಡಿದುದು ಸಾಧನೆಯ ಸಾರ್ಥಕ್ಯ. ಅಂದಿನ ಸಂದರ್ಭದಲ್ಲಿ ಮಠಾಧಿಪತಿ ಜಗತ್ ಕಲ್ಯಾಣಕ್ಕಾಗಿ ಮಾಡಿದ ಮಹಾ ತಪಸ್ಸಿದು.


ವಿಭುದೇಂದ್ರ ತೀರ್ಥ -ಸ್ವರ್ಣವರ್ಣತೀರ್ಥರು -ಬ್ರಹಣ್ಯತೀರ್ಥ -ರಘುನಾಥ ತೀರ್ಥ- ವ್ಯಾಸರಾಜರು ವಾದಿರಾಜರು- ಪುರಂದರದಾಸರು -ಕನಕದಾಸರು ಇವರೆಲ್ಲರು ಶ್ರೀಪಾದರಾಜರ ಕಾಲದಲ್ಲಿದ್ದರು ಒಂದೇ ಕಾಲದಲ್ಲಿ ಈ ಎಲ್ಲಾ ಮಹಾತೇಜೋರೂಪಿಗಳು ಬೆಳಗಿದ್ದು, ಭುವನದ ಭಾಗ್ಯವೆಂದು ಹೇಳಬಹುದು. ಪುಟ್ಟಬಾಲಕ ಅಂದು ದನ ಕಾಯುತ್ತಾ ನೀಡಿದ ದಿಟ್ಟ ಉತ್ತರದಿಂದ ವಿಶೇಷ ಅಧ್ಯಯನದಿಂದ ಶಾಸ್ತ್ರ ವಿದ್ಯಾ ಸಂಪನ್ನನಾಗಿ ತನ್ನ ಹನ್ನೆರಡು ವಯಸ್ಸಿಗೆ ಸನ್ಯಾಸ ದೀಕ್ಷೆ ಪಡೆದು ಧೃವನ ಅಂಶ ಭೂತರಾಗಿ ಶ್ರೀಪಾದರಾಜರಾಗಿ ಭಾರತೀಯ ಧರ್ಮ ಸಿದ್ಧಾಂತ ಪಥದಲ್ಲಿ ಹೊಂಬೆಳಕಾಗಿ ಲೋಕೋದ್ದಾರಕ್ಕೆ ಕಾರಣರಾಗಿ ಮಧ್ವಮತದ ಕೀರ್ತಿಯಾಗಿ ಯತಿಗಳ ರಾಜ ಶ್ರೀಪಾದರಾಜರಾಗಿ ಬಾಳಿದುದು ಗೌರವದ ಸಂಗತಿ.

ವಿಜಯನಗರದ ಮಂಡಲಾಧಿಪತಿ ಸಾಳ್ವನರಸಿಂಹನಂತೂ ಇವರ ಮಹಿಮೆಗೆ ಮಣಿದು ರಾಜವೈಭವದಿಂದ ಸತ್ಕರಿಸಿ ಅವರ ಆಜ್ಞಾನುಸಾರ ಅನೇಕ ದೇವ ಮಂದಿರಗಳ ಜೀರ್ಣೋದ್ಧಾರ ನವ ನಿರ್ಮಾಣ ಪುಷ್ಕರಣಿ ತಟಾಕಗಳ ನಿರ್ಮಾಣ ವೇದಾಧ್ಯಯನ ಗುರುಕುಲಗಳ ನಿರ್ಮಾಣ ಧರ್ಮ ಸಂಸ್ಕೃತಿ ರಕ್ಷಣೆಗೆ ರಚನಾತ್ಮಕ ಕ್ರಿಯಾತ್ಮಕ ಕಾರ್ಯಕಲಾಪಗಳನ್ನು ಮಾಡಿಸುತ್ತಾ ರಾಜದಂಡಕ್ಕೆ ಧರ್ಮದಂಡದ ಮೆರಗುನ್ನಿತ್ತಾ ಮಹಾಮಹಿಮರು. ಶ್ರೀಪಾದರಾಜರು ಬಾಳಿ ಬೆಳಗಿದ ಪರಿ ನೀಡಿದ ಧರ್ಮ ಸಂದೇಶ ಹಾಡಿದ ಕೀರ್ತನೆಗಳು ನಡೆದು ನಡೆಸಿದ ರೀತಿ ನಿತ್ಯ ಸತ್ಯ ಸುಂದರ ಹಾಗೂ ಲೋಕೋದ್ಧಾರಕ್ಕೆ ನಿರಂತರ ಸ್ಫೂರ್ತಿದಾಯಕವು.

ಕರ್ನಾಟಕದ ಹರಿದಾಸ ಸಾಹಿತ್ಯದ ಶ್ರೀಕಾರ ಪುರುಷರಾದ ಶ್ರೀಪಾದರಾಜರ ಅಂಕಿತ ರಂಗವಿಠಲ.ಶಾಸ್ತ್ರ ಗ್ರಂಥಗಳ ವ್ಯಾಸಂಗ ಸಿದ್ಧಾಂತ ಪ್ರಚಾರ ಇವೇ ಮೊದಲಾದ ಮಠಾಧಿಪತಿಗಳು ಮಾಡಬೇಕಾದ ಕಾರ್ಯ ಸಾಂಪ್ರದಾಯಕವಾಗಿ ಸಂಸ್ಕೃತದಲ್ಲಿ ಮಾಡಿದಂತೆಯೇ ಕನ್ನಡ ಹರಿದಾಸ ಸಾಹಿತ್ಯದಲ್ಲಿ ವಾತ್ಸಲ್ಯ ಭಾವದಲ್ಲಿ ಮೂಲ ಹಾಗೂ ಮಾದರಿ ಪ್ರಾಯವಾದ ಕೃತಿಗಳನ್ನು ಅವರು ರಚಿಸಿದರು.

ಶ್ರೀಪಾದರಾಜರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಚಮತ್ಕಾರಯುತ ವಾಣಿಯಿಂದ ಹರಿದಾಸ ಪಂಥಕ್ಕೆ ನಾಂದಿ ಹಾಡಿದರಲ್ಲದೇ ಶ್ರೀ ಸ್ವರ್ಣವರ್ಣತೀರ್ಥರಿಂದ ಸನ್ಯಾಸ ಪಡೆದ ತರುವಾಯ ಕನ್ನಡ ದಾಸ ಸಾಹಿತ್ಯಕ್ಕೆ ಮೆರಗನ್ನು ತಂದುಕೊಟ್ಟರು. ಇವರೇ ಮೂಲ ಸೆಲೆಯಾಗಿ ಹರಿದಾಸ ಭಕ್ತಿ ಭಾಗೀರಥಿಯನ್ನು ಹರಿಸಿದರು. ಪಂಡಿತರು ಮಾತ್ರ ತಿಳಿಯಲು ಶಕ್ಯವಾಗಿದ್ದ ಶಾಸ್ತ್ರ ಮತ್ತು ವೇದೋಪನಿಷತ್ತಿನ ವಿಚಾರಗಳ ಸಾರವನ್ನು ಆಡು ಭಾಷೆಯಾದ ಕನ್ನಡದಕ್ಕೆ ಪರಿವರ್ತಿಸಿ ಪ್ರಾರಂಭಿಕ ಸೂತ್ರರಾದರು. ಇವರ ತರುವಾಯ ಇವರನ್ನು ಅನುಸರಿಸಿ ದಾಸ ಸಾಹಿತ್ಯದ ಧ್ವಜವನ್ನು ಉಚ್ಛ್ರಾಯಸ್ಥಿತಿಗೆ ವ್ಯಾಸರಾಜರು ಕೊಂಡೊಯ್ದರು. ಶ್ರೀ ವ್ಯಾಸರಾಜರು, ವ್ಯಾಸ ದಾಸ ಸಾಹಿತ್ಯವೆಂಬ ಎರಡು ಮಾರ್ಗವನ್ನು ತೋರಿಸಿಕೊಟ್ಟರು. ಎರಡೂ ಮಾರ್ಗವು ಹರಿಯನ್ನು ಅರಿಯಲು ಸಹಕಾರಿಯಾಗುವಂತೆ ಗೃಹಸ್ಥಾಶ್ರಮಿಗಳಿಗೆ ದಾಸ ದೀಕ್ಷೆಯನ್ನು ನೀಡಿ ದಾಸ ಪಂಥವನ್ನು ಪ್ರೇರೇಪಿಸಿದರು.

ಕನ್ನಡನಾಡಿನಲ್ಲಿ ಚಿನ್ನಪಟ್ಟಣದ ಅಬ್ಬೂರಿನಲ್ಲಿ ಯತಿವರೇಣ್ಯ ಶ್ರೀ ಪುರುಷೋತ್ತಮತೀರ್ಥರ ವಾತ್ಸಲು ಪಡೆದಿದ್ದ, ತನ್ನನ್ನು ಅರಸಿ ಬಂದರೋ ಎಂಬಂತೆ ಆಗಮಿಸಿದ ಶ್ರೀ ಸ್ವರ್ಣವರ್ಣತೀರ್ಥ ಗುರುವರ್ಯರ ಪ್ರೀತಿಪಾತ್ರರಾಗಿ ಶ್ರೀಪುರುಷೋತ್ತಮ ಯತೀಂದ್ರರ ಆದೇಶದ ಮೇರೆಗೆ ಸನ್ಯಾಸ ದೀಕ್ಷೆ ಪಡೆದು ಗುರುವಿನೊಂದಿಗೆ ಗಮಿಸಿದ್ದು, ಶ್ರೀರಂಗದೆಡೆಗೆ. ಶ್ರೀರಂಗ ತಮಿಳುನಾಡಿನ ಶ್ರೀವೈಷ್ಣವ ಕ್ಷೇತ್ರ. ಆಳ್ವಾರ್ ಮಹನೀಯರು ತನ್ನ ದಿವ್ಯ ಪ್ರಬಂಧ ಪಾಶುರ ಪದ್ಯಗಳಲ್ಲಿ ಸದಾ ಹಾಡಿರುವ ಭಕ್ತ ಹೃದಯ ಕ್ಷೇತ್ರ.

ಅವರು ಸರ್ವಸಂಗ ಪರಿತ್ಯಾಗಿಗಳಾಗಿದ್ದರೂ ಅವರ ಸುಖ ಪ್ರಾರಬ್ಧದಿಂದಾಗಿ ರಾಜ ಸನ್ಯಾಸಿಯಂತೆ ವೈಭೋಗದಲ್ಲೇ ಬದುಕಿದರು, ಜೊತೆಗೆ ಅವರ ಅಸಾಧಾರಣ ವಿದ್ವತ್ತು ಹಾಗೂ ಪವಾಡದಿಂದಾಗಿ ಶ್ರೀ ರಘುನಾಥ ತೀರ್ಥರು ಅವರಿಗೆ ಶ್ರೀಪಾದರಾಜರೆಂದು ಹೆಸರಿಟ್ಟರು. ಶ್ರೀ ಮಧ್ವ್ವಾಚಾರ್ಯರ ಸರ್ವಮೂಲ ಗ್ರಂಥಗಳನ್ನು 40 ಬಾರಿ ಪಾಠ ಹೇಳಿದ ಹಿರಿಮೆ ಇವರದ್ದು.

ಶ್ರೀಪಾದರಾಜರ ಆತ್ಮೀಯ ಶಿಷ್ಯರಾದ ಶ್ರೀ ವ್ಯಾಸರಾಜರು ಜಾತಿ ಪದ್ದತಿಯ ಸಂಕೋಲೆಯನ್ನು ಕಳಚಿ ಪುರಂದರದಾಸರು ಮತ್ತು ಶ್ರೀ ಕನಕದಾಸರು ಗೌರವಿಸಿ ಶಿಷ್ಯರನ್ನಾಗಿ ಸ್ವೀಕರಿಸಿ, ಅವರುಗಳಿಂದ ದೇವತಾಸ್ತುತಿ, ಸಮಾಜ ಸುಧಾರಣಾ ಚಿಂತನೆಗಳೇ ಮೊದಲಾದ ಗಹನ ವಿಷಯಗಳ ಮೇಲಿನ ಅನೇಕ ರಚನೆಗಳು ಲಕ್ಷಾಂತರ ಹಾಡುಗಳು, ಉಗಾಭೋಗಗಳು, ಕಾವ್ಯಗಳೇ ಮೊದಲಾದ ಕೃತಿಗಳನ್ನು ಪ್ರೋತ್ಸಾಹಿಸಿ, ತಾವೂ ಸಹ ಅಮೂಲ್ಯ ದೇವರನಾಮಗಳನ್ನು ರಚಿಸಿ, ಕನ್ನಡ ಸಾರಸ್ವತ ಭಂಡಾರದ ಅಭಿವೃದ್ಧಿಗಾಗಿ ಸಹೃದಯ ಕಾರಣಕರ್ತರಾಗಿದ್ದಾರೆ.

ಕಾಕೋಳು, ಬೆಂಗಳೂರು-ದೊಡ್ಡಬಳ್ಳಾಪುರ ರಸ್ತೆಯ ರಾಜಾನುಕುಂಟೆ ಸಮೀಪದ ಚಾರಿತ್ರಿಕ ಪ್ರೇಕ್ಷಣೀಯ ತಾಣ.ಇಲ್ಲಿನ ಶ್ರೀಪಾದರಾಜ ಪ್ರತಿಷ್ಠಾಪಿತ ಬೃಂದಾವನದಲ್ಲಿರುವ ಚತುರ್ಭುಜ ವೇಣುಗೋಪಾಲಕೃಷ್ಣನ ಜಾಗೃತ ಸನ್ನಿಧಾನದ ಪಾಂಚಜನ್ಯ ಸಭಾಂಗಣದಲ್ಲಿ ಮಹಿಮಾನ್ವಿತ ಮಾಧ್ವ ತಪಸ್ವಿ , ವ್ಯಾಸ-ದಾಸ ಸಾಹಿತ್ಯಗಳ ಸವ್ಯಸಾಚಿ, ಸಾಧನದ ಸತ್ಪಥ ತೋರುವ ಭಕ್ತಾನುಕಂಪಿ ಯತಿಪುಂಗವ ,ಪರಮ ಭಾಗವತ ಶಿರೋಮಣಿ ಧೃವಾಂಶ ಸಂಭೂತರಾದ ಶ್ರೀ ಶ್ರೀಪಾದರಾಜರ – ಆರಾಧನಾ ( ಈ ಬಾರಿ ಜೂನ್ 16 , ಭಾನುವಾರ )ಮಹೋತ್ಸವವನ್ನು ವಿಶೇಷವಾಗಿ ಗಾನ- ಜ್ಞಾನ ಯಜ್ಞ ಪೂರ್ವಕವಾಗಿ ಗುರುಭಕ್ತಿ ಉತ್ಸವವಾಗಿ ಪಾಂಚಜನ್ಯ ಪ್ರತಿಷ್ಠಾನ – ಟಿಟಿಡಿ ಹಿಂದು ಧರ್ಮಪ್ರಚಾರ ಪರಿಷದ್ ಮತ್ತು ಆಸ್ತಾ ಕನ್ನಡ ಟಿವಿ ಸಹಯೋಗದಲ್ಲಿ ಆಚರಿಸಲಾಗುವುದು.

ಕೀರ್ತಿಶೇಷ ಶ್ರೀ ಹೊಳವನಹಳ್ಳಿ ನಾಗರಾಜಮೂರ್ತಿ ಸ್ಮರಣಾರ್ಥ ಅವರ ಕುಟುಂಬವರ್ಗದವರು ಪ್ರಧಾನ ಸೇವಾಕರ್ತರಾಗಿ ಆಯೋಜಿಸುವ ಕಾರ್ಯಕ್ರಮವು ಇಂತಿದೆ. ಬೆಳಿಗ್ಗೆ 9.00 ಗಂಟೆಗೆ : ಮೂಲದೇವರುಗಳಿಗೆ ಪಂಚಾಮೃತ ಅಭಿಷೇಕ, ವ್ಯಾಸ ದಾಸ ವಾಙ್ಮಯ ಕೃತಿಗಳ ಪಾರಾಯಣ ಬೆಳಿಗ್ಗೆ 10.30 ರಿಂದ : ಶ್ರೀ ಶ್ರೀಪಾದರಾಜ ಮಹಿಮಾ ಉಪನ್ಯಾಸ ಮ.ಶಾ.ಸಂ. ವಿದ್ವಾನ್ ಕಲ್ಲಾಪುರ ಪವಮಾನಾಚಾರ್ಯ ರಿಂದ ನಂತರ ಶ್ರೀಶ್ರೀ ಪಾದರಾಜರ ಕೃತಿಗಳ ಗಾಯನ –ವಿದುಷಿ ರಶ್ಮಿ ಮಧುಸೂಧನ್ ರವರಿಂದ ಮಧ್ಯಾಹ್ನ 1.00 ಗಂಟೆಗೆ : ಮಹಾಮಂಗಳಾರತಿ , ಅಲಂಕಾರ ಪಂಕ್ತಿ , ತೀರ್ಥಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ವಿವರಗಳಿಗೆ 9845075250/9035618076 ಗೆ ಸಂಪರ್ಕಿಸಿ

ಲೇಖನ: ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ) ಯುವ ಸಂಸ್ಕೃತಿ ಚಿಂತಕರು

Tags: Dr. Gururaja PoshettihalliHaridasa SahityaKannada NewsSpecial Articleಕಾಕೋಳುಗುರುಕುಲ ತಿಲಕಡಾ. ಗುರುರಾಜ ಪೋಶೆಟ್ಟಿಹಳ್ಳಿವಿಭುದೇಂದ್ರ ತೀರ್ಥರುವಿಶ್ವವಿದ್ಯಾಲಯವ್ಯಾಸಕೂಟ-ಸುಜ್ಞಾನ ಸಂಪದಶ್ರೀಪಾದರಾಜರುಹರಿದಾಸ ಸಂಸ್ಕøತಿಹರಿದಾಸ ಸಾಹಿತ್ಯ
Previous Post

ನಿಮ್ಮ ಭಾವ ತಲುಪುವ ಕೆಂಪುಮೀಸೆ ಪಿಕಳಾರ ಹಕ್ಕಿ ತಾಯಿಯ ನಿವೇದನ ಪ್ರಸಂಗ

Next Post

ಕಾಕೋಳಿನಲ್ಲಿ ನಾಳೆ ಶ್ರೀಪಾದರಾಜರ ಆರಾಧನಾ ಮಹೋತ್ಸವ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಕಾಕೋಳಿನಲ್ಲಿ ನಾಳೆ ಶ್ರೀಪಾದರಾಜರ ಆರಾಧನಾ ಮಹೋತ್ಸವ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025

ಜೂನ್ 1ರಿಂದ 4 | ಮೈಸೂರು-ತಾಳಗುಪ್ಪ ಇಂಟರ್’ಸಿಟಿ ಸೇರಿ ಹಲವು ರೈಲುಗಳ ಬಗ್ಗೆ ಮಹತ್ವದ ಪ್ರಕಟಣೆ

May 31, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಅಶೋಕಪುರಂ ರೈಲ್ವೆ ಕಾರ್ಯಾಗಾರ ಪರಿಶೀಲಿಸಿದ ನೈಋತ್ಯ ರೈಲ್ವೆ ಎಂಡಿ ಮುಕುಲ್ | ಟ್ರೈನ್ ಬಸ್’ಗೆ ಚಾಲನೆ

May 31, 2025

ಹೈದರಾಬಾದ್ – ಬೀದರ್ ನಡುವೆ ವಂದೇ ಭಾರತ್ ಆರಂಭಿಸಿ: ಕೇಂದ್ರ ಸಚಿವರಿಗೆ ಬಂಡೆಪ್ಪ ಖಾಶೆಂಪುರ ಮನವಿ

May 31, 2025
File Image

ಕೆ.ಎಸ್. ಈಶ್ವರಪ್ಪನವರ ಹುಟ್ಟುಹಬ್ಬ ಹಿನ್ನೆಲೆ: ಜೂ.1ರಂದು ವಿಶೇಷ ಕಾರ್ಯಕ್ರಮ

May 31, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!