ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ಚಿಕ್ಕಮಗಳೂರು-ಯಶವಂತಪುರ-ಚಿಕ್ಕಮಗಳೂರು #Chikkamagaluru ನಡುವಿನ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಮಾಹಿತಿ ನೀಡಿದ್ದು, ಕಾರ್ಯಾಚರಣೆಯ ಕಾರಣಗಳಿಂದಾಗಿ ಈ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದ್ದು, ಎಪ್ರಿಲ್ 24ರಿಂದ ಇದು ಜಾರಿಗೆ ಬರಲಿದೆ. ವಿವರಗಳು ಹೀಗಿವೆ.
Also Read>> ಸಾಗರ | ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವಿಗೆ ಹಾವು ಕಚ್ಚಿ ಸಾವು
16239 ಸಂಖ್ಯೆಯ ಚಿಕ್ಕಮಗಳೂರು – ಯಶವಂತಪುರ #Yeshwantapura ದೈನಂದಿನ ಎಕ್ಸಪ್ರೆಸ್ ರೈಲು ಇನ್ನು ಮುಂದೆ ಚಿಕ್ಕಮಗಳೂರಿನಿಂದ ಬೆಳಿಗ್ಗೆ 08:15ರ ಬದಲಿಗೆ 08:00 ಗಂಟೆಗೆ ಹೊರಡಲಿದೆ.
ಇದರೊಂದಿಗೆ ಮಧ್ಯಂತರ ನಿಲ್ದಾಣಗಳ ಸಮಯವನ್ನೂ ಪರಿಷ್ಕರಿಸಲಾಗಿದೆ. ಕಣಿವೆಹಳ್ಳಿಯಲ್ಲಿ 08:33/08:34ರ ಬದಲಿಗೆ 08:18/08:19 ಗಂಟೆಗೆ, ಸಖರಾಯಪಟ್ಟಣದಲ್ಲಿ 08:46/08:47ರ ಬದಲಿಗೆ 08:31/08:32 ಗಂಟೆಗೆ, ಬಿಸಲೇಹಳ್ಳಿಯಲ್ಲಿ 08:58/08:59ರ ಬದಲಿಗೆ 08:43/08:44 ಗಂಟೆಗೆ ಹಾಗೂ ಕಡೂರು ನಿಲ್ದಾಣಕ್ಕೆ 09:30/09:40ರ ಬದಲಿಗೆ 09:05/09:25 ಗಂಟೆಗೆ ರೈಲು ಆಗಮಿಸಿ, ನಿರ್ಗಮಿಸಲಿದೆ. ದೇವನೂರು ಮತ್ತು ಯಶವಂತಪುರ ನಿಲ್ದಾಣಗಳ ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
16240 ಸಂಖ್ಯೆಯ ಯಶವಂತಪುರ – ಚಿಕ್ಕಮಗಳೂರು ದೈನಂದಿನ ಎಕ್ಸಪ್ರೆಸ್ ರೈಲು ಚಿಕ್ಕಮಗಳೂರು ನಿಲ್ದಾಣಕ್ಕೆ ರಾತ್ರಿ 08:55ರ ಬದಲಿಗೆ 09:05 ಗಂಟೆಗೆ ತಲುಪಲಿದೆ. ಅದೇ ರೀತಿ, ರೈಲು ಸಂಖ್ಯೆ 56271 ಶಿವಮೊಗ್ಗ ಟೌನ್ – ಚಿಕ್ಕಮಗಳೂರು ದೈನಂದಿನ ಪ್ಯಾಸೆಂಜರ್ ರೈಲು ರಾತ್ರಿ 09:30ರ ಬದಲಿಗೆ 09:40 ಗಂಟೆಗೆ ಚಿಕ್ಕಮಗಳೂರು ನಿಲ್ದಾಣ ತಲುಪಲಿದೆ.
ಇನ್ನು, ಮತ್ತೊಂದೆಡೆ ಶಿವಮೊಗ್ಗ ಟೌನ್-ಚಿಕ್ಕಮಗಳೂರು ದೈನಂದಿನ ಪ್ಯಾಸೆಂಜರ್ ರೈಲು ನಿತ್ಯ ರಾತ್ರಿ 9.30ಕ್ಕೆ ಚಿಕ್ಕಮಗಳೂರು ನಿಲ್ದಾಣ ತಲುಪುತ್ತಿತ್ತು. ಬದಲಾಗಿರುವ ಸಮಯದ ಪ್ರಕಾರ ಇದು ರಾತ್ರಿ 9.40ಕ್ಕೆ ಚಿಕ್ಕಮಗಳೂರು ನಿಲ್ದಾಣವನ್ನು ತಲುಪಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















