No Result
View All Result
Children's Ramayana Book by 11 Year Girl
English Articles

11-Year-Old Mysuru Girl Writes Children’s Ramayana in Just 15 Days

by kalpa News
July 25, 2026
0

Kalpa Media House  | Mysuru | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
  • Advertise With Us
  • Grievances
  • About Us
  • Contact Us
Saturday, July 25, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ವಿಜ್ಞಾನ-ತಂತ್ರಜ್ಞಾನ

ಆಂಧ್ರಪ್ರದೇಶದಲ್ಲಿ ಹೀರೋ ಮೋಟೋಕಾರ್ಪ್ 3200+ ಕೋಟಿ ರೂ. ಹೂಡಿಕೆ

ತಿರುಪತಿಯಲ್ಲಿ ಜಾಗತಿಕ ಮಟ್ಟದ ಭವಿಷ್ಯ ಸಿದ್ಧ ಬಿಡಿಭಾಗಗಳ ಕೇಂದ್ರಕ್ಕೆ ಭೂಮಿಪೂಜೆ

kalpa News by kalpa News
July 8, 2026
in ವಿಜ್ಞಾನ-ತಂತ್ರಜ್ಞಾನ
0
Hero MotoCorp to Invest ₹3,200+ Crore in Andhra Pradesh
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಅಮರಾವತಿ  |

● ಹೂಡಿಕೆಯ ಮಾರ್ಗಸೂಚಿ: ಹೀರೋ ಮೋಟೋಕಾರ್ಪ್ (Hero MotoCorp) ಆಂಧ್ರಪ್ರದೇಶದಲ್ಲಿ ಒಟ್ಟು 3,200 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹೂಡಿಕೆಯನ್ನು ಘೋಷಿಸಿದೆ.

● ಮುಂದಿನ ಪೀಳಿಗೆಯ ಲಾಜಿಸ್ಟಿಕ್ಸ್: ತಿರುಪತಿಯಲ್ಲಿ ತನ್ನ ಎರಡನೇ ಜಾಗತಿಕ ಬಿಡಿಭಾಗಗಳ ಕೇಂದ್ರವನ್ನು ಸ್ಥಾಪಿಸಲು 750 ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡಲಿದೆ.

● ಭವಿಷ್ಯದ ಪ್ರತಿಭೆಗಳಿಗೆ ಪ್ರೋತ್ಸಾಹ: ತಾಂತ್ರಿಕ ಶಿಕ್ಷಣವನ್ನು ಬೆಂಬಲಿಸಲು ಅರ್ಹತೆ ಆಧಾರಿತ ವಿದ್ಯಾರ್ಥಿವೇತನ ಕಾರ್ಯಕ್ರಮವನ್ನು ಪ್ರಾರಂಭಿಸಲು ಆಂಧ್ರಪ್ರದೇಶ ಸರ್ಕಾರದೊಂದಿಗೆ ಸಹಭಾಗಿತ್ವ ಹೊಂದಿದೆ.

● ಮಹಿಳಾ ಪೊಲೀಸರ ಸಬಲೀಕರಣ: ಸಮುದಾಯದ ಸುರಕ್ಷತೆ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸಲು ಮಹಿಳಾ ಪೊಲೀಸ್ ಸಿಬ್ಬಂದಿಗೆ ವಿಡಾ ಎಲೆಕ್ಟ್ರಿಕ್ ಸ್ಕೂಟರ್‌ ಗಳನ್ನು ವಿತರಿಸುವುದರ ಜೊತೆಗೆ ವಿಶೇಷ ಸುರಕ್ಷತಾ ತರಬೇತಿಯನ್ನು ನೀಡಲಿದೆ.

Also Read>> Culture & Tradition Shine as Rudraksham Marks Milestone Achievement

ವಿಶ್ವದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್, ಆಂಧ್ರಪ್ರದೇಶದಲ್ಲಿ ಬರೋಬ್ಬರಿ 3,200 ಕೋಟಿ ರೂಪಾಯಿಗಳಿಗೂ ಅಧಿಕ ಬೃಹತ್ ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಈ ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿ ತಿರುಪತಿಯಲ್ಲಿ ಕಂಪನಿಯ ಎರಡನೇ ಜಾಗತಿಕ ಬಿಡಿಭಾಗಗಳ ಕೇಂದ್ರಕ್ಕೆ ಅದ್ಧೂರಿಯಾಗಿ ಭೂಮಿಪೂಜೆ ನೆರವೇರಿಸಲಾಯಿತು.

ಸುಮಾರು 750 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಜಾಗತಿಕ ಕೇಂದ್ರವು ಅತ್ಯಾಧುನಿಕ ಲಾಜಿಸ್ಟಿಕ್ಸ್ ತಂತ್ರಜ್ಞಾನವನ್ನು ಹೊಂದಿರಲಿದ್ದು, ಹೀರೋ ಮೋಟೋಕಾರ್ಪ್‌ ನ ಜಾಗತಿಕ ಪೂರೈಕೆ ಸರಪಳಿಯನ್ನು ಬಲಪಡಿಸುತ್ತದೆ ಮತ್ತು ಆಟೋಮೋಟಿವ್ ಹಾಗೂ ಇವಿ ಪರಿಸರ ವ್ಯವಸ್ಥೆಯಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಈ ಹೂಡಿಕೆಯ ಮೂಲಕ ತಿರುಪತಿಯನ್ನು ವಿಶ್ವದರ್ಜೆಯ ಇವಿ (ಎಲೆಕ್ಟ್ರಿಕ್ ವಾಹನ) ಮತ್ತು ಉತ್ಪಾದನಾ ಹಬ್ ಆಗಿ ಪರಿವರ್ತಿಸುವ ಗುರಿಯನ್ನು ಕಂಪನಿ ಹೊಂದಿದೆ. ಇದು ಹೀರೋ ಮೋಟೋಕಾರ್ಪ್‌ನ ಜಾಗತಿಕ ಸರಬರಾಜು ಜಾಲವನ್ನು ಬಲಪಡಿಸುವುದಲ್ಲದೆ, ಭಾರತದ ಆಟೋಮೊಬೈಲ್ ರಂಗಕ್ಕೆ ಹೊಸ ಶಕ್ತಿ ತುಂಬಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು, ‘ಆಂಧ್ರಪ್ರದೇಶದ ಬೆಳವಣಿಗೆಯ ಪಯಣದಲ್ಲಿ ಹೀರೋ ಮೋಟೋಕಾರ್ಪ್ ಅತ್ಯಮೂಲ್ಯ ಪಾಲುದಾರನಾಗಿದೆ ಮತ್ತು ತಿರುಪತಿಯಲ್ಲಿ ಜಾಗತಿಕ ಬಿಡಿಭಾಗಗಳ ಕೇಂದ್ರವನ್ನು ಸ್ಥಾಪಿಸುವ ಅದರ ನಿರ್ಧಾರವು ರಾಜ್ಯದ ಪ್ರಗತಿಪರ ನೀತಿಗಳು, ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಹೂಡಿಕೆದಾರ ಸ್ನೇಹಿ ಪರಿಸರ ವ್ಯವಸ್ಥೆಗೆ ದೊರೆತ ದೊಡ್ಡ ಮನ್ನಣೆಯಾಗಿದೆ. ಇಷ್ಟು ವರ್ಷಗಳಲ್ಲಿ, ಹೀರೋ ಮೋಟೋಕಾರ್ಪ್‌ ನ ಉಪಸ್ಥಿತಿಯು ರಾಜ್ಯದಾದ್ಯಂತ ಹೆಚ್ಚಿನ ಉದ್ಯೋಗ ಸೃಷ್ಟಿ, ಕೌಶಲ್ಯ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಗೆ ಕಾರಣವಾಗಿದೆ. ಈ ಪಾಲುದಾರಿಕೆಯು ಇನ್ನಷ್ಟು ಗಟ್ಟಿಯಾಗುತ್ತಿರುವುದನ್ನು ನೋಡಲು ನಮಗೆ ಸಂತೋಷವಾಗಿದೆ’ ಎಂದರು.

“ಈ ಹೊಸ ಹೂಡಿಕೆಯು ನಮ್ಮ ಯುವಜನರಿಗೆ ಹೊಸ ಅವಕಾಶಗಳನ್ನು ಒದಗಿಸಲಿದ್ದು, ಪ್ರಾದೇಶಿಕ ಆರ್ಥಿಕತೆಯನ್ನು ಬಲಪಡಿಸಲಿದೆ ಮತ್ತು ತಿರುಪತಿಯನ್ನು ಪ್ರಮುಖ ಜಾಗತಿಕ ಉತ್ಪಾದನಾ ಹಾಗೂ ಲಾಜಿಸ್ಟಿಕ್ಸ್ ಹಬ್ ಆಗಿ ಮತ್ತಷ್ಟು ಉನ್ನತ ಸ್ಥಾನಕ್ಕೇರಿಸಲಿದೆ. ಆಂಧ್ರಪ್ರದೇಶದ ಮೇಲಿನ ಹೀರೋ ಮೋಟೋಕಾರ್ಪ್‌ ನ ನಿರಂತರ ಬದ್ಧತೆಯನ್ನು ನಾವು ಶ್ಲಾಘಿಸುತ್ತೇವೆ. ಎಲ್ಲರಿಗೂ ಸುಸ್ಥಿರ ಸಮೃದ್ಧಿಯನ್ನು ತಂದುಕೊಡುವ, ಭವಿಷ್ಯದ ಸವಾಲುಗಳಿಗೆ ಸಿದ್ಧವಾದ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾದ ಕೈಗಾರಿಕಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಒಟ್ಟಾಗಿ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ” ಎಂದರು.JNNCE Shivamoggaಹೀರೋ ಮೋಟೋಕಾರ್ಪ್‌ ನ ಕಾರ್ಯಕಾರಿ ಅಧ್ಯಕ್ಷರಾದ ಡಾ. ಪವನ್ ಮುಂಜಾಲ್ ಅವರು ಮಾತನಾಡಿ, “ಹೀರೋ ಮೋಟೋಕಾರ್ಪ್‌ ನಲ್ಲಿ ನಾವು ಯಾವಾಗಲೂ ವ್ಯವಹಾರದ ಬೆಳವಣಿಗೆ ಮತ್ತು ದೇಶ ನಿರ್ಮಾಣ ಎರಡೂ ಜೊತೆಯಾಗಿಯೇ ಸಾಗುತ್ತವೆ ಎಂದು ಬಲವಾಗಿ ನಂಬಿದ್ದೇವೆ. ತಿರುಪತಿಯಲ್ಲಿ ನಮ್ಮ ಎರಡನೇ ಜಾಗತಿಕ ಬಿಡಿಭಾಗಗಳ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿರುವುದು ನಮ್ಮ ಪಯಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಇದು ಭಾರತದ ಉಜ್ವಲ ಭವಿಷ್ಯದ ಮೇಲಿನ ನಮ್ಮ ಅಪಾರ ನಂಬಿಕೆಯನ್ನು ಮತ್ತು ಆಂಧ್ರಪ್ರದೇಶದ ಬೆಳವಣಿಗೆಯ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ತಿರುಪತಿಯನ್ನು ಭವಿಷ್ಯದ ಸವಾಲುಗಳಿಗೆ ಸಿದ್ಧವಿರುವ ಉತ್ಪಾದನಾ ಮತ್ತು ಎಲೆಕ್ಟ್ರಿಕ್ ಸಾರಿಗೆ ವ್ಯವಸ್ಥೆಯ ಕೇಂದ್ರವನ್ನಾಗಿ ಪರಿವರ್ತಿಸುವ ಮೂಲಕ, ಈ ಹೂಡಿಕೆಯು ನಮ್ಮ ಜಾಗತಿಕ ಪೂರೈಕೆ ಸರಪಳಿಯನ್ನು ಹೆಚ್ಚಿಸಲಿದೆ, ವಿವಿಧ ಮಾರುಕಟ್ಟೆಗಳಲ್ಲಿ ನಮ್ಮ ವಿಸ್ತರಣೆಗೆ ಬೆಂಬಲ ನೀಡಲಿದೆ ಮತ್ತು ಮೇಡ್ ಇನ್ ಇಂಡಿಯಾ, ಭಾರತಕ್ಕಾಗಿ ಮತ್ತು ಜಗತ್ತಿಗಾಗಿ ಎಂಬ ನಮ್ಮ ಬದ್ಧತೆಯನ್ನು ಸಾರುತ್ತದೆ” ಎಂದು ಹೇಳಿದರು.

“ನನ್ನ ತಂದೆ, ನಮ್ಮ ಸಂಸ್ಥಾಪಕರು ಮತ್ತು ಚೇರ್ಮನ್ ಎಮೆರಿಟಸ್ ಆಗಿರುವ ಡಾ. ಬ್ರಿಜ್‌ ಮೋಹನ್ ಲಾಲ್ ಮುಂಜಾಲ್ ಅವರ ಜನ್ಮದಿನದಂದು ಈ ಕಾರ್ಯಕ್ರಮ ನಡೆಸುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಅವರು ದೀರ್ಘಕಾಲ ಉಳಿಯುವ ಸಂಸ್ಥೆಗಳನ್ನು ನಿರ್ಮಿಸುವಲ್ಲಿ ಮತ್ತು ಯಾವಾಗಲೂ ಭವಿಷ್ಯಕ್ಕಾಗಿ ಸಿದ್ಧರಾಗುವಲ್ಲಿ ನಂಬಿಕೆ ಹೊಂದಿದ್ದರು. ನನ್ನ ಪ್ರೀತಿಯ ತಂದೆ, ನಮ್ಮ ಸಂಸ್ಥಾಪಕರು ಹಾಗೂ ಗೌರವಾನ್ವಿತ ಚೇರ್ಮನ್ ಎಮೆರಿಟಸ್ ಡಾ. ಬ್ರಿಜ್‌ ಮೋಹನ್ ಲಾಲ್ ಮುಂಜಾಲ್ ಅವರ 103ನೇ ಜನ್ಮದಿನದಂದು ಈ ಸಾಧನೆ ಮಾಡಿರುವುದು ಹೆಚ್ಚಿನ ಅರ್ಥವನ್ನು ನೀಡುತ್ತದೆ ಎಂದರು.

ನಿಜವಾದ ದೂದರ್ಶಿಗಳಾಗಿದ್ದ ಅವರು, ಶ್ರೇಷ್ಠ ಸಂಸ್ಥೆಗಳು ಕೇವಲ ಪ್ರಸ್ತುತ ಕಾಲದಲ್ಲಿ ನಡೆಯಲು ಮಾತ್ರ ನಿರ್ಮಾಣವಾಗುವುದಿಲ್ಲ, ಬದಲಿಗೆ ಭವಿಷ್ಯವನ್ನು ಮುನ್ನಡೆಸಲು ರೂಪಿಸಲ್ಪಡುತ್ತವೆ ಎಂಬ ನಂಬಿಕೆಯನ್ನು ಪ್ರತಿಪಾದಿಸಿದರು. ಈ ಕೇಂದ್ರವು ಅವರ ದೂರದೃಷ್ಟಿ, ಮೌಲ್ಯಗಳು ಮತ್ತು ಭಾರತದ ಸಾಮರ್ಥ್ಯದ ಮೇಲಿನ ಅವರ ಅಚಲ ನಂಬಿಕೆಗೆ ಸಲ್ಲಿಸುವ ವಿನಮ್ರ ಗೌರವವಾಗಿದೆ. ಈ ಹೊಸ ಕೇಂದ್ರವು ಅವರ ಉದ್ಯಮಶೀಲತೆ, ಉದ್ಧೇಶ ಮತ್ತು ರಾಷ್ಟ್ರಸೇವೆಯ ಪರಂಪರೆಯನ್ನು ಹೆಮ್ಮೆಯಿಂದ ಮುಂದುವರಿಸಿಕೊಂಡು ಹೋಗಲಿದೆ ಎಂಬ ಭರವಸೆ ನನಗಿದೆ” ಎಂದು ಅವರು ಹೇಳಿದರು.

Hero MotoCorp |  ಭಾರತಕ್ಕಾಗಿ ನಿರ್ಮಾಣ, ಜಗತ್ತಿಗೆ ಪೂರೈಕೆ

ಮುಂಬರಲಿರುವ ಈ ಜಾಗತಿಕ ಬಿಡಿಭಾಗಗಳ ಕೇಂದ್ರವು ಹೀರೋ ಮೋಟೋಕಾರ್ಪ್‌ ನ ದೇಶೀಯ ಮತ್ತು ಅಂತರರಾಷ್ಟ್ರೀಯ ಬಿಡಿಭಾಗಗಳ ಕಾರ್ಯಾಚರಣೆಗೆ ಆಯಕಟ್ಟಿನ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ನಮ್ಮ ಎಲೆಕ್ಟ್ರಿಕ್ ವಾಹನಗಳ ಸಂಪೂರ್ಣ ಶ್ರೇಣಿಯನ್ನು ಸಂಪೂರ್ಣವಾಗಿ ತಿರುಪತಿ ಪ್ಲಾಂಟ್‌ ನಲ್ಲಿಯೇ ವಿನ್ಯಾಸಗೊಳಿಸಲಾಗಿದೆ, ಇಂಜಿನಿಯರಿಂಗ್ ಮಾಡಲಾಗಿದೆ ಮತ್ತು ಉತ್ಪಾದಿಸಲಾಗಿದೆ. ಈ ಹೂಡಿಕೆಯೊಂದಿಗೆ, ಈ ಪ್ಲಾಂಟ್‌ ನ ವಾರ್ಷಿಕ ಉತ್ಪಾದನಾ ಸಾಮರ್ಥ್ಯವು ಭಾರಿ ಪ್ರಮಾಣದಲ್ಲಿ 1.2–1.5 ಮಿಲಿಯನ್ (12 ರಿಂದ 15 ಲಕ್ಷ) ಯುನಿಟ್‌ ಗಳಿಗೆ ಹೆಚ್ಚಾಗುವ ನಿರೀಕ್ಷೆಯಿದೆ, ಇದು ಭವಿಷ್ಯದ ಸಾರಿಗೆ ವ್ಯವಸ್ಥೆಗಾಗಿ ಭಾರತದ ಪ್ರಮುಖ ಉತ್ಪಾದನಾ ಹಬ್‌ ಗಳಲ್ಲಿ ಒಂದಾಗಿ ತಿರುಪತಿಯ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ.

ಉದ್ಯೋಗಾವಕಾಶಗಳ ಸೃಷ್ಟಿ

ಈ ವಿಸ್ತರಣಾ ಯೋಜನೆಯಿಂದಾಗಿ ಸುಮಾರು 4,000 ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ಈ ಉದ್ಯೋಗ ಸೃಷ್ಟಿಯು ರಾಷ್ಟ್ರೀಯ ದೃಷ್ಟಿಕೋನವಾದ ವಿಕಸಿತ ಭಾರತ 2047 ಮತ್ತು ಆಂಧ್ರಪ್ರದೇಶ ಸರ್ಕಾರದ ಸ್ವರ್ಣಾಂಧ್ರ ದೂದರ್ಶಿತ್ವ ಎರಡಕ್ಕೂ ಪೂರಕವಾಗಿದೆ. ಕೇವಲ ಉದ್ಯೋಗ ಒದಗಿಸುವುದಷ್ಟೇ ಅಲ್ಲದೆ, ಈ ಜಾಗತಿಕ ಬಿಡಿಭಾಗಗಳ ಕೇಂದ್ರವು ಪ್ರಾದೇಶಿಕವಾಗಿ ಸುಸ್ಥಿರ ಪ್ರಯೋಜನಗಳನ್ನು ನೀಡುವಲ್ಲಿ ಆರ್ಥಿಕ ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿದೆ.

ಸಮುದಾಯಗಳ ಸಬಲೀಕರಣ

ಸುಸ್ಥಿರ ಬೆಳವಣಿಗೆಯ ತನ್ನ ಪ್ರಯತ್ನಗಳನ್ನು ಮುಂದುವರಿಸುತ್ತಾ, ಹೀರೋ ಮೋಟೋಕಾರ್ಪ್ ಆಂಧ್ರಪ್ರದೇಶ ಸರ್ಕಾರದ ಸಹಭಾಗಿತ್ವದಲ್ಲಿ ಎರಡು ಪರಿವರ್ತನಾತ್ಮಕ ಸಮುದಾಯ ಯೋಜನೆಗಳನ್ನು ಪ್ರಾರಂಭಿಸಿದೆ. ಡಾ. ಬ್ರಿಜ್‌ ಮೋಹನ್ ಲಾಲ್ ಮುಂಜಾಲ್ ಹೀರೋಸ್ ಆಫ್ ಟುಮಾರೋ ಸ್ಕಾಲರ್‌ ಶಿಪ್ ಕಾರ್ಯಕ್ರಮವು 28 ಜಿಲ್ಲೆಗಳ ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳನ್ನು ಸಬಲೀಕರಿಸಲಿದೆ. ಈ ಯೋಜನೆಯು ರಾಜ್ಯದ ಐಐಐಟಿಗಳಲ್ಲಿ ಎಂಜಿನಿಯರಿಂಗ್ ಪದವಿ ಪಡೆಯುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಸಂಪೂರ್ಣ ಬೋಧನಾ ಶುಲ್ಕದ ನೆರವನ್ನು ನೀಡಲಿದ್ದು, ಆ ಮೂಲಕ ಮುಂದಿನ ಪೀಳಿಗೆಯ ತಂತ್ರಜ್ಞಾನ ನಾಯಕರನ್ನು ಬೆಳೆಸಲಿದೆ.

ಇದಲ್ಲದೆ, ಸ್ಥಳೀಯ ಸಮುದಾಯದ ಕಲ್ಯಾಣಕ್ಕೆ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತಾ, ಕಂಪನಿಯು ತಿರುಪತಿ ಜಿಲ್ಲೆಯಾದ್ಯಂತ ಮಹಿಳಾ ಪೊಲೀಸ್ ಸಿಬ್ಬಂದಿಗೆ ವಿಡಾ ಎಲೆಕ್ಟ್ರಿಕ್ ಸ್ಕೂಟರ್‌ ಗಳನ್ನು ವಿತರಿಸಲಿದೆ ಮತ್ತು ವಿಶೇಷ ರಸ್ತೆ ಸುರಕ್ಷತಾ ತರಬೇತಿಯನ್ನು ನೀಡಲಿದೆ. ಈ ಮೂಲಕ ಸುಸ್ಥಿರ ಸಾರಿಗೆ ವ್ಯವಸ್ಥೆ ಮೂಲಕ ಅವರ ಸಬಲೀಕರಣಕ್ಕೆ ಉತ್ತೇಜನ ನೀಡಲಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news   Kalahamsa Infotech private limited

Tags: AmaravathiAndra PradeshHero MotoCorpKannada News WebsiteLatest News KannadaLogisticsTirupatiಆಟೋಮೋಟಿವ್ಆಂಧ್ರಪ್ರದೇಶತಿರುಪತಿಲಾಜಿಸ್ಟಿಕ್ಸ್ಹೀರೋ ಮೋಟೋಕಾರ್ಪ್
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿರಾಡಿ ಘಾಟ್‌ನಲ್ಲಿ ಭೂಕುಸಿತ: ವಾಹನ ಸವಾರರಿಗೆ ಎಚ್ಚರಿಕೆ

Next Post

ಮಾನಸಿಕ ಬೇಸರ ಹಿನ್ನೆಲೆ : ಭದ್ರಾವತಿಯ ವ್ಯಕ್ತಿ ಆತ್ಮಹತ್ಯೆ

kalpa News

kalpa News

Next Post
ಅಡಿಕೆ ತೋಟದಲ್ಲಿ ಔಷಧಿ ಸಿಂಪಡಣೆ ಮಾಡುತ್ತಿದ್ದ ಕಾರ್ಮಿಕ ಸಾವು

ಮಾನಸಿಕ ಬೇಸರ ಹಿನ್ನೆಲೆ : ಭದ್ರಾವತಿಯ ವ್ಯಕ್ತಿ ಆತ್ಮಹತ್ಯೆ

Leave a Reply Cancel reply

Your email address will not be published. Required fields are marked *

No Result
View All Result
Children's Ramayana Book by 11 Year Girl
English Articles

11-Year-Old Mysuru Girl Writes Children’s Ramayana in Just 15 Days

by kalpa News
July 25, 2026
0

Kalpa Media House  | Mysuru | In a remarkable literary achievement, an 11-year-old girl from Mysuru has written a 36-page...

Read moreDetails
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL