ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೊಳೆಹೊನ್ನೂರು #Holehonnur ಸಮೀಪದ ಭದ್ರಾ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ಚಿತ್ರದುರ್ಗ #Chitradurga ಮೂಲದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಮೃತ ಬಾಲಕನನ್ನು ಚಿತ್ರದುರ್ಗ ತಾಲ್ಲೂಕು ಪಾಮರಹಳ್ಳಿ ಗ್ರಾಮದ ನಿವಾಸಿ ಮೊಹಿದ್ದೀನ್ (16 ವರ್ಷ ) ಎಂದು ಗುರುತಿಸಲಾಗಿದೆ.
Also Read>> ಇಂದಿನಿಂದ ಪಶ್ಚಿಮ ಬಂಗಾಳದಲ್ಲಿ ಹೊಸ ಸೂರ್ಯ ಉದಯಿಸುತ್ತಾನೆ | ಪ್ರಧಾನಿ ನರೇಂದ್ರ ಮೋದಿ
ಶನಿವಾರ ತನ್ನ ಕುಟುಂಬದ ಜೊತೆಗೆ ಹಣಗೆರೆ ಕಟ್ಟೆಗೆ ಹೋಗಿದ್ದರು. ಅಲ್ಲಿಂದ ತಮ್ಮೂರಿಗೆ ಮರಳುವಾಗ ಮಧ್ಯಾಹ್ನ ಹೊಳೆಹೊನ್ನೂರು ಹತ್ತಿರದ ಭದ್ರಾ ನದಿಯ #BhadraRiver ಹಳೆ ಸೇತುವೆ ಬಳಿ ಊಟ ಮಾಡಲು ವಾಹನ ನಿಲ್ಲಿಸಿದ್ದರು. ಈ ಸಮಯದಲ್ಲಿ ತಂದೆಯ ಜೊತೆಗೆ ಮಕ್ಕಳಾದ ತಾಜುದ್ದೀನ್ ಮತ್ತು ಮೊಹಿದ್ದೀನ್ ನದಿ ನೀರಿಗೆ ಸ್ನಾನ ಮಾಡಲು ಇಳಿದಿದ್ದರು.
ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ತಾಜುದ್ದೀನ್ ನೀರಿನ ಸೆಳೆತಕ್ಕೆ ಸಿಲುಕಿ ಮುಂದೆ ಹೋಗಿದ್ದಾನೆ. ಆತನನ್ನು ರಕ್ಷಿಸಲು ಅಣ್ಣ ಮೊಹಿದ್ದೀನ್ ಸಹ ನೀರಿಗೆ ಇಳಿದಿದ್ದಾನೆ.
ಈ ವೇಳೆ ತಂದೆ ಇಮಾಮ್ ಸಾಬ್ ಅವರು ನದಿಗೆ ಇಳಿದು ಮಗ ತಾಜುದ್ದೀನ್ನನ್ನು ಮೇಲಕ್ಕೆ ತರುವಲ್ಲಿ ಯಶಸ್ವಿಯಾದರು. ಆದರೆ ಅಷ್ಟರಲ್ಲೇ ಮೊಹಿದ್ದೀನ್ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ. ನಂತರ ಸ್ಥಳೀಯರ ನೆರವಿನಿಂದ ಹುಡುಕಾಟ ನಡೆಸಿದಾಗ ಮೊಹಿದ್ದೀನ್ ಪತ್ತೆಯಾಗಿದ್ದ.
Also Read>> ಆಗುಂಬೆಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು | ಅಪಾಯದಿಂದ ಪಾರು
ತಕ್ಷಣವೇ ಆತನನ್ನು ಹೊಳೆಹೊನ್ನೂರು ಆಸ್ಪತ್ರೆಗೆ ಕರೆದೊಯ್ಯಲಾದರೂ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಘಟನೆ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















