No Result
View All Result
A.G. Srinivas assumes charge as Additional General Manager of SWR
English Articles

A.G. Srinivas assumes charge as Additional General Manager of SWR

by ಕಲ್ಪ ನ್ಯೂಸ್
June 30, 2026
0

Kalpa Media House  | Hubballi | Shri A.G. Srinivas, an officer of the Indian Railway Service of Engineers (IRSE) of...

Read moreDetails
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
Henkel appoints Pradhyumna Ingle as Country President for India

Henkel appoints Pradhyumna Ingle as Country President for India

June 26, 2026
  • Advertise With Us
  • Grievances
  • About Us
  • Contact Us
Tuesday, June 30, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಉಡುಪಿ

ಲೇಖನದ ಮೂಲಕ ಮಕ್ಕಳು ದೇಶಕ್ಕೆ ಸಹಕಾರಿಯಾಗುವಂತೆ ಬೆಳೆಯಲಿ | ಭಂಡಾರಕೇರಿ ಶ್ರೀಗಳ ಆಶಯ

`ಕಲ್ಪ ನ್ಯೂಸ್'ನಲ್ಲಿ ಆನಂದಕಂದ ಅಂಕಣ ಲೋಕಾರ್ಪಣೆ | ಗುರುಕುಲ ಮಕ್ಕಳ ಪ್ರತಿಭೆ ಅನಾವರಣಕ್ಕೊಂದು ವೇದಿಕೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
August 22, 2024
in ಉಡುಪಿ, ಶಿವಮೊಗ್ಗ
0
ಲೇಖನದ ಮೂಲಕ ಮಕ್ಕಳು ದೇಶಕ್ಕೆ ಸಹಕಾರಿಯಾಗುವಂತೆ ಬೆಳೆಯಲಿ | ಭಂಡಾರಕೇರಿ ಶ್ರೀಗಳ ಆಶಯ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಉಡುಪಿ/ಶಿವಮೊಗ್ಗ  |

ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ದೇಶಕ್ಕೇ ಸಹಕಾರಿಯಾಗುವ ರೀತಿಯಲ್ಲಿ ಬೆಳೆಯಬೇಕು ಎಂದು ಭಂಡಾರಕೇರಿ ಮಠಾಧೀಶರಾದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದಂಗಳವರು #VidyeshaThirthaSwamiji ಸಲಹೆ ನೀಡಿದರು.

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದಲ್ಲಿ ವಿದ್ಯಾರ್ಥಿಗಳಿಗಾಗಿ ಆರಂಭಿಸಲಾದ `ಆನಂದಕಂದ’ #Anandakanda ವಿಶೇಷ ಅಂಕಣಕ್ಕೆ ಆನ್ ಲೈನ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಆನಂದವನ ಮತ್ತು ಪೂರ್ಣಪ್ರಮತಿ ಗುರುಕುಲದ ವಿದ್ಯಾರ್ಥಿಗಳ ಪ್ರತಿಭೆಯನ್ನು ವಿಕಾಸಗೊಳಿಸಲು ಹಾಗೂ ಅವರಲ್ಲಿನ ಜ್ಞಾನವನ್ನು ಲೇಖನಗಳ ಮೂಲಕ ಪ್ರಪಂಚಕ್ಕೆ ಪರಿಚಯಿಸುವ ವ್ಯವಸ್ಥೆಯನ್ನು ಕಲ್ಪ ನ್ಯೂಸ್ #KalpaNews ಮೂಲಕ ಆರಂಭಿಸುತ್ತಿರುವುದು ತಿಳಿದು ಸಂತೋಷವಾಯಿತು ಎಂದರು.

Also read: ಆ.22: ರೇಡಿಯೋ ಶಿವಮೊಗ್ಗದಲ್ಲಿ ಜನತಾ ಜಾಗೃತಿ ಬಾನುಲಿ ಸರಣಿ
ಕಲ್ಪ ನ್ಯೂಸ್ ಡಿಜಿಟಲ್ ಮಾಧ್ಯಮದ ಮೂಲಕ ಇಂತಹ ಆನಂದಕಂದ ವಿಭಾಗದಲ್ಲಿ ಇದರ ಪ್ರಸಾರ ಆರಂಭವಾಗಿದೆ ಎಂಬುದು ಸಂತೋಷ. ಮಕ್ಕಳ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುತ್ತಿರುವುದು, ಉತ್ತೇಜನ ನೀಡುತ್ತಿರುವುದು ಸಂತೋಷದ ವಿಚಾರ. ಇದಕ್ಕಾಗಿ ಕಲ್ಪ ನ್ಯೂಸ್ ಪ್ರಧಾನ ಸಂಪಾದಕರು, ಮಾಲೀಕರಾದ ಅನಿರುದ್ಧ ವಸಿಷ್ಠ ಅವರನ್ನು ಅಭಿನಂದಿಸುತ್ತೇವೆ ಎಂದರು.

ಗುರುಕುಲದ ಮಕ್ಕಳ ಶ್ರೇಯೋಭಿವೃದ್ಧಿ ಹಾಗೂ ಜ್ಞಾನಾಭಿವೃದ್ಧಿಗಾಗಿ ಹಿರಿಯ ಪತ್ರಕರ್ತರಾದ ರಘುರಾಮ್ ಅವರು ಬಹಳಷ್ಟು ಮುತುವರ್ಜಿ ವಹಿಸಿ, ಇಂತಹ ಒಂದು ಕಾರ್ಯಕ್ಕೆ ವೇದಿಕೆಯನ್ನು ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಕಾಳಜಿಯನ್ನು ಕಂಡು, ದೊರೆತಿರುವ ವೇದಿಕೆಯನ್ನು ಸದುಪಯೋಗ ಮಾಡಿಕೊಂಡು, ಮಕ್ಕಳು ತಮ್ಮ ಪ್ರತಿಭೆ ತೋರಿಸಿ, ದೇಶಕ್ಕೆ ಸಹಕಾರಿಯಾಗುವ ರೀತಿಯಲ್ಲಿ ಬೆಳೆಯಲಿ ಎಂದು ಹಾರೈಸಿ, ರಾಮಕೃಷ್ಣ ದೇವರ ವಿಶೇಷ ಅನುಗ್ರಹ ದೊರೆಯಲಿ ಎಂದು ಪ್ರಾರ್ಥಿಸುತ್ತೇವೆ ಎಂದರು.

ಹಿರಿಯ ಪತ್ರಕರ್ತ, ಮಾರ್ಗದರ್ಶಕರಾದ ರಘುರಾಮ್ ಅವರು ಮಾತನಾಡಿ, 2017ರಲ್ಲಿ ಆರಂಭವಾದ ಕಲ್ಪ ನ್ಯೂಸ್’ನಲ್ಲಿ ವಿದ್ಯಾಪೀಠದ ಮಕ್ಕಳ ವಿಕಾಸಕ್ಕಾಗಿ ಗುರುಗಳ ಆಶಯದಂತೆ ನೂತನ ಅಂಕಣವನ್ನು ಆರಂಭಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಮಾಧ್ಯಮದಲ್ಲಿ ಗುರುಕುಲದ ಮಕ್ಕಳು ಲೇಖನ ಪ್ರಕಟಗೊಳ್ಳುವುದು ಸಂತೋಷ. ಈ ಮಕ್ಕಳು ಕೇವಲ ಉಪನ್ಯಾಸಕರಾದರೆ ಸಾಲದು, ಉತ್ತಮ ಲೇಖಕರಾಗಿ ರೂಪುಗೊಳ್ಳಬೇಕು ಎಂದು ಆಶಿಸಿದರು.
ರಾಯರ ಆರಾಧನಾ ಪರ್ವಕಾಲದಲ್ಲಿ ಈ ಅಂಕಣಕ್ಕೆ ಗುರುಗಳು ಚಾಲನೆ ನೀಡಿದ್ದಾರೆ. ಮಕ್ಕಳ ಬರಹದ ವಿಕಾಸಕ್ಕೆ ಉತ್ತಮ ವೇದಿಕೆಯಾಗಿ, ಸಮಾಜಕ್ಕೆ ಕೊಡುಗೆಯಾಗಲಿ ಎಂಬುದು ನಮ್ಮೆಲ್ಲರ ಆಶಯ ಎಂದರು.

ಪೂರ್ಣಪ್ರಮತಿ ಗುರುಕುಲದ ಟ್ರಸ್ಟಿ ಶ್ರೀನಿವಾಸ ಗುತ್ತಲ ಅವರು ಮಾತನಾಡಿ, ಮಕ್ಕಳ ಜ್ಞಾನ ವಿಕಾಸಕ್ಕಾಗಿ ಆರಂಭಿಸುತ್ತಿರುವ ಈ ಒಂದು ಯೋಜನೆಯಲ್ಲಿ ಪೂರ್ಣ ಪ್ರಮತಿ ಗುರುಕುಲ ಭಾಗಿಯಾಗುತ್ತಿರುವುದು ಸಂತೋಷದ ವಿಚಾರವಾಗಿದೆ. ಪೂರ್ಣಪ್ರಮತಿಯು ಪೇಜಾವರ ಶ್ರೀವಿಶ್ವೇಶ ತೀರ್ಥ ಶ್ರೀಪಾದಂಗಳವರು ಚಾಲನೆ ನೀಡಿ, ಈಗಿನ ಗುರುಗಳಾದ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಮಾರ್ಗದರ್ಶನ ಮಾಡುತ್ತಿದ್ದಾರೆ. ವಿಶೇಷವಾಗಿ ಭಂಡಾರಕೇರಿ ಶ್ರೀಗಳ ನೇತೃತ್ವದಲ್ಲಿ ವಿಶೇಷ ಯೋಜನೆಗಳ ಮೂಲಕ ಗುರುಕುಲವನ್ನು ಮುನ್ನಡೆಸುತ್ತಿದ್ದಾರೆ ಎಂದರು.

http://kalpa.news/wp-content/uploads/2024/04/VID-20240426-WA0008.mp4

ಗುರುಗಳ ಸಂಕಲ್ಪದಂತೆ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸುವ ಕುರಿತಾಗಿ ಸೂಚನೆ ನೀಡಿದ್ದರು. ಅಂದಿನಿಂದ ರಾಘುರಾಮ್ ಅವರು ಸ್ವತಃ ಎರಡೂ ಗುರುಕುಲಗಳಿಗೆ ಆಗಮಿಸಿ, ಮಕ್ಕಳಿಗೆ ಎಲ್ಲ ರೀತಿಯ ಮಾರ್ಗದರ್ಶನ ಮಾಡಿದ್ದಾರೆ. ಇದಕ್ಕೆ ಪೂರಕವಾಗಿ ಕಲ್ಪ ನ್ಯೂಸ್ ಮೂಲಕ ಅನಿರುದ್ಧ ವಸಿಷ್ಠ ಅವರು ಮಕ್ಕಳ ಬರವಣಿಗೆಗೆ ವೇದಿಕೆ ಕಲ್ಪಿಸಿದ್ದಾರೆ ಎಂದರು.

ಬರವಣಿಗೆ ಒಂದು ಅಸ್ತ್ರ. ಇದನ್ನು ಬಳಸಿಕೊಂಡು ಪ್ರಪಚಂದಾದ್ಯಂತ ಸತ್ ಚಿಂತನೆಗಳನ್ನು ಹರಡಬೇಕು. ಅಂತಹ ಮಾಧ್ಯಮ ಇಂದು ದುರ್ಲಭವಾಗಿದ್ದು, ಇಂತಹ ಸಾಹಸಕ್ಕೆ ಕಲ್ಪ ನ್ಯೂಸ್ ಮುಂದಾಗಿರುವುದು ಸಂತೋಷ. ಭಂಡಾರಕೇರಿ ಹಾಗೂ ಪೇಜಾವರ ಶ್ರೀಗಳ ಆಶಯಕ್ಕೆ ಪೂರಕಾಗಿ ಈ ಕಾರ್ಯ ಆರಂಭವಾಗಿವುದುದು ಸಂತೋಷ. ಸಂಸ್ಕೃತಿಯನ್ನು ಉಳಿಸಲು ಎಲ್ಲ ಭಾಗಗಳ ಮಕ್ಕಳ ಸೇರಿ ಬರವಣಿಗೆ ಎಂಬ ಸದಸ್ತ್ರದಿಂದ ಸನಾತನ ಸಂಸ್ಕೃತಿಯ ರಕ್ಷಣೆ ಮಾಡುವಂತಾಗಲಿ ಎಂದು ಆಶಿಸಿದರು.

ಕಲ್ಪ ನ್ಯೂಸ್ ಪ್ರಧಾನ ಸಂಪಾದಕ ಅನಿರುದ್ಧ ವಸಿಷ್ಠ ಎಸ್.ಆರ್., ಪೂರ್ಣಪ್ರಮತಿ ಗುರುಕುಲದ ಅಧ್ಯಾಪಕಿ ಅರ್ಚನಾ, ಕಲಾಹಂಸ ಇನ್ಫೋಟೆಕ್ ಮುಖ್ಯಸ್ಥರಾದ ಚಂದನ್ ಕಲಾಹಂಸ, ಪತ್ರಕರ್ತ ಅಜೇಯಸಿಂಹ, ಗುರುಕುಲದ ಡಾ.ಶ್ರೀನಿಧಿ, ಗುರುಕುಲದ ವಿದ್ಯಾರ್ಥಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

Tags: AnandakandaBhandarakeri MathKannada News WebsiteLatest News KannadaOnlinePurnapramati GurukulaShimogaShivamoggaಆನಂದಕಂದಆನಂದವನಆನ್ ಲೈನ್ಕಲ್ಪ ನ್ಯೂಸ್ಪೂರ್ಣಪ್ರಮತಿ ಗುರುಕುಲಭಂಡಾರಕೇರಿ ಮಠವಿದ್ಯಾರ್ಥಿಶಿವಮೊಗ್ಗಶ್ರೀ ವಿದ್ಯೇಶ ತೀರ್ಥ ಶ್ರೀಪಾದರು
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ದರ್ಶನ್’ಗೆ ಮತ್ತಷ್ಟು ಸಂಕಷ್ಟ? ಶೀಘ್ರ ಚಾರ್ಜ್ ಶೀಟ್ ಸಲ್ಲಿಕೆ | ಮೊಬೈಲ್ ರಿಟ್ರೀವ್’ನಲ್ಲಿ ಸಿಕ್ತಾ ಮಹತ್ವದ ಸಾಕ್ಷಿ?

Next Post

ಶಾಲಾ ಬಸ್‌ಗೆ ಬೆಂಕಿ ಹಚ್ಚಲು ಮುಂದಾದ ಪ್ರತಿಭಟನಾಕಾರರು: ತಪ್ಪಿದ ಭಾರೀ ಅನಾಹುತ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶಾಲಾ ಬಸ್‌ಗೆ ಬೆಂಕಿ ಹಚ್ಚಲು ಮುಂದಾದ ಪ್ರತಿಭಟನಾಕಾರರು: ತಪ್ಪಿದ ಭಾರೀ ಅನಾಹುತ

ಶಾಲಾ ಬಸ್‌ಗೆ ಬೆಂಕಿ ಹಚ್ಚಲು ಮುಂದಾದ ಪ್ರತಿಭಟನಾಕಾರರು: ತಪ್ಪಿದ ಭಾರೀ ಅನಾಹುತ

Leave a Reply Cancel reply

Your email address will not be published. Required fields are marked *

No Result
View All Result
A.G. Srinivas assumes charge as Additional General Manager of SWR
English Articles

A.G. Srinivas assumes charge as Additional General Manager of SWR

by ಕಲ್ಪ ನ್ಯೂಸ್
June 30, 2026
0

Kalpa Media House  | Hubballi | Shri A.G. Srinivas, an officer of the Indian Railway Service of Engineers (IRSE) of...

Read moreDetails
V. Somanna Dedicates ₹22.40 Crore Road Over Bridge at Yelekeri Gate

V. Somanna Dedicates ₹22.40 Crore Road Over Bridge at Yelekeri Gate

June 30, 2026
Mysore - Shivamogga - Talguppa Train

Cancellation, Regulation and Diversion of Trains

June 27, 2026
Surprise Inspection for Enhanced Passenger Safety

Surprise Inspection for Enhanced Passenger Safety

June 27, 2026
Henkel appoints Pradhyumna Ingle as Country President for India

Henkel appoints Pradhyumna Ingle as Country President for India

June 26, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL