ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೊರಬ ತಾಲ್ಲೂಕಿನ ಆನವಟ್ಟಿ ಸಮನವಳ್ಳಿ ಗ್ರಾಮದಲ್ಲಿ ಜಾಗದ ವಿಚಾರವಾಗಿ ನಡೆದ ಗಲಾಟೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
2020ರ ಆಗಸ್ಟ್ 25ರಂದು, ರಾಜೇಶ್ವರಿ (35) ಅವರು ತಮ್ಮ ಮನೆಯ ಮುಂದೆ ಕುಟುಂಬದವರೊಂದಿಗೆ ಕುಳಿತಿದ್ದಾಗ, ಅದೇ ಗ್ರಾಮದ ಮಂಜುನಾಥ (25) ಎಂಬಾತ ಜಾಗದ ವಿಚಾರವಾಗಿ ಜಗಳ ಆರಂಭಿಸಿದ್ದಾನೆ.
ಈ ವೇಳೆ ರಾಜೇಶ್ವರಿ ಅವರು ದೂರು ನೀಡಲು ಮುಂದಾದಾಗ, ಮಂಜುನಾಥ ಏಕಾಏಕಿ ಮಚ್ಚಿನಿಂದ ಅವರ ತಲೆಗೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
Also read>> Indian Railways | ಓಣಂ ಹಬ್ಬಕ್ಕೆ ಮೈಸೂರು–ಕಣ್ಣೂರು ನಡುವೆ ವಿಶೇಷ ರೈಲುಗಳ ಸಂಚಾರ
ಈ ಕುರಿತು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 121/2020 ಅಡಿಯಲ್ಲಿ ಐಪಿಸಿ ಕಲಂ 504 ಹಾಗೂ 302ರಡಿ ಪ್ರಕರಣ ದಾಖಲಾಗಿತ್ತು. ಆಗಿನ ತನಿಖಾಧಿಕಾರಿ ಆರ್.ಡಿ. ಮರುಳ ಸಿದ್ದಪ್ಪ (ಸಿಪಿಐ, ಸೊರಬ ವೃತ್ತ) ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಶಿವಮೊಗ್ಗದಲ್ಲಿ ನಡೆಯಿತು. ಸರ್ಕಾರದ ಪರವಾಗಿ ಅಭಿಯೋಜಕರಾದ ಅಣ್ಣಪ್ಪ ನಾಯಕ ಅವರು ವಾದ ಮಂಡಿಸಿದರು.
ಆರೋಪದ ದೃಢೀಕರಣದ ಹಿನ್ನೆಲೆ, ನ್ಯಾಯಾಧೀಶರಾದ ರವೀಂದ್ರ ಆರ್ ಅವರು ಆರೋಪಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ₹50,000 ದಂಡ ವಿಧಿಸಿ ಆದೇಶಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









