ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೋವಿಡ್19 ಲಾಕ್ ಡೌನ್’ನಿಂದ ಸಂಕಷ್ಟಲ್ಲಿರುವವರ ಸಹಾಯಕ್ಕಾಗಿ ಬೃಹತ್ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ದಿ ನಿಗಮದ ಅದ್ಯಕ್ಷ ಡಿ.ಎಸ್. ಅರುಣ್ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತಂತೆ ಹೇಳಿಕೆ ನೀಡಿರುವ ಅವರು, ಲಾಕ್ ಡೌನ್ನಿಂದ ಆರ್ಥಿಕವಾಗಿ ತೊಂದರೆಗೆ ಸಿಲುಕಿರುವ ಹೂವು ಬೆಳೆಯು ರೈತರಿಗೆ ಪ್ರತಿ ಹೆಕ್ಟೇರಿಗೆ ರೂ. 25,000 ಪರಿಹಾರ, ಆಗಸರು ಮತ್ತು ಕ್ಷೌರಿಕ ವೃತ್ತಿಯಲ್ಲಿ ಇರುವವರಿಗೆ ರೂ. 5,000 ಪರಿಹಾರ, ಎಲ್ಲಾ ರಂಗದ ಕೈಗಾರಿಕೆಗಳಿಗೆ ಎರಡು ತಿಂಗಳ ವಿದ್ಯತ್ ಬಿಲ್ ಮೊತ್ತವನ್ನು ಮನ್ನ ಮಾಡಲಾಗಿದ್ದು ಬೃಹತ್ ಕೈಗಾರಿಕೆಗೆ ಬಿಲ್ ಪಾವತಿ ಮಾಡಲು 2 ತಿಂಗಳ ರಿಯಾತಿ ನೀಡಿರುವುದು ಅಭಿನಂದನೀಯ ಎಂದಿದ್ದಾರೆ.
ನೇಕಾರರಿಗೆ ನೆರವಾಗುವ ನಿಟ್ಟಿನಲ್ಲಿ ಸಾಲ ಮನ್ನ ಮತ್ತು ನೇಕಾರ ಸಮ್ಮಾನ್ ಯೋಜನೆ ಎಂಬ ಹೋಸ ಯೋಜನೆಯೊಂದಿಗೆ ನೆಕಾರರಿಗೆ ಪ್ರತಿ ವರ್ಷ ರೂ.2,000 ಗಳನ್ನು ನೇರವಾಗಿ ಅವರ ಖಾತೆಗೆ ಸಂದಾಯ ಮಾಡುವ ತಿರ್ಮಾನ ನಿಜಕ್ಕೂ ಶ್ಲಾಘನೀಯ. ಕೆಲಸ ಕಳೆದುಕೊಂಡು ಕಂಗಾಲಾಗಿರುವ ಕಟ್ಟಡ ಕಾರ್ಮಿಕರಿಗೆ ರೂ. 2,000 ಪರಿಹಾರ ನೀಡಲಾಗಿದ್ದು ಹೆಚ್ಚುವರಿ ರೂ. 3,000 ಗಳ ಪರಿಹಾರ ಘೋಷಿಸಿದ್ದಾರೆ. ಆಟೋ ಹಾಗೂ ಟ್ಯಾಕ್ಸಿ ಚಾಲಕರ ಪರವಾಗಿ ಈವರೆಗೆ ಯಾವ ಸರ್ಕಾರ ಸಹ ಚಿಂತಿಸಿ ಇವರಿಗೂ ಸಹ ಸಹ ತಲಾ ರೂ. 5,000 ಪರಿಹಾರ ಘೋಷಿಸಿರುವುದು ಸ್ವಾಗತಾರ್ಹ ಎಂದಿದ್ದಾರೆ.
ಎಲ್ಲಾ ವರ್ಗದವರನ್ನು ಗಮನದಲ್ಲಿರಿಸಿ ದೇಶದಲ್ಲೇ ಮೊಟ್ಟ ಮೊದಲ ಭಾರಿಗೆ 1610 ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಿಸಿರುವ ಜನಪ್ರಿಯ ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post