ಕಲ್ಪ ಮೀಡಿಯಾ ಹೌಸ್ | ಸೊರಬ |
ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪ್ರಕೃತಿಯನ್ನು ಆರಾಧಿಸಿ ಗಿಡ ಮರ ಸಶಸಂಪತ್ತನ್ನು ಸಂರಕ್ಷಿಸಲು ಶ್ರಮದಾನದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಾಲೂಕಿನ ಹಿರಿಯ ಉದ್ಯಮಿಗಳಾದ ಶ್ರೀ ವಾಮನ್ ರಾವ್ ಭಾವೆ ಅವರು ಮಾರ್ಗದರ್ಶನ ನೀಡಿದರು.
ಅಮರ ಜ್ಯೋತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಎನ್ಎಸ್ಎಸ್ ವಿಭಾಗ ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ವಿಭಾಗದ ವಿದ್ಯಾರ್ಥಿಗಳು ಸೊರಬದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿನ ನಂದನ ವನ ಔಷಧೀಯ ಸಸ್ಯದ ಉದ್ಯಾನವನವದ ಸ್ವಚ್ಛತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Also read: ಜೂ.20ರಂದು ಕಾಕೋಳಿನಲ್ಲಿ ರೂ.35 ಲಕ್ಷ ವೆಚ್ಚದ ಶಾಲಾ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ
ವೈದ್ಯಾಧಿಕಾರಿ ಪ್ರಭು ಸಾಹುಕಾರ್ ಇವರು ಔಷಧೀಯ ಸಸ್ಯಗಳ ಮಹತ್ವ ಪ್ರಥಮ ಚಿಕಿತ್ಸೆ ತಡೆಗಟ್ಟುವಿಕೆ ಮತ್ತು ಶ್ರಮದಾನದ ಮಹತ್ವವನ್ನ ವಿದ್ಯಾರ್ಥಿಗಳಿಗೆ ವಿವರಿಸಿ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕ ಸ್ವತ್ತುಗಳನ್ನು ತಮ್ಮ ಮನೆಯ ಆಸ್ತಿ ಎಂಬ ಭಾವನೆಯೊಂದಿಗೆ ಸಾರ್ವಜನಿಕ ಕೆಲಸಗಳಲ್ಲಿ ತೊಡಗಿಸಿ ಕೊಳ್ಳಿರಿ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಡಾ. ಡಾಕ್ಟರ್ ಸತೀಶ್, ಡಾಕ್ಟರ್ ಮಹದೇವ ಸಮಾಜ ಸೇವಕರಾದ ಶ್ರೀ ವೇಣುಗೋಪಾಲ್ ಉಪಸ್ಥಿತರಿದ್ದು ಶಿಬಿರಾರ್ಥಿಗಳಿಗೆ ಸ್ವಚ್ಛತಾ ಮಾರ್ಗದರ್ಶನ ನೀಡಿದರು.
ಶಿಬಿರದಲ್ಲಿ ಉಪ ಪ್ರಾಂಶುಪಾಲರಾದ ಸಿಸ್ಟರ್ ಹರ್ಷಿತ, ಸಿಸ್ಟರ್ ಪ್ರಶೀಲ, ಸಿಸ್ಟರ್ ಜ್ಯೋತಿಕ, ಮಂಜಪ್ಪ , ವೆಂಕಟೇಶ್ ಮತ್ತು ಕುಮಾರಿ ರಂಜಿತ ಉಪಸ್ಥಿತರಿದ್ದು ಒಳರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಿ ರೋಗಿಗಳು ಗುಣಮುಖರಾಗಲೆಂದು ಪ್ರಾರ್ಥಿಸಿದರು
ಶಿಬಿರದ ಯೋಜನಾಧಿಕಾರಿ ಪ್ರಜ್ವಲ್ ಚಂದ್ರಗುತ್ತಿ ವಿದ್ಯಾರ್ಥಿಗಳಿಗೆ ಎನ್ ಎಸ್ ಎಸ್ ಪ್ರಮಾಣವನ್ನ ಬೋಧಿಸಿ ಶಿಸ್ತು ಮತ್ತು ಸಂಯಮದಿಂದ ಸ್ಪಂದಿಸುವಂತೆ ಕರೆ ನೀಡಿದರು. ಸಹ ಶಿಬಿರ ಅಧಿಕಾರಿ ಶ್ರೀ ಪುರುಷೋತ್ತಮ್ ಸರ್ವರನ್ನು ಸ್ವಾಗತಿಸಿದರು ಶ್ರೀ ಸುಬ್ರಯ ಹಳ್ಳರ್ ವಂದಿಸಿದರು.
ಸ್ವಚ್ಛತಾ ಶಿಬಿರದಲ್ಲಿ 150ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ಉದ್ಯಾನವನ ಸ್ವಚ್ಛಗೊಳಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















