No Result
View All Result
Prayagraj - Yesvantpur Special Weekly Express Trains
English Articles

Special Weekly Express Trains Between Prayagraj and Yesvantpur Announced

by kalpa News
July 23, 2026
0

Kalpa Media House  |  Bengaluru | To clear the extra rush of passengers, North Central Railway has announced the operation...

Read moreDetails
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
ABD Maestro Launches 3 Premium Whiskies in Hyderabad

ABD Maestro Launches 3 Premium Whiskies in Hyderabad

July 21, 2026
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
  • Advertise With Us
  • Grievances
  • About Us
  • Contact Us
Friday, July 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಮೈಸೂರು

ಮೈಸೂರು | ಎಲ್ಲ ವ್ರತಗಳಿಗಿಂತ ಏಕಾದಶಿ ವ್ರತವು ಅತ್ಯಂತ ಶ್ರೇಷ್ಠ | ಸತ್ಯಾತ್ಮ ತೀರ್ಥ ಸ್ವಾಮೀಜಿ

ಉತ್ತರಾದಿ ಮಠಾಧೀಶರಿಂದ ಒಂದು ಕೋಟಿ ತುಳಸಿ ಸಮರ್ಪಣೆ

kalpa News by kalpa News
June 12, 2026
in ಮೈಸೂರು
0
ಮೈಸೂರು | ಎಲ್ಲ ವ್ರತಗಳಿಗಿಂತ ಏಕಾದಶಿ ವ್ರತವು ಅತ್ಯಂತ ಶ್ರೇಷ್ಠ | ಸತ್ಯಾತ್ಮ ತೀರ್ಥ ಸ್ವಾಮೀಜಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |

ಎಲ್ಲ ವ್ರತಗಳಿಗಿಂತ ಏಕಾದಶಿ ವ್ರತವು ಅತ್ಯಂತ ಶ್ರೇಷ್ಠವಾಗಿದೆ ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಹೇಳಿದರು.

ಅಧಿಕ ಜೇಷ್ಠ ಮಾಸದ ಅಂಗವಾಗಿ ನಗರದ ಅಗ್ರಹಾರದ ಉತ್ತರಾದಿ ಮಠದಲ್ಲಿ ಹಮ್ಮಿಕೊಂಡಿರುವ ವಿಶೇಷ ಜ್ಞಾನ ಸತ್ರ, ಏಕಾದಶಿ ಆಚರಣೆ ಸಂದರ್ಭ ಗುರುವಾರ ಅವರು ಅನುಗ್ರಹ ಸಂದೇಶ ನೀಡಿದರು.

Also Read>> ಮೈಸೂರು–ಮದಾರ್ ಜಂಕ್ಷನ್ ವಿಶೇಷ ಎಕ್ಸ್‌ಪ್ರೆಸ್‌ಗೆ ಎರಡು ಹೆಚ್ಚುವರಿ ಟ್ರಿಪ್‌ಗಳ ವಿಸ್ತರಣೆ

ಭಗವಂತನು ವಿವಿಧ ವ್ರತ ಮತ್ತು ಆಚರಣೆಗಳಿಂದ ಸಂತುಷ್ಟನಾಗಿ ನಾವು ಅಪೇಕ್ಷಿಸಿದ ವರಗಳನ್ನು ನೀಡುತ್ತಾನೆ. ಎಲ್ಲಾ ವ್ರತಗಳಲ್ಲಿ ಏಕಾದಶಿಯು ಅತ್ಯಂತ ಪರಮ ಪಾವನವಾಗಿದೆ. ಉಪವಾಸವಿದ್ದು, ಇಡೀ ದಿನ ದೇವರ ಚಿಂತನೆಯಲ್ಲೇ ಕಳೆಯುವುದು ಧನ್ಯತೆಯ ಸಂಕೇತವಾಗಿದೆ. ಮಹಾಭಾರತ, ಭಾಗವತ ಸೇರಿದಂತೆ ಹಲವು ಪುರಾಣ, ಗ್ರಂಥಗಳು ಏಕಾದಶಿಯ ಮಹತ್ವವನ್ನು ಸಾರಿ ಹೇಳಿವೆ. 15 ದಿನಗಳಿಗೆ ಒಮ್ಮೆ ಸಮರ್ಪಣಾ ಭಾವದಲ್ಲಿ ಏಕಾದಶಿ ಉಪವಾಸ ಮಾಡುವುದು ಕೇವಲ ಧರ್ಮ ಮಾತ್ರವಲ್ಲ, ಅದರಲ್ಲಿ ಆರೋಗ್ಯ ವಿಜ್ಞಾನವು ಅಡಗಿದೆ ಎಂದು ಅವರು ಹೇಳಿದರು.ಉಪವಾಸ ವ್ರತವನ್ನು ಮಾಡಿದ ಅನೇಕ ಋಷಿಮುನಿಗಳು ಮತ್ತು ಸಾಧ್ವಿ ಮಣಿಗಳು ಲೋಕಕ್ಕೆ ಉಪಕಾರ ಮಾಡುವಂತಹ ಮಹಾನ್ ವ್ಯಕ್ತಿಗಳನ್ನು ಮಕ್ಕಳನ್ನಾಗಿ ಪಡೆದಿದ್ದಾರೆ. ದೇಹ ಮತ್ತು ಮನಸ್ಸುಗಳನ್ನು ಸತ್ಕಾರ್ಯಗಳಿಗೆ ಮತ್ತೆ ಮತ್ತೆ ಆಣಿ ಮಾಡುವ ಚೇತನ ಶಕ್ತಿಯೊಂದು ಉಪವಾಸದಲ್ಲಿ ಅಡಗಿದೆ. ಆಧುನಿಕ ವಿಜ್ಞಾನವು ಇದು ಸತ್ಯ ಎಂದು ಸಾಬೀತುಪಡಿಸಿದೆ. ಹಾಗಿರುವಾಗ ಕಂಡ ಕಂಡಲ್ಲಿ, ನೋಡಿದ ಎಲ್ಲವನ್ನು ತಿನ್ನುವುದು, ನಾಲಿಗೆ ಬಯಸಿದ ಎಲ್ಲ ಖಾದ್ಯಗಳನ್ನು ಮಿತಿ ಇಲ್ಲದೆ ಸೇವಿಸುವುದು ಅನಾರೋಗ್ಯಕ್ಕೆ ಮಾತ್ರವಲ್ಲ, ಮುಂದಿನ ಸಂತಾನಕ್ಕೂ ಮಾರಕವಾಗಿದೆ. ಇದನ್ನು ಅರ್ಥ ಮಾಡಿಕೊಂಡು ಪ್ರತಿಯೊಬ್ಬರು ಮನೆಯಲ್ಲೇ ಶುದ್ಧವಾಗಿ ತಯಾರಿಸಿ ಭಗವಂತನಿಗೆ ಸಮರ್ಪಣೆ ಮಾಡಿದ ಮಹಾಪ್ರಸಾದವನ್ನೇ ಸೇವನೆ ಮಾಡಬೇಕು. ಭಾಗವತ ಪ್ರತಿಪಾದಿಸಿದಂತೆ ಏಕಾದಶಿ ಉಪವಾಸ ವ್ರತವನ್ನು ಆಚರಣೆ ಮಾಡಬೇಕು. ಇದಕ್ಕೆ ಯಾವುದೇ ಜಾತಿ , ಮತ ಧರ್ಮಗಳ ಚೌಕಟ್ಟು ಇಲ್ಲ. ಯಾರಿಗೆ ಆರೋಗ್ಯ ಮತ್ತು ಬದುಕಿನಲ್ಲಿ ಸುಖ ಬೇಕು ಎಂಬ ಸಂಕಲ್ಪವಿದ್ದರೆ ಅವರೆಲ್ಲರಿಗೂ ಏಕಾದಶಿಯ ಉಪವಾಸ ಮಹಾ ವರವಾಗಿದೆ ಎಂದು ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ನುಡಿದರು.

ಉತ್ತರಾದಿ ಮಠಾಧೀಶರಿಂದ ರಾಮ ದೇವರಿಗೆ ಒಂದು ಲಕ್ಷ ತುಳಸಿ ಸಮರ್ಪಣೆ

ಶ್ರೀ ಮೂಲ ರಾಮದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿದ ಅವರು ಅಧಿಕ ಜೇಷ್ಠ ಏಕಾದಶಿ ಅಂಗವಾಗಿ ಪ್ರತಿಮೆಗಳಿಗೆ ಒಂದು ಲಕ್ಷ ತುಳಸಿ ಅರ್ಚನೆಯನ್ನು ನೆರವೇರಿಸಿ ಧನ್ಯತೆ ಸಮರ್ಪಿಸಿದ್ದು ವಿಶೇಷವಾಗಿತ್ತು. ಸಾವಿರಾರು ಭಕ್ತರು ಸಾಕ್ಷಿಯಾದ ಈ ಸಂದರ್ಭದಲ್ಲಿ ಗುರುಗಳು ದೇವರ ಪ್ರತಿಮೆಗಳನ್ನು ತಲೆಯ ಮೇಲೆ ಹೊತ್ತು ನರ್ತನ ಸೇವೆಯನ್ನು ಮಾಡಿದ್ದು ವಿಶೇಷವಾಗಿತ್ತು.

ವಿಶೇಷ ಉಪನ್ಯಾಸ ನೀಡಿದ ಪ್ರಾಚ್ಯ ವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ಡಿ.ಪಿ. ಮಧುಸೂಧನಾಚಾರ್ಯ ಅವರು, ಶ್ರದ್ಧೆಯಿಂದ ಮಾಡುವ ಪ್ರತಿಯೊಂದು ಕಾರ್ಯಗಳಿಗೂ ಶಾಸ್ತ್ರಗಳ ಶ್ರಾವಣದ ಬಲಬೇಕು ಎಂದರು. ನಾವು ಮಾಡುವ ಅನ್ನದಾನ ಮತ್ತು ಜ್ಞಾನ ದಾನಗಳು ಸದಾ ನಮ್ಮನ್ನು ರಕ್ಷಣೆ ಮಾಡುತ್ತವೆ. ಗುರು ಹಿರಿಯರ ಆಶೀರ್ವಾದ ಮತ್ತು ಅನುಗ್ರಹಗಳು ಎಂದೆಂದಿಗೂ ನಮ್ಮನ್ನು ಸನ್ಮಾರ್ಗದಲ್ಲಿ ಕೊಂಡೊಯ್ದು, ಆರೋಗ್ಯ ಮತ್ತು ಆಯುಷ್ಯವನ್ನು ನೀಡುತ್ತವೆ ಎಂದರು.

ಏಕಾದಶಿ ಅಂಗವಾಗಿ ಬೆಳಗ್ಗೆ 9 ರಿಂದ ರಾತ್ರಿ 11 ರವರೆಗೆ ವಿವಿಧ ಕಲಾವಿದರಿಂದ ಅಖಂಡ ಹರಿದಾಸ ಭಜನೆ ನೆರವೇರಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

Tags: EkadashiFastingKannada News WebsiteLatest News KannadamysoreUttaradi Muttಅಧಿಕ ಜೇಷ್ಠ ಮಾಸಉತ್ತರಾದಿ ಮಠಉಪವಾಸಏಕಾದಶಿಏಕಾದಶಿ ವ್ರತಮೈಸೂರುಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಗಮನಿಸಿ! ಜೂ.12ರಂದು ಶಿವಮೊಗ್ಗದ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

Next Post

ಶಿವಮೊಗ್ಗ-ಮೈಸೂರು, ಯಶವಂತಪುರ ನಡುವಿನ 3 ರೈಲುಗಳ ಮಹತ್ವದ ತುರ್ತು ಅಪ್ಡೇಟ್

kalpa News

kalpa News

Next Post
Indian Railways announced Hubli to Rameshwaram Train changes

ಶಿವಮೊಗ್ಗ-ಮೈಸೂರು, ಯಶವಂತಪುರ ನಡುವಿನ 3 ರೈಲುಗಳ ಮಹತ್ವದ ತುರ್ತು ಅಪ್ಡೇಟ್

Leave a Reply Cancel reply

Your email address will not be published. Required fields are marked *

No Result
View All Result
Prayagraj - Yesvantpur Special Weekly Express Trains
English Articles

Special Weekly Express Trains Between Prayagraj and Yesvantpur Announced

by kalpa News
July 23, 2026
0

Kalpa Media House  |  Bengaluru | To clear the extra rush of passengers, North Central Railway has announced the operation...

Read moreDetails
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
ABD Maestro Launches 3 Premium Whiskies in Hyderabad

ABD Maestro Launches 3 Premium Whiskies in Hyderabad

July 21, 2026
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL