No Result
View All Result
Kriti Sanon Raksha Bandhan Controversy GIVA Withdraw Advt copy
English Articles

Kriti Sanon’s Raksha Bandhan Ad Faces Backlash; GIVA Withdraws Campaign

by kalpa News
August 26, 2026
0

Kalpa Media House  |  Bangalore  | Jewellery brand GIVA has withdrawn its Raksha Bandhan advertisement featuring Bollywood actor Kriti Sanon following...

Read moreDetails
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
  • Advertise With Us
  • Grievances
  • About Us
  • Contact Us
Thursday, August 27, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಮೈಸೂರು

ಅಂತಾರಾಷ್ಟ್ರೀಯ ಸಾಹಿತ್ಯ ಸಮ್ಮೇಳನ | ಭಾರತದ ಅತ್ಯಂತ ಕಿರಿಯ ಪ್ರತಿನಿಧಿಯಾಗಿ ಪೃಥು ಅದ್ವೈತ್ ಆಯ್ಕೆ

kalpa News by kalpa News
February 18, 2026
in ಮೈಸೂರು
0
ಅಂತಾರಾಷ್ಟ್ರೀಯ ಸಾಹಿತ್ಯ ಸಮ್ಮೇಳನ | ಭಾರತದ ಅತ್ಯಂತ ಕಿರಿಯ ಪ್ರತಿನಿಧಿಯಾಗಿ ಪೃಥು ಅದ್ವೈತ್ ಆಯ್ಕೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |

ಮೈಸೂರಿನ ಪುನೀತ್ ಜಿ. ಮತ್ತು ಪೂಜಾ ಎನ್. ದಂಪತಿಗಳ ಪುತ್ರ ಹಾಗೂ ಪೂರ್ಣ ಚೇತನ ಪಬ್ಲಿಕ್ ಶಾಲೆಯ 9 ವರ್ಷದ ವಿದ್ಯಾರ್ಥಿಯಾದ ಪೃಥು ಪಿ. ಅದ್ವೈತ್, #Pruthu P Advaith ಪ್ರತಿಷ್ಠಿತ ‘ಪನೋರಮಾ ಇಂಟರ್ನ್ಯಾಷನಲ್ ಲಿಟರೇಚರ್ ಫೆಸ್ಟಿವಲ್ (PILF) 2026ಕ್ಕೆ ಭಾರತದ ಪರವಾಗಿ ಆಯ್ಕೆಯಾದ ಅತ್ಯಂತ ಕಿರಿಯ ಪ್ರತಿನಿಧಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

100 ದೇಶಗಳ ಲೇಖಕರು ಭಾಗವಹಿಸುವ ಈ ಮಹೋನ್ನತ ವೇದಿಕೆಯಲ್ಲಿ ಪೃಥು ಈ ವರ್ಷದ ಆಶಯವಾದ “ಪೃಥ್ವಿ – ಭೂಮಿಯ ಅಂಶ” ಕುರಿತು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ.
ಅಂತರಾಷ್ಟ್ರೀಯ ಮಟ್ಟದ ಶ್ಲಾಘನೆ ಮತ್ತು ಪುಸ್ತಕ ಪ್ರಕಟಣೆ:

ಪೃಥು ಅವರು ಮೂಲತಃ ಕನ್ನಡದಲ್ಲಿ ರಚಿಸಿರುವ ಹಾಗೂ ನಂತರ ಇಂಗ್ಲಿಷ್‌ಗೆ ಅನುವಾದಗೊಂಡಿರುವ ಆರು ಕವನಗಳ “ಪೃಥ್ವಿ ಕವನ ಮಾಲಿಕೆ” (The Earth Series) ಮತ್ತು ಅವರ ವಿವರವಾದ ಪೀಠಿಕೆಯನ್ನು ಕಂಡು ಅಂತರಾಷ್ಟ್ರೀಯ ಸಂಪಾದಕೀಯ ಮಂಡಳಿಯು ಸಂತೋಷ ವ್ಯಕ್ತಪಡಿಸಿದೆ.

ಈ ಚಿಕ್ಕ ವಯಸ್ಸಿನಲ್ಲಿ ಪರಿಸರದ ಬಗ್ಗೆ ಪೃಥು ಅವರಿಗಿರುವ ಸೂಕ್ಷ್ಮತೆಯು ಅಸಾಧಾರಣವಾದುದು. ಪ್ರಕೃತಿಯ ಬಗ್ಗೆ ಅವರಿಗಿರುವ ಕಾಳಜಿಯು ಕೇವಲ ಅನುಕರಣೆಯಲ್ಲ, ಅದು ಅವರ ಅಂತಃಕರಣದ ದನಿಯಾಗಿದೆ. ಇಂತಹ ಅಪರೂಪದ ಧ್ವನಿಯನ್ನು ಜಾಗತಿಕ ಮಟ್ಟದಲ್ಲಿ ಪೋಷಿಸುವುದು ನಮ್ಮ ಜವಾಬ್ದಾರಿ. ಈ ಹಿನ್ನೆಲೆಯಲ್ಲಿ, ಇವರ ಬರಹಗಳನ್ನು ಐದು ಭಾಷೆಗಳಲ್ಲಿ ಬಹುಭಾಷಾ ಸಂಕಲನವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಿಸಲು ಸಂಸ್ಥೆ ಮುಂದಾಗಿದೆ. ಅಲ್ಲದೆ, ಈ ಕೃತಿಯು ‘ಪನೋರಮಾ ಇಂಟರ್ನ್ಯಾಷನಲ್ ಬುಕ್ ಅವಾರ್ಡ್ಸ್ 2026ಕ್ಕೂ ಪರಿಗಣಿಸಲ್ಪಟ್ಟಿದೆ ಎಂದು ರೈಟರ್ಸ್ ಇಂಟರ್ನ್ಯಾಷನಲ್ ಎಡಿಷನ್‌ನ ಮುಖ್ಯ ಸಂಪಾದಕಿ ಪ್ರೊ. ಐರಿನ್ ಡೌರಾ-ಕವಾಡಿಯಾ, ಪೃಥು ಅವರ ಪ್ರತಿಭೆಯನ್ನುಗೆ ಶ್ಲಾಘಿಸಿದ್ದಾರೆ:
ಪೂರ್ಣ ಚೇತನ ಪಬ್ಲಿಕ್ ಶಾಲೆಯ ಹೆಮ್ಮೆಯ ಪ್ರಶಂಸೆ:

ಪೃಥು ಅವರ ಈ ಅಂತರಾಷ್ಟ್ರೀಯ ಸಾಧನೆಯ ಬಗ್ಗೆ ಶಾಲೆಯ ‘ಇ-ಪತ್ರಿಕೆ’ ಸಂಪಾದಕೀಯ ಮಂಡಳಿಯು ಅತ್ಯಂತ ಹೆಮ್ಮೆಯಿಂದ ಅಭಿನಂದನೆ ಸಲ್ಲಿಸಿದೆ:

“ನಮ್ಮ ಶಾಲೆಯ 4ನೇ ತರಗತಿ ವಿದ್ಯಾರ್ಥಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಜಾಗತಿಕ ಮನ್ನಣೆ ಪಡೆಯುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಇವರ ಸೃಜನಶೀಲತೆ ಮತ್ತು ಭೂಮಿತಾಯಿಯೊಂದಿಗಿನ ಇವರ ಗಾಢವಾದ ಸಂಬಂಧವು ಬರಹಗಳಲ್ಲಿ ಅದ್ಭುತವಾಗಿ ಮೂಡಿಬಂದಿದೆ. ನಮ್ಮ ಶಾಲೆಯ ‘ಇ-ಪತ್ರಿಕೆ’ ಪೃಥು ಅವರ ಸಾಹಿತ್ಯ ಬೆಳವಣಿಗೆಗೆ ವೇದಿಕೆಯಾಗಿರುವುದು ನಮಗೆ ಸಂತಸ ತಂದಿದೆ.”

ಪೃಥು ಪಿ. ಅದ್ವೈತ್ (9 ವರ್ಷ) ಅವರ ಕೃತಜ್ಞತಾ ನುಡಿಗಳು:

“ನನ್ನ ಬರಹಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಪನೋರಮಾ ಇಂಟರ್ನ್ಯಾಷನಲ್ ಲಿಟರೇಚರ್ ಫೆಸ್ಟಿವಲ್ ಮತ್ತು ನನ್ನ ಕೃತಿಯನ್ನು ಐದು ಭಾಷೆಗಳಲ್ಲಿ ಪ್ರಕಟಿಸಲು ಮುಂದಾದ ರೈಟರ್ಸ್ ಇಂಟರ್ನ್ಯಾಷನಲ್ ಎಡಿಷನ್ ಸಂಸ್ಥೆಗೆ ನಾನು ಸದಾ ಚಿರಋಣಿ.
ನಾನು ಮೂಲತಃ ಕನ್ನಡದಲ್ಲಿ ಬರೆದು ಜೊತೆಗೆ ಕವನಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ ಈ ವೇದಿಕೆಗೆ ಅರ್ಪಿಸಿದ್ದೇನೆ. ನನ್ನ ಪ್ರತಿಭೆಯನ್ನು ಮೊದಲು ಗುರುತಿಸಿ ವೇದಿಕೆ ಒದಗಿಸಿದ ನನ್ನ ಶಾಲೆಯ ‘ಇ-ಪತ್ರಿಕೆ’ ಮತ್ತು ‘ರೇಷ್ಮೆನಾಡು’ ಪತ್ರಿಕೆಯ ಸಂಪಾದಕರಿಗೆ ಹೃತ್ಪೂರ್ವಕ ಧನ್ಯವಾದಗಳು. ನನ್ನ ತಂದೆ-ತಾಯಿಯ ಪ್ರೋತ್ಸಾಹವೇ ಇವೆಲ್ಲದಕ್ಕೂ ಕಾರಣ. ‘ಭೂಮಿಯು ಕಸದ ತೊಟ್ಟಿಯಲ್ಲ, ಅದು ನಮಗೆ ಅನ್ನ ನೀಡುವ ಪವಿತ್ರ ಬುಟ್ಟಿ’ ಎಂಬ ಸತ್ಯವನ್ನು ಜಗತ್ತಿಗೆ ಸಾರುವ ಜವಾಬ್ದಾರಿಯನ್ನು ನಾನು ಹೆಮ್ಮೆಯಿಂದ ನಿಭಾಯಿಸುತ್ತೇನೆ.”
ಪೃಥುವಿನ ಸಾಧನೆಗಳ ಸರಮಾಲೆ:

ವಿಶ್ವ ದಾಖಲೆ: 30 ನಿಮಿಷಗಳಲ್ಲಿ 150 ಶ್ಲೋಕಗಳ ಪಠಣ (ಜುಲೈ 2024).
ಹಸಿರು ಸಂಕಲ್ಪ: ಪ್ರತಿ ವರ್ಷ ತಮ್ಮ ಹುಟ್ಟುಹಬ್ಬದಂದು ತಮ್ಮ ವಯಸ್ಸಿನಷ್ಟೇ ಸಸಿಗಳನ್ನು ನೆಡುವ ಸಂಪ್ರದಾಯ.
ಇವರ ಸಾಧನೆಗೆ ಈಗಾಗಲೇ ಎರಡು ಗೌರವ ಡಾಕ್ಟರೇಟ್‌ಗಳು ಲಭಿಸಿವೆ.

ಕಲೆ ಮತ್ತು ಕ್ರೀಡೆ: ಕರ್ನಾಟಕ ಶಾಸ್ತ್ರೀಯ ಸಂಗೀತ, ತಬಲಾ ವಾದನ ಮತ್ತು ಬ್ಯಾಡ್ಮಿಂಟನ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

https://kalpa.news/wp-content/uploads/2024/04/VID-20240426-WA0008.mp4

 

Tags: Kannada NewsKannada News LiveKannada News OnlineKannada News WebsiteKannada WebsiteLatest News KannadamysoreNews in KannadaNews KannadaPruthu P Advaithಮೈಸೂರು
Share200Tweet125Send
Aniruddha Vasishta S R

Aniruddha Vasishta S R

Editor-in-Chief

Previous Post

ಹೋಳಿ ಹಬ್ಬ | ಬೆಂಗಳೂರಿನಿಂದ ಈ ನಗರಗಳಿಗೆ ವಿಶೇಷ ರೈಲು ಸಂಚಾರ ವಿಸ್ತರಣೆ | ಇಲ್ಲಿದೆ ಡೀಟೇಲ್ಸ್

Next Post

ಮದುವೆಗೂ ಮುನ್ನ ಯಾರನ್ನೂ ನಂಬಬೇಡಿ, ವಿವಾಹಪೂರ್ವ ದೈಹಿಕ ಸಂಬಂಧದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

kalpa News

kalpa News

Next Post
ಮದುವೆಗೂ ಮುನ್ನ ಯಾರನ್ನೂ ನಂಬಬೇಡಿ, ವಿವಾಹಪೂರ್ವ ದೈಹಿಕ ಸಂಬಂಧದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮದುವೆಗೂ ಮುನ್ನ ಯಾರನ್ನೂ ನಂಬಬೇಡಿ, ವಿವಾಹಪೂರ್ವ ದೈಹಿಕ ಸಂಬಂಧದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

Leave a Reply Cancel reply

Your email address will not be published. Required fields are marked *

No Result
View All Result
Kriti Sanon Raksha Bandhan Controversy GIVA Withdraw Advt copy
English Articles

Kriti Sanon’s Raksha Bandhan Ad Faces Backlash; GIVA Withdraws Campaign

by kalpa News
August 26, 2026
0

Kalpa Media House  |  Bangalore  | Jewellery brand GIVA has withdrawn its Raksha Bandhan advertisement featuring Bollywood actor Kriti Sanon following...

Read moreDetails
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL