ಕಲ್ಪ ಮೀಡಿಯಾ ಹೌಸ್ | ಮೈಸೂರು |
ಪ್ರತಿಯೊಬ್ಬರೂ ತಮ್ಮ ಜಿಲ್ಲೆಯ ಮೂಲ ಗ್ರಾಮೀಣ ಭಾಷೆಯನ್ನು #RuralLanguage ಮರೆಯದೇ ಮಕ್ಕಳಿಗೆ ಕಲಿಸಬೇಕು ಎಂದು ಮೈಸೂರಿನ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಕರೆ ನೀಡಿದರು.
ಮೈಸೂರಿನ #Mysore ಶ್ರೀರಾಂಪುರ ಪಟ್ಟಣ ಪಂಚಾಯ್ತಿಯ ಮೂಕಾಂಬಿಕಾ ಸಮೃದ್ಧಿ ಬಡಾವಣೆಯಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಕನ್ನಡ ರಾಜ್ಯೋತ್ಸವದಲ್ಲಿ #KannadaRajyotsava ಅವರು ಮಾತನಾಡಿದರು.
ಕನ್ನಡ #Kannada ಎಂಬುದು ನಮ್ಮ ಮನಸ್ಸಿನ ಭಾಷೆ ಅದನ್ನು ಹೆಚ್ಚು ಬಳಸಬೇಕು. ಸರ್ಕಾರಿ ಕಚೇರಿಗಳಲ್ಲಿ ವ್ಯವಹರಿಸಲು ಬರುವವರು ಕನ್ನಡ ಬಂದರೂ ಸಹ ಕನ್ನಡ ಮಾತನಾಡದೆ ಬೇರೆ ಭಾಷೆಯಲ್ಲಿ ವ್ಯವಹರಿಸಿ ತಾವು ವಿದ್ಯಾವಂತರು ಎಂದು ತೋರಿಸಲು ಕಷ್ಟ ಪಡುತ್ತಾರೆ ಎಂದರು.
ಮೈಸೂರು-ಬೆಂಗಳೂರು #Bengaluru ಪ್ರದೇಶಗಳಲ್ಲಿ ವಾಸಮಾಡುವ ಶೇ. 60 ರಷ್ಟು ಜನ ಬೇರೆ ಬೇರೆ ಜಿಲ್ಲೆಗಳಿಂದ ಬಂದವರು ಅವರೆಲ್ಲರೂ ಅವರ ಜಿಲ್ಲೆಯ ಮೂಲ ಗ್ರಾಮೀಣ ಭಾಷೆಯನ್ನು ಮರೆಯಬಾರದು, ಮಕ್ಕಳಿಗೆ ಕಲಿಸಬೇಕು ಎಂದು ಸಲಹೆ ನೀಡಿದರು.
ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಕೆ.ಆರ್. ಗಣೇಶ್ ಮಾತನಾಡಿ, ಮೈಸೂರಿನ ಸಮೀಪದ ಚಾಮರಾಜನಗರದಲ್ಲಿ ಹಲವಾರು ಪ್ರವಾಸಿ ತಾಣಗಳು ಇವೆ. ಚಾಮರಾಜನಗರವು #Chamarajanagar ಜಾನಪದದ ತವರೂರು. ದಯಮಾಡಿ ಎಲ್ಲರೂ ಚಾಮರಾಜನಗರ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಬೇಕು ಎಂದು ತಿಳಿಸಿದರು.
50 ಸಸಿಗಳನ್ನು ಉದ್ಯಾನವನದಲ್ಲಿ ನೆಟ್ಟು ಮಾತನಾಡಿದ ಪಿ.ಟಿ. ಮಹೇಶಪ್ಪ, ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ #Karnataka ಎಂದು ನಾಮಕರಣ ಮಾಡಿ 50 ವರ್ಷಗಳಾಯಿತು. ಅದರ ನೆನಪಿಗಾಗಿ ದಸರಾದಿಂದ ಪ್ರಾರಂಭ ಮಾಡಿ ಇಂದಿನವರೆಗೂ 50 ಗಿಡಗಳನ್ನು ಉದ್ಯಾನವನದಲ್ಲಿ ನೆಟ್ಟು ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗಿದೆ. ಈ ಉದ್ಯಾನವನದಲ್ಲಿ ಎಲ್ಲರೂ ವಾಯುವಿಹಾರ, ವ್ಯಾಯಾಮಗಳನ್ನು ಮಾಡಿ ಬಳಸಿಕೊಳ್ಳಬೇಕು ಹಾಗೂ ಉದ್ಯಾನವನದಲ್ಲಿ ಗಿಡಗಳನ್ನು ಪೋಷಿಸಬೇಕು ಎಂದು ತಿಳಿಸಿದರು.
ವೈದ್ಯಕೀಯ ತಪಾಸಣೆಯನ್ನು ಆರೋಗ್ಯಾಧಿಕಾರಿ ಪರಮೇಶ್ವರ್ ಉದ್ಘಾಟಿಸಿದರು. ಸಸ್ಯಶಾಸ್ತ್ರ ತಜ್ಞರಾದ ಪ್ರೊ.ಪಿ.ಟಿ. ಮಹೇಶಪ್ಪ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ಉದ್ಯಾನವನದಲ್ಲಿ 50 ಸಸಿಗಳನ್ನು ನೆಡುವ ಕಾರ್ಯಕ್ರಮ ಉದ್ಘಾಟಿಸಿದರು.
ಕುಮಾರಿ ವರ್ಷ ರಮೇಶ್ ಭರತನಾಟ್ಯ, ಅಂಕಿತ ಹಾಗೂ ಸಂಜನಾ ನೃತ್ಯ ಪ್ರದರ್ಶಿಸಿದರು. ಕೃಷ್ಣ ಕೊಳಲು ವಾದನ ಮಾಡಿ, ಬಡಾವಣೆಯ ಚಿಣ್ಣರು ನೃತ್ಯ ಪ್ರದರ್ಶನ ಮಾಡಿದರು. ಪೃಥು ಪಿ. ಅದ್ದೈತ್ ಹಾಗೂ ರಾಘವ ಕನ್ನಡ ಹಾಡುಗಳನ್ನು ಹಾಡಿದರು. ಹರಣ್ ಅವರು ಯೋಗ ಪ್ರದರ್ಶನ ಮಾಡಿದರು.
ಪೃಥು ಪಿ. ಅದ್ದೈತ್ ಪ್ರಾರ್ಥಿಸಿ, ಬಡಾವಣೆಯ ಎಲ್ಲಾ ಮಕ್ಕಳು ಸೇರಿ ಕನ್ನಡದ ದೀಪವನ್ನು ಪ್ರಜ್ವಲಿಸಿದರು. ಎ.ಎನ್. ರಾಮಕೃಷ್ಣ, ನಾಗಭೂಷಣ್ ಆಚಾರ್, ನಾಗರಾಜ್, ಪರಮೇಶ್ವರ್, ಶ್ರೀಧರ್ ಹಾಗೂ ಮಹೇಶಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುನೀತ್ ಜಿ ಕಾರ್ಯಕ್ರಮದ ನಿರೂಪಿಸಿ, ಪಾರ್ಶ್ವನಾಥ ಸ್ವಾಗತ ಭಾಷಣ ಮಾಡಿದರು. ರಚನಾ ವಂದನಾರ್ಪಣೆ ಮಾಡಿದರು. ಬಡಾವಣೆಯ ಎಲ್ಲಾ ನಿವಾಸಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post