ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಸ್ವಾತಂತ್ರಾ ನಂತರ ದಶಕಗಳ ಕಾಲ ರಾಜಕೀಯ ಸ್ವಾರ್ಥಕ್ಕಾಗಿ ಕಾಂಗ್ರೆಸ್ ತಡೆಹಿಡಿದಿದ್ದ ಏಕರೂಪ ನಾಗರಿಕ ಸಂಹಿತೆಯನ್ನು ಬಿಜೆಪಿ ಸರ್ಕಾರ ಜಾರಿಗೆ ತರುವುದು ನಿಶ್ಚಿತ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ Amith Shah ಪುನರುಚ್ಚರಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರಲು ಮೋದಿ ಸರ್ಕಾರ ಬದ್ಧವಾಗಿದೆ. ಈ ಉಪಕ್ರಮದಿಂದ ಪಕ್ಷ ಹಿಂದೆ ಸರಿಯುವುದಿಲ್ಲ ಎಂದು ಪುನರುಚ್ಚಿಸಿದರು.
ಸ್ವಾತಂತ್ರದ ನಂತರ ದಶಕಗಳ ಕಾಲ ಕಾಂಗ್ರೆಸ್ ಸರ್ಕಾರ ಏಕರೂಪ ನಾಗರಿಕ ಸಂಹಿತೆಯನ್ನು ರಾಜಕೀಯ ಸಾಧನವಾಗಿ ಬಳಸಿಕೊಂಡು ತಡೆಹಿಡಿದಿತ್ತು. ಸ್ವಾತಂತ್ರದ ನಂತರ ತಕ್ಷಣದ ಅನುಷ್ಠಾನವು ಕಾರ್ಯ ಸಾಧ್ಯವಾಗದ ಕಾರಣ ಇದನ್ನು ರಾಜ್ಯ ನಿರ್ದೇಶಕ ತತ್ವಗಳಿಗೆ ಸೇರಿಸಲಾಯಿತು. ಆಶ್ಚರ್ಯವೆಂಬAತೆ ಬಿಜೆಪಿಯು 1950ರ ದಶಕದಿಂದಲೂ ತನ್ನ ಚುನಾವಣಾ ಪ್ರಣಾಳಿಕೆಗಳಲ್ಲಿ ಯುಸಿಸಿಯನ್ನು ಕಾರ್ಯಗತಗೊಳಿಸಲು ಕೆಲಸ ಮಾಡುವುದಾಗಿ ನಿರಂತರವಾಗಿ ಭರವಸೆ ನೀಡುತ್ತಾ ಬಂದಿದೆ.
Also read: ಕೋವಿಡ್ ಏರಿಕೆ | ಸಿಎಂ ಮಹತ್ವದ ಸಭೆ | ರಾಜ್ಯದಲ್ಲಿ ಎಷ್ಟು ಕೇಸ್ ಪತ್ತೆ?
ಭಾರತದ ರಾಜಕೀಯಕ್ಕೆ ಹೊಸ ರೂಪು ನೀಡುತ್ತಿರುವ ಶಾ, ಏಕರೂಪ ನಾಗರಿಕ ಸಂಹಿತೆಯು ಮಹತ್ವದ ಸಾಮಾಜಿಕ ಮತ್ತು ಕಾನೂನು ಪರಿವರ್ತನೆಯನ್ನು ತರಲಿದೆ ಎಂದು ಪ್ರತಿಪಾದಿಸಿದರು. ಈ ವಿಷಯದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಲು, ಲಕ್ಷಾಂತರ ಜನರನ್ನು ಸಮಾಲೋಚಿಸಲು ರಾಜ್ಯಗಳಲ್ಲಿ ಸಮಿತಿಗಳನ್ನು ರಚಿಸಲಾಗುತ್ತಿದೆ. ಪ್ರಸ್ತಾವಿತ ಕಾನೂನಿನ ಕಾನೂನಾತ್ಮಕ ಪರಿಶೀಲನೆಯನ್ನು ಸಹ ಮಾಡಲಾಗುವುದು.
ಅಂತ್ಯೋದಯ (ಸಮಾಜದ ಕೊನೆಯ ವ್ಯಕ್ತಿಯನ್ನು ಸಹ ಮೇಲಕ್ಕೆತ್ತುವುದು) ರಾಜಕೀಯದಲ್ಲಿ ತೊಡಗಿರುವ ಶಾ, ಎಲ್ಲಾ ಪ್ರಕ್ರಿಯೆಗಳನ್ನು ಅನುಸರಿಸಿ ಒಮ್ಮೆ ಈ ಪ್ರಮುಖ ಕಾನೂನನ್ನು ರೂಪಿಸಿದರೆ, ಇಡೀ ದೇಶವು ಅದನ್ನು ಸ್ವಯಿಚ್ಛೆಯಿಂದ ಒಪ್ಪಿಕೊಳ್ಳುತ್ತದೆ ಎಂದು ನಂಬುತ್ತಾರೆ.
ಮೋದಿ-ಶಾ ಜೋಡಿಯು ರಾಜಕೀಯದಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಸ್ಥಾಪಿಸಲು ಅಭೂತಪೂರ್ವ ಪ್ರಯತ್ನಗಳನ್ನು ಮಾಡಿದ್ದರೆ, ವೈಯಕ್ತಿಕ ಅಥವಾ ಪಕ್ಷದ ಲಾಭಕ್ಕಿಂತ ಹೆಚ್ಚಾಗಿ ಜನರು ಮತ್ತು ರಾಷ್ಟ್ರಕ್ಕಾಗಿ ಕೆಲಸ ಮಾಡಿದ್ದಾರೆ.
ವ್ಯಕ್ತಿಗತ ರಾಜಕೀಯ, ವಂಶಾಡಳಿತ ಮತ್ತು ತುಷ್ಟೀಕರಣವನ್ನು ತೊಡೆದುಹಾಕುವಲ್ಲಿ ಶಾ ಅವರ ಕೊಡುಗೆ ಶ್ಲಾಘನೀಯ. ಕಳೆದ ಒಂಬತ್ತು ವರ್ಷಗಳಿಂದ ದಲಿತರು, ಅಂಚಿನಲ್ಲಿರುವ ಸಮುದಾಯಗಳು ಮತ್ತು ಹಿಂದುಳಿದ ವರ್ಗಗಳನ್ನು ಅತ್ಯಂತ ಸಮ್ಮಾನಪೂರ್ವಕವಾಗಿ ಮುಖ್ಯವಾಹಿನಿಗೆ ಸೇರಿಸುವ ಪ್ರಯತ್ನಗಳನ್ನು ಮಾಡಿದ್ದಾರೆ.
ಈ ಅಡಿಪಾಯದ ಜೊತೆಗೆ, ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಮತ್ತು ಗೃಹ ಸಚಿವ ಅಮಿತ್ ಶಾರವರ ಪ್ರವೀಣ ಮಾರ್ಗದರ್ಶನದಲ್ಲಿ, ಬಿಜೆಪಿ ಸರ್ಕಾರವು ದೇಶಕ್ಕೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರುವುದು ನಿಶ್ಚಿತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post