No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
  • Advertise With Us
  • Grievances
  • About Us
  • Contact Us
Saturday, September 5, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನ್ಯಾ. ಶ್ರೀಶಾನಂದರ ಉಪನ್ಯಾಸ ಪ್ರತ್ಯಕ್ಷ ಕೇಳಿಸಿಕೊಳ್ಳುವ ಅವಕಾಶ ಶಿವಮೊಗ್ಗದಲ್ಲಿ | ತಪ್ಪದೇ ಬನ್ನಿ

kalpa News by kalpa News
December 24, 2025
in Special Articles
0
ನ್ಯಾ. ಶ್ರೀಶಾನಂದರ ಉಪನ್ಯಾಸ ಪ್ರತ್ಯಕ್ಷ ಕೇಳಿಸಿಕೊಳ್ಳುವ ಅವಕಾಶ ಶಿವಮೊಗ್ಗದಲ್ಲಿ | ತಪ್ಪದೇ ಬನ್ನಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |ವಾಣಿ ರಸವತೀ ಯಸ್ಯ ಯಸ್ಯ ಶ್ರವಣ ಮಂಗಲಮ್ l
ಸ ವಶೀಕರೋತಿ ಲೋಕಾನಂ ಸತ್ಯಂ ಸತ್ಯಂ ನ ಸಂಶಯಃ ll
ಯಾರ ಮಾತು ರಸ ಪೂರ್ಣವಾಗಿದೆಯೋ ಅವರ ಮಾತು ಕೇಳುವುದು ಶುಭವಾಗಿದೆ ಅವರು ಜನಮನವನ್ನು ವಶಪಡಿಸಿಕೊಳ್ಳುತ್ತಾರೆ ಇದು ನಿಸ್ಸಂಶಯ ಸತ್ಯ. ಅಲ್ಲದೇ

ಸಂಸ್ಕಾರಸ್ಯ ಗುರುರ್ವಾಣಿ ವಾಣ್ಯಾ ಲೋಕಃ ಪ್ರಕಾಶ್ಯ ತೇ ll
ಯಸ್ಯ ಶುದ್ಧಾ ವಚೋಭಿಃ ಸ ಪೂಜ್ಯೋ ಭವತಿ ದ್ರುವಮ್ ||
ವಾಣಿಯೇ ಸಂಸ್ಕಾರದ ಗುರುತು ವಾಣಿಯಿಂದಲೇ ವ್ಯಕ್ತಿ ಲೋಕದಲ್ಲಿ ಗುರುತಿಸಲ್ಪಡುತ್ತಾನೆ. ಶುದ್ಧ ಮಾತುಳ್ಳವನು ನಿಶ್ಚಿತವಾಗಿ ಗೌರವಕ್ಕೆ ಪಾತ್ರನಾಗುತ್ತಾನೆ ಎನ್ನುವ ಸುಭಾಷಿತ ನೋಡುತ್ತಿದ್ದಾಗ ಇದರಂತೆಯೇ ಇರುವವರು ನ್ಯಾಯಮೂರ್ತಿಗಳಾದ ವಿ. ಶ್ರೀಶಾನಂದರು ಎನ್ನುವುದು ಅನ್ನಿಸಿತು. ಏಕೆಂದರೆ ಅವರ ಮಾತುಗಳು ಸಂಸ್ಕಾರ ಪೂರ್ಣ ಮತ್ತು ಅವರು ತಮ್ಮ ಮಾತಿನಿಂದಲೇ ಗುರುತಿಸಲ್ಪಟ್ಟು ಗೌರವಕ್ಕೆ ಪಾತ್ರರಾಗಿದ್ದಾರೆ.

ನ್ಯಾಯಾಧೀಶರೊಬ್ಬರ ಸ್ಥಾನ ಕೇವಲ ತೀರ್ಪು ನೀಡುವ ಅಧಿಕಾರಕ್ಕೆ ಮಾತ್ರ ಸೀಮಿತವಾಗಿರದೇ ಅದು ಸಮಾಜದ ನೈತಿಕ ದಿಕ್ಕನ್ನು ರೂಪಿಸುವ ಹೊಣೆಗಾರಿಕೆ ಆಗಿರುತ್ತದೆ. ಅವರು ನ್ಯಾಯಾಲಯದಲ್ಲಿ ಬಳಸುವ ಪ್ರತೀ ಪದಗಳು ಕಾನೂನು ಬದ್ಧ, ಮಹತ್ವದ ಜೊತೆಗೆ ಸಾಮಾಜಿಕ ಅರ್ಥವನ್ನು ಹೊಂದಿರುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ನ ನ್ಯಾಯಾಧೀಶರಾದ ವಿ ಶ್ರೀಶಾನಂದ ಅವರ ಮಾತುಗಳು ಇತ್ತೀಚಿನ ದಿನಗಳಲ್ಲಿ ಬಹು ಪ್ರಸಿದ್ಧವಾಗಿದೆ ಅವರು ತಮ್ಮ ಸ್ಪಷ್ಟವಾದ ಮಾತಿನ ಶೈಲಿ, ನೇರ ಅಭಿವ್ಯಕ್ತಿ ಮತ್ತು ತಾತ್ವಿಕ ಚಿಂತನೆಗಳಿಂದ ಗುರುತಿಸಲ್ಪಟ್ಟವರಾಗಿದ್ದಾರೆ. ನ್ಯಾಯಾಲಯದಲ್ಲಿನ ವಿಚಾರಣೆಯ ಸಂದರ್ಭದಲ್ಲಿ ಅವರು ಬಳಸುವ ಉದಾಹರಣೆಗಳು, ಪುರಾಣ, ಉಪನಿಷತ್ತುಗಳ ಸನ್ನಿವೇಶಗಳು ವ್ಯಾಪಕವಾಗಿ ಗಮನ ಸೆಳೆದ ಅಂಶಗಳಾಗಿವೆ.
ಇವರ ಉಪನ್ಯಾಸಗಳಲ್ಲಿ ಬಹುಮುಖ್ಯವಾಗಿ ಕಂಡುಬರುವ ಅಂಶಗಳೆಂದರೆ ಭಾರತೀಯ ಸಂಸ್ಕೃತಿ, ಜೀವನ ಮೌಲ್ಯಗಳು, ಧರ್ಮ ಮತ್ತು ನ್ಯಾಯದ ತತ್ವಗಳ ಕುರಿತ ಚಿಂತನೆಗಳಾಗಿವೆ. ಬಹು ಮುಖ್ಯವಾಗಿ ಕಾನೂನು ಎಂದರೆ ಕೇವಲ ದಂಡನೆಯ ಸಾಧನವಲ್ಲ ಅದು ಸಮಾಜವನ್ನು ಸೌಹಾರ್ದ ಮತ್ತು ನ್ಯಾಯದ ದಾರಿಯಲ್ಲಿ ನಡೆಸುವ ಮಾರ್ಗದರ್ಶಿಯ ಹಾಗೆ ಎಂಬ ಅಭಿಪ್ರಾಯ ಅವರಾಗಿದೆ. ಅಲ್ಲದೇ ಕಾನೂನಿನ ಕುರಿತಾಗಿ ಜನರು ಕೇವಲ ನಿಯಮಗಳ ಸಮೂಹವಾಗಿ ನೋಡದೆ ಸಮಾಜವನ್ನು ಸರಿದಾರಿಯಲ್ಲಿ ನಡೆಸುವ ಸಾಧನವಾಗಿ ನೋಡಬೇಕೆಂಬುದೇ ಅವರ ಆಶಯವಾಗಿದೆ.

ನನಗೆ ಆಶ್ಚರ್ಯವಾದ ಸಂಗತಿ ಎಂದರೆ ಒಮ್ಮೆ ನನ್ನಮ್ಮ ಮಾತನಾಡುತ್ತಿದ್ದಾಗ ಯೂ.ಟ್ಯೂಬ್ ನಲ್ಲಿ ತಾನು ಕೆಲವು ಉಪನ್ಯಾಸಕರ ಕುರಿತು ಹೇಳುತ್ತಿದ್ದೆ ಆಗ ತಕ್ಷಣವೇ ಆಕೆ -‘ಪುಟ್ಟಿ ಶ್ರೀಶಾನಂದ ಅಂತ ಒಬ್ಬರಿದ್ದಾರೆ ತುಂಬಾ ಚೆನ್ನಾಗಿರುತ್ತೆ ನೀನೊಮ್ಮೆ ಕೇಳು’ ಅಂತ ನನಗೆ ಹೇಳಿದ್ಲು. ಅಷ್ಟೇ ಅಲ್ಲ ನಮ್ಮ ಕಾಲೇಜಿನ ಗ್ರಂಥಾಲಯದಲ್ಲಿ ಕೆಲಸ ಮಾಡುವ ಪುಷ್ಪ ಅವರು ಸಹ ತಾನು ಅವರ ಅಭಿಮಾನಿ ಎಂದರು ಹೀಗೆ ಸುತ್ತಮುತ್ತಲಿನ ಯಾರಿಗೆ ಕೇಳಿದರು ಸಹ ಒಂದಲ್ಲ ಒಂದು ವಿಷಯದ ಉದಾಹರಣೆಗಳಿಂದ ಪರಿಚಿತರಾಗಿ ಖ್ಯಾತರಾಗಿರುವ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರ ಉಪನ್ಯಾಸವನ್ನು ಇದೇ ಡಿಸೆಂಬರ್ 25 ರ ಗುರುವಾರ ಸಂಜೆ 6ಕ್ಕೆ ನಗರದ ಪ್ರಸಿದ್ಧ ಸಾಂಸ್ಕೃತಿಕ ಸಂಸ್ಥೆಯಾದ ಶ್ರೀಗಂಧ ಹಾಗೂ ಶಿವಮೊಗ್ಗ ವಕೀಲರ ಸಂಘದ ಸಹಯೋಗದಲ್ಲಿ ಏರ್ಪಡಿಸಿದೆ.

ಇಲ್ಲಿಯವರೆಗೆ ಯೂಟ್ಯೂಬ್ ನಲ್ಲಿ ಇವರ ಮಾತು ಕೇಳಿ ಅಭಿಮಾನಿಗಳಾದ ಎಲ್ಲರೂ ಪ್ರತ್ಯಕ್ಷವಾಗಿ ನೋಡಿ ಉಪನ್ಯಾಸವನ್ನು ಕೇಳಿಸಿಕೊಳ್ಳಲು ಒಂದು ಉತ್ತಮವಾದ ಅವಕಾಶವಾಗಿದೆ. ಹಾಗಾಗಿ ತಾವೆಲ್ಲರೂ ಆ ಕಾರ್ಯಕ್ರಮಕ್ಕೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಹೃದಯ, ಸಜ್ಜನ, ವಾಗ್ಮಿಯ ಮಾತುಗಳನ್ನ ಆಲಿಸಲು ಆಗಮಿಸಬೇಕೆಂಬುದೇ ಸಂಸ್ಥೆಯ ಅಧ್ಯಕ್ಷರಾದ ಮಾನ್ಯ ಈಶ್ವರಪ್ಪನವರ ಹೆಬ್ಬಯಕೆಯಾಗಿದೆ. ಬನ್ನಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2024/04/VID-20240426-WA0008.mp4

Tags: Justicejustice v srishanandaKannada News WebsiteLatest News KannadaLocal NewsMalnad NewsShimogaShivamoggaShivamogga NewsSriGandha Shivamoggaಕರ್ನಾಟಕ ಹೈಕೋರ್ಟ್ನ್ಯಾಯಾಧೀಶನ್ಯಾಯಾಲಯವಿ. ಶ್ರೀಶಾನಂದ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಮತ್ತೆ ಇತಿಹಾಸ ಸೃಷ್ಠಿಸಿದ ಇಸ್ರೋ | ಇಂಟರ್’ನೆಟ್ ಉಪಗ್ರಹವನ್ನು ಕಕ್ಷೆ ಸೇರಿಸಿದ `ಬಾಹುಬಲಿ’

Next Post

ದ್ವೇಷ ಭಾಷಣ ಕಾಯ್ದೆ ಹೆಸರಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ: ಕಾಂಗ್ರೆಸ್ ವಿರುದ್ಧ  ಡಾ. ಹೆಚ್.ಇ. ಜ್ಞಾನೇಶ್ ಕಿಡಿ

kalpa News

kalpa News

Next Post
ದ್ವೇಷ ಭಾಷಣ ಕಾಯ್ದೆ ಹೆಸರಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ: ಕಾಂಗ್ರೆಸ್ ವಿರುದ್ಧ  ಡಾ. ಹೆಚ್.ಇ. ಜ್ಞಾನೇಶ್ ಕಿಡಿ

ದ್ವೇಷ ಭಾಷಣ ಕಾಯ್ದೆ ಹೆಸರಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ: ಕಾಂಗ್ರೆಸ್ ವಿರುದ್ಧ  ಡಾ. ಹೆಚ್.ಇ. ಜ್ಞಾನೇಶ್ ಕಿಡಿ

Leave a Reply Cancel reply

Your email address will not be published. Required fields are marked *

No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL