Saturday, September 6, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home Small Bytes

ಭದ್ರಾವತಿ ತಾಲೂಕಿನಾದ್ಯಂತ ಶಾಂತಿಯುತ ಮತದಾನ: ತಂಪೆರದ ಮಳೆರಾಯ

April 24, 2019
in Small Bytes, ಭದ್ರಾವತಿ
0 0
0
Share on facebookShare on TwitterWhatsapp
Read - 3 minutes

ಭದ್ರಾವತಿ: ಲೋಕಸಭಾ ಚುನಾವಣೆ-2019 ನಗರ ಹಾಗು ಗ್ರಾಮಾಂತರ ಪ್ರದೇಶಗಳಲ್ಲಿ ಬೆಳಗ್ಗೆ ಬಹುತೇಕ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರು ಸಾಲುಗಟ್ಟಿ ಮತದಾನ ಮಾಡಿದ ದೃಶ್ಯ ಕಂಡು ಬಂದಿದೆ. ಮಧ್ಯಾಹ್ನ ವರುಣನ ಕೃಪೆಯಿಂದ ಮತದಾರರು ನಿಟ್ಟಿಸಿರುವ ಬಿಡುವಂತಾಗಿತ್ತು.

ಸುಮಾರು 11 ಗಂಟೆಯ ನಂತರ ಏರಿದ ಬಿಸಿಲಿನ ತಾಪಕ್ಕೆ ಮತದಾರರ ಸಂಖ್ಯೆ ವಿರಳವಾಗಿತ್ತು. ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಬಿಸಿಲಿನ ತಾಪ ತಣಿಸಲು ಮಳೆರಾಯ ಕೃಪೆ ತೋರಿದ್ದರಿಂದ ಜನರಿಗೆ ನಿಟ್ಟುಸಿರುವ ಬಿಡುವಂತಾಗಿತ್ತು. ಹುತ್ತಾ ಕಾಲೋನಿಯ ಮತಗಟ್ಟೆ ಸಂಖ್ಯೆ 136 ರಲ್ಲಿ ಡಿಜಿಟಲ್ ಇಂಡಿಯಾ ಜಿಲ್ಲಾ ವ್ಯವಸ್ಥಾಪಕ ಬಿ.ಕಿರಣ್‍ಕುಮಾರ್ ಮತ್ತು ಕುಟುಂಬ ಸದಸ್ಯರು 100 ವರ್ಷದ ಅವರ ಅಜ್ಜಿ ಆದಿಲಕ್ಷ್ಮಮ್ಮ ರವರನ್ನು ಚುನಾವಣಾ ಆಯೋಗವು ದಿವ್ಯಾಂಗರಿಗೆ ಕಲ್ಪಿಸಿಕೊಟ್ಟ ವೀಲ್‍ಚೇರ್‍ನಲ್ಲಿ ಕೂರಿಸಿ ಮತಗಟ್ಟೆಗೆ ಕರೆತಂದು ಮತದಾನ ಮಾಡಿಸಿದ್ದು ವಿಶೇಷವಾಗಿತ್ತು.

ಶಾಸಕ ಬಿ.ಕೆ.ಸಂಗಮೇಶ್ವರ್ ನಗರಸಭಾ ಮತಗಟ್ಟೆ ಸಂಖ್ಯೆ 107 ರಲ್ಲಿ ಮತಚಲಾಯಿಸಿ ನಂತರ ಮೊಮ್ಮೊಗುವಂದಿಗೆ ಹೊರ ಬಂದು ಮತಚಲಾಯಿಸಿದ ಬೆರಳು ಪ್ರದರ್ಶಿಸಿದರು.

ಹುತ್ತಾಕಾಲೋನಿಯ ಸಹ್ಯಾದ್ರಿ ಶಾಲೆ ಮತಗಟ್ಟೆ ಸಂಖ್ಯೆ 134 ರಲ್ಲಿ ಅತಿಹೆಚ್ಚು ಮಹಿಳಾ ಮತದಾರರು ಸಾಲುಗಟ್ಟಿ ನಿಂತು ಹಕ್ಕು ಚಲಾಯಿಸಿದ ದೃಶ್ಯ ಕಂಡು ಬಂತು. ಭೂತ್ ಸಂಖ್ಯೆ 120 ರ ಹಾಲಪ್ಪವೃತ್ತ ಸರಕಾರಿ ಶಾಲೆಯಲ್ಲಿ ಪ್ರಥಮ ಅವಧಿಗೆ ಮತಚಲಾಯಿಸಿದ 18 ವರ್ಷ ತುಂಬಿದ ಗಣೇಶ ಕುಟುಂಬದವರೊಂದಿಗೆ ಮೊಟ್ಟ ಮೊದಲನೆ ಭಾರಿಗೆ ಮತ ಹಾಕುವುದು ಸಂತಸವಾಯಿತೆಂದು ಹೇಳಿಕೊಂಡರೆ, ಮತಗಟ್ಟೆ ಸಂಖ್ಯೆ 136 ರಲ್ಲಿ ಪ್ರಥಮವಾಗಿ ಮತ ಚಲಾಯಿಸಿದ ಸೋದರ ರೋಹಿತ್ ಮತ್ತು ಸೋದರಿ ಆದಿತಿ ಇಬ್ಬರು ಮತಚಲಾವಣೆ ಮಾಡಿರುವುದು ಖುಷಿ ತಂದಿದೆ ಎಂದು ಹೇಳಿದರು.

ಕೇಂದ್ರ ಮಾಜಿ ಸಚಿವ ಹಾಗು ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಅನ್ವರ್ ಕಾಲೋನಿಯ ಮತಗಟ್ಟೆ ಸಂಖ್ಯೆ 67 ರಲ್ಲಿ ಮತ ಚಲಾಯಿಸಿದರು.

ಹಳೇನಗರದ ಸಂಚಿಯ ಹೊನ್ನಮ್ಮ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 100 ವರ್ಷದ ವಯೋವೃದ್ದೆ ರಂಗಮ್ಮ ಎಂಬುವವರನ್ನು ತಹಸೀಲ್ದಾರ್ ಸೋಮಶೇಖರ್ ಗಾಲಿ ಚೇರು ಮೂಲಕ ಮತಚಲಾಯಿಸಲು ಸಹಕರಿಸಿದರು. ನಗರಸಭೆಯಲ್ಲಿ ದಿವ್ಯಾಂಗರಿಗೆ ಕಲ್ಪಿಸಿದ್ದ ಮತಗಟ್ಟೆ ಸಂಖ್ಯೆ 104 ರಲ್ಲಿ 95 ವಯೋವೃದ್ದೆ ಪೀತಾಂಬರಮ್ಮ ಕುಟುಂಬ ಸದಸ್ಯರೊಂದಿಗೆ ಮತಚಲಾಯಿಸಿದರೆ, ಶಾಸಕ ಬಿ.ಕೆ.ಸಂಗಮೇಶ್ವರ್ ನಗರಸಭೆಯ ಮತಗಟ್ಟೆ ಸಂಖ್ಯೆ 107 ರಲ್ಲಿ ಮತಚಲಾಯಿಸಿ ನಂತರ ಮೊಮ್ಮೊಗುವಿನೊಂದಿಗೆ ಹೊರ ಬಂದು ಮತಚಲಾಯಿಸಿದ ಬೆರಳು ಪ್ರದರ್ಶಿಸಿ ನಂತರ ಮಾತನಾಡಿ ಈ ಭಾರಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಗೆಲುವು ಶತಸಿದ್ದ ಎಂದು ಹೇಳಿದರು. ವಿಧಾನಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅನ್ವರ್ ಕಾಲೋನಿಯ ಮತಗಟ್ಟೆ ಸಂಖ್ಯೆ 67 ರಲ್ಲಿ ಮತ ಚಲಾಯಿಸಿ ಅಭಿಮಾನಿ ಹಾಗು ಕಾರ್ಯಕರ್ತರೊಂದಿಗೆ ಮತಗಟ್ಟೆ ಹೊರ ಭಾಗದಲ್ಲಿ ಮೈತ್ರಿ ಅಭ್ಯರ್ಥಿಯ ಪರ ಮಾತನಾಡಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮನವಿ ಮಾಡಿದರು.

ತಾಲೂಕಿನ ಗೌರಾಪುರ ಮತ್ತು ಬಸವನಗುಡಿ ಸಂಖ್ಯೆ 203 ಮತ್ತು 204 ಭೂತ್‍ಗಳ ಹೊರ ಭಾಗದಲ್ಲಿ ಮತಯಾಚಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಕನಿಷ್ಟ ಕಾಫಿ, ಟೀ, ತಿಂಡಿಗಾಗಿ ಹಣ ಹಂಚಿಕೆ ಮಾಡದೆ ಕಾರ್ಯಕರ್ತರಿಗೆ ಮೋಸ ಮಾಡಿದ್ದಾರೆಂದು ಆರೋಪಿಸಿದ್ದು ಕೇಳಿಬಂದರೆ, ಕೆ.ಎಚ್. ನಗರದ ಬೂತ್ ಸಂಖ್ಯೆ 202 ರಲ್ಲಿ ಮಹಿಳೆಯರು ಹೆಚ್ಚಾಗಿ ಮತದಾನದಲ್ಲಿ ಕಂಡು ಬಂತು. ಅನೇಕ ಪುರುಷ ಮತದಾರರು ಕಾಂಗ್ರೆಸ್ ಮತ್ತು ಜೆಡಿಎಸ್ ಕುಟುಂಬದವರೆಂದು ಅನೇಕರಿಗೆ ಹಣ ಹಂಚಿಕೆ ಮಾಡದೆ ಮೋಸ ಮಾಡಿದ್ದಾರೆಂದು ದೂರುತ್ತಿದ್ದರು. ಕಾಂಗ್ರೆಸ್ ಮುಖಂಡರು ಅಂತರಗಂಗೆ ವ್ಯಾಪ್ತಿಯು ಜೆಡಿಎಸ್ ಬೆಲ್ಟ್ ಆಗಿದೆ ಎಂದು ಹಣ ಹಂಚಿಕೆ ಮಾಡದೆ ಗುಳುಂ ಮಾಡಿದ್ದಾರೆಂದು ಕೆಲವರು ಆರೋಪಿಸುತ್ತಿದ್ದರು. ಕಾಗದ ನಗರದ ಮತಗಟ್ಟೆ ಸಂಖ್ಯೆ 173 ರಲ್ಲಿ ಕ್ರಮಸಂಖ್ಯೆ 124 ರ ಆಶಾ ಎಂಬುವರು ಚುನಾವಣಾಧಿಕಾರಿಗಳು ನೀಡಿದ ಮತಚೀಟಿ ಹೊತ್ತು ಮತಚಲಾಯಿಸಲು ಹೋದಾಗ ಅವರ ಮತವನ್ನು ಬೇರೊಬ್ಬರು ಚಲಾಯಿಸಿದ್ದಾರೆ. ನನಗೆ ಅನ್ಯಾಯವಾಗಿದೆ ಎಂದು ಅಧಿಕಾರಿಗಳಿಗೆ ದೂರಲಾಗಿ ಟೆಂಡರ್ ಓಟಿಗೆ ಅವಕಾಶ ಕಲ್ಪಿಸಿದ ಘಟನೆಯು ನಡೆಯಿತು.

ಹಳೇನಗರದ ಸಂಚಿಯ ಹೊನ್ನಮ್ಮ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 100 ವರ್ಷ ವಯೋವೃದ್ದೆ ರಂಗಮ್ಮ ಎಂಬುವವರನ್ನು ತಹಸೀಲ್ದಾರ್ ಸೋಮಶೇಖರ್ ಗಾಲಿ ಚೇರು ಮೂಲಕ ಮತಚಲಾಯಿಸಲು ಸಹಕರಿಸಿದರು.

ಬಿಆರ್‍ಪಿ, ಶಂಕರಘಟ್ಟ, ಮಾಳೇನಹಳ್ಳಿ, ಗೋಣಿಬೀಡುಗಳ ಮತಗಟ್ಟೆ ಸಮೀಪ ಕೇಸರಿ ಧ್ವಜಗಳ ಹಾರಾಟ ಕಂಡು ಬಂದರೆ, ಹುಣಸೆಕಟ್ಟೆ, ಹಿರಿಯೂರು, ಬೊಮ್ಮನಕಟ್ಟೆ, ವಿದ್ಯಾಮಂದಿರ, ನ್ಯೂಟೌನ್ ಬಾಲಿಕ ಪದವಿಪೂರ್ವ ಕಾಲೇಜು ಮುಂತಾದೆಡೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮತಯಾಚನೆ ಜೋರಾಗಿತ್ತು.

ಮತಗಟ್ಟೆ ಸಂಖ್ಯೆ 136 ರಲ್ಲಿ ಪ್ರಥಮ ಅವಧಿಗೆ ಮತ ಚಲಾಯಿಸಿದ ಸೋದರ ರೋಹಿತ್ ಮತ್ತು ಸೋದರಿ ಆದಿತಿ ಇಬ್ಬರು ಅಜ್ಜ ಅಜ್ಜಿಯೊಡನೆ ಮತಚಲಾವಣೆ ಮಾಡಿದರು.

ಹೊಸಮನೆ, ಶಿವಾಜಿವೃತ್ತ, ದೇವರಹಳ್ಳಿ, ಕಾಚಿನಕಟ್ಟೆ ಹಳೇನಗರದ ತಾಲೂಕು ಕಛೇರಿ ರಸ್ತೆ, ತರೀಕೆರೆ ರಸ್ತೆ, ಜನ್ನಾಪುರ, ಸಿದ್ದಾಪುರ ಮತ್ತಿತರೆ ಪ್ರದೇಶಗಳಲ್ಲಿ ಬಿಜೆಪಿ ಕಾರ್ಯಕರ್ತರ ದಂಡು ಮತಯಾಚನೆಯಲ್ಲಿ ಹೆಚ್ಚಾಗಿ ಕಂಡು ಬಂತು. ಮಧ್ಯಾಹ್ನ ಸುಮಾರು 3 ಗಂಟೆಯ ಸಮಯಕ್ಕೆ ಸರಾಸರಿ ಶೇ: 50 ಮತದಾನವಾಗಿತ್ತು. ಸುರಿದ ಮಳೆ ಮತ್ತು ಗಾಳಿ, ಗುಡುಗು ನಿಂದಾಗಿ ತಂಪಾದ ವಾತಾವರಣ ಮೂಡಿದ್ದರಿಂದ ಮತದಾರರು ಮತಗಟ್ಟೆಗಳಿಗೆ ಮತ ಚಲಾಯಿಸಲು ತೆರಳುತ್ತಿದ್ದ ದೃಶ್ಯ ಕಂಡು ಬಂತು.

(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)

Tags: BhadravathiBJPcongressJDSKannada NewsLok Sabha election 2019Malnad NewsVotingಭದ್ರಾವತಿಲೋಕಸಭಾ ಚುನಾವಣೆ-2019
Previous Post

ಮುಗ್ದತೆ, ಸರಳತೆಯ ಸಾಕಾರಮೂರ್ತಿ ಸುಶಮೀಂದ್ರ ತೀರ್ಥರು

Next Post

ಶ್ರೀಭಾರತಿಲೋಲ ನಮಿಸುವೆ ಚಳ್ಳಕೆರೆಯ ಪಾಲ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಶ್ರೀಭಾರತಿಲೋಲ ನಮಿಸುವೆ ಚಳ್ಳಕೆರೆಯ ಪಾಲ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ವಿಶೇಷ ಗುರುತು ಮೂಡಿಸಿಕೊಂಡಿರುವ ನವಿತಾ ಜೈನ್

September 6, 2025

ಸೋತಾಗ ಕುಗ್ಗದೆ ಸವಾಲಾಗಿ ಸ್ವೀಕರಿಸಿ ಮುನ್ನಡೆಯಿರಿ: ಲಕ್ಷ್ಮೀನಾರಾಯಣ ಕಾಮತ್

September 6, 2025

ಸುಬ್ರೋಟೋ ಕಪ್ U-15: CISCE, ಪಶ್ಚಿಮ ಬಂಗಾಳಕ್ಕೆ ಭರ್ಜರಿ ಜಯ

September 6, 2025

Inspire Institute of Sport launches ‘IIS Sikhaega’

September 6, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕಾನೂನು ಕಲ್ಪ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ವಿಶೇಷ ಗುರುತು ಮೂಡಿಸಿಕೊಂಡಿರುವ ನವಿತಾ ಜೈನ್

September 6, 2025

ಸೋತಾಗ ಕುಗ್ಗದೆ ಸವಾಲಾಗಿ ಸ್ವೀಕರಿಸಿ ಮುನ್ನಡೆಯಿರಿ: ಲಕ್ಷ್ಮೀನಾರಾಯಣ ಕಾಮತ್

September 6, 2025

ಸುಬ್ರೋಟೋ ಕಪ್ U-15: CISCE, ಪಶ್ಚಿಮ ಬಂಗಾಳಕ್ಕೆ ಭರ್ಜರಿ ಜಯ

September 6, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!