ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬಂಟ್ವಾಳ: ಕೊರೋನ ಎಂಬ ಪ್ರಾಣಾಂತಿಕ ಕಾಯಿಲೆ ಎಲ್ಲೆಡೆಗಳಲ್ಲಿ ಪ್ರಾಣ ಬಲಿ ತೆಗೆದುಕೊಳ್ಳುತ್ತಿದ್ದರೆ, ಅದನ್ನು ತಡೆಯುವುದಕ್ಕಾಗಿ ಅದೆಷ್ಟೋ ಆರಕ್ಷಕರು, ವೈದ್ಯರು, ದಾದಿಗಳು ತಮ್ಮ ಪ್ರಾಣವನ್ನು ಒತ್ತೆ ಇಟ್ಟು ನಮಗಾಗಿ ದುಡಿಯುತ್ತಿದ್ದಾರೆ.
ದೇಶವ್ಯಾಪಿ ಮಾರಕ ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್’ಡೌನ್ ಘೋಷಣೆ ಮಾಡಲಾಗಿದೆ. ಆದರೆ, ಇಂತಹ ಸಂದರ್ಭದಲ್ಲೂ ತಮ್ಮ ಜೀವವನ್ನೂ ಲೆಕ್ಕಿಸದೇ ಶ್ರಮಿಸುತ್ತಿರುವ ವರ್ಗದಲ್ಲಿ ಪೊಲೀಸರ ಪಾತ್ರವೂ ಸಹ ಪ್ರಮುಖವಾಗಿದೆ.
ಆದರೆ, ಲಾಕ್’ಡೌನ್ ಹಿನ್ನೆಲೆ ಮನೆಯಿಂದ ಹೊರಕ್ಕೆ ಬಾರದಂತೆ ಪೊಲೀಸರು ಸೂಚನೆ ನೀಡುತ್ತಿದ್ದರೆ, ಅವರನ್ನು ನೋಡಿಯೇ ಕೇಕೆ ಹಾಕಿ ನಗುತ್ತಾ ವಿಕೃತಿ ಮೆರೆಯುತ್ತಿರುವ ಕೆಲವು ಪುಂಡ ಯುವಕರು ಗ್ರಾಮದಲ್ಲಿ ಕಂಡುಬಂದಿದ್ದಾರೆ.
ಬಂಟ್ವಾಳ ತಾಲೂಕು, ಪುತ್ತೂರು ವಿಧಾನಸಭಾ ಕ್ಷೇತ್ರ ಹಾಗೂ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಕೆದಿಲ ಗ್ರಾಮದ ಗಡಿಯಾರ ಪೇಟೆಯಿಂದ ಕೆಳಗಿರುವ ಒಂದು ಗೂಡಂಗಡಿಯಲ್ಲಿ ಈ ದೃಶ್ಯ ಕಂಡುಬಂದಿದೆ.
ಪೋಲೀಸರು ಕೊರೋನಾ ತಡೆಗಟ್ಟುವುದಕ್ಕಾಗಿ ಅನಾವಾಶ್ಯಕವಾಗಿ ರಸ್ತೆ ಬದಿಯಲ್ಲಿ ಕುಳಿತವರನ್ನು ಓಡಿಸುತ್ತಾ ಬರುತ್ತಿದ್ದರೆ, ಪೊಲೀಸ್ ಜೀಪು ಕಂಡು ಓಡಿದ ಈ ಪುಂಡರು ಜೀಪು ದಾಟಿದ ಕೆಲವೇ ಗಳಿಗೆಯಲ್ಲಿ ಮತ್ತೆ ಅದೇ ಗೂಡಂಗಡಿಯಲ್ಲಿ ಕುಳಿತು ಕೇಕೆ ಹಾಕುತ್ತಾ ನಗುತ್ತಾ ತನ್ನ ದೌಷ್ಟ್ಯ ತನ ಮೆರೆಯುತ್ತಿದ್ದಾರೆ.
ಕೊರೋನ ಬಾಧೆಯಿಂದ ಲೋಕವೇ ಕಂಗಾಲಾಗಿದ್ದರೂ ಗಡಿಯಾರದ ಈ ತರುಣರ ಪುಂಡಾಟಿಗೆ ಎಂತವರಿಗಾದರು ನೋವು ತರದೆ ಇರದು. ಅಲ್ಲದೆ ತನ್ನ ಪ್ರಾಣವನ್ನು ಒತ್ತೆ ಇಟ್ಟು ದುಡಿಯುತ್ತಿರುವ ಪುತ್ತೂರು ನಗರ ಠಾಟೆಯ ಪೊಲೀಸರಿಗೆ ಧನ್ಯವಾದ ಸಲ್ಲಿಸಬೇಕಾದ್ದು ಆ ಊರಿನ ಎಲ್ಲರ ಕರ್ತವ್ಯ. ಆದರೆ ಅದರ ಹೊರತು ಪಡಿಸಿ ಆ ಪೋಲೀಸರನ್ನೇ ತಮಾಷೆ ಮಾಡಿ ನಗುತ್ತಿರುವ ಈ ಯುವಕರ ಕೃತ್ಯಕ್ಕೆ ಎಲ್ಲರೂ ನಾಚಿಕೆ ಪಡುವಂತಾಗಿದೆ.
ಇದೇ ಗ್ರಾಮದ ಈ ಯುವಕರ ಅಭಿನಂದನಾರ್ಹರು
ಮೇಲೆ ಹೇಳಿದ ಕೆಲವು ವಿಕೃತ ಯುವಕರು ಇರುವ ಗ್ರಾಮದಲ್ಲಿಯೇ ರಾಷ್ಟ್ರಭಕ್ತಿ, ಸಾಮಾಜಿಕ ಕಳಕಳಿ ಹಾಗೂ ವ್ಯವಸ್ಥೆಯ ಕುರಿತಾಗಿ ಕಾಳಜಿ ಹೊಂದಿರುವ ಯುವಕರೂ ಸಹ ಇದ್ದಾರೆ.
ಯುವ ಕೇಸರಿ ಗಡಿಯಾರ ಎಂಬ ಸಂಸ್ಥೆಯನ್ನು ಸೃಜಿಸಿಕೊಂಡು ಸಾಮಾಜಿಕ ಕಳಕಳಿಯ ಕಾರ್ಯಗಳು ಹಾಗೂ ಜಾಗೃತಿ ಮೂಡಿಸುವ ಕೆಲಸಗಳನ್ನು ನಿರ್ವಹಿಸುತ್ತಿರುವ ಈ ತಂಡ ನಿಜಕ್ಕೂ ಅಭಿನಂದನೀಯ.
Get in Touch With Us info@kalpa.news Whatsapp: 9481252093
Discussion about this post