ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು, ಜಿಲ್ಲೆಯ ಮೂವರು ಸಾಧಕರಿಗೆ ಈ ಬಾರಿಯ ಗರಿ ಒಲಿದಿದೆ.
ರಾಜ್ಯ ಸರ್ಕಾರ ಇಂದು ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಿದ್ದು, ರಾಜ್ಯದಾದ್ಯಂತ 65 ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಶಿವಮೊಗ್ಗದ ವೈದ್ಯಕೀಯ ವಿಭಾಗದಲ್ಲಿ ಡಾ.ಬಿ.ಎಸ್. ಶ್ರೀನಾಥ್, ವಿಜ್ಞಾನ/ತಂತ್ರಜ್ಞಾನ ವಿಭಾಗದಲ್ಲಿ ಡಾ.ಚಿಂದಿ ವಾಸುದೇವಪ್ಪ, ಯಕ್ಷಗಾನ ವಿಚಾರದಲ್ಲಿ ಎಂ.ಕೆ. ರಮೇಶ್ ಆಚಾರ್ಯ ಅವರುಗಳಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.
ರಾಜ್ಯೋತ್ಸವ ಪ್ರಶಸ್ತಿ ಪಡೆದ ಪ್ರಮುಖರು:
ಸಂಗೀತ ಕ್ಷೇತ್ರದಲ್ಲಿ ರಾಯಚೂರಿನ ಅಂಬಯ್ಯನೂಲಿ, ಬೆಳಗಾವಿಯ ಅನಂತ ತೇರದಾಳ, ಬೆಂಗಳೂರಿನವರಾದ ಬಿ.ವಿ. ಶ್ರೀನಿವಾಸ್ ಮತ್ತು ಗಿರಿಜಾ ನಾರಾಯಣ್, ದಕ್ಷಿಣ ಕನ್ನಡದ ಕೆ. ಲಿಂಗಪ್ಪ ಶೇರಿಗಾರ ಕಟೀಲು
ಮಾದ್ಯಮ ಕ್ಷೇತ್ರದಲ್ಲಿ ಮೈಸೂರಿನ ಸಿ. ಮಹೇಶ್ವರನ್, ಬೆಂಗಳೂರಿನ ಟಿ. ವೆಂಕಟೇಶ್
ನ್ಯಾಯಾಂಗ ಕ್ಷೇತ್ರದಲ್ಲಿ ಬೆಂಗಳೂರಿನ ಎನ್.ಕೆ. ಭಟ್, ಉಡುಪಿಯ ಕೆ.ಎನ್. ವಿಜಯಕುಮಾರ
ಯೋಗ ಕ್ಷೇತ್ರದಲ್ಲಿ ಮೈಸೂರಿನ ಡಾ. ಎ.ಎಸ್. ಚಂದ್ರಶೇಖರ
ಶಿಕ್ಷಣ ಕ್ಷೇತ್ರದಲ್ಲಿ ಚಿಕ್ಕಮಗಳೂರಿನ ಎಂ.ಎನ್. ಷಡಕ್ಷರಿ, ಚಾಮರಾಜನಗರದ ಡಾ. ಆರ್. ರಾಮಕೃಷ್ಣ, ದಾವಣಗೆರೆಯ ಡಾ. ಎಂ.ಜಿ. ಈಶ್ವರಪ್ಪ, ಮೈಸೂರಿನ ಡಾ. ಪುಟ್ಟಸಿದ್ದಯ್ಯ, ಬೆಳಗಾವಿಯ ಅಶೋಕ್ ಶೆಟ್ಟರ್, ಗದಗದ ಡಿ.ಎಸ್. ದಂಡಿನ್, ಹೊರನಾಡು ಕನ್ನಡಿಗ ವಿಭಾಗದಲ್ಲಿ ದಕ್ಷಿಣ ಕನ್ನಡದ ಕುಸುಮೋದರ ದೇರಣ್ಣ ಶೆಟ್ಟಿ ಕೇಲ್ತಡ್ಕಾ, ಮುಂಬೈನ ವಿದ್ಯಾ ಸಿಂಹಾಚಾರ್ಯ ಮಾಹುಲಿ
ಸಮಾಜ ಸೇವೆ ವಿಭಾಗದಲ್ಲಿ ಉತ್ತರ ಕನ್ನಡದ ಎನ್.ಎಸ್. ಹೆಗಡೆ, ಚಿಕ್ಕಮಗಳೂರಿನ ಪ್ರೇಮಾ ಕೋದಂಡರಾಮ ಶ್ರೇಷ್ಠಿ, ಉಡುಪಿಯ ಮಣೆಗಾರ್ ಮೀರಾನ್ ಸಾಹೇಬ್, ಚಿಕ್ಕಮಗಳೂರಿನ ಮೋಹಿನಿ ಸಿದ್ದೇಗೌಡ
ರಂಗಭೂಮಿಯಲ್ಲಿ ಹಾಸನದ ಅನುಸೂಯಮ್ಮ, ದಾವಣಗೆರೆಯ ಎಚ್. ಷಡಕ್ಷರಪ್ಪ, ಚಿತ್ರದುರ್ಗದ ತಿಪ್ಪೇಸ್ವಾಮಿ
ಕ್ರೀಡಾ ವಿಭಾಗದಲ್ಲಿ ತುಮಕೂರಿನ ಎಚ್.ಬಿ. ನಂಜೇಗೌಡ, ಬೆಂಗಳೂರು ನಗರದ ಉಷಾರಾಣಿ, ಸಂಕೀರ್ಣ ವಿಭಾಗದಲ್ಲಿ ಕೋಲಾರದ ಡಾ.ಕೆ.ವಿ. ರಾಜು, ಹಾಸನದ ನಂ. ವೆಂಕೋಬರಾವ್, ವಿಶೇಷ ಚೇತನರಾದ ಮಂಡ್ಯದ ಡಾ. ಕೆ.ಎಸ್. ರಾಜಣ್ಣ, ಮಂಡ್ಯದ ವಿ. ಲಕ್ಷ್ಮಿ ನಾರಾಯಣ್
ಯಕ್ಷಗಾನ ವಿಭಾಗದಲ್ಲಿ ಚಾಮರಾಜನಗರದ ಬಂಗಾರ್ ಆಚಾರಿ, ಶಿವಮೊಗ್ಗದ ಡಾ.ಎಂ.ಕೆ. ರಮೇಶ್ ಆಚಾರ್ಯ
ಸಾಹಿತ್ಯ ಕ್ಷೇತ್ರದಲ್ಲಿ ಧಾರವಾಡದ ಪ್ರೊ. ಸಿ.ಪಿ. ಸಿದ್ಧಾಶ್ರಮ, ಕೋಲಾರದ ವಿ. ಮುನಿ ವೆಂಕಟಪ್ಪ, ಗದಗದ ವಿಶೇಷ ಚೇತನ ವರ್ಗದ ರಾಮಣ್ಣ ಬ್ಯಾಟಿ, ದಕ್ಷಿಣ ಕನ್ನಡದ ವಲೇರಿಯನ್ ಡಿಸೋಜಾ, ಯಾದಗಿರಿಯ ಡಿ.ಎನ್. ಅಕ್ಕಿ
ಸಂಘ-ಸಂಸ್ಥೆ ವಿಭಾಗದಲ್ಲಿ ಬೆಂಗಳೂರು ನಗರದ ಯೂತ್ ಫಾರ್ ಸೇವಾ, ಬಳ್ಳಾರಿಯ ದೇವದಾಸಿ ಸ್ವಾವಲಂಬನಾ ಕೇಂದ್ರ, ಬೆಂಗಳೂರಿನ ಬೆಟರ್ ಇಂಡಿಯಾ, ಬೆಂಗಳೂರು ಗ್ರಾಮಾಂತರದ ಯುವ ಬ್ರಿಗೇಡ್, ದಕ್ಷಿಣ ಕನ್ನಡದ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್
ವೈದ್ಯಕೀಯ ವಿಭಾಗದಲ್ಲಿ ಬಾಗಲಕೋಟೆಯ ಡಾ. ಅಶೋಕ್ ಸೊನ್ನದ್, ಶಿವಮೊಗ್ಗದ ಡಾ. ಬಿ.ಎಸ್. ಶ್ರೀನಾಥ, ಬಳ್ಳಾರಿಯ ಡಾ. ಎ. ನಾಗರತ್ನ, ರಾಮನಗರದ ಡಾ. ವೆಂಕಟಪ್ಪ
ಜಾನಪದ-ತೊಗಲುಬೊಂಬೆ ವಿಭಾಗದಲ್ಲಿ ಕೊಪ್ಪಳದ ಕೇಶಪ್ಪ ಶಿಳ್ಳೆಕ್ಯಾತರ
ಕೃಷಿ ವಿಭಾಗದಲ್ಲಿ ಬೀದರ್ ನ ಸುರತ್ ಸಿಂಗ್ ಕನೂರ್ ಸಿಂಗ್ ರಜಪೂತ್, ಚಿತ್ರದುರ್ಗದ ಎಸ್.ವಿ. ಸುಮಂಗಲಮ್ಮ ವೀರಭದ್ರಪ್ಪ, ಕಲಬುರಗಿಯ ಡಾ. ಸಿದ್ದರಾಮಪ್ಪ ಬಸವಂತರಾವ್ ಪಾಟೀಲ್.ಪರಿಸರ ವಿಭಾಗದಲ್ಲಿ ಚಿಕ್ಕಬಳ್ಳಾಪುರದ ಅಮರ ನಾರಾಯಣ, ವಿಜಯಪುರದ ಎನ್.ಡಿ. ಪಾಟೀಲ್
ವಿಜ್ಞಾನ-ತಂತ್ರಜ್ಞಾನ ವಿಭಾಗದಲ್ಲಿ ಉಡುಪಿಯ ಪ್ರೊ. ಉಡುಪಿ ಶ್ರೀನಿವಾಸ, ಶಿವಮೊಗ್ಗದ ಡಾ. ಚಿಂದಿ ವಾಸುದೇವಪ್ಪ
ಸಹಕಾರ ಕ್ಷೇತ್ರದಲ್ಲಿ ಬೆಂಗಳೂರಿನ ಡಾ. ಸಿ.ಎನ್. ಮಂಜೇಗೌಡ.ಬಯಲಾಟದಲ್ಲಿ ಬೆಳಗಾವಿಯ ಕೆಂಪವ್ವ ಹರಿಜನ, ಹಾವೇರಿಯ ಚೆನ್ನಬಸಪ್ಪ ಬೆಂಡಿಗೇರಿ
ಚಲನಚಿತ್ರ ವಿಭಾಗದಲ್ಲಿ ತುಮಕೂರಿನ ಬಿ.ಎಸ್. ಬಸವರಾಜು, ಕೊಡಗಿನ ಆಪಾಢಾಂಡ ತಿಮ್ಮಯ್ಯ ರಘು – ಎ.ಟಿ. ರಘು
ಚಿತ್ರಕಲೆ- ಧಾರವಾಡದ ಎಂ.ಜೆ. ವಾಜೇದ್ ಮಠ, ಜಾನಪದ – ಬಾಗಲಕೋಟೆಯ ಗುರುರಾಜ ಹೊಸಕೋಟೆ, ಹಾಸನದ ಡಾ. ಹಂಪನಹಳ್ಳಿ ತಿಮ್ಮೇಗೌಡ
ಶಿಲ್ಪಕಲೆ- ಮೈಸೂರಿನ ಎನ್.ಎಸ್. ಜನಾರ್ದನ ಮೂರ್ತಿ, ನೃತ್ಯ- ನಾಟ್ಯ ವಿದೂಷಿ ಜ್ಯೋತಿ ಪಟ್ಟಾಭಿರಾಮನ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post