No Result
View All Result
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp
English Articles

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

by ಕಲ್ಪ ನ್ಯೂಸ್
March 18, 2026
0

Kalpa Media House  |  Manipal | Manipal Institute of Technology (MIT), Manipal, a constituent unit of Manipal Academy of Higher...

Read moreDetails
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
  • Advertise With Us
  • Grievances
  • About Us
  • Contact Us
Friday, March 20, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಸದ್ದಿಲ್ಲದೇ ಸೇವೆಯ ಸಾಧನೆ ಮಾಡುತ್ತಿದೆ ‘ಸಾಧನಾ ಮಂಗಳೂರು’

ಜೂನ್ 21ರಂದು ನೀವು ಕರೆ ಮಾಡಿ ಉಚಿತ ಆಪ್ತ ಸಮಾಲೋಚನೆ/ಸಲಹೆ ಪಡೆಯಿರಿ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 19, 2020
in Special Articles
0
ಸದ್ದಿಲ್ಲದೇ ಸೇವೆಯ ಸಾಧನೆ ಮಾಡುತ್ತಿದೆ ‘ಸಾಧನಾ ಮಂಗಳೂರು’
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಎಲ್ಲರೂ ನೋಡನೋಡುತ್ತಿದ್ದಂತೆ ಜಗತ್ತಿಗೆ ಕೊರೋನಾ ಮಹಾಮಾರಿ ಅಪ್ಪಳಿಸಿತು. ಜಗತ್ತಿನಾದ್ಯಂತ ಒಮ್ಮೆಗೆ ಲಾಕ್’ಡೌನ್ ಆದಾಗ ಅದನ್ನು ಹೇಗೆ ಎದುರಿಸುವುದು ಎಂಬ ನಿರ್ದಿಷ್ಟ ಚಿಂತನೆ ಯಾರಲ್ಲೂ ಇರಲಿಲ್ಲ. ಅಷ್ಟಕ್ಕೂ ಕೊರೋನಾ ಒಂದು ರೋಗವಾಗಿ ಮಾತ್ರ ನಮ್ಮನ್ನು ಕಾಡಿದ್ದಲ್ಲ. ಆರೋಗ್ಯದ ಜೊತೆಗೆ ಉದ್ಯೋಗ, ಕಿಸೆಯಲಿದ್ದ ದುಡ್ಡು, ನಡೆಯುತ್ತಿದ್ದ ಜೀವನಚಕ್ರ ನಿಂತು ಹೋಯಿತು.

ಇದು ಮನುಷ್ಯನ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿತು. ಮನೆಯಿಂದ ಹೊರಬರಲಾರದೆ ಜನ ಮಾನಸಿಕ ಖಿನ್ನತೆಗೆ ಒಳಗಾದರು. ವಿವಿಧ ಬಗೆಯ ಒತ್ತಡ ಕಾಡಲಾರಂಭಿಸಿತು. ಮಾನಸಿಕವಾಗಿ ಜನ ನಿಶ್ಯಕ್ತರಾಗತೊಡಗಿದರು.

ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಮ್ಮ ಸ್ವಯಂಸೇವಾ ಸಂಸ್ಥೆ ಸಾಧನಾ ಮಂಗಳೂರು ಈ ಕುರಿತು ಏನಾದರೂ ಸಮಾಜಮುಖಿಯಾಗಿ ಮಾಡಬೇಕೆಂದು ಯೋಚಿಸಿತು. ಆದರೆ ಯೋಚನೆಗಿಂತ ಸವಾಲು ದೊಡ್ಡದಾಗಿತ್ತು. ಜನರ ಮನಸ್ಸನ್ನು ಅರ್ಥಮಾಡಿಕೊಂಡು ಅವರಿಗೆ ಸಮಾಧಾನ ಹೇಳುವುದು ಸವಾಲಿನ ಕೆಲಸ. ಏಕೆಂದರೆ ಇಂತಹ ಸಂದರ್ಭದಲ್ಲಿ ಮನುಷ್ಯ ಅಂತರ್ಮುಖಿಯಾಗಿ ಬಿಡುತ್ತಾನೆ.

ಸಾಮಾಜಿಕ ಅಂತರ ಕಾಯ್ದುಕೊಂಡೇ ಇದನ್ನು ಮಾಡಬೇಕಾಗಿದ್ದರಿಂದ ಫೋನ್ ಒಂದೇ ಸಂಪರ್ಕ ಸೇತು. ಹಾಗೆಂದು ಇದರ ಬಗ್ಗೆ ಜನರಿಗೆ ಹೇಳಲು ಕೂಡ ಸಾಮಾಜಿಕ ಜಾಲತಾಣ ಒಂದೇ ಮಾಧ್ಯಮ. ಅದಕ್ಕಿಂತ ಹೆಚ್ಚಾಗಿ ಆಪ್ತಸಮಾಲೋಚನೆ ಮಾಡಬೇಕು ಅಂದಾಗ:

1. ಜನರಿಗೆ ತಾನು ಮಾತಾಡುತ್ತಿರುವ ವ್ಯಕ್ತಿಯ ಮೇಲೆ ನಂಬಿಕೆ ಇರಬೇಕು.
2. ಮಾತುಕತೆ ಗೌಪ್ಯವಾಗಿರಬೇಕು.
ಈ ಎರಡು ಸವಾಲುಗಳು ಕಠಿಣವಾಗಿ ಕಾಡಿದವು ಮತ್ತು ಇವುಗಳನ್ನು ನಾವು ಈಗಲೂ ಎದುರಿಸುತ್ತಿದ್ದೇವೆ. ಹಾಗೇ ಇನ್ನೊಂದು ಬಹಳ ಮುಖ್ಯವಾದ ಅಂಶವೆಂದರೆ ನಮ್ಮ ಸಮಾಜದಲ್ಲಿ ಇಂತಹ ಸೇವೆಗಳನ್ನು ಪಡೆಯಲು ಇರುವ ಹಿಂಜರಿಕೆ. ಕೌನ್ಸೆಲಿಂಗ್’ನಂತಹ ವಿಷಯ ನಮ್ಮ ಸಮಾಜದಲ್ಲಿ ಚಿರಪರಿಚಿತ ಅಲ್ಲ.

ಈ ಸವಾಲುಗಳಿಗೆ ನಾವು ಉಪಾಯ ಕಂಡುಕೊಳ್ಳುವುದೇ ನಮ್ಮ ಕಾರ್ಯಕ್ರಮದ ಅಡಿಪಾಯ. ಕೇವಲ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ನಾವು ನಮ್ಮ ಸೇವೆಯ ವಿಷಯ ಮತ್ತು ಇದಕ್ಕೆ ಪೂರಕವಾದ ಮಾಹಿತಿಗಳನ್ನು ಹಂಚಿಕೊಂಡೆವು. ಲಾಕ್’ಡೌನ್ ಸಂದರ್ಭದಲ್ಲಿ ಲಭ್ಯವಿರುವ ನಮ್ಮ ಮೊಬೈಲ್ ಫೋನ್’ಗಳನ್ನಷ್ಟೇ ಬಳಸಿಕೊಂಡು ಈ ಕಾರ್ಯಕ್ರಮ ಆರಂಭಿಸಿದೆವು.

ನಿರಂತರವಾಗಿ 8 ವಾರಗಳಿಂದ ಪ್ರತೀ ಭಾನುವಾರ ಸಾಧನಾ ಮಂಗಳೂರು ಸಂಸ್ಥೆ 2 ಗಂಟೆಗಳ ಉಚಿತ ಫೋನ್ ಇನ್ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಮುಖ್ಯವಾಗಿ ಇಂದಿನ ಯುವಜನತೆಯನ್ನು ಗಮನದಲ್ಲಿರಿಸಿಕೊಂಡು ಇಡೀ ರಾಜ್ಯದ ವ್ಯಾಪ್ತಿಯಲ್ಲಿ ಈ ಸೇವೆ ಮಾಡುತ್ತಿದ್ದೇವೆ. ಆದರೆ ಇದರಲ್ಲಿ ಕೆಲವು ವಿಶೇಷ ಕಾರ್ಯಕ್ರಮಗಳೂ ಸೇರಿವೆ.

ಎಸ್’ಎಸ್’ಎಲ್’ಸಿ ಮಕ್ಕಳಿಗಾಗಿ ಒಂದು ಸರಣಿ, ಉದ್ಯೋಗಸ್ಥರಿಗಾಗಿ ಒಂದು ಸರಣಿ ಹೀಗೆ. ಮೊದಲ 2 ಕಾರ್ಯಕ್ರಮಗಳಲ್ಲಿ ನಮಗೆ ವಲಸೆ ಕಾರ್ಮಿಕರ ಮತ್ತು ಬೇರೆ ಊರುಗಳಲ್ಲಿ ಸಿಲುಕಿಕೊಂಡರವರ ಕರೆಗಳು ಕೂಡಬಂದಿದ್ದವು. ಅವುಗಳನ್ನು ಸೂಕ್ತ ಇಲಾಖೆ/ವ್ಯಕ್ತಿಗಳ ಗಮನಕ್ಕೆ ತಂದ ತೃಪ್ತಿಯೂ ಇದೆ.

ಇನ್ನು ಫೋನ್ ಇನ್ ಕಾರ್ಯಕ್ರಮಗಳಲ್ಲಿ ನಿದ್ರಾಹೀನತೆ, ಬೇರೆಬೇರೆ ರೀತಿಯ ಒತ್ತಡಗಳು, ಅಪಸ್ಮಾರ, Anxiety, OCD ಈ ಮುಂತಾದ ಸಮಸ್ಯೆಗಳಿಗೆ ಸಮಾಧಾನ ಹೇಳುವ ಅಥವಾ ಪರಿಹಾರ ಸೂಚಿಸುವ ಪ್ರಯತ್ನ ಮಾಡಿದ್ದೇವೆ. ಎಸ್’ಎಸ್’ಎಲ್’ಸಿ ಮಕ್ಕಳಲ್ಲಿ ಏಕಾಗ್ರತೆಯ ಕೊರತೆ, ವಿವಿಧ ರೀತಿಯ ಗೊಂದಲಗಳು, ಹೈಪೆರಾಕ್ಟಿವ್, ವ್ಯಾಕುಲತೆ ಮುಂತಾದ ವಿಷಯಗಳಲ್ಲಿ ಮಾರ್ಗದರ್ಶನ ಮಾಡಿದ್ದೇವೆ. ಹಲವಾರು ಸಂದರ್ಭಗಳಲ್ಲಿ ಒಂದು ಬಾರಿಯ ಸಲಹೆ ನಂತರ ಅದರ ಮುಂದುವರಿದ ವಿಷಯಗಳ ಮಾಹಿತಿಗಾಗಿ ಕರೆಗಳು ಬರುತ್ತಿವೆ ಮತ್ತು ಇತ್ತೀಚೆಗೆ(ಲಾಕ್’ಡೌನ್ ಮುಗಿದ ನಂತರ) ಅವರ ಬಳಿಗೆ ಹೋಗಿ ಆಪ್ತ ಸಮಾಲೋಚನೆ ನಡೆಸುವ ಕೆಲಸಗಳೂ ನಡೆಯುತ್ತಿವೆ.

ಈ ಎಲ್ಲ ಸೇವೆಗಳನ್ನು ನಮ್ಮ ಸಾಧನಾ ತಂಡ ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಿದೆ ಹಾಗೂ ಈ ಫೋನ್ ಇನ್ ಕಾರ್ಯಕ್ರಮ ಇನ್ನೂ ಮುಂದುವರೆದಿದೆ. ನಮ್ಮ ತಂಡದ ಸದಸ್ಯರು ಬೇರೆ ಊರುಗಳಲ್ಲಿ ಕುರಿತು ಇದರ ಕೆಲಸ ಮಾಡುತ್ತಿದ್ದಾರೆ.

ಈ ಎಲ್ಲ ಸೇವೆಗಳನ್ನು ನಮ್ಮ ಸಾಧನಾ ತಂಡ ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಿದೆ ಹಾಗೂ ಈ ಫೋನ್ ಇನ್ ಕಾರ್ಯಕ್ರಮ ಇನ್ನೂ ಮುಂದುವರೆದಿದೆ. ನಮ್ಮ ತಂಡದ ಸದಸ್ಯರು ಬೇರೆ ಊರುಗಳಲ್ಲಿ ಕುಳಿತು ಅಲ್ಲಿಂದಲೇ ಇದರ ಕೆಲಸ ಮಾಡುತ್ತಿದ್ದಾರೆ.

ಮಾನಸಿಕ ಆರೋಗ್ಯದ ಕುರಿತು ಅರಿವು ಮೂಡಿಸುವ ಮತ್ತೊಂದು ವಿಭಿನ್ನ ಸರಣಿ ಕಾರ್ಯಕ್ರಮ ನಡೆಸುವ ತಯಾರಿ ಸಾಧನಾ ತಂಡದ ಸದಸ್ಯರಿಂದ ನಡೆಯುತ್ತಿದೆ. ಈ ಕಾರ್ಯಕ್ರಮದಿಂದ ಅರ್ಥಿಕವಾಗಿ ಹಿಂದುಳಿದವರಿಗೆ ಆಪ್ತ ಸಮಾಲೋಚನೆಯ ಸೇವೆ ಸಿಗಲಿ ಎಂಬುದೇ ನಮ್ಮ ಆಶಯ ಮತ್ತು ಪ್ರಯತ್ನ.

-ಸಾಧನಾ ಮಂಗಳೂರು
sadhanamangaluru@gmail.com

-ಅಕ್ಷತಾ ಬಜಪೆ
9844985785

Get In Touch With Us info@kalpa.news Whatsapp: 9481252093

Tags: AnxietyKannadaNewsWebsiteLatestNewsKannadaLockdownMangaloreOCDSadhana Mangaloreಅಕ್ಷತಾ ಬಜಪೆಲಾಕ್’ಡೌನ್ಸಾಧನಾ ಮಂಗಳೂರುಸ್ವಯಂಸೇವಾ ಸಂಸ್ಥೆ
Share225Tweet123Send
Previous Post

ಆತ್ಮ ನಿರ್ಭರ ಭಾರತ ಭಾರತೀಯರಿಗೆ ಹೊಸದೇನಲ್ಲ, ಎಲ್ಲವೂ ಹಳೆಯ ಪದ್ಧತಿಗಳೇ

Next Post

ಅನೇಕ ರಾಷ್ಟ್ರಗಳ ಭೂಮಿಯನ್ನು ನುಂಗಿ ನೀರು ಕುಡಿದ ಚೀನಾದ ಆಟ ಎಷ್ಟು ವರ್ಷ?

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಅನೇಕ ರಾಷ್ಟ್ರಗಳ ಭೂಮಿಯನ್ನು ನುಂಗಿ ನೀರು ಕುಡಿದ ಚೀನಾದ ಆಟ ಎಷ್ಟು ವರ್ಷ?

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಭದ್ರಾವತಿ | ಮಹಿಳೆ ಆತ್ಮಹತ್ಯೆ ಪ್ರಕರಣ | ಒಂದೇ ಕುಟುಂಬದ ಐವರಿಗೆ 3 ವರ್ಷ ಜೈಲು ಶಿಕ್ಷೆ

ದಲಿತ ವ್ಯಕ್ತಿಗೆ ಜಾತಿ ನಿಂದನೆ, ಜೀವ ಬೆದರಿಕೆ | ಭದ್ರಾವತಿಯ 6 ಮಂದಿಗೆ 2 ವರ್ಷ ಜೈಲು, ಭಾರೀ ದಂಡ

March 20, 2026
ಮಾ.24ರಿಂದ ಮೂರು ದಿನ ವ್ಯಾಪಾರ ಮೇಳ ಮತ್ತು ಪ್ರದರ್ಶನ

ಮಾ.24ರಿಂದ ಮೂರು ದಿನ ವ್ಯಾಪಾರ ಮೇಳ ಮತ್ತು ಪ್ರದರ್ಶನ

March 20, 2026
ಡಿ.13ವರೆಗೂ ಮಂಗಳೂರಿನ 44 ಇಂಡಿಗೋ ವಿಮಾನ ಹಾರಾಟ ರದ್ದು

ಮೇ 1ರಿಂದ ಶಿವಮೊಗ್ಗ-ಬೆಂಗಳೂರು ಇಂಡಿಗೋ ವಿಮಾನ ಹಾರಾಟ ಸ್ಥಗಿತ?

March 20, 2026
ಕಾಂತೇಶ್ ಹುಟ್ಟುಹಬ್ಬ | ಮಾ.21 ಕ್ರಿಕೆಟ್ ಪಂದ್ಯಾವಳಿ 22ರಂದು ವಿಶೇಷ ಕಾರ್ಯಕ್ರಮ

ಕಾಂತೇಶ್ ಹುಟ್ಟುಹಬ್ಬ | ಮಾ.21 ಕ್ರಿಕೆಟ್ ಪಂದ್ಯಾವಳಿ 22ರಂದು ವಿಶೇಷ ಕಾರ್ಯಕ್ರಮ

March 20, 2026
Sagara Engulfed In The Ocean Of Music

Sagara Engulfed In The Ocean Of Music

March 20, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL