ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಕುವೆಂಪು ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕದ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಗುರುತಿಸಿ ರಾಜ್ಯ ಸರ್ಕಾರವು 2020-21ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಘಟಕ, ಅಧಿಕಾರಿ ಮತ್ತು ಸ್ವಯಂ ಸೇವಕಿ ಪಶಸ್ತಿ ಲಭಿಸಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹಲೊಟ್ ಮತ್ತು ಸಚಿವ ನಾರಾಯಣ ಗೌಡ ಪ್ರಶಸ್ತಿ ಪ್ರದಾನ ಮಾಡಿದರು.
ರಾಜಭವನದ ಗಾಜಿನಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿ ಕುಲಪತಿ ಡಾ. ವೀರಭದ್ರಪ್ಪ ಪ್ರಶಸ್ತಿ ಸ್ವೀಕರಿಸಿದರು. ಕಟೀಲು ಅಶೋಕ್ ಪೈ ಕಾಲೇಜಿನ ಸಿ.ಡಿ. ರಕ್ಷಿತಾ ಅತ್ಯುತ್ತಮ ಸ್ವಯಂ ಸೇವಕಿ ಮತ್ತು ಡಿವಿಎಸ್ ಕಾಲೇಜಿನ ಡಾ. ಎಂ. ವೆಂಕಟೇಶ್ ಅತ್ಯುತ್ತಮ ಘಟಕ ಅಧಿಕಾರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕುಲಪತಿ ಡಾ. ವೀರಭದಪ್ಪ, ಕುಲಸಚಿವರು ಜಿ. ಅನುರಾಧಾ, ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಪರಿಸರ ನಾಗರಾಜ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Also read: ನಟ ರಮೇಶ್ಗೆ ಬೆಳಗಾವಿ ರಾಣಿ ಚೆನ್ನಮ್ಮ ವಿವಿಯ ಗೌರವ ಡಾಕ್ಟರೇಟ್
ಕುವೆಂಪು ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕದ ವತಿಯಿಂದ ಸಮಾಜ ಸೇವಾ ಚಟುವಟಿಕೆಗಳಾದ ಬೃಹತ್ ರಕ್ತದಾನ ಶಿಬಿರಗಳು, ನೇತ್ರದಾನ, ಈಗಿನ ಕಾಲಮಾನಕ್ಕೆ ಸಂಬಂಧಿಸಿದ ಉಪನ್ಯಾಸಗಳು, ಪರಿಸರ ಸ್ನೇಹಿ ಸಾಮೂಹಿಕ ಗಿಡನಡುವ ಕಾರ್ಯಕ್ರಮಗಳು, ಸ್ವಚ್ಛತಾ ಆಂದೋಲನಗಳು, ಪ್ಲಾಸ್ಟಿಕ್ ನಿರ್ಮೂಲನೆ, ವನ್ಯಜೀವಿ ಸಂರಕ್ಷಣೆ, ಪರಿಸರ ಉಳಿಸಿ, ಕೋವಿಡ್ ೧೯ ಸುರಕ್ಷತಾ ಕಾರ್ಯ, ಲಸಿಕಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post