ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದ ಜನಶತಾಬ್ದಿ ರೈಲಿನಲ್ಲಿ ಪ್ರಯಾಣಿಕರೊಬ್ಬರು ತಮ್ಮ ಬ್ಯಾಗನ್ನು ಮರೆತು ಹೋಗಿದ್ದು, ಅದನ್ನು ಆರ್’ಪಿಎಫ್ ಸಿಬ್ಬಂದಿಗಳು ವಾರಸುದಾರರಿಗೆ ಸುರಕ್ಷಿತವಾಗಿ ಮರಳಿಸಿರುವ ಘಟನೆ ನಡೆದಿದೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದ ಜನಶತಾಬ್ದಿ ರೈಲಿನಲ್ಲಿ ಪ್ರಯಾಣಿಕರೊಬ್ಬರು ತಮ್ಮ ಬ್ಯಾಗೊಂದನ್ನು ತಾವು ಪ್ರಯಾಣಿಸಿದ ಬೋಗಿಯಲ್ಲಿಯೇ ಮರೆತು ಹೋಗಿದ್ದರು.
ಈ ನಡುವೆ ಆರ್’ಪಿಎಫ್ ಸಿಬ್ಬಂದಿ ರೈಲಿನಲ್ಲಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಅವರಿಗೆ ಈ ಬ್ಯಾಗ್ ಸಿಕ್ಕಿದೆ. ಬ್ಯಾಗನ್ನು ಪರಿಶೀಲಿಸಿದಾಗ ಅದರಲ್ಲಿ 1,11,900 ರೂ. ಮೌಲ್ಯದ ಆಪಲ್ ಲ್ಯಾಪ್ ಟಾಪ್, 10,000 ರೂ. ಮೌಲ್ಯದ ಕಾಸ್ಮೆಟಿಕ್ಸ್ ಹಾಗೂ 2,000 ರೂ. ನಗದು ಸೇರಿದಂತೆ ಒಟ್ಟು 1,23,900 ರೂ. ಮೌಲ್ಯದ ವಸ್ತುಗಳಿದ್ದವು.
ನಂತರ ಈ ಬ್ಯಾಗನ್ನು ತಮ್ಮ ಕಚೇರಿಗೆ ಕೊಂಡೊಯ್ದ ಸಿಬ್ಬಂದಿ, ಲಭ್ಯ ಮಾಹಿತಿಯಡಿಯಲ್ಲಿ ಅದರ ಮಾಲೀಕರನ್ನು ಪತ್ತೆ ಮಾಡಿ ಅವರಿಗೆ ಬ್ಯಾಗ್ ಹಿಂತಿರುಗಿಸಿದ್ದಾರೆ.
ರೈಲ್ವೆ ರಕ್ಷಣಾ ದಳದ ಈ ಮಾದರಿ ಕಾರ್ಯಕ್ಕೆ ಪ್ರಯಾಣಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post