ಶಿವಮೊಗ್ಗ: ಆರ್.ಟಿಐ, ಮಾನವ ಹಕ್ಕುಗಳು ಸಾಂವಿಧಾನಿಕವಾಗಿದ್ದರು ಇದನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಒಂದಿಷ್ಟು ಕೆಲಸಗಳು ನಿರಂತರವಾಗಿದೆ. ಹೀಗಾಗಿ ಇದರ ಉಳಿವಿಕೆಗಾಗಿನ ಹೋರಾಟಗಳು ಕಾನೂನಾತ್ಮಕವಾಗಿ ಲಿಖಿತವಾಗಿ, ದುರುಪಯೋಗಪಡಿಸಿಕೊಳ್ಳದೇ ಸದುಪಯೋಗಪಡಿಸಿಕೊಳ್ಳಬೇಕು ಎಂದು ತೆರಿಗೆ ಸಲಹೆಗಾಗರರು ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ವೇದಿಕೆಯ ಅಧ್ಯಕ್ಷರು, ಆರ್.ಟಿ.ಐ ಕಾರ್ಯಕರ್ತರಾಗಿರುವ ಬಹುಮುಖಿ ಸಾಮಾಜಿಕ ದನಿ ಜಫ್ರುಲ್ಲಾ ಖಾನ್ರವರು ತಿಳಿಸಿದರು.
ಅವರು ಬುಧವಾರದಂದು ಜೆಸಿಐ ಶಿವಮೊಗ್ಗ ಶರಾವತಿ ವಿಭಾಗದಿಂದ ಆರ್ಥಿಕ ತೆರಿಗೆ ಮತ್ತು ಸಾಮಾಜಿಕ ನ್ಯಾಯ ವಿಷಯ ಕುರಿತಂತೆ ಮಾತನಾಡಿದರು, ಕೇಂದ್ರ ಸರಕಾರಗಳು ನಿಗದಿಪಡಿಸಿ ಜಾರಿಗೊಳಿಸುವ ಆರ್ಥಿಕ ನೀತಿಗಳಿಂದ ಜನಸಾಮಾನ್ಯರಿಗೆ ಹೊರೆಯಾಗುವುದಕ್ಕೆ ಸಾಧ್ಯವೇಯಿಲ್ಲ ಇದನ್ನು ಸಾಕಾರಗೊಳಿಸಬೇಕಾದ ಉನ್ನತಮಟ್ಟದ ಅಧಿಕಾರಿಗಳು ಈ ನೀತಿಗಳನ್ನು ಸಮಗ್ರವಾಗಿ ಜನರಿಗೆ ಮುಟ್ಟಿಸುವಲ್ಲಿ ವಿಫಲಗೊಳಿಸುತ್ತಿದ್ದಾರೆ, ಹೀಗಾಗಿ ಸರಳ ವಿಧಾನವಾಗಿರುವ ನೀತಿಗಳು ಅಧಿಕಾರಿ ವರ್ಗದವರ ತಾತ್ಸಾರತೆಯಿಂದ ಕಠೀಣವಾಗುತ್ತಿರುವುದರ ಜೊತೆಗೆ ಇದೊಂದು ಹೊರೆಯಾಗುತ್ತಿದೆ ಎಂದವರು ವಿವರಿಸಿದರು.
ಸಾರ್ವಜನಿಕ ಮಾಹಿತಿ ಹಕ್ಕು ಅಧಿನಿಯಮದ ವಿಷಯದಲ್ಲಿ ಜಾಗೃತಿ ಮೂಡಿಸುವ ಕೆಲಸಗಳು ಆಯಾ ಸರಕಾರಗಳು ಮಾಡುತ್ತಿಲ್ಲ ಇದಕ್ಕೆ ಕಾರಣವೇನೆಂದರೆ ಮಾಹಿತಿಗಳು ಸಾರ್ವಜನಿಕಗೊಳಿಸಿದರೆ ಆಡಳಿತದ ನಿಯಂತ್ರಣ ಸಾಧಿಸುವುದಕ್ಕೆ ಕಷ್ಟವಾಗುತ್ತದೆ, ಇದರಿಂದ ಆಡಳಿತದ ಗಂಭೀರತೆಯ ಭ್ರಷ್ಠಾಚಾರಗಳು ಬಹಿರಂಗವಾಗುತ್ತದೆ ಎನ್ನುವ ನಿಟ್ಟಿನಲ್ಲಿ ಆರ್.ಟಿ.ಐ ಅರ್ಜಿ ಸಲ್ಲಿಸುವುದು, ಮೇಲ್ಮನವಿ ಸಲ್ಲಿಸುವಿಕೆಯಲ್ಲಿ ಗಣನೀಯವಾಗಿ ಬದಲಾವಣೆ ಮಾಡಿ ಯಾರು ಕೂಡ ಮೇಲ್ಮನವಿ ಸಲ್ಲಿಸಿ ಹೋರಾಟ ನಡೆಸಲು ಸುಲಭಸಾಧ್ಯವಾಗದೆ, ಅದರ ಸರಳೀಕರಣಗಳಿಲ್ಲದೆ ದೂರ ಸರಿಯುವಂತೆ ನಮ್ಮನಾಳುವ ಸರಕಾರಗಳು ಕೂಡ ಮಾಡುತ್ತಿವೆ ಎಂದು ಹೇಳಿದರಲ್ಲದೆ ಆರ್.ಟಿ,ಐ ಜಾಗೃತಿ, ಅರಿವು ಮೂಡಿಸುವ ಅನುದಾನಗಳನ್ನು ಕೂಡ ಕಡಿತಗೊಳಿಸಿ ದುರ್ಬಲಗೊಳಿಸುತ್ತಿರುವುದು ಪ್ರಸ್ತುತವಾಗಿ ನಾವು ನೋಡಬಹುದಾಗಿದೆ ಎಂದು ಜಫ್ರುಲ್ಲಾ ಖಾನ್ ತಿಳಿಸಿದರು.
ಇನ್ನೂ ಮಾನವ ಹಕ್ಕುಗಳು ಈ ದೇಶದ ಎಲ್ಲಾ ಪ್ರಜೆಗಳ ಬದುಕಿಗೆ ಸಂಭಂದಿಸಿದ ಹಕ್ಕು ಆಗಿದ್ದು ಎಲ್ಲಿ ಅನ್ಯಾಯಗಳನ್ನು ನೋಡುತ್ತೇವೆ, ದೌರ್ಜನ್ಯಗಳು ಎದುರಾಗುತ್ತೇವೆಯೋ ಅಲ್ಲಿ ಈ ಹಕ್ಕುಗಳು ಸಾಮಾಜಿಕ ನ್ಯಾಯ, ಬದುಕುವ ನ್ಯಾಯವನ್ನು ಒದಗಿಸಲು ಸಹಕಾರಿಯಾಗುವ ಪ್ರಭಲ ಸಂಸ್ಥೆ, ಆದರೆ ಇದನ್ನು ದುರುಪಯೋಗಪಡಿಸಿಕೊಂಡು ಎಲ್ಲೆಂದರಲ್ಲಿ ಈ ಕಾಯ್ದೆಯ ಗೌರವವನ್ನು ಸ್ವಂತದ ಹಿತಾಸಕ್ತಿಗೆ ಬಳಕೆಯಾಗುತ್ತಿರುವುದು ಬಹುತೇಕವಾಗಿ ಕಾಣ ಸಿಗುತ್ತವೆ ಇದನ್ನು ತಕ್ಷಣವೇ ನಿಲ್ಲಿಸಿ, ಮನುಷ್ಯ ಉಪಕಾರಿಯಾಗಿರುವ ಮಾನವ ಹಕ್ಕುಗಳ ಕಾಯ್ದೆಯನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದು ಜಫ್ರುಲ್ಲಾಖಾನ್ ವಿವರಿಸಿದರು.
ಜೆಸಿಐ ಶಿವಮೊಗ್ಗ ಶರಾವತಿ ಅಧ್ಯಕ್ಷರಾದ ಜ್ಯೋತಿ ಅರಳಪ್ಪನವರು ಮಾತನಾಡಿ, ಶಿವಮೊಗ್ಗದಲ್ಲಿ ತೆರೆಯಮರೆಯಲ್ಲಿದ್ದುಕೊಂಡು ಸಾಕಷ್ಟು ಜನೋಪಕಾರಿ ಕೆಲಸಗಳನ್ನು ಮಾಡುತ್ತಿದ್ದರು ಅವರು ಪ್ರಚಾರವನ್ನು ಬಯಸದೇ ತಮ್ಮ ವೃತ್ತಿಯ ಜೊತೆ-ಜೊತೆಗೆ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಆರ್.ಟಿಐ ಹಾಗೂ ಮಾನವ ಹಕ್ಕುಗಳ ಕಾಯ್ದೆಯಡಿ ಹೋರಾಟಗಳನ್ನು ರೂಪಿಸಿ ಒಂದಿಷ್ಟು ಇಲಾಖೆಗಳ ಭ್ರಷ್ಠಾಚಾರಗಳ ವಿರುದ್ದ ಹೋರಾಟ ನಡೆಸುತ್ತಿರುವುದು ಅಲ್ಲದೆ ಅಸಹಾಯಕ ಜನರ ದನಿಯಾಗಿ ಶ್ರಮಿಸುತ್ತಿರುವ ಬಹುಮುಖಿ ಸಮಾಜ ಸೇವಕರಾದ ಜಫ್ರುಲ್ಲಾಖಾನ್ರವರಿಗೆ ಸನ್ಮಾನಿಸುತ್ತಿರುವುದು ಸಂಸ್ಥೆಯ ಸೌಭಾಗ್ಯ ಎಂದು ಭಾವಿಸುತ್ತೇವೆ ಎಂದು ಜ್ಯೋತಿ ಅರಳಪ್ಪನವರು ತಿಳಿಸದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಜೆಸಿಐ ಶಿವಮೊಗ್ಗ ಶರಾವತಿ ಕಾರ್ಯದರ್ಶಿ ಶೋಭಾ ಸತೀಶ್ ಹಾಗೂ ಪಿಡಿ. ಜೆಸಿ ಮೋಹನ್ ಕಲ್ಪತರುರವರುಗಳು ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಆರ್ಥಿಕ ತೆರಿಗೆ ಮತ್ತು ಸಾಮಾಜಿಕ ನ್ಯಾಯ ವಿಷಯ ಕುರಿತಂತೆ ಸವಿವರವಾಗಿ ತಿಳಿಸಿದ ಜಫ್ರುಲ್ಲಾ ಖಾನ್ರವರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವುದಕ್ಕೆ ಅಭಿನಂದನೆಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಂತಿಮವಾಗಿ ಜಫ್ರುಲ್ಲಾಖಾನ್ರವರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜೆಸಿಐ ಉಪಾಧ್ಯಕ್ಷರುಗಳಾದ ಜೆಸಿ.ದಿವ್ಯಾ ಪ್ರವೀಣ್, ಜೆಸಿ. ಪರಮೇಶ್ವರ, ಹಾಗೂ ಬುಲೆಟಿನ್ ಎಡಿಟರ್ ಜೆಸಿ. ಗಾರಾ.ಶ್ರೀನಿವಾಸ್, ಖಜಾಂಚಿ ಜೆಸಿ.ಶಿವಣ್ಣ.ಎಸ್. ಜೆಸಿ. ಮಮತಾ ಶಿವಣ್ಣ, ಜೆಸಿ. ಆಶ್ವಿನಿ, ಜೆಸಿ ಎಂ.ಡಿ ಸಸ್ಯಲೈಪ್ ಯಾಹ್ಯರವರುಗಳು ಉಪಸ್ಥಿತರಿದ್ದರು
Discussion about this post