ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಪ್ರತಿಭಾನ್ವಿತ ಬ್ಲಾಕ್ ಬೆಲ್ಟ್ ಪಟು ಪುನೀತ್ Puneeth ನಿಧನರಾಗಿದ್ದು, ರಾಜ್ಯ ಕರಾಟೆ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ, ಪತ್ರಿಕಾ ಸಂಪಾದಕ ಶಿವಮೊಗ್ಗ ವಿನೋದ್ ಸಂತಾಪ ಸೂಚಿಸಿದ್ದಾರೆ.
ನಗರದ ನವುಲೆಯ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪುನೀತ್ ಮೃತಪಟ್ಟಿದ್ದು, ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಪುನೀತ್, ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
Also read: ಶಿವಮೊಗ್ಗ | ಕರಾಟೆ ಶಿಕ್ಷಕಿ ಮೀನಾಕ್ಷಿಗೆ ಶ್ರೇಷ್ಠನಾರಿ ಪ್ರಶಸ್ತಿ
ಪ್ರತಿಭಾನ್ವಿತ ಕ್ರೀಡಾ ಪಟು ಪುನೀತ್ ಅವರ ಕುಟುಂಬಕ್ಕೆ ಭಗವಂತನು ಈ ದುಃಖ ಭರಿಸುವ ಶಕ್ತಿ ನೀಡಲೆಂದು ಅವರು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post