ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿ ಮತ್ತು ಜೆಡಿಎಸ್ ಮುಖಂಡರುಗಳು ಅಪ್ರಬುದ್ಧರಾಗಿದ್ದು ರಾಜಕಾರಣದ ಹೆಜ್ಜೆಗಳನ್ನು ಇಡುತ್ತಿದ್ದಾರೆಯೇ ಹೊರತು, ಧರ್ಮದ ಹೆಜ್ಜೆಗಳಲ್ಲ ಜನರ ಆಶಯಗಳ ಕಡೆಗೆ ಅವರ ಗಮನವಿಲ್ಲ ವಿವಾದಗಳೇ ಇವರಿಗೆ ಮುಖ್ಯ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ವಾಗ್ಧಾಳಿ ನಡೆಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಡೀ ರಾಜ್ಯದಲ್ಲಿ ಅತಿವೃಷ್ಠಿಯಾಗುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಸಮಸ್ಯೆಗಳು ಬೇಕಾದಷ್ಟಿವೆ. ಆದರೆ ಇವೆಲ್ಲವನ್ನು ಬಿಟ್ಟು ವಿರೋಧ ಪಕ್ಷಗಳು ತಮ್ಮ ಸ್ಥಾನವನ್ನು ಮತ್ತು ವಿವೇಕವನ್ನು ಮರೆತು ಬೇಜವಾಬ್ದಾರಿಯಿಂದ ವರ್ತಿಸಿ ಸದನವನ್ನೇ ವ್ಯರ್ಥಗೊಳಿಸಿದರು. ಬಜೆಟ್ ಮಂಡನೆಯ ಸಂದರ್ಭದಲ್ಲೂ ವಿರೋಧ ಪಕ್ಷವಾಗಿ ಜನರ ಸಮಸ್ಯೆಗಳತ್ತ ಗಮನ ಸೆಳೆಯಲಿಲ್ಲ. ಬೇಡದ ಹನಿಟ್ರಾö್ಯಪ್ ವಿಚಾರ ಮಾತನಾಡಿ, ಹಲವು ಬಿಜೆಪಿ ಶಾಸಕರು ಸಸ್ಪೆಂಡ್ ಕೂಡ ಆದರು. ಬಿಜೆಪಿ ಮತ್ತು ಜೆಡಿಎಸ್ ಶಾಸಕರುಗಳಲ್ಲಿ ಪ್ರಬುದ್ಧತೆಯೇ ಇಲ್ಲ. ಇದ್ದವರು ಕೂಡ ಎಳಸಿನಂತೆ ಮಾತನಾಡುತ್ತಾರೆ. ನಾಯಕತ್ವದ ಪರಿಕಲ್ಪನೆಯೇ ಇಲ್ಲ ಅವರ ನಡೆ ಜನರ ಕಡೆ ಆಗಬೇಕು, ರೈತರ ಕಡೆ ಆಗಬೇಕು ಆದರೆ ಅವರ ಪಾದಯಾತ್ರೆಗಳು ಬೇರೆ ಬೇರೆ ದಿಕ್ಕಿನತ್ತ ಸಾಗುತ್ತಿವೆ ಎಂದರು.
ಧರ್ಮಸ್ಥಳಕ್ಕೆ #Dharmasthala ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಪಾದಯಾತ್ರೆ ಮಾಡುತ್ತಾರಂತೆ. ಇವರ ಈ ಹೆಜ್ಜೆಗಳು ರಾಜಕಾರಣದ ಹೆಜ್ಜೆಗಳೇ ಹೊರತು, ಧರ್ಮದ ಹೆಜ್ಜೆಗಳಲ್ಲ. ಈ ಹಿಂದೆ ಇವರು ಹಾಸನಕ್ಕೆ ಏಕೆ ಪಾದಯಾತ್ರೆ ಮಾಡಲಿಲ್ಲ. ಹಾಸನದಲ್ಲಿ ಇವರದೇ ಪಕ್ಷದ ಮುಖಂಡನೊಬ್ಬನ ಅತ್ಯಾಚಾರಗಳು, ಅನಾಚಾರಗಳು ನಡೆದವು. ನ್ಯಾಯಾಲಯ ಶಿಕ್ಷೆಕೊಟ್ಟರೂ ಅದನ್ನು ಗೌರವಿಸಲಿಲ್ಲ. ಸ್ತ್ರೀಯರನ್ನು ಗೌರವಿಸದ ಇವರ ಧರ್ಮದ ಹೆಜ್ಜೆ ಯಾವುದು ? ಈ ನಾಯಕರುಗಳಿಗೆ ರಾಜಕೀಯ ಚಹರೆಯೇ ಇಲ್ಲ ವಿವಾದಗಳನ್ನು ಸೃಷ್ಟಿಸುವುದೇ ಇವರ ಬೇಳೆಯಾಗಿದೆ. ಅದನ್ನು ಬೇಯಿಸಲು ಇವರು ಹೊರಟಿದ್ದಾರೆ ಎಂದರು.
ಹಾಗೆ ನೋಡಿದರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ #DCM D K Shivakumar ಮೊದಲು ಧರ್ಮಸ್ಥಳದ ಬಗ್ಗೆ ಮಾತನಾಡಿದರು. ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಎಂಬ ಮಾತನ್ನು ಇವರ ಹೇಳಿದ ಮೇಲೆ ಬಿಜೆಪಿಯವರಿಗೆ ಜ್ಞಾನೋದಯವಾಯಿತು. ಧರ್ಮಸ್ಥಳದ ಬಗ್ಗೆ ಏನಾದರೂ ಮತ್ತೆ ಪ್ರೀತಿ ಹುಟ್ಟಿದ್ದರೆ ಅದಕ್ಕೆ ಸರ್ಕಾರವೇ ಕಾರಣ. ಸರ್ಕಾರ ಎಸ್ಐಟಿಯನ್ನು ರಚನೆ ಮಾಡದೇ ಇದ್ದರೆ ಯಾವ ಸತ್ಯಗಳು ಹೊರಬರುತ್ತಿರಲಿಲ್ಲ. ಎಸ್ಐಟಿ ಇನ್ನು ಯಾವ ತೀರ್ಮಾನವನ್ನು ಕೊಟ್ಟಿಲ್ಲ. ಅಪರಾಧಿಗಳೆಂದು ಹೇಳುವವರು ಯಾರ ಬೆಂಬಲಿಗರಾಗಿದ್ದರು ಎಂದು ಬಿಜೆಪಿಯವರು ಯೋಚಿಸಬೇಕು. ಈ ತಿಮ್ಮಾರೆಡ್ಡಿ ಯಾರು ? ಗಿರೀಶ್ ಮಟ್ಟಣ್ಣ ಎಲ್ಲಿದ್ದ ? ಯಾವ ಪಕ್ಷದಲ್ಲಿದ್ದ ? ಇರ್ಯಾರು ಕಾಂಗ್ರೆಸ್ಪರ ಅಲ್ಲ, ಎಡಪಂಥೀಯರು ಅಲ್ಲ ಹಾಗಾಗಿ ಸ್ವಲ್ಪದಿನ ಕಾಯಲಿ ಸತ್ಯಗಳು ಹೊರಬರುತ್ತವೆ. ಹೆಗಡೆಯವರು ದೋಷಮುಕ್ತರಾಗುತ್ತಾರೆ ಎಂಬ ನಂಬಿಕೆ ನಮಗೂ ಇದೆ. ದೋಷಮುಕ್ತರಾಗಲಿ ಆದರೆ ತಪ್ಪು ಮಾಡಿದ್ದರೆ ಶಿಕ್ಷೆಯೂ ಆಗಲಿ ಎಂದರು.
ದಸರಾದ ಉದ್ಘಾಟನೆಗೆ ಲೇಖಕಿ ಬಾನುಮಸ್ತಾಕ್ ಅವರನ್ನು ಆಹ್ವಾನಿಸಿರುವುದಕ್ಕೆ ಬಿಜೆಪಿಯವರು ವಿನಾಕಾರಣ ಅಪಸ್ವರ ಎತ್ತುತ್ತಿದ್ದಾರೆ. ಒಬ್ಬ ಮಹಿಳೆ ಎಂಬ ಕಾರಣಕ್ಕೆ ಇದನ್ನು ಒಪ್ಪುತ್ತಿಲ್ಲ. ಈ ಹಿಂದೆ ನಿಸಾರ್ ಅಹ್ಮದ್ ಅವರನ್ನು ಇವರು ಒಪ್ಪಿದ್ದರು ತಾನೆ. ಈಗ ಯಾಕೆ ಇಲ್ಲ, ಯಾವುದೋ ಸಂದರ್ಭದಲ್ಲಿ ಕನ್ನಡ ಭಾಷೆಗೆ ಸಂಬAಧಿಸಿದAತೆ, ಭಾವುಟಕ್ಕೆ ಸಂಬAಧಿಸಿದAತೆ ಮಾತನಾಡಿದ್ದನ್ನು ತಳುಕು ಹಾಕುವುದು ಸರಿಯಲ್ಲ, ಸಾಹಿತ್ಯದ ಸಂದರ್ಭದಲ್ಲಿ ಬಂಡಾಯ, ದಲಿತ ಎಂಬ ಎಲ್ಲಾ ವಿರೋಬಾಸಗಳಿವೆ. ಅದನ್ನೇ ಇಟ್ಟುಕೊಂಡು ಈಗ ಟೀಕಿಸುವುದು ಎಷ್ಟರಮಟ್ಟಿಗೆ ಸರಿ ಎಂದರು.
ಮೈಸೂರು ಮಹಾರಾಜರೇ ತಮ್ಮ ಮೆರವಣಿಗೆಯಲ್ಲಿ ಆಗಿನ ದಿವಾನರಾಗಿದ್ದ ಮಿರ್ಜಾಇಸ್ಮಾಯಿಲ್ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡು ಅಂಬಾರಿ ಮೆರವಣಿಗೆಯಲ್ಲಿ ಸಾಗುತ್ತಿದ್ದರು. ಈ ಇತಿಹಾಸ ಇವರಿಗೆ ಗೊತ್ತಿಲ್ಲವೇ ? ರಾಜ ಪದ್ಧತಿ ರದ್ಧಾದ ಮೇಲೆ ಇದು ನಾಡಹಬ್ಬವಾಗಿದೆ. ಚಾಮುಂಡಿ ಬೆಟ್ಟದಲ್ಲಿ ಎಲ್ಲಾ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಬಾನುಮಸ್ತಾಕ್ ಮೆರವಣಿಗೆಗೆ ಚಾಲನೆ ನೀಡುತ್ತಾರೆ. ಅವರನ್ನು ಧರ್ಮದ ಪ್ರತಿನಿಧಿಯಾಗಿ ಆಯ್ಕೆಮಾಡಿಲ್ಲ. ಕನ್ನಡದ ಭಾಷೆಯನ್ನು ಪ್ರಪಂಚದ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಕ್ಕೆ ಮಾಡಲಾಗಿದೆ. ಅಷ್ಟಕ್ಕೂ ಅವರು ವಿವೇಕದ ಮಾತುಗಳನ್ನೇ ಆಡಿದ್ದಾರೆ. ನಾನು ಚಾಮುಂಡಿಗೆ ಹರಕೆ ಹೊತ್ತಿದ್ದೆ ಈಗ ಅದನ್ನು ತೀರಿಸಲೆಂದೇ ನನ್ನನ್ನು ಆಯ್ಕೆಮಾಡಿದ್ದಾರೆ ಎಂದು ಹೇಳಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್, ಕೆಪಿಸಿಸಿ ಸದಸ್ಯ ವೈ.ಹೆಚ್. ನಾಗರಾಜ್, ಜಿಲ್ಲಾ ವಕ್ತಾರ ರಮೇಶ್ ಶಂಕರಘಟ್ಟ, ಪ್ರಮುಖರಾದ ಜಿ.ಡಿ. ಮಂಜುನಾಥ್, ಧೀರರಾಜ್ ಹೊನ್ನವಿಲೆ, ಮಂಜುನಾಥ ಬಾಬು, ಆರ್. ರಾಜಶೇಖರ್, ಹಾಲೇಶ್, ಸ್ಟೆಲ್ಲಾ ಮಾರ್ಟಿನ್, ಪ್ರತಾಪ್, ಬಸವರಾಜ್ ಮುಂತಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















