ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕ್ರೀಡೆಯಿಂದ ದೇಹ, ಮನಸ್ಸು ಸದೃಢವಾಗುವರ ಜೊತೆಗೆ ಕಿನ್ನತೆ ದೂರವಾಗುತ್ತದೆ, ಬಾಲ್ಯದಲ್ಲೇ ಮಕ್ಕಳಿಗೆ ಕ್ರೀಡೆ ಬಗ್ಗೆ ಆಸಕ್ತಿಯನ್ನು ಬೆಳಸಬೇಕು ಎಂದು ಮಾಜಿ ಶಾಸಕ ಕೆ.ಬಿ .ಪ್ರಸನ್ನಕುಮಾರ್ Former MLA Prasannakumar ನುಡಿದರು.
ಅವರು ಇಂದು ಬೆಳಿಗ್ಗೆ ನಗರದ ರೋರ್ಸ್ ಕ್ಲಬ್ನ ಆವರಣದಲ್ಲಿ ಸ್ನೇಹಮಹಿ ಸಂಘದ ವತಿಯಿಂದ ಹಮ್ಮಿಕೊಳ್ಳಲಾದ ಎರಡು ದಿನಗಳ ಅಂತರ ಜಿಲ್ಲಾ ಮಟ್ಟದ ಸ್ನೇಹಮಹಿ ಇಂಡಿಪೆಂಡೆನ್ಸ್ ಡೇ ಕಪ್ ಓಪನ್ ಬ್ಯಾಟ್ಮಿಂಟನ್ ಕಪ್-2022ನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಿಂದ ಪರಸ್ಪರರಲ್ಲಿ ಸ್ನೇಹಮಹಿ ವಾತವಾರಣದಿಂದ ವೃದ್ಧಿಯಾಗಿ ಒಳ್ಳೆಯ ಸಂಪರ್ಕ ಸಿಗುತ್ತದೆ. ಈಗಾಗಲೇ ಶಿವಮೊಗ್ಗದಲ್ಲಿ ಸ್ನೇಹಮಹಿ ಸಂಘ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಾಗೂ ಪ್ರತಿ ವರ್ಷ ನಿರಂತರವಾಗಿ ವಿವಿಧ ರಾಜ್ಯಮಟ್ಟದ ಕ್ರೀಡೆಗಳನ್ನು ಆಯೋಜಿಸುತ್ತಾ ಬಂದಿರುವುದು ನಮ್ಮೆಲ್ಲರಿಗೂ ಹೆಮ್ಮೆಯಾಗಿದೆ. ಅಲ್ಲದೇ ಶಿವಮೊಗ್ಗದಲ್ಲಿ ರಾಜ್ಯ ಮತ್ತು ರಾಷ್ಟçಮಟ್ಟದ ಆಟಗಾರರು ತಮ್ಮ ಪ್ರತಿಭೆಯನ್ನು ತೋರಿಸಿ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ. ಈ ನಿಟ್ಟಿನಲ್ಲಿ ಇಂದು ವಿವಿಧ ಜಿಲ್ಲೆಗಳಿಂದ ಆಗಮಿಸಿದ ಎಲ್ಲಾ ಆಟಗಾರರು ಒಳ್ಳೆಯ ಪ್ರದರ್ಶನ ನೀಡಿ ರಾಷ್ಟ್ರಮಟ್ಟದಲ್ಲಿ ಆಡುವಂತ ಶಕ್ತಿ ಸಿಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಜೆ.ಡಿ.ಎಸ್.ನ ಮುಖಂಡರಾದ ರಾಜ್ಯ ಪ್ರಧಾನಕಾರ್ಯದರ್ಶಿ ಎಂ. ಶ್ರೀಕಾಂತ್ರವರು ಮಾತನಾಡುತ್ತಾ ರೋರ್ಸ್ ಕ್ಲಬ್ ಈಗಾಗಲೇ ಇಂತಹ ಕ್ರೀಡೆಗಳಿಗೆ ಸಹಕಾರ ನೀಡುತ್ತಾ ಬಂದಿದೆ. ಕ್ರೀಡೆ ನಮಗೆ ಸದಾ ಸಂತೋಷ ತರುವುದರ ಮುಖಾಂತರ ಒಳ್ಳೆಯ ವತಾವರಣವನ್ನು ಸೃಷ್ಟಿ ಮಾಡುತ್ತದೆ. ಈಗಾಗಲೇ ನಮ್ಮ ಜಿಲ್ಲೆಯ ಸಾಕಷ್ಟು ಕ್ರೀಡಾಪಟುಗಳಿಗೆ ಸಹಕಾರ ನೀಡಿ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸಲು ಸಹಕಾರ ನೀಡಿದ್ದೇವೆ ಎಂದು ನುಡಿದರು.
ಜಿಲ್ಲಾ ಸ್ಕೌಟ್ಸ್ & ಗೈಡ್ಸ್ನ ಮುಖ್ಯ ಆಯುಕ್ತ ಹೆಚ್.ಡಿ. ರಮೇಶ್ ಶಾಸ್ತ್ರಿ ಮಾತನಾಡಿ, ಕ್ರೀಡೆಯಿಂದ ವರ್ಷ ಕಾಮನ್ವೆಲ್ತ್ನಲ್ಲಿ ನಮ್ಮ ರಾಜ್ಯ ಹಾಗೂ ದೇಶದವರು ಅತೀ ಹೆಚ್ಚು ಪದಕಗಳನ್ನು ಗಳಿಸಿ ಹೆಮ್ಮೆಯಿಂದ ತಂದಿರುತ್ತಾರೆ ಹಾಗೆ ನಮ್ಮ ಜಿಲ್ಲೆಯಿಂದಲೂ ಕ್ರೀಡಾಪಟುಗಳು ಉನ್ನತ ಸ್ಥಾನಕ್ಕೆ ಹೋಗಲಿ ಅವರಿಗೆ ನಮ್ಮ ಸಹಕಾರ ಇರುತ್ತದೆ ಎಂದು ನುಡಿದರು.
Also read: ಉತ್ತಮ ಮಾರ್ಗದರ್ಶನದಿಂದ ಅದ್ಭುತ ಚಿಂತನೆಗಳು ಸಾಧ್ಯ: ನೃಪತುಂಗ
ಈ ಒಂದು ಟೂರ್ನಮೆಂಟ್ಗೆ ವಿವಿಧ ಜಿಲ್ಲೆಗಳಿಂದ ಮಹಿಳಾ ಕ್ರೀಡಾಪಟುಗಳು ಆಗಮಿಸಿದ್ದರು. ಈ ಒಂದು ಟೂರ್ನಿಯ ಅಧ್ಯಕ್ಷತೆಯನ್ನು ಸ್ನೇಹಮಹಿ ಸಂಘದ ಅಧ್ಯಕ್ಷ ಎಸ್. ಚಿನ್ನಪ್ಪ ವಹಿಸಿ ಮುಂದಿನ ದಿನಗಳಲ್ಲಿ ಇನ್ನು ರಾಜ್ಯಮಟ್ಟದ ಕ್ರೀಡೆಗಳನ್ನು ಆಯೋಜಿಸುವುದರಾಗಿ ನುಡಿದರು.
ವೇದಿಕೆಯಲ್ಲಿ ಉಪ ಮಹಪೌರ ಶಂಕರ್ ಗನ್ನಿ, ರೋರ್ಸ್ ಕ್ಲಬ್ಬಿನ ಉಪಾಧ್ಯಕ್ಷ ಕೆ. ರವಿ, ಖಜಾಂಚಿ ನಾಗರಾಜ್ ಪಾಟ್ಕರ್, ಜಿ. ವಿಜಯಕುಮಾರ್, ಎನ್. ರವಿಕುಮಾರ್, ಆಮ ಪ್ರಕಾಶ್, ವಿನಾಯಕ, ರಾಮು, ಎಂ.ಆರ್. ಬಸವರಾಜ್, ಸಹ ಕಾರ್ಯದರ್ಶಿ ಕೃಷ್ಣಣ್ಣ ಹಾಗೂ ರೋರ್ಸ್ ಕ್ಲಬ್ ಹಾಗೂ ಸ್ನೇಹಮಹಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post