ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ 20ನೇ ವಾರ್ಡ್ ಹೊಸಮನೆ ಬಡಾವಣೆಯಲ್ಲಿ ಪಾಲಿಕೆ ಅನುದಾನದಲ್ಲಿ ಬಂದಂತಹ 50 ಲಕ್ಷದ ವಿವಿಧ ಕಾಮಗಾರಿಗಳಾದ ಡಾ. ಬಾಬು ಜಗಜೀವನ್ ರಾಮ್ ರವರ ಸಭಾಂಗಣ, ಆಟೋ ನಿಲ್ದಾಣ, ಕನ್ಸರ್ವೆನ್ಸಿ ಅಭಿವೃದ್ಧಿ, ಪಾರ್ಕಿಗೆ ಚೈನ್ ಪೆನ್ಸಿಂಗ್ ಹಾಗೂ ಇತರೆ ಕಾಮಗಾರಿಗಳಿಗೆ ಪಾಲಿಕೆ ಸದಸ್ಯೆ ಹಾಗೂ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಬಡಾವಣೆಯ ಮುಖಂಡರಾದ ಕೆ ರಂಗನಾಥ್, ಆನಂದ್, ಜಯಮ್ಮ, ಮಾಲಮ್ಮ, ರಾಮ್ ಕುಮಾರ್, ಸುನಿಲ್, ನಾಗರಾಜು ಜಿ, ಮಾರುತೇಶ್, ಅನುಪ್, ಕೃಷ್ಣ, ಮಧು, ಶ್ರೀನಿವಾಸ್, ಡಿ ಜೆ ಮೂರ್ತಿ, ಚಂದ್ರುಗೆಡ್ಡೆ, ಗುತ್ತಿಗೆದಾರರಾದ ಶಿವಕುಮಾರ್, ಸದಾನಂದ, ಅರ್ಚಕರಾದ ಯೋಗೀಶ್ ಉಡುಪ ರವರು ಹಾಗೂ ಇತರರು ಇದ್ದರು.
Also read: ಹಜ್ ಯಾತ್ರಿಕರ ಅಂತಿಮ ಹಂತದ ತಂಡಕ್ಕೆ ಸಚಿವ ಜಮೀರ್ ಅಹಮದ್ ಬೀಳ್ಕೊಡುಗೆ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















