ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣದ ಸಹ ಸಂಚಾಲಕ ಎಚ್.ಆರ್. ತೀರ್ಥೇಶ್(ತೀರ್ಥಲಿಂಗಪ್ಪ) ಅವರನ್ನು ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್ಟ್ಟೈಸಿಂಗ್ ನಿಯಮಿತಕ್ಕೆ ನಾಮ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
ಈ ಕುರಿತಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಅಧೀನ ಕಾರ್ಯದರ್ಶಿಯವರು ಆದೇಶ ಹೊರಡಿಸಿದ್ದು, ಕಂಪನಿಯ ಸಂಘ ನಿಯಮಾವಳಿಗಳ ಅಂತರ ನಿಯಮ 5(ಎ) ರ ಅಡಿಯಲ್ಲಿ ರಾಜ್ಯಪಾಲರ ಆದೇಶಾನುಸಾರ ತೀರ್ಥೇಶ್ ಅವರನ್ನು ನೇಮಿಸಲಾಗಿದೆ.
ತೀರ್ಥೇಶ್ ಅವರನ್ನು ಸಚಿವರು, ಸಂಸದರು, ಶಾಸಕರು ಹಾಗೂ ಜಿಲ್ಲಾ ಬಿಜೆಪಿ ಮುಖಂಡರು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post