ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಾಜಿ ಉಪಪ್ರಧಾನಿ, ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತರತ್ನ ಗೌರವ ನೀಡಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಪ್ರಧಾನಿಯವರಿಗೆ ಮನವಿ ಮಾಡಿದ್ದಾರೆ.
ಅಡ್ವಾಣಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಅವರು ಮನವಿ ಮಾಡಿದ್ದಾರೆ.
ಹೀಗಿದೆ ಶಂಕರಮೂರ್ತಿಯವರು ಬರೆದ ಪತ್ರ ಯಥಾವತ್:
ನಮಗೆಲ್ಲಾ ತಿಳಿದಿರುವ ಹಾಗೆ ಶ್ರೀ ಲಾಲಕೃಷ್ಣ ಅಡ್ವಾಣಿ ಜಿ ಅವರು ಸಾಮಾಜಿಕ ಸೇವೆಯಲ್ಲಿ ಸುಮಾರು ಏಳು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಶ್ರೀ ಲಾಲಕೃಷ್ಣ ಅಡ್ವಾಣಿ ಜಿ ಅವರ ತ್ಯಾಗ ಮತ್ತು ಕೊಡುಗೆ ನಮ್ಮ ದೇಶಕ್ಕೆ ಅಪಾರ. ಭಾರತೀಯ ಜನಸಂಘ ಹಾಗೂ ಭಾರತೀಯ ಜನತಾ ಪಕ್ಷಕ್ಕೆ ಅವರ ಸೇವೆ ಅತ್ಯದ್ಭುತ.ಅವರ ನಿಷ್ಠೆ, ಪ್ರಾಮಾಣಿಕತೆ, ನಾಯಕತ್ವದ ಗುಣ, ಜ್ಞಾನ ಮತ್ತು ಅನುಭವ ಎಲ್ಲಾ ರೀತಿಯಿಂದಲೂ ದೇಶಕ್ಕೆ ಹಾಗೂ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ನಮ್ಮ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅಡ್ವಾಣಿ ಜಿಯವರು ನಮ್ಮ ದೇಶದ ಹೆಮ್ಮೆ. ಸಾಮಾಜಿಕ ಕ್ಷೇತ್ರದಲ್ಲಿ ಅವರ ಸೇವೆ ಅಪಾರ.
ಶ್ರೀ ಲಾಲಕೃಷ್ಣ ಅಡ್ವಾಣಿ ಜಿ ಅವರೊಂದಿಗೆ ನಾನು ಉತ್ತಮವಾದ ಒಡನಾಟವನ್ನು ಇಟ್ಟುಕೊಂಡಿದ್ದೆ. ನಾನು ಅವರ ಭಾಷಣಗಳನ್ನು ಸುಮಾರು 50 ವರ್ಷಗಳ ಕಾಲ ಅನು ವಾದಿಸುತ್ತಿದ್ದೆ.
ಶ್ರೀ ಲಾಲಕೃಷ್ಣ ಅಡ್ವಾಣಿ ಜಿ ಅವರು ಭಾರತ ರತ್ನ ಪ್ರಶಸ್ತಿಗೆ ಪಾತ್ರರಾಗಲು ಎಲ್ಲಾ ರೀತಿಯಿಂದಲೂ ಶ್ರೇಷ್ಠವೆಂದು ನನ್ನ ಅನಿಸಿಕೆ. ಕರ್ನಾಟಕದ ಸಾವಿರಾರು ಜನರ ಪರವಾಗಿ ಶ್ರೀ ಲಾಲಕೃಷ್ಣ ಅಡ್ವಾಣಿ ಜಿ ಅವರಿಗೆ ಭಾರತರತ್ನ ಕೊಡಬೇಕೆಂದು ನಾನು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.
-ಶ್ರೀ ಡಿ.ಎಚ್. ಶಂಕರಮೂರ್ತಿ
ಮಾಜಿ ಸಭಾಪತಿಗಳು
ವಿಧಾನ ಪರಿಷತ್
ಕರ್ನಾಟಕ ಸರ್ಕಾರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post