Read - 2 minutes
ಹೊಯ್ಸಳ ಕಾಲೇಜು ಪ್ರಾಂಶುಪಾಲ ಡಾ. ವಿಲಿಯಂ ಡಿಸೋಜಾ ಮಾತನಾಡಿ, ‘ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ. ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅವಮಾನ. ಹಣವಿದ್ದರೆ ಸಾಲದು, ವಿವೇಚನೆ ಇರಬೇಕು. ಕೌಶಲ ಇದ್ದರೆ ಸಾಲದು, ಜಾಣ್ಮೆ ಇರಬೇಕು ಎಂದರು.
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರು ಸಮಾಜಮುಖಿಯಾಗಿ ನಿಸ್ವಾರ್ಥವಾಗಿ ಸೇವಾ ಮನೋಭಾವದಿಂದ ದೇಶ ನಿರ್ಮಾಣ ಮಾಡಲು ಸಾಧ್ಯ. ಅಬಲರಿಗೆ ಬಲವಾಗಿ, ದಿಕ್ಕಿಲ್ಲದವರಿಗೆ ದಿಕ್ಸೂಚಿಯಾಗಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬಹುದು ಎಂದು ಅಪರ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳ್ಳಿ ಅವರು ತಿಳಿಸಿದರು.
ಸಹ್ಯಾದ್ರಿ ಕಾಲೇಜು ಆವರಣ, ಶಿವಮೊಗ್ಗ, ಇಲ್ಲಿ ನಡೆಯುತ್ತಿರುವ ಕುವೆಂಪು ವಿ. ವಿ. ಮಟ್ಟದ ಎನ್ಎಸ್ಎಸ್ ಶಿಬಿರದ ಐದನೇ 5ನೇ ದಿನದ ಎನ್ಎಸ್ಎಸ್ ಧ್ವಜಾರೋಹಣವನ್ನು ಸಹ್ಯಾದ್ರಿ ಕಾಲೇಜು, ಪಾಥ್ ವೇಸ್, ನಿರ್ದೇಶಕ ಡಾ. ಸಿ. ಕೆ. ರಮೇಶ್ ನೆರವೇರಿಸಿದರು.
ಕುವೆಂಪು ವಿವಿ ಎನ್ಎಸ್ಎಸ್ ಪೂರ್ವ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಕುಂದನ್ ಬಸವರಾಜ್ ಮಾತನಾಡಿ, ಮುಂದಿನ ಜೀವನಕ್ಕೆ ಎನ್ಎಸ್ಎಸ್ ಹೇಗೆ ಉಪಯುಕ್ತವಾಗುವುದು ಎಂದು ತಿಳಿಸಿದರು.
ಹೊಯ್ಸಳ ಕಾಲೇಜು ಪ್ರಾಂಶುಪಾಲ ಡಾ. ವಿಲಿಯಂ ಡಿಸೋಜಾ ಮಾತನಾಡಿ, ‘ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ. ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅವಮಾನ. ಹಣವಿದ್ದರೆ ಸಾಲದು, ವಿವೇಚನೆ ಇರಬೇಕು. ಕೌಶಲ ಇದ್ದರೆ ಸಾಲದು, ಜಾಣ್ಮೆ ಇರಬೇಕು ಎಂದರು.
ಪತ್ರಕರ್ತ ಗೋಪಾಲ್ ಯಡಗೆರೆ ಅವರು ಪತ್ರಿಕೋದ್ಯಮದಲ್ಲಿನ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಡಾ. ಪ್ರಕಾಶ್ ಮರ್ಗನಳ್ಳೀ, ಡಾ. ಶುಭ ಮರವಂತೆ, ಡಾ. ಹಾಲಮ್ಮ, ಡಾ. ಗಣೇಶ್ ಆರ್. ಕೆಂಚನಾಲ್, ಡಾ. ಪರಶುರಾಂ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post