Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಕಲಚೇತನರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ಸಕ್ಷಮ ಘಟಕದ ವತಿಯಿಂದ ಹಾರನಹಳ್ಳಿ ಹೋಬಳಿ ನಾಡ ಕಚೇರಿ ಉಪ ತಹಶೀಲ್ದಾರ್ ರವರಿಗೆ ಇಂದು ಮನವಿ ಸಲ್ಲಿಸಲಾಯಿತು.
ನಾಡ ಕಛೇರಿಗೆ ಬರುವ ವಿಕಲಚೇತನರಿಗೆ ಸರ್ಕಾರದ ನಿಯಮಾವಳಿ ಪ್ರಕಾರ ಓಡಾಡಲು ರ್ಯಾಂಪ್ ಇರುವುದಿಲ್ಲ. ಇದರಿಂದ ವಿಶೇಷಚೇತನರು ಕಛೇರಿಗೆ ಹೋಗಿ ಬರಲು ಕಷ್ಟವಾಗಿದೆ. ಭಾರತ ಸರ್ಕಾರದ ಅಡಿಯಲ್ಲಿ 2016ರ RPED ACTನಡಿ ರ್ಯಾಂಪ್, ವ್ಯವಸ್ಥೆ ವಿಶೇಷಚೇತನರಿಗೆ ಕಲ್ಪಿಸಬೇಕಾಗಿರುತ್ತದೆ. ಆದರೆ ಈ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಇದರಿಂದ ವಿಶೇಷಚೇತನರು ಕಛೇರಿಗೆ ಬಂದು ಹೋಗಲು ತುಂಬಾ ಕಷ್ಟವಾಗಿದೆ.

ಆದ್ದರಿಂದ ತಾವುಗಳು ದಯಮಾಡಿ ವಿಶೇಷಚೇತನ ಬಂಧುಗಳು ಕಛೇರಿಗೆ ಬಂದು ಹೋಗಲು ಓಡಾಡಲು ಕಛೇರಿಯಲ್ಲಿ ಪ್ರವೇಶ ದ್ವಾರ ಗೇಟ್ ಮತ್ತು ಕಛೇರಿ ಒಳಪ್ರವೇಶ ಜಾಗದಲ್ಲಿ ರ್ಯಾಂಪ್ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳುವುದರ ಜೊತೆಯಲ್ಲಿ ಹಾಗೂ ನಾಡ ಕಛೇರಿಯ ಮೂಲಕ ವಿಶೇಷಚೇತನರ ಮಂಜೂರಾತಿ ನೀಡಿದ ಪ್ರಕರಣದಲ್ಲಿ ಶೇ.75ರಷ್ಟು ನ್ಯೂನತೆಗಳನ್ನು ಹೊಂದಿದ್ದು, ಅವರಿಗೆ ಕೇವಲ 800 ಮಾಸಾಶನ ನೀಡುತ್ತಿದ್ದು, ವಿಶೇಷಚೇತನರು ಕೇಳಿದರೆ ಸರಿಯಾಗಿ ಕಛೇರಿಯಲ್ಲಿ ಸ್ಪಂಧಿಸುತ್ತಿಲ್ಲವೆAದು ಸಕ್ಷಮ ಸಂಸ್ಥೆಗೆ ವಿಶೇಷಚೇತನರು ಬಂಧುಗಳು ತಿಳಿಸಿರುತ್ತಾರೆ. ಶೇ.75ರಷ್ಟು ನ್ಯೂನತೆಗಳನ್ನು ಹೊಂದಿದ್ದರು ಹಾರನಹಳ್ಳಿ ವಾಸಿ ವಿಶೇಷಚೇತನ ಬಂಧುಗಳಿಗೆ ಮಾಸಾಶನ ರೂ 800 ಬರುತ್ತಿದೆ. ಶೇ.75ರಷ್ಟು ಪ್ರಮಾಣ ಹೊಂದಿದ ವಿಶೇಷಚೇತನರ ವೇತನ ರೂ 1400 ಮಂಜೂರಾತಿ ನೀಡಿಲು ಕ್ರಮ ಕೈಗೊಳ್ಳಬೇಕಾಗಿ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ. ಶಿವಮೊಗ್ಗ, ಮಂಜುನಾಥ್, ಆಯನೂರು ವಿಭಾಗದ ಯುವ ಸಕ್ಷಮದ ಕಾರ್ಯಕರ್ತರು ಹಾಗೂ ಸುರೇಶ್, ಪ್ರದೀಪ್ ಮುದ್ವಾಲ ಇದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Discussion about this post