No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
  • Advertise With Us
  • Grievances
  • About Us
  • Contact Us
Wednesday, July 8, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಪುರಂದರೋಪನಿಷತ್: ಪುರಂದರದಾಸರ ಆರಾಧನೆಗೆ ಓದಲೇಬೇಕಾದ ಲೇಖನ

kalpa News by kalpa News
January 20, 2023
in Special Articles
0
ಬೆಂಗಳೂರಿನಲ್ಲಿ ಜ.20ರಂದು ಲೋಕಾರ್ಪಣೆಯಾಗಲಿದೆ ದಾಸಶ್ರೇಷ್ಠ ಪುರಂದರದಾಸರ ಏಕಶಿಲಾ ಪ್ರತಿಮೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ  |

ಹರಿದಾಸ ಸಾಹಿತ್ಯವು ಎಂದಿಗೂ ಪ್ರಸ್ತುತವಾಗಿಯೇ ಇದೆ. ಹರಿದಾಸ ಸಾಹಿತ್ಯವು, ನಮ್ಮ ಜೀವನ ಹೇಗಿರಬೇಕೆಂಬುದನ್ನು ತಿಳಿಸುವ ಪ್ರಾಯೋಗಿಕವಾದ ಸಾಹಿತ್ಯವೆಂದರೆ ತಪ್ಪಾಗಲಾರದು.

ಈ ಸಾಹಿತ್ಯವು ಹರಿಭಕ್ತಿ, ಬೋಧನೆ, ಜ್ಞಾನ, ವೈರಾಗ್ಯ, ಧರ್ಮ ಇವುಗಳ ಸಂಪನ್ನತೆಯನ್ನು ಹೊಂದಿ ದಾಸ ಸಾಹಿತ್ಯದ ಪ್ರಚಾರಕರಾದ ಹರಿದಾಸರುಗಳು ಪರಮಾತ್ಮನ ಕೃಪಾಕಟಾಕ್ಷಕ್ಕಾಗಿ ತಮ್ಮ ಬದುಕನ್ನು ಮೀಸಲಾಗಿರಿಸಿದ್ದವರು.

ಇವರು ಸಾಧನೆಯ ಮೆಟ್ಟಿಲುಗಳನ್ನು ಕಾವ್ಯಾತ್ಮಕವಾಗಿ ಸಾಹಿತ್ಯದ ಮೂಲಕ ದೇಶದೆಲ್ಲೆಡೆಯಲ್ಲೂ ಭಿತ್ತರಿಸಿದರು. ಈ ದಾಸರುಗಳ ಪೈಕಿ ನಮ್ಮ ಪುರಂದರದಾಸರೂ ಒಬ್ಬರು. ಇವರು ತಮ್ಮ ಕೃತಿಗಳ ಮೂಲಕ ಸಮಾಜಕ್ಕೆ ಕೊಡುಗೆಗಳನ್ನು ಕೊಟ್ಟಿದ್ದಾರೆ ಎಂಬುದು ನಿಜ ಸಂಗತಿ. ಆದರೆ, ಇವರ ಕೃತಿಗಳಲ್ಲಿ ಅಡಗಿರುವ ಸಂದೇಶವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉಂಟು, ಇಲ್ಲವಾದರೆ ನಮ್ಮ ಜೀವನವು ಸಾರ್ಥಕತೆಯನ್ನು ಹೊಂದಲಾರದು.
ಪುರಂದರದಾಸರ ಕೃತಿಗಳ ಸಂಖ್ಯೆ 4,75,000 ಎಂದು ಅವರ ಜೀವನ ಚರಿತ್ರೆಯಲ್ಲಿ ಕಂಡುಬರುವುದು.

ಇವರು ಉಪನಿಷತ್ತಿನ ಸಾರವಾದ ಭಗವದ್ಗೀತೆಯನ್ನು ಶ್ರೀ ಕೃಷ್ಣನು ಅರ್ಜುನನಿಗಾಗಿ ತತ್ತ್ವಪೂರಿತವಾಗಿ, ಸತ್ಯಪರಿತವಾಗಿ, ಗುಹ್ಯಭಾಷೆ, ಸಮಾಧಿಭಾಷೆ, ದರ್ಶನಭಾಷೆಯಲ್ಲಿ ಉಪದೇಶ ಮಾಡಿರುವರು. ಆದರೆ, ಆ ಎಲ್ಲಾ ವಿಷಯಗಳು ಸಾಮಾನ್ಯ ಜನರಿಗೆ ಸುಲಭವಾಗಿ ತಿಳಿಯದ ಕಾರಣ ಕನ್ನಡದಲ್ಲಿ ತಮ್ಮ ಪದಗಳ ಮುಖಾಂತರ ಸರಳವಾಗಿ ಕನ್ನಡಿಯಲ್ಲಿ ಕರಿಯನ್ನು ತೋರಿದಂತೆ ತುಂಬಿಸಿಬಿಟ್ಟಿದ್ದಾರೆ ದಾಸರು. ಇದೊಂದು ದೊಡ್ಡ ಉಪಕಾರ ಮಾಡಿದ್ದಾರೆ ಎಂದರೆ ತಪ್ಪಾಗಲಾರದು.

ಆದ್ದರಿಂದ ದಾಸರ ಕೃತಿಗಳನ್ನು ನೋಡಿದ ಗುರುಗಳಾದ ಶ್ರೀ ವ್ಯಾಸರಾಯರು “ಪುರಂದರೋಪನಿಷತ್” ಎಂದು ಕರೆದರು. ಈ ಹೆಗ್ಗಳಿಕೆಗೆ ದಾಸವರ್ಯರು ಪಾತ್ರರಾದರು.

ಪುರಂದರದಾಸರು ತಮ್ಮ ಕೆಲವು ಕೃತಿಗಳಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಗೀತೆಯ ಉಪದೇಶಕ್ಕೆ ಅನ್ವಯವಾಗಿ ಕೃತಿಗಳ ಪ್ರಾರಂಭದಲ್ಲಿ ಅಥವಾ ಮಧ್ಯದಲ್ಲಿ ಪದಗಳನ್ನು ರಚಿಸಿ ಉಲ್ಲೇಖಗೊಳಿಸಿದ್ದಾರೆ.
ಅದನ್ನು ನಾವು ಯೋಗ ಗೀತೆಯ ಸಂದೇಶವೇನು? ಗೀತೆಯನ್ನು ಅನುಸರಿಸಿ ದಾಸರ ಗೀತೆ ಹೀಗೆ ನಿರೂಪಗೊಂಡಿದೆ ಎಂಬುದನ್ನು ಚಿಂತೆ ಮಾಡೋಣ.
ಕೃಷ್ಣನು ಅರ್ಜುನನನ್ನು ನಿಪ ಮಾಡಿಕೊಂಡು ಯುದ್ಧಭೂಮಿಯಲ್ಲಿ 17 ಅಧ್ಯಾಯಗಳಿಂದ ನಮ್ಮೆಲ್ಲರಿಗೂ ನೀಡಿದ ಉಪದೇಶ. ಅದರಲ್ಲಿ ಒಂದೆರಡನ್ನು ತಿಳಿಯಲು ಪ್ರಯತ್ನಿಸೋಣ.

ತಮ್ಮ ಬಂಧು ಬಳಗದವರ ಮೇಲಿರುವ ಮೋಹದಿಂದ ಉಂಟಾದ ಮನೋದೌರ್ಬಲ್ಯದಿಂದ ಕೃಷ್ಣನುನ್ನು ಕುರಿತು “ಕೃಷ್ಣ ನಾನು ಯುದ್ಧ ಮಾಡುವುದಿಲ್ಲ, ಇವರೆಲ್ಲರೂ ನನ್ನವರು, ಇವರನ್ನು ಕೊಂದು ನಾನು ಬದುಕುಳಿದರೆ ಏನು ಪ್ರಯೋಜನ? ಈ ಯುದ್ಧ ಬೇಡ ಎಂದು ವಿಷಾದ ಪಡಿಸುತ್ತಾ ನಿಷ್ಭಾತನಾದನು.

ಎರಡನೇ ಅಧ್ಯಾಯದಲ್ಲಿ ಕೃಷ್ಣನ ಮಾತು “ಅರ್ಜುನ ಇದು ಸರಿಯಲ್ಲ ಅನಗತ್ಯವಾದ ಹೆದರಿಕೆ, ಮೋಹ, ದುಃಖ ಬೇಡ. ಇದು ಧರ್ಮಯುದ್ಧ. ಈ ಯುದ್ಧವನ್ನು ನೀನು ತ್ಯಜಿಸಿದರೆ, ಅಧರ್ಮವಾಗುವುದು. ಧರ್ಮವನ್ನು ಗಳಿಸು ಉಳಿಸು” ಈ ಮಾತಿಗೆ ದಾಸರ ಅನ್ವಯ ಕೃತಿ
ಧರ್ಮವೆಂಬ ಸಂಬಳ ಗಳಿಸಿರೋ
ಹೆಮ್ಮೆಯಿಂದ ಈ ಶರೀರ ನಂಬಬೇಡಿರು || ಪ ||
ಅರ್ಜುನ ಯುದ್ಧ ಬೇಡ ಯುದ್ಧದಲ್ಲಿ ಇವರೆಲ್ಲ ಸಾಯುತ್ತಾರೆ ಎನ್ನುತ್ತೀಯಾ? ಜೀವ-ಪರಮಾತ್ಮ ಶಾಶ್ವತ, ಜಡ ಶರೀರಕ್ಕೆ ನಾಶ. ನಾಶವಾಗುವ, ನಿತ್ಯವಲ್ಲದ ಈ ಶರೀರಕ್ಕೆ ಏಕೆ ದುಃಖಪಡುವೆ ?

“ನಿತ್ಯವಲ್ಲ ಈ ಶರೀರ ಅನಿತ್ಯವೆಂದು ತಿಳಿಯಿರಯ್ಯ
ಹರಿಯ ನೆನೆಯಿರೋ ನಮ್ಮ ಹರಿಯ ನೆನೆಯಿರೋ”
“ಈ ಶರೀರದ ಬ್ರಾಂತಿ ಇನ್ನೇಕೆ ಮನವೆ? || ಪ ||
ವಾಸುದೇವನ ನೆನೆ ನೆನೆ ನೆನೆದು ಸುಖಿಯಾಗು ಮನವೆ”
ಮಾನವರು ಅವರವರ ವರ್ಣಕ್ಕೆ ತಕ್ಕಂತೆ ಕರ್ಮವನ್ನು ಮಾಡಬೇಕು “ಕ್ಷತ್ರಿಯರು ಯುದ್ಧದಲ್ಲಿ ಕಾದಾಡಬೇಕು ಉಳಿದರೆ ವೀರ ಮಾಡಿದರೆ ವೀರ ಸ್ವರ್ಗ, ಬ್ರಾಹ್ಮಣ ವೇದವನ್ನು ಓದಬೇಕು, ವೈಶ್ಯ ವ್ಯಾಪಾರ ಮಾಡಬೇಕು, ಶೂದ್ರನಾದವನು ವ್ಯವಸಾಯ ಮಾಡಬೇಕು”ಹೀಗಿದೆ ಚತುರ್ವರ್ಣದ ಕರ್ಮಗಳು.

ವೇದವ ನೋಡಿದ ವಿಪ್ರತಾನೇಕೆ
ಕಾದಲರಿಯತಾ ಕ್ಷತ್ರಿಯನೇಕೆ?
ಹರಿಯ ನೆನೆಯದ ನರಜನ್ಮವೇಕೆ?
ಅರ್ಜುನ! ಭೋಗಗಳಲ್ಲಿ ಆಸಕ್ತಿ ತೋರಿ ವಿವೇಕಗಳನ್ನು ಹಾಳು ಮಾಡಿಕೊಳ್ಳಬಾರದು ಪ್ರಾರಂಭದಲ್ಲಿ ಸುಖ ಕ್ರಮೇಣ ಅನುಭವಿಸಲಾರದಷ್ಟು ಕಹಿ. ಮಾನವನು ತನ್ನ ಹನ್ನೊಂದು ಇಂದ್ರಿಯಗಳನ್ನು ಹರಿ ಬಿಡದೆ ತೃಣೀಕರಿಸಿ, ಇಂದ್ರಿಯಗಳನ್ನು ನನ್ನತ್ತ ಹರಿಸಬೇಕು.

ವಿಷಯ ಭೋಗದ ತೃಣಕೆ ಉರಿಯಾಗಿ ಇರಬೇಕು
ಹಗಲು ನಿಷೇ ಶ್ರೀಹರಿ ನೆನೆ ನೆನೆದು ಸುಖಿಯಾಗಬೇಕು
ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ಫಲಾಪೇಕ್ಷೆ ಇಲ್ಲದೆ ಕರ್ಮವನ್ನು ಮಾಡಬೇಕು ಅರ್ಜುನ, ಅಂದರೆ ನಿಷ್ಕಾಮ ಕರ್ಮ ಮಾಡು ಇದೇ ಶ್ರೇಷ್ಠವಾದ ಕರ್ಮ. ಫಲಕೊಡುವವನು ನಾನಿರುವಾಗ ಏಕೆ ಯೋಚಿಸುವೆ?
“ಕೊಡುವ ಕರ್ತ ಬೇರೆ ಇರುತಿರೆ
ಬಿಡು ಬಿಡು ಚಿಂತೆಯನು
ಒಡೆಯನಾಗಿ ಮೂರ್ಜಗವನು ಪಾಲಿಪ
ಬಡವರಾಧಾರಿಯು ಭಕ್ತರ ಪ್ರಿಯನು”
ತತ್ತ್ವ ಜ್ಞಾನಕ್ಕೆ ಶರಣಾಗತನಾಗಬೇಕು. ಕರ್ಮಕ್ಕಿಂತ ತತ್ತ್ವ ಜ್ಞಾನ ದೊಡ್ಡದು. ತತ್ತ್ವ ಜ್ಞಾನ ಅಂದರೆ ನಾನು ಮಾಡುವ ಸ್ನಾನ, ಉಡುವುದು, ಊಟ ಮಾಡುವುದು, ಮಾತನಾಡುವುದು ಎಲ್ಲವೂ ಭಗವಂತನ ಇಚ್ಛೆ. ಅವನೇ ಕರ್ಮ ಮಾಡಿಸುವುದು. ಎಲ್ಲವೂ ಅವನ ಪೂಜೆ ಎಂಬ ಜ್ಞಾನ, ಮುಕ್ತಿಗೆ ಸೋಪಾನ.

ಜ್ಞಾನವೊಂದೇ ಸಾಕು
ಮುಕ್ತಿಗೆ ಇನ್ನೇನು ಬೇಕು ಹುಚ್ಚು ಮನವೇ
ಪತಿಸುತರನ್ನು ಅಗಲಬೇಡ
ಯತಿಯಾಗಿ ತಿರುಗಬೇಡ
ಸ್ವಕರ್ಮವನ್ನು ಭಗವಂತನ ಸೇವೆ ಎಂದು ಮಾಡು. ನಾನು ನನ್ನದು ಎಂಬ ಅಹಂಕಾರ ಮಮಕಾರಗಳನ್ನು ತೊರೆದು ಜೀವಿಸು.

ಸಕಲವೆಲ್ಲವೂ ಹರಿಯ ಸೇವೆಯೆನ್ನಿ
ರುಕ್ಮಿಣಿ ರಮಣ ವಿಠಲ ಇಲ್ಲದಿಲ್ಲವೆನ್ನಿ
ನುಡಿಗಳೆಲ್ಲ ನಾರಾಯಣನ ಕೀರ್ತನೆಯೆನ್ನಿ
ಕೊಡುವುದೆಲ್ಲ ಕಾಮಜನಕಕ್ಕೆ ಅರ್ಪಿತವೆನ್ನಿ.
ನಾನು ನನ್ನದು ಎಂಬ ನರಕದೊಳಗೆ ಬಿದ್ದು
ನೀನೇ ಗತಿ ಎಂದು ನಂಬಿದ ದಾಸನ ಮೇಲೆ
ಇನ್ನೂ ದಯಬಾರದೇ ದಾಸನ ಮೇಲೆ
ಹೀಗೆ ಕೃಷ್ಣಗೀತೆಯೆಂಬ ಅಮೃತೋಪದೇಶ ನೀಡಿದ. ದಾಸರು ಕೂಡ ಕೃಷ್ಣನ ಉಪದೇಶವನ್ನೇ ತಮ್ಮ ನುಡಿ ಮುತ್ತಿನಲ್ಲಿ “ಮನವೇ, ಮರುಳೇ, ಮಾನವನೇ, ಸ್ವಾಮಿ” ಎಂದು ಅನೇಕ ಶಬ್ದಗಳಲ್ಲಿ ತಿಳಿಸಿ ನಮ್ಮನ್ನು ಕೃತಾರ್ಥರನ್ನಾಗಿ ಮಾಡಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: bhagavad gitaDasa SahityaHaridasa SahityaKannada News WebsiteLatest News KannadaSpecial ArticleSri Purandaradasaruಪುರಂದರದಾಸರುಪುರಂದರೋಪನಿಷತ್ಭಗವದ್ಗೀತೆವಿಶೇಷ ಲೇಖನಶ್ರೀ ಕೃಷ್ಣಹರಿದಾಸ ಸಾಹಿತ್ಯ
Share215Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ವಿಕಲಚೇತನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ: ಶಿವಮೊಗ್ಗ ಜಿಲ್ಲಾ ಸಕ್ಷಮ ಘಟಕ ಮನವಿ

Next Post

ಆರ್ಥಿಕ ಪ್ರಗತಿ ಹೆಚ್ಚಿಸಲು ಬ್ಯಾಂಕಿನ ಸಿಬ್ಬಂದಿ ಸಹಕರಿಸಿ: ಕೆನರಾ ಬ್ಯಾಂಕ್ ಡಿಜಿಎಮ್ ಸಂದೀಪ್ ರಾವ್

kalpa News

kalpa News

Next Post
ಆರ್ಥಿಕ ಪ್ರಗತಿ ಹೆಚ್ಚಿಸಲು ಬ್ಯಾಂಕಿನ ಸಿಬ್ಬಂದಿ ಸಹಕರಿಸಿ: ಕೆನರಾ ಬ್ಯಾಂಕ್ ಡಿಜಿಎಮ್ ಸಂದೀಪ್ ರಾವ್

ಆರ್ಥಿಕ ಪ್ರಗತಿ ಹೆಚ್ಚಿಸಲು ಬ್ಯಾಂಕಿನ ಸಿಬ್ಬಂದಿ ಸಹಕರಿಸಿ: ಕೆನರಾ ಬ್ಯಾಂಕ್ ಡಿಜಿಎಮ್ ಸಂದೀಪ್ ರಾವ್

Leave a Reply Cancel reply

Your email address will not be published. Required fields are marked *

No Result
View All Result
ಫೆ.1 ರಿಂದ 7ರವರೆಗೆ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿ: ಡಿಸಿ ಪ್ರಭುಲಿಂಗ ಕವಳಿಕಟ್ಟಿ
English Articles

Shivamogga SIR | District Achieves 81% e-Form Distribution

by kalpa News
July 8, 2026
0

Kalpa Media House  | Shivamogga | As part of the Election Commission of India’s statewide Special Summary Revision of the...

Read moreDetails
Messi Creates History Again as Argentina Reach Quarterfinals

Messi Creates History Again as Argentina Reach Quarterfinals

July 8, 2026
Culture & Tradition Shine as Rudraksham Marks Milestone Achievement

Culture & Tradition Shine as Rudraksham Marks Milestone Achievement

July 8, 2026
MEIL Completes Historic Largest Concrete Pour for PHWR at Kaiga

MEIL Completes Historic Largest Concrete Pour for PHWR at Kaiga

July 6, 2026
SPARSH RR Nagar Launches 5 Plastic Surgery Clinics of Excellence

SPARSH RR Nagar Launches 5 Plastic Surgery Clinics of Excellence

July 4, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL