ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಜನತೆಗೆ ಕೈಗೆಟುಕುವ ದರದಲ್ಲಿ ನಿವೇಶನ ಹಾಗೂ ಸುಸಜ್ಜಿತ ಮನೆಗಳನ್ನು ಒದಗಿಸುವ ಉದ್ದೇಶದಿಂದ ಶಿವಮೊಗ್ಗದಲ್ಲಿ ಪ್ರಪ್ರಥಮ ಬಾರಿಗೆ RERA ನೋಂದಾಯಿತ ರಿಯಲ್ ಎಸ್ಟೇಟ್ ಸಲಹೆಗಾರ ಸಂಸ್ಥೆಯಾದ ‘ಬ್ರಿಕ್ ಅಂಡ್ ಸ್ಪೇಸ್’ ಶುಭಾರಂಭಗೊಂಡಿತು.
ಸಂಸ್ಥೆಯ ನೂತನ ಕಚೇರಿಯನ್ನು ಹಿರಿಯ ಉದ್ಯಮಿ ಎನ್. ಭೂಪಾಳಂ ಸತ್ಯನಾರಾಯಣ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯ ರುದ್ರೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, ಟಿ.ಡಿ. ಮೇಘರಾಜ್, ಎನ್.ಕೆ. ಜಗದೀಶ್, ಎಂ. ಶ್ರೀಕಾಂತ್, ಕೆ.ಜಿ. ಕುಮಾರಸ್ವಾಮಿ, ನರಸಿಂಹ ಗಂಧದಮನೆ, ಕಿರಣ್ ಫೆರ್ನಾಂಡಿಸ್, ಡಿ. ಅಂತೋನಿ, ಗಿರೀಶ್ ಪಟೇಲ್ ಹಾಗೂ ರತ್ನಾಕರ್ ಶೆಣೈ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಗಣ್ಯರು ಸಂಸ್ಥೆಯ ಸಂಸ್ಥಾಪಕ ರಘು ಭೂಪಾಳಂ ಹಾಗೂ ಪಾಲುದಾರರಾದ ಸುಮಲತಾ ಭೂಪಾಳಂ, ವಿನ್ಸೆಂಟ್ ರೋಡ್ರಿಗಸ್ ಮತ್ತು ಶ್ಯಾಮು ಅವರಿಗೆ ಶುಭ ಹಾರೈಸಿದರು.
Also read>> ಚಾಂಪಿಯನ್ ಯಾರು? ಇಂದು-ನಾಳೆ ‘ಸ ರಿ ಗ ಮ ಪ ಲಿಟಲ್ ಚಾಂಪ್ಸ್’ ಮಹಾ ಫೈನಲ್
ಕೈಗೆಟುಕುವ ದರದಲ್ಲಿ ಮನೆ ನಿರ್ಮಾಣಕ್ಕೆ ಆದ್ಯತೆ
ಸಂಸ್ಥೆಯ ಉದ್ದೇಶಗಳ ಕುರಿತು ಮಾತನಾಡಿದ ಪಾಲುದಾರ ವಿನ್ಸೆಂಟ್ ರೋಡ್ರಿಗಸ್, “ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಅವರ ಬಜೆಟ್ಗೆ ತಕ್ಕಂತೆ ಕೈಗೆಟುಕುವ ದರದಲ್ಲಿ ನಿವೇಶನ ಹಾಗೂ ಸುಸಜ್ಜಿತ ಮನೆಗಳನ್ನು ಒದಗಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ,” ಎಂದು ತಿಳಿಸಿದರು.
ಈಗಾಗಲೇ ಸಂಸ್ಥೆಯು ಕೋಟೆಗಂಗೂರು ಪ್ರದೇಶದ ಶರ್ಮಾ ಲೇಔಟ್ ಅನ್ನು ಗುರುತಿಸಿದ್ದು, ಇಲ್ಲಿ ₹54,99,999ಕ್ಕೆ 30×40 ಅಡಿ ನಿವೇಶನದಲ್ಲಿ ಎರಡು ಬೆಡ್ರೂಮ್ಗಳನ್ನು ಒಳಗೊಂಡ ಸುಸಜ್ಜಿತ ಮನೆ ನಿರ್ಮಿಸಿಕೊಡುವ ಯೋಜನೆ ರೂಪಿಸಲಾಗಿದೆ.
ನುರಿತ ಇಂಜಿನಿಯರ್ಗಳ ತಂಡದ ಮೂಲಕ ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಡುವ ಭರವಸೆಯನ್ನು ಸಂಸ್ಥೆ ನೀಡಿದೆ ಎಂದು ಅವರು ಹೇಳಿದರು.
ಶಿವಮೊಗ್ಗ ನಗರದ ವಿವಿಧ ಭಾಗಗಳಲ್ಲಿಯೂ ಇದೇ ಮಾದರಿಯ ಯೋಜನೆಗಳನ್ನು ಮುಂದುವರಿಸುವ ಉದ್ದೇಶ ಸಂಸ್ಥೆ ಹೊಂದಿದೆ. ಮಧ್ಯಮ ವರ್ಗದ ಹಾಗೂ ಸಾಮಾನ್ಯ ಕುಟುಂಬಗಳ ಸ್ವಂತ ಮನೆ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸಲಿದೆ ಎಂದು ವಿನ್ಸೆಂಟ್ ರೋಡ್ರಿಗಸ್ ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








