ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದಿನ ಈ ಮುಂದುವರೆದ ಕಾಲಘಟ್ಟದಲ್ಲೂ ಸಹ ಲಿಂಗ ತಾರತಮ್ಯ ಹೋಗಲಾಡಿಸಲು ಹಾಗೂ ಸ್ತ್ರೀಯರು ಕಾನೂನಿನ ಬಗ್ಗೆ ಹೆಚ್ಚಿನ ಅರಿವು ಮೂಡಿಸಿಕೊಂಡಾಗ ಸ್ವಯಂ ರಕ್ಷಣೆಗೆ ಹೆಚ್ಚು ಬಲ ಬರುತ್ತದೆ ಎಂದು ಕಾನೂನು ಪ್ರಾಧ್ಯಾಪಕಿ ಡಾ.ಅನಲ ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ International Women’s Day ಅಂಗವಾಗಿ ಸುಬ್ಬಯ್ಯ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ Subbaiah Medical College ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Also read: ಉತ್ತರ ಪ್ರದೇಶದಲ್ಲಿ ಯೋಗಿ ನಾಗೋಲೋಟ: ಮುನ್ನಡೆಯಲ್ಲಿ ತೂರಿಹೋಗುತ್ತಿವೆ ಇತರೆ ಪಕ್ಷಗಳು
ಇಂದು ಪ್ರಪಂಚದ ಎಲ್ಲಾ ದೇಶಗಳು ಅಭಿವೃದ್ಧಿಯಲ್ಲಿ ಸಾಗ್ತಿದ್ದರೂ ಮಹಿಳೆಯರಿಗೆ ಸರಿಯಾದ ಹಕ್ಕು ಸಿಗುತ್ತಿಲ್ಲ. ಹಕ್ಕಿಗಾಗಿ ಹೋರಾಟ ಮುಂದುರೆದಿದೆ. ಮಹಿಳೆಯರಿಗಿರುವ ಹಕ್ಕುಗಳು ಮತ್ತು ಗೌರವದ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ‘ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ’ ಥೀಮ್ ನಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಮಹಿಳೆ ಇಂದು ಸಮಾಜದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಿ, ಗುರುತಿಸಿಕೊಂಡಿದ್ದರೂ ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿ ಪ್ರತಿವರ್ಷ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿ ಸಮಾಜದಲ್ಲಿ ಪುರುಷರಿಗೆ ಸಮನಾಗಿ ಆಕೆಯ ಸಾಧನೆ, ತ್ಯಾಗವನ್ನು ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಇಂದು ಪರಿಸರ ಮಾಲಿನ್ಯ ಹಾಗೂ ಕಲುಶಿತದ ವಿಚಾರದಷ್ಟ್ಟೆಲಿಂಗ ಅಸಮಾನತೆಯೂ ಸಹ ಅಷ್ಟೇ ಗಂಭೀರವಾದುದು. ಪುರುಷರಿಗಿಂತಲೂ ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಿದ್ದು, ಆಕೆ ದುರ್ಬಲಳಾಗಿ ಕಾಣುತ್ತಿದ್ದಾಳೆ. ಈ ಪರಿಸ್ಥಿತಿ ಬದಲಾಗಬೇಕಿದ್ದು, ಇದಕ್ಕೆ ಬೇಕಿರುವ ಸಂಪನ್ಮೂಲಗಳ ಕ್ರೋಢೀಕರಣವಾಗಿ, ಆಕೆ ಸ್ವತಂತ್ರವಾಗಿ ಸಾಧನಾಪಥದತ್ತ ಸಾಗುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಐಎಫ್’ಎಸ್’ನಂತಹ ಉನ್ನತ ಹುದ್ದೆಗಳಲ್ಲೂ ಸಹ ಲಿಂಗ ತಾರತಮ್ಯವಿತ್ತು. ದೇಶದಲ್ಲೇ ಸಂಚಲನ ಮೂಡಿಸಿದ್ದ ಮುತ್ತಮ್ಮ ಪ್ರಕರಣದಿಂದ ಇದು ಪರಿಹಾರವಾಗಿ ಇಂದು ಇಂತಹ ಹುದ್ದೆಯಲ್ಲೂ ಸಹ ಮಹಿಳೆಯರು ತಮ್ಮ ಛಾಪು ಮೂಡಿಸುತ್ತಿರುವುದು ಪ್ರೇರಣದಾಯಕ.
-ಡಾ. ಅನಲ
Also read: ಪಂಜಾಬ್’ನಲ್ಲಿ ಅಧಿಕಾರದತ್ತ ಎಎಪಿ ದಾಪುಗಾಲು? ಮುನ್ನಡೆ ಕಾಯ್ದುಕೊಂಡ ಕೇಜ್ರಿವಾಲ್ ಪಕ್ಷ
ಮಹಿಳೆಯರ ರಕ್ಷಣೆಗಾಗಿ ಸಂವಿಧಾನ ಹಾಗೂ ಕಾನೂನಿನಲ್ಲಿರುವ ಕಲಂಗಳು ಹಾಗೂ ಅವಕಾಶಗಳ ಬಗ್ಗೆ ಅವರು ತಿಳಿಸಿಕೊಟ್ಟರು.
ಡಾ.ವಿನಯಾ ಶ್ರೀನಿವಾಸ್ ಮಾತನಾಡಿ, ಸಮಾಜದಲ್ಲಿ ತಮ್ಮದೇ ಆದ ಸಾಧನೆ ಮಾಡಿರುವ ಮಹಿಳೆಯರನ್ನು ಗುರುತಿಸಿ ಪ್ರಶಂಸೆ, ಸನ್ಮಾನಗಳನ್ನು ಮಾಡಿದಾಗ ಅದು ಇತರರಿಗೆ ಪ್ರೇರಣೆಯಾಗುತ್ತದೆ. ಸಾಧಕ ಮಹಿಳೆಯರ ಹಾದಿ, ಹೆಜ್ಜೆ ಗುರುತಿನ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸುವಂತಾಗಬೇಕು. ಅಲ್ಲದೇ, ಸ್ತ್ರೀಯರು ತಮ್ಮ ರಕ್ಷಣೆ ಹಾಗೂ ಸ್ವಾತಂತ್ರಕ್ಕಾಗಿ ಇರುವ ಕಾನೂನುಗಳ ಬಗ್ಗೆ ತಿಳಿದುಕೊಂಡಾಗ ಮಹಿಳಾ ಸಬಲೀಕರಣ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಸ್. ಸುರೇಶ್, ಉಪಪ್ರಾಂಶುಪಾಲ ಡಾ.ಮಿಥುನ್ ಸೇರಿದಂತೆ ಎಲ್ಲ ವಿಭಾಗದ ವೈದ್ಯರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post