ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಪ್ರತಿಷ್ಠಿತ ಕಾಲೇಜ್ ಆದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ರಾಘವೇಂದ್ರ ಶೇಟ್ ಅವರು ಮಂಡಿಸಿದ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ Kuvempu University ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ. ಅವಿನಾಶ್ ಅವರು ರಾಘವೇಂದ್ರ ಶೇಟ್ ಅವರಿಗೆ ಮಾರ್ಗದರ್ಶನ ಮಾಡಿದ್ದಾರೆ.
Also read: ಮೇ.9ರಂದು ಚಿತ್ರದುರ್ಗದಲ್ಲಿ ಬಿಎಸ್ವೈ ಅಭಿಮಾನೋತ್ಸವ: ಶಾಸಕ ಅರಗ ಜ್ಞಾನೇಂದ್ರ
ತಮ್ಮ ಪ್ರಬಂಧಕ್ಕೆ ರಾಘವೇಂದ್ರ ಶೇಟ್ ಅವರು ಪಡೆದ ಡಾಕ್ಟರೇಟ್ ಪದವಿಯನ್ನು ನಿನ್ನೆ ನಡೆದ 35ನೇ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಾಯಿತು.
ರಾಘವೇಂದ್ರ ಶೇಟ್ ಅವರು ಅನಂತ ಎಂ. ಶೇಟ್ ಕೋನಹಳ್ಳಿ ಮತ್ತು ಶಾಂತಿಬಾಯಿ ಎ. ಶೇಟ್ ದಂಪತಿ ಪುತ್ರರಾಗಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















