ಕಲ್ಪ ಮೀಡಿಯಾ ಹೌಸ್ | |
ಬಜರಂಗದಳ ಕಾರ್ಯಕರ್ತ ಹರ್ಷನ ಭೀಕರ ಹತ್ಯೆ #Bajarangadal activist Harsha murder in Shivamogga ಹಿನ್ನೆಲೆಯಲ್ಲಿ ನಸುಕಿನಲ್ಲಿ ಕೊಂಚ ತಣ್ಣಗಿದ್ದ ಶಿವಮೊಗ್ಗ ದಿಢೀರನೆ ಹೊತ್ತಿ ಉರಿಯುತ್ತಿದ್ದು, ಹಿಂಸಾರೂಪ ಪಡೆದುಕೊಂಡಿದೆ.
ಇಂದು ಮುಂಜಾನೆ ಮೃತ ಹರ್ಷನ ಪಾರ್ಥಿವ ಶರೀರದ ಮೆರವಣಿಗೆ ನಡೆಯುತ್ತಿದ್ದ ವೇಳೆ ಎನ್.ಟಿ. ರಸ್ತೆಯಲ್ಲಿ ಕಿಡಿಗೇಡಿಗಳು ಏಕಾಏಕಿ ಕಲ್ಲು ತೂರಾಟ ಆರಂಭಿಸಿದರು. ಬಿಗಿ ಪೊಲೀಸ್ ಭದ್ರತೆ #Tight Police security ಇದ್ದರೂ ಲೆಕ್ಕಿಸದೆ ಮನಸೋಯಿಚ್ಛೇ ಕಲ್ಲು ತೂರಾಟ ನಡೆಸಿದ್ದಾರೆ.
ಸೀಗೆಹಟ್ಟಿ ಭಾಗದಲ್ಲಿ ಹಲವು ವಾಹನಗಳು, ಹಣ್ಣಿನ ಅಂಗಡಿಗಳು ಸೇರಿದಂತೆ ಹಲವು ಅಂಗಡಿಮುಂಗಟ್ಟುಗಳಿಗೆ ಬೆಂಕಿ ಹಚ್ಚಲಾಗಿದೆ. ಮೃತ ಹರ್ಷನ ಮನೆ ಹಾಗೂ ರಸ್ತೆಯಲ್ಲಿ ಕಲ್ಲು ತೂರಾಟ ನಡೆದಿದ್ದರೆ, ಇಂತಹದೇ ಪರಿಸ್ಥಿತಿ ಆಜಾದ್ ನಗರದಲ್ಲೂ ನಡೆದಿದೆ.
Also read: ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ: ಸಿಎಂ ಬೊಮ್ಮಾಯಿ ಮೊದಲ ಪ್ರತಿಕ್ರಿಯೆಯೇನು?
ಹಳೆಯ ಶಿವಮೊಗ್ಗ ಭಾಗದ ಹಲವೆಡೆ ಹಿಂಸಾಚಾರ ಭುಗಿಲೆದ್ದಿದ್ದು, ರ್ಯಾಪಿಡ್ ಆಕ್ಷನ್ ಫೋರ್ಸ್ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ಇದ್ದರೂ, ಇವರುಗಳ ಕಣ್ಣೆದುರಿಗೆ ಕಿಡಿಗೇಡಿಗಳು ಸಿಕ್ಕ-ಸಿಕ್ಕ ಅಂಗಡಿ ಮುಂಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ಭದ್ರತಾ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.
ಪತ್ರಿಕಾ ಛಾಯಾಗ್ರಾಹಕ ನಿಂಗನಗೌಡ ತಲೆಗೆ ಗಂಭೀರ ಗಾಯ:
ಇನ್ನು ಹಳೆ ಶಿವಮೊಗ್ಗ ಭಾಗದಲ್ಲಿ ಗಲಭೆಯ ವರದಿ ಮಾಡಲು ತೆರಳಿದ್ದ ಪತ್ರಿಕಾ ಛಾಯಾಗ್ರಾಹಕ ನಿಂಗನಗೌಡ ಅವರ ತಲೆಗೆ ಗಂಭೀರ ಪೆಟ್ಟುಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post