No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
  • Advertise With Us
  • Grievances
  • About Us
  • Contact Us
Tuesday, July 21, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಅಂಕಣ ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಶ್ರಾವಣ ಸಾಕ್ಷಾತ್ಕಾರ-1: ಹಲವು ವೈಶಿಷ್ಟ್ಯಗಳ ಮಾಸವನ್ನು ಸಂಭ್ರಮದಿಂದ ಸ್ವಾಗತಿಸೋಣ

kalpa News by kalpa News
July 19, 2020
in ಡಾ.ಗುರುರಾಜ ಪೋಶೆಟ್ಟಿಹಳ್ಳಿ
0
ಶ್ರಾವಣ ಸಾಕ್ಷಾತ್ಕಾರ-1: ಹಲವು ವೈಶಿಷ್ಟ್ಯಗಳ ಮಾಸವನ್ನು ಸಂಭ್ರಮದಿಂದ ಸ್ವಾಗತಿಸೋಣ

Internet Image

Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಆಶಾಢ ಕಳೆದ ನಾಳೆಯಿಂದ ಶ್ರಾವಣ ಮಾಸ ಆರಂಭವಾಗುತ್ತಿದೆ. ಹಿಂದೂ ಧರ್ಮದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿರುವ ಈ ಮಾಸದ ವಿಶೇಷತೆಯ ಕುರಿತಾಗಿ ಇಂದಿನಿಂದ ಸರಣಿ ಲೇಖನವನ್ನು ಪ್ರಕಟಿಸುತ್ತಿದ್ದೇವೆ.

ಶ್ರಾವಣವೆಂದರೆ ಪ್ರಸನ್ನ ಚಿತ್ತದ ಭಕ್ತಿಯ , ಸಾತ್ವಿಕ ಮಾತುಗಳ ಶ್ರವಣದ, ಸಾಲು ಸಾಲು ಸಂಭ್ರಮದ ಮಾಸ. ಸಂಪ್ರದಾಯ -ಸಂಸ್ಕೃತಿಗಳ ಅನಾವರಣ ಈ ಮಾಸದಲ್ಲಿಯೇ ಇದು ಆಷಾಢದ ಬೇಸರವನ್ನು ಮರೆಸುವ ಉತ್ಸಾಹದ ಹೆಬ್ಬಾಗಿಲು. ಶ್ರಾವಣವೆನ್ನುವುದು ನಮ್ಮ ಮನಸಿನ ಹಿತಕ್ಕೆ, ನಮ್ಮ ಅಭಿರುಚಿಯ ಅನನ್ಯತೆಗೆ ಮತ್ತು ನಮ್ಮ ಜೀವನೋತ್ಸಾಹಕ್ಕೆ ಒಂದು ರೂಪಕ. ಇಂಥ ಶ್ರಾವಣವನ್ನು ಕುರಿತು ಒಂದು ಉಲ್ಲಾಸಪೂರ್ಣ ಲಹರಿ. ಈ ಮಾಸದ ವಿಶೇಷತೆ ಮತ್ತು ಅನನ್ಯತೆಯ ಕುರಿತು ಇದೋ ಇಲ್ಲಿದೆ.

ಸಂಭ್ರಮದ ಸಂಕ್ರಮಣ ಈ ಶ್ರಾವಣ, ಉತ್ಸಾಹದ ಹೂರಣ, ರಮ್ಯತೆಯ ಬಿನ್ನಾಣ ಸಂತಸಕೆ ಕಾರಣ.

ಆಷಾಢದ ನಂತರ ಬರುವ ಶ್ರಾವಣದಲ್ಲಿ ಸೂರ್ಯ ಪ್ರಖರತೆ ಹೊಂದದೆ ನವಿರಾದ ಹೂಬಿಸಿಲುನೊಂದಿಗೆ ನೆರಳಿನಾಟನಾಡುವನು, ಆಗಾಗ ತುಂತುರು ಮಳೆಯ ತುಷಾರ ಸಿಂಚನ, ತುಂಬಿ ಹರಿಯುವ ನದಿ ತೊರೆಗಳ ಜುಳು ಜುಳು ನಿನಾದ, ಸಂಪಿಗೆ ಕೇದಿಗೆ ಸೇವಂತಿಗೆ ಸುಮಧುರ ವಾಸನೆಯೊಂದಿಗೆ ಭೂದೇವಿಯು ಹೊಸ ಉಡುಗೆ ಉಟ್ಟು ನಲಿಯುವಂತೆ ಭಾಸವಾಗುವ ಕಾಲ ಧಾರ್ಮಿಕವಾಗಿಯೂ ಬಹಳ ಮಹತ್ವದ್ದು . ಹಿಂದೂ ಪಂಚಾಂಗದ ಪ್ರಕಾರ ಇದು ಐದನೇ ಮಾಸ.

ನಿಸರ್ಗದ ಜೊತೆ ನೇರ ಸಂಬಂಧ ಹೊಂದಿರುವ ಜನಪದರಲ್ಲಿ ಶ್ರಾವಣ ಸಂಭ್ರಮ ವೈವಿಧ್ಯಮಯವಾಗಿದೆ. ಶ್ರಾವಣ ಇಡೀ ನಿಸರ್ಗ ರಮಣಿ ಹಸಿರು ಸಿರಿಯುಟ್ಟು ಕುಣಿದು ಕುಪ್ಪಳಿಸಿ ಹಾಡುವ ಕಾಲ. ಕೃಷಿಕರು, ಸುಮಂಗಲೆಯರು, ಸನ್ಯಾಸಿಗಳು, ಗೃಹಸ್ಥಾಶ್ರಮಿಗಳು ಸರ್ವರಿಗೂ ಈ ತಿಂಗಳು ಒಂದಲ್ಲ ಒಂದು ವ್ರತ. ನಿಯಮದಲ್ಲಿ ತೊಡಗಿರುತ್ತಾರೆ. ಶ್ರಾವಣ ತಿಂಗಳಿಡೀ ಹಬ್ಬಗಳೋ ಹಬ್ಬಗಳು. ವರಮಹಾಲಕ್ಷ್ಮಿ ವ್ರತ. ಸಂಪದ ಗೌರೀ ವ್ರತ, ಮಂಗಳಗೌರಿವ್ರತ, ಗಾಯತ್ರಿ ಆರಾಧನೆ. ಅಂದರೆ ಶ್ರಾವಣ ಮಾಸ ಬರೀ ಧಾರ್ಮಿಕ ವ್ರತ. ಹಬ್ಬಗಳ ತಿಂಗಳು ಮಾತ್ರವಲ್ಲ ಎಲ್ಲರೂ ಕೂಡಿ ಸಹಕಾರದಿಂದ ಬಾಳು ತಿಳಿವಳಿಕೆ ನೀಡುವ ತಿಂಗಳು. ಈ ದೃಷ್ಟಿಯಿಂದ ಶ್ರಾವಣ ಹೆಚ್ಚು ಅರ್ಥಪೂರ್ಣ. ಪ್ರಕೃತಿಯೊಂದಿಗೆ ಒಂದಾಗು ಬಾಳು, ಗೃಹಸ್ಥಾಶ್ರಮಿಯಾಗಿ ಹೊಂದಿಕೊಂಡು ಬದುಕು, ಸನ್ಯಾಸಿಯಾಗಿ ಅಧ್ಯಯನ ಮಾಡು ಎಂದು ಸಂದೇಶ ನೀಡುವ ಶ್ರಾವಣ ಬದುಕಿನ ಒಂದು ಮಧುರ ಅಧ್ಯಾಯ.

ಶ್ರಾವಣ ಮಾಸ ಬಂತೆಂದರೆ ಹಬ್ಬ-ಹರಿದಿನಗಳ ಹಾಗೂ ಶುಭ ಕಾರ್ಯಗಳ ಮೆರವಣಿಗೆಯೇ ನಡೆಯುತ್ತಾದೆ! ದೇವತೆಗಳು ಸಾಲುಸಾಲಾಗಿ ಬಂದು ಪೂಜೆಯನ್ನೊಪ್ಪಿಕೊಂಡು ವರ ನೀಡುವ ಈ ಮಾಸ ಭಕ್ತರ ಪಾಲಿಗೆ ಸುಗ್ಗಿಕಾಲವೇ ಸರಿ! ಹೆಂಗಳೆಯರ ಜರತಾರಿ ಸೀರೆಗಳು, ಮಿನುಗುವ ಒಡವೆಗಳು, ಕೈಬಳೆಗಳ ಸಪ್ಪಳ, ಕಾಲ್ಗಿಜ್ಜೆಗಳ ಝೇಂಕಾರ, ಹಾಡು-ಭಜನೆ-ಸ್ತೋತ್ರ-ಮಂತ್ರಗಳ ಕಥಾ ಲಾಪಗಳ ಮಂಗಳಕರ ದನಿ ಪರಿಸರದಲ್ಲಿ ರಂಗೇರಿಸುತ್ತವೆ. ಬಗೆಬಗೆಯ ಗೀತನೃತ್ಯ ಕಾರ್ಯಕ್ರಮಗಳು ಬೀದಿ-ಬಡಾವಣೆಗಳಲ್ಲಿ ಮೊಳಗುತ್ತಿರುತ್ತವೆ. ಎಳೆಯ ತಳಿರು, ಮಾವಿನ ತೋರಣ, ಬಣ್ಣದ ರಂಗೋಲಿ, ಬಾಳೆಕಂಬ, ದೀಪಗಳ ಹೊಂಬೆಳಕು, ಧೂಪಗಳ ಸುವಾಸನೆ, ಅರಸಿನ- ಕುಂಕುಮ- ಗಂಧ-ಚಂದನ- ಹೂವು-ಹಣ್ಣುಗಳು ಪರಿಸರವನ್ನು ಶೋಭೆಗೊಳಿಸುತ್ತವೆ. ಭಕ್ಷ್ಯ- ಭೋಜ್ಯ-ಪೇಯಗಳಿಂದ ಕೂಡಿದ ಮೃಷ್ಟಾನ್ನಭೋಜನದ ಮನಮೋಹಕ ಪರಿಮಳ ಎಲ್ಲರನ್ನೂ ಅಹ್ವಾನಿಸುತ್ತಿರುತ್ತವೆ! ಏನಿಲ್ಲ ಎಂದರೂ ಮಾಮೂಲಿ ಅನ್ನ-ಸಾರು-ಹುಳಿ-ಕೋಸಂಬರಿ-ಪಲ್ಯಗಳ ಜೊತೆಗೆ ಕನಿಷ್ಟ ಪಾಯಸ, ಆಂಬೊಡೆ, ಹಪ್ಪಳ, ಕಲಸಿದನ್ನ ಒಬ್ಬಟ್ಟುಗಳಾದರೂ ಇರಲೇಬೇಕು ಅನ್ನಿ! ಎಂತಹ ನಾಸ್ತಿಕರೇ ಆದರೂ ಹಬ್ಬದ ಭೋಜನವನ್ನಂತೂ ಒಲ್ಲೆ ಎನ್ನಲಾರರು! ಇದರ ಜೊತೆ ಶ್ರಾವಣವೆಂದರೆ ಮದುವೆ ಮುಂಜಿ ಗೃಹಪ್ರವೇಶಾದಿ ಶುಭಕಾರ್ಯಗಳ ಸರಮಾಲೆ. ಧರ್ಮವೇದಿಕೆಗಳಲ್ಲಂತೂ ಸಾಮೂಹಿಕ-ವಿವಾಹ, ಅನ್ನಸಂತರ್ಪಣೆಗಳು ಜರುಗುತ್ತಲೇ ಇರುತ್ತವೆ. ಹೀಗೆ ವರ್ಣ-ಲಿಂಗ-ವಯಸ್ಸುಗಳ ಬೇಧವೆನ್ನದೆ ಎಲ್ಲರನ್ನೂ ತನ್ನ ಸಂತೋಷ-ಸಂಭ್ರಮದಲ್ಲಿ ತೊಡಗಿಸಿಕೊಳ್ಳುತ್ತದೆ ಈ ಶ್ರಾವಣಮಾಸ.
ಭೀಮನ ಅಮಾವಾಸ್ಯೆ ಶ್ರಾವಣಕ್ಕೆ ಮುನ್ನುಡಿ ಬರೆಯುವ ಹಬ್ಬ. ಸೃಷ್ಟಿ ಸೌಂರ್ದ್ಯದ ಕನ್ನಡಿಯಾಗಿ ಶ್ರಾವಣ ಚಿರನೂತನವಾಗಿದೆ. ನವದಂಪತಿಗಳಿಗೆ ಆಷಾಢದ ವಿರಹ ಮರೆಸಿ ಶ್ರಾವಣದ ಸಂತಸದಲ್ಲಿ ಮಿಂದೇಳುವ ಹಾಗೂ ಬದುಕನ್ನು ಸಮರಸದತ್ತ ಕೊಂಡ್ಯೊಯುವ ಪರ್ವಕಾಲ.

ಶ್ರಾವಣ ಮಾಸದ ಎರಡನೇ ಶುಕ್ರವಾರ ಮಹಾಲಕ್ಷ್ಮೀ ಜನನವಾದರೆ, ಸೆರೆಯ ಕಳೆವ ಹರಿ ಹುಟ್ಟಿದ ತಿಂಗಳು ಶ್ರಾವಣವಲ್ಲವೇ? ಎಂದು ಪುತಿನ ಕೇಳುವಂತೆ – ಪೂರ್ಣ ಪುಣ್ಯಾವತಾರವೆಂಬ ಹೆಗ್ಗಳಿಕೆಗೆ ಪಾತ್ರನಾದ ಶ್ರೀಕೃಷ್ಣ ಪರಮಾತ್ಮನು ಜನಿಸಿದ್ದು ಈ ಮಾಸದಲ್ಲೆ.

ಶ್ರಾವಣದ ಸಾಕ್ಷಾತ್ಕಾರವಾಗುವುದು ಹಸಿರಿನ ಮೂಲಕ. ಮಳೆ-ಗಾಳಿಗಳ ಸಾಂಗತ್ಯದಲ್ಲಿ ಮೈತುಂಬಿಕೊಳ್ಳುತ್ತಿರುತ್ತಾಳೆ. ಹೂವಿನ ಗಿಡಗಳ ಚಿಗುರಿ ಎಲ್ಲರ ಮೈಮನಗಳನ್ನು ರೋಮಾಂಚನೆಗೊಳಿಸುವ ಅಂದ ಚಂದದ ಜಾಜಿ, ಮಲ್ಲಿಗೆ, ಕೇದಗೆ, ಇನ್ನೂ ಅನೇಕ ಹೂವುಗಳು ಎಂಥವರ ಮನವನ್ನೂ ಸೂರೆಗೊಳ್ಳುತ್ತದೆ.

ಶ್ರಾವಣ ಮಾಸದ ಆಚರಣೆಗಳಿಗೆ ನೈಸರ್ಗಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಶಿಷ್ಟ್ಯಗಳಿವೆ. ಮಳೆಗಾಲವಾದರೂ ಜನರ ಸಂತಸ ಸಂಭ್ರಮಗಳಿಗೆ ಮುಕ್ತ ಅಭಿವ್ಯಕ್ತಿ ಈ ಮಾಸದಲ್ಲಾಗುತ್ತದೆ ಎನ್ನುವುದು ಗಮನೀಯ. ಶ್ರಾವಣವನ್ನು ವೇದಗಳು ನಭಸ್ ಎಂದು ಕರೆಯುತ್ತವೆ. ಆಷಾಡದ ಗಾಳಿ ತಣಿದು ಮಳೆಗೆ ಅವಕಾಶ ಕಲ್ಪಿಸುವ ಈ ಮಾಸದ ಪ್ರಾರಂಭದಲ್ಲಿ ನಭದಂಗಳದಲ್ಲಿ ಮಳೆ-ಗಾಳಿ-ಬಿಸಿಲುಗಳು ಕಣ್ಣಾಮುಚ್ಚಾಲೆಯಾಡುವುದನ್ನು ಕಾಣಬಹುದು. ಬರಬರುತ್ತ ಮೋಡವೇ ಕವಿದಿದ್ದು, ಮಳೆ ಜಿನುಗುತ್ತಲೇ ಇದ್ದು, ಸೂರ್ಯಚಂದ್ರರು ಮಂಕಾಗಿ, ಹಗಲುರಾತ್ರಿಗಳು ಕಾಂತಿಹೀನವಾಗಿ, ನಮ್ಮನ್ನು ಮನೆಯೊಳಗೇ ಇರುವಂತೆ ಪ್ರೇರೇಪಿಸುತ್ತವೆ.

ಬಹಳ ಪ್ರಾಚೀನಕಾಲದಿಂದಲೂ ನಮ್ಮ ಕವಿಗಳು ಈ ಶ್ರಾವಣದ ಸೊಬಗನ್ನು ಬಗೆಬಗೆಯಾಗಿ ವರ್ಣಿಸುತ್ತ ಬಂದಿದ್ದಾರೆ. ಈ ಆಷಾಢ-ಶ್ರಾವಣಗಳಲ್ಲಿ ಮಧ್ಯಾಹ್ನ ಕಾಲ ಎರಡನೆಯ ಬೇಸಿಗೆಯೋ ಎಂಬಂತೆ ಸ್ವಲ್ಪಮಟ್ಟಿಗೆ ಕಂಡರೂ, ಆಗಾಗ ಮೋಡ-ಗಾಳಿಗಳು ಬಂದು, ರಾತ್ರಿಯೂ ಬೇಗನೆ ಆವರಿಸಿ ಹವಾಮಾನವನ್ನು ಬದಲಾಯಿಸುತ್ತ ಇರುತ್ತವೆ. ಹಣ್ಣೆಲೆಗಳು ವರ್ಣಾಂತರ ಹೊಂದುತ್ತ ಕಳಚಿ ಬೀಳುತ್ತ ಅಂಗಳವನ್ನೂ ರಸ್ತೆಗಳನ್ನೂ ಆವರಿಸಿ ವಿಶಿಷ್ಟ ಸೊಬಗನ್ನೀಯುತ್ತವೆ. ಈ ಕಾಲದಲ್ಲಿ ಸಮುದ್ರತೀರಗಳಲ್ಲಿ ಚಂಡಮಾರುತಗಳು ಅಪ್ಪಳಿಸುವುದೂ ಸರ್ವೇಸಾಮಾನ್ಯ. ಭೂಮಿಯ ಉತ್ತರಭಾಗದ ಪಕ್ಷಿಗಳು ದಕ್ಷಿಣ ದಿಕ್ಕಿಗೆ ವಲಸೆ ಬಂದು ನೋಡುಗರಿಗೆ ಮುದವೀಯುತ್ತವೆ.

ವರಕವಿ ಬೇಂದ್ರೆಯವರಿಗಂತೂ ಶ್ರಾವಣ ಮಾಸ ಅತಿಪ್ರಿಯವಾದ ಕಾಲ. ಆಷಾಡದ ಜಡಿಮಳೆಯಿಂದ ಜಡ್ಡುಕಟ್ಟಿದ ವರ್ಷಕ್ಕೆ ಹರ್ಷೋಲ್ಲಾಸ ತರುವ ಶ್ರಾವಣವೆಂದರೆ ಕವಿಗಳಿಗೆ ಮಾತ್ರವಲ್ಲ ವೇದಾಂತಿ, ದಾರ್ಶನಿಕರಿಗೂ ಅತಿ ಹೆಚ್ಚು ಮೆಚ್ಚು. ಪುರಾಣ ಪುಣ್ಯ ಕಥೆಗಳಲ್ಲಿ ಹೇಳಿರುವ ಪ್ರಕಾರ ಇದು ದೇವತೆಗಳಿಗೂ ಅತಿಪ್ರಿಯವಾದ ಕಾಲ. ಶ್ರಾವಣ ಮಾಸದಲ್ಲಿ ಹುಲುಸಾಗಿ ಬೆಳೆದಿರುವ ಗಿಡ ಬಳ್ಳಿ-ಹೂವುಗಳಲ್ಲಿ ಔಷಧೀಯ ಗುಣಗಳು ಸಾಕಷ್ಟು ತುಂಬಿರುತ್ತದೆ. ಇವುಗಳ ಸೇವನೆ ಅಘ್ರಾಣಿಸುವಿಕೆಯಿಂದ ಆರೋಗ್ಯ ಭಾಗ್ಯ ಲಭಿಸುವುದೆಂದು ವೈದ್ಯಶಾಸ್ತ್ರಗಳು ಹೇಳುತ್ತದೆ. ಒಟ್ಟಾರೆಯಾಗಿ ಶ್ರಾವಣ ಮಾಸದ ಹಸಿರು ಸಿರಿ ಇಡೀ ಪ್ರಕೃತಿಗೆ ಸಂಭ್ರಮ ತಂದಿರುತ್ತದೆ.


Get In Touch With Us info@kalpa.news Whatsapp: 9481252093

Tags: Dr Gururaj Poshettihallihindu ritualsKannada News WebsiteLatest News KannadaShravana Masaಆಷಾಢಡಾ. ಗುರುರಾಜ ಪೋಶೆಟ್ಟಿಹಳ್ಳಿವರಕವಿ ಬೇಂದ್ರೆಶ್ರಾವಣ ಮಾಸಹಿಂದೂ ಧರ್ಮ
Share210Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಬ್ಯಾಂಕ್ ಉದ್ಯೋಗಿ ಸೇರಿ ಭದ್ರಾವತಿಯಲ್ಲಿಂದು ಮೂರು ಕೊರೋನಾ ಪಾಸಿಟಿವ್

Next Post

ಕೊರೋನಾ ನಿರ್ವಹಣೆಗೆ ನಾನು ಸೂಚಿಸಿರುವ ಮೂರು ಮುಂಜಾಗ್ರತೆ ಪಾಲಿಸಿ: ಡಾ.ಗಿರಿಧರ್ ಕಜೆ

kalpa News

kalpa News

Next Post
ಕೊರೋನಾ ನಿರ್ವಹಣೆಗೆ ನಾನು ಸೂಚಿಸಿರುವ ಮೂರು ಮುಂಜಾಗ್ರತೆ ಪಾಲಿಸಿ: ಡಾ.ಗಿರಿಧರ್ ಕಜೆ

ಕೊರೋನಾ ನಿರ್ವಹಣೆಗೆ ನಾನು ಸೂಚಿಸಿರುವ ಮೂರು ಮುಂಜಾಗ್ರತೆ ಪಾಲಿಸಿ: ಡಾ.ಗಿರಿಧರ್ ಕಜೆ

Leave a Reply Cancel reply

Your email address will not be published. Required fields are marked *

No Result
View All Result
ABD Maestro Launches 3 Premium Whiskies in Hyderabad
English Articles

ABD Maestro Launches 3 Premium Whiskies in Hyderabad

by kalpa News
July 21, 2026
0

Kalpa Media House  |  Hyderabad  | Hyderabad emerges as a key destination for luxury spirits as AODH, WOODBURNS, and YELLO...

Read moreDetails
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
RPF Mysuru Division Records Notable Achievements in 2026

RPF Mysuru Division Records Notable Achievements in 2026

July 20, 2026
PM Modi Inaugurates Redeveloped Bantawala Railway Station through Video Conferencing

PM Narendra Modi Inaugurates Redeveloped Bantawala Railway Station through Video Conferencing

July 20, 2026
Indian Railway PM Modi to Inaugurate 4 Modern Railway Stations in Karnataka

Indian Railway | PM Modi To Launch 4 Stations In Karnataka

July 16, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL