ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಹುಷಃ ಸ್ಮಾರ್ಟ್ ಸಿಟಿ ಯೋಜನೆಯ ಅಸಮರ್ಪಕ ಕಾಮಗಾರಿಯ ಪರಿಣಾಮ ಎಂದೇ ಹೇಳಬಹುದಾದ ಘಟನೆ ಇಂದು ನಗರದಲ್ಲಿ ನಡೆದಿದೆ.
ಹೌದು… ಕೋಟೆ ಏರಿಯಾ ಹಾಗೂ ಹೊಸಮನೆ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಕರೆಂಟ್ ಶಾಕ್’ನಿಂದ ಜನರ ಭಯ ಪಟ್ಟಿದ್ದಾರೆ.
ಪ್ರಕರಣ-1: ಹೊಸಮನೆ ಬಡಾವಣೆ
ಹೊಸಮನೆಯಲ್ಲಿ ವಿದ್ಯುತ್ ಕೇಬಲ್ ಸಂಪರ್ಕ ನೀಡಲಾಗುತ್ತಿದ್ದು, ಫೀಡರ್ ಬಾಕ್ಸ್’ನಿಂದ ಸಂಪರ್ಕ ಕಲ್ಪಿಸಿರುವ ಕೆಲವು ಮನೆಗಳಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ಅನುಭವವಾಗಿದ್ದು, ಜನರ ಭಯಭೀತರಾಗಿದ್ದರು.
ಈ ಭಾಗದಲ್ಲಿ ಭಾಗ್ಯಮ್ಮ ಎಂಬ ಮಹಿಳೆಗೆ ಕರೆಂಟ್ ಶಾಕ್ ಹೊಡೆದಿದೆ ಎಂದು ವರದಿಯಾಗಿದೆ.
ಪ್ರಕರಣ-2: ಕೇಬಲ್ ಬ್ಲಾಸ್
ಇನ್ನು, ಹೊಸಮನೆಯ ಚಾನೆಲ್ ಬಲಭಾಗದ ಎರಡನೆಯ ತಿರುವಿನಲ್ಲಿ ವಿದ್ಯುತ್ ಕೇಬಲ್ ಬ್ಲಾಸ್ಟ್ ಆಗಿದ್ದು, ಕಳಪೆ ಕಾಮಗಾರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಪ್ರಕರಣ-3: ಕೋಟೆ ಆಂಜನೇಯ ದೇವಾಲಯ
ಕೋಟೆ ಆಂಜನೇಯ ದೇವಾಲಯದ ಬಳಿಯ ಶಿವಪ್ಪ ನಾಯಕ ಅರಮನೆಗೆ ಹೋಗುವ ಮುಂಭಾಗದಲ್ಲಿ ಅಳವಡಿಸಿರುವ ಕಬ್ಬಿಣದ ಗ್ರಿಲ್’ನಲ್ಲಿ ವಿದ್ಯುತ್ ಪ್ರವಹಿಸುತ್ತಿರುವ ಅನುಭವವಾಗಿದೆ. ಹೀಗಾಗಿ, ಸ್ಥಳೀಯರು ಟೆಸ್ಟರ್ ಹಿಡಿದು ನೋಡಿದಾಗ ಕರೆಂಟ್ ಹರಿಯುತ್ತಿರುವುದು ತಿಳಿದುಬಂದಿದೆ.
ಈ ಕುರಿತಾಗಿನ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು, ಘಟನೆ ವಿಚಾರಗಳು ತಿಳಿದಾಕ್ಷಣ, ಸ್ಮಾರ್ಟ್ ಸಿಟಿ ಎಲೆಕ್ಟಿçಕ್ ತಂಡ ಹಾಗೂ ಮೆಸ್ಕಾಂ ಎಈಈ ಮಹಾದೇವಯ್ಯ ಅವರ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post