ಕಲ್ಪ ಮೀಡಿಯಾ ಹೌಸ್ | ಸೊರಬ | ವರದಿ: ಮಧುರಾಮ್ |
ವಿಶ್ವ ಸ್ತನಪಾನ ಸಪ್ತಾಹದ ಅಂಗವಾಗಿ ಸೊರಬ (Soraba) ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಗರ್ಭಿಣಿಯರಿಗೆ ಪೌಷ್ಟಿಕಾಂಶ ಕಿಟ್ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಮಹಾಂತೇಶ್, ವಿಶ್ವ ಸ್ತನಪಾನ ಸಪ್ತಾಹದ ಉದ್ದೇಶ ಹಾಗೂ ತಾಯಿ ಮತ್ತು ಮಗುವಿನ ಆರೋಗ್ಯದಲ್ಲಿ ಸ್ತನಪಾನದ ಮಹತ್ವವನ್ನು ವಿವರಿಸಿದರು. ಸಮಾಜದಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದು ಹೇಳಿದರು.
ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಜ್ಞಾನೇಶ್ ಹೆಚ್. ಇ. ಮಾತನಾಡಿ, ರೋಟರಿಯ ಮುಖ್ಯ ಧ್ಯೇಯ ಸಮಾಜಸೇವೆ ಮತ್ತು ಮಾನವೀಯ ಮೌಲ್ಯಗಳ ವೃದ್ಧಿಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯಗಳು ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಗರ್ಭಿಣಿಯರಿಗೆ ಆರೋಗ್ಯದ ಕುರಿತು ಮಾಹಿತಿ
ಪ್ರಸುತಿ ತಜ್ಞೆ ಡಾ. ಪೂರ್ಣಿಮಾ ಅವರು ಗರ್ಭಿಣಿಯರ ಆರೈಕೆ, ಸಮತೋಲಿತ ಆಹಾರದ ಅಗತ್ಯತೆ, ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವ ವಿಧಾನಗಳು, ನಿಯಮಿತ ಆರೋಗ್ಯ ತಪಾಸಣೆ ಹಾಗೂ ಗರ್ಭಾವಸ್ಥೆಯಲ್ಲಿ ಎದುರಾಗಬಹುದಾದ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು.
ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ದಯಾನಂದ ಮಾತನಾಡಿ, ತಾಯಿಯ ಎದೆಹಾಲು ಮಗುವಿನ ಮೊದಲ ಹಾಗೂ ಅತ್ಯುತ್ತಮ ಆಹಾರವಾಗಿದೆ ಎಂದು ಹೇಳಿದರು. ವಿಶ್ವ ಸ್ತನಪಾನ ಸಪ್ತಾಹದ ಅಂಗವಾಗಿ ಆರೋಗ್ಯ ಇಲಾಖೆ ಹಮ್ಮಿಕೊಂಡಿರುವ ಜಾಗೃತಿ ಕಾರ್ಯಕ್ರಮಗಳಿಗೆ ರೋಟರಿ ಸಂಸ್ಥೆ ಕೈಜೋಡಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ವಿಶ್ವ ಸ್ತನಪಾನ ಸಪ್ತಾಹದ ಘೋಷಣೆಯನ್ನು ಪ್ರತಿಜ್ಞಾವಿಧಿ ರೂಪದಲ್ಲಿ ಬೋಧಿಸಲಾಯಿತು.
ಸಾಮಾಜಿಕ ಆರೋಗ್ಯ ಸೇವೆ ಮುಂದುವರಿಕೆ: ರೋಟರಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆಯ ಅಧ್ಯಕ್ಷ ಮಾಲತೇಶ್ ಹೆಚ್. ಇ. ಮಾತನಾಡಿ, ಗರ್ಭಿಣಿಯರಿಗೆ ಪೌಷ್ಟಿಕಾಂಶ ಕಿಟ್ ವಿತರಿಸಲು ಅವಕಾಶ ಕಲ್ಪಿಸಿದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ಮಂಡಳಿಗೆ ಧನ್ಯವಾದ ಸಲ್ಲಿಸಿದರು.
Also Read>> ನಟಿ ತ್ರಿಷಾ ವಿರುದ್ಧ ವಿವಾದಾತ್ಮಕ ಹೇಳಿಕೆ ಆರೋಪ | ಉದಯನಿಧಿ ಸ್ಟಾಲಿನ್ ಬಂಧನ
ಸಮಾಜದ ಆರೋಗ್ಯ ಮತ್ತು ಜನಜಾಗೃತಿಗೆ ಸಂಬಂಧಿಸಿದ ಸೇವಾ ಕಾರ್ಯಕ್ರಮಗಳನ್ನು ಮುಂದೆಯೂ ಮುಂದುವರಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಪ್ರಭು ಸಾಹುಕಾರ್, ಡಾ. ಚಂದನ್, ರೋಟರಿ ಸಂಸ್ಥೆಯ ಕಾರ್ಯದರ್ಶಿ ಪ್ರಕಾಶ್ ಬಿಳವಾಗೋಡು, ನಾಗರಾಜ್ ಗುತ್ತಿ, ಯಶೋಧರ್, ಆಸ್ಪತ್ರೆಯ ವೈದ್ಯರು, ಆರೋಗ್ಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಿಬ್ಬಂದಿ ಹಾಗೂ ಗರ್ಭಿಣಿಯರು ಉಪಸ್ಥಿತರಿದ್ದರು.
ರೋಟರಿ ವಲಯ ಸೇನಾನಿ ಕೃಷ್ಣಪ್ಪ ಓಟೂರು ವಂದಿಸಿದರು. ನಿರಂಜನ ಕುಪ್ಪಗಡ್ಡೆ ಕಾರ್ಯಕ್ರಮ ನಿರೂಪಿಸಿದರು.
Soraba Rotary Distributes Nutrition Kits to Pregnant Women
Soraba: As part of World Breastfeeding Week, the Rotary organisation distributed nutrition kits to pregnant women at the Taluk Public Hospital in Soraba.
Speaking on the occasion, former Rotary President Mahantesh highlighted the significance of World Breastfeeding Week and explained the importance of breastfeeding for the health and well-being of both mothers and infants. He stressed the need for such awareness programmes to promote better health practices in society.
Rotary Founder President Dr. Gnanesh H.E. said that the organisation’s primary objective is to serve society and promote humanitarian values. He urged people to make effective use of the quality medical facilities available at government hospitals.
Awareness on Pregnancy Care and Nutrition
Obstetrician Dr. Poornima provided valuable information to pregnant women on maternal care, balanced nutrition, physical and mental well-being, the importance of regular health check-ups, and precautions to prevent health complications during pregnancy.
Taluk Public Hospital Administrative Officer Dr. Dayanand said that breast milk is the first and best food for a newborn. He appreciated Rotary’s support in joining hands with the Health Department for awareness activities organised during World Breastfeeding Week.
He also administered the World Breastfeeding Week pledge during the programme.
Rotary Assures Continued Social Service Activities
Presiding over the programme, Rotary President Malatesh H.E. thanked the Taluk Public Hospital administration for providing an opportunity to distribute nutrition kits to pregnant women. He assured that Rotary would continue organising service activities focused on public health and social awareness.
Doctors Dr. Prabhu Sahukar, Dr. Chandan, Rotary Secretary Prakash Bilavagodu, Nagaraj Guthi, Yashodhar, hospital doctors, health staff, ASHA workers, Anganwadi staff, and pregnant women were present during the event.
Rotary Zonal Leader Krishnappa Otoor delivered the vote of thanks, while Niranjan Kuppagadde compered the programme.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








