ವಿಶ್ವಮಟ್ಟದಲ್ಲಿ ಭಾರತಕ್ಕೆ ಒಂದು ವೈಶಿಷ್ಠ್ಯತೆ ಇದೆ. ಕಾರಣ ಈ ದೇಶ ಹೆಣ್ಣಿಗೆ ನೀಡಿರುವ ಒಂದು ಗೌರವದ ಸ್ಥಾನ. ಹೌದು ಪ್ರಾಯಶಃ ಇಡೀ ವಿಶ್ವದಲ್ಲಿ ಹೆಣ್ಣನ್ನು ದೇವತೆಗೆ ಹೋಲಿಕೆ ಮಾಡಿರುವ ದೇಶ ಭಾರತ ಬಿಟ್ಟರೆ ಬೇರೊಂದಿಲ್ಲ ಎನ್ನಬಹುದು.
ವೇದಗಳ ಕಾಲದಿಂದಲೂ ಹೆಣ್ಣನ್ನು ಪುರುಷರ ಸಮಾನವಾಗಿ ಕಾಣಲಾಗುತಿತ್ತು. ಹೀಗಾಗಿ ಗಾರ್ಗಿ, ಮೈತ್ರಿಯಂತಹ ಅದೆಷ್ಟೋ ಮಹಿಳಾ ವಿದ್ವಾಂಸರು ಈ ದೇಶದಲ್ಲಿ ಈಗ ಆಗಿ ಹೋದದ್ದು ಇತಿಹಾಸ.
ಕೊನೆಕೊನೆಗೆ ಹೆಣ್ಣನ್ನು ತಂದೆ ಪತಿ ಮತ್ತು ಪುತ್ರರ ಗುಲಾಮಳಂತೆ ಕಾಣಲಾಗುತಿತ್ತು. ಆಕೆಯನ್ನು ದುರ್ಬಲಳು ಎಂಬಂತೆ ಬಿಂಬಾಸಲಾಯ್ತ. ಪುರುಷಗಿಂತ ಕೀಳು ಎಂಬ ಭಾವನೆ ಬೆಳೆಸಲಾಯಿತ್ತು. ಹೆಣ್ಣನ್ನು ಕೇವಲ ನಾಲ್ಕು ಗೋಡೆಗಳ ಮಧ್ಯೆ ಬಂಧಿಸಲಾಯಿತು.
ಆಧುನಿಕತೆ ಈ ದೇಶಕ್ಕೆ ಬರುವ ತನಕ ಈ ಪರಿಸ್ಥಿತಿ ಹೀಗೆ ಇತ್ತು. ಕಾಲ ಬದಲಾದಂತೆ ಹೆಣ್ಣಿಗೆ ಸಹ ಸಮಾಜದಲ್ಲಿ ಒಂದು ಸ್ಥಾನಮಾನ ಸಿಗತೊಡಗಿತು. ಇದರ ಫಲವಾಗಿ ಅದೆಷ್ಟೋ ಮಹಿಳೆಯರು ತಮ್ಮ ಪ್ರತಿಭೆಯಿಂದ ಪುರುಷರಗಿಂತ ಹೆಣ್ಣು ಕಡಿಮೆಯಿಲ್ಲ ಎನ್ನುವ ಸತ್ಯವನ್ನು ಸಾಧನೆ ಮಾಡಿ ತೋರಿಸಿದ್ದಾಳೆ.
ಭಾರತವೆನ್ನುವ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶವನ್ನು ಇಂದಿರಾ ಗಾಂಧಿ ಆಳಿದ್ದು ಈಗ ಇತಿಹಾಸ. ಇಷ್ಟಿದ್ದರೂ ಭಾರತದಲ್ಲಿ ಇನ್ನೂ ಸರಿಯಾದ ಗೌರವ ಸ್ವಾತಂತ್ರ್ಯ ಸಿಗುತ್ತಿಲ್ಲ. ಏನಾದರೂ ಸಾಧಿಸಲು ಹೊರಟಾಗ ಆಕೆಯ ಕುರಿತು ಕೆಟ್ಟದಾಗಿ ಮಾತನಾಡುವವರ ಸಂಖ್ಯೆಯೇನು ಕಡಿಮೆಯಿಲ್ಲ. ಸಾಕಷ್ಟು ರೀತಿಯಲ್ಲಿ ಆಕೆಗೆ ಸಹಾಯ ಸಿಗುತ್ತಿಲ್ಲ.
ಇದೇನು ಕತೆ ಪುರಾಣ ಹೇಳುತ್ತಿದ್ದೇನೆ ಎಂದು ಯೋಚನೆಮಾಡ್ತಾ ಇದ್ದೀರಾ? ಇಲ್ಲ, ನಾನಿಂದು ಸಾಧಕಿಯ ಪರಿಚಯ ಮಾಡಲು ಹೊರಟಿದ್ದೇನೆ. ಇವರ ಹೆಸರು ದೀಕ್ಷಾ ರೈ.. ಮೂಲತಃ ಪುತ್ತೂರಿನವರು. ಪ್ರಸ್ತುತ ಮಂಗಳೂರಿನಲ್ಲಿ ಮೊದಲ ವರ್ಷದ ಪದವಿಯನ್ನು ಪತ್ರಿಕೋದ್ಯಮದಲ್ಲಿ ನಡೆಸುತ್ತಿದ್ದಾರೆ.
ಇದರೊಂದಿಗೆ ಕಲೆಯನ್ನು ತಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಭಾವಿಸಿರುವ ಇವರು ಬಹುಮುಖ ಪ್ರತಿಭೆ. ಡ್ರಾಮಾ, ನಿರೂಪಣೆ, ಗಾಯನ, ನೃತ್ಯಗಳನ್ನು ಮೈಗೂಡಿಸಿಕೊಂಡಿದ್ದಾರೆ.
ಸುಮಾರು 150 ಕ್ಕೂ ಹೆಚ್ಚಿನ ನೃತ್ಯ ಪ್ರದರ್ಶನ ನೀಡಿದ್ದಾರೆ. ಜೊತೆಗೆ 30 ಕ್ಕೂ ಹೆಚ್ಚಿನ ನಿರೂಪಣೆ ಮಾಡಿದ್ದು ನಮ್ಮ ಟಿವಿಯಲ್ಲಿ ಮೂರು ನಾಲ್ಕು ತಿಂಗಳು ನಿರೂಪಣೆ ಮಾಡಿದ್ದರು. ಪ್ರಸ್ತುತ ಖಾಸಗಿ ಟಿವಿಯೊಂದರಲ್ಲಿ ನಿರೂಪಣೆ ಮಾಡುತ್ತಾ ಇದ್ದಾರೆ.
ಗಯನದಲ್ಲೂ ಇವರು ಹಲವು ವೇದಿಕೆಯಲ್ಲಿ ಗಾಯನ ಪ್ರದರ್ಶನ ನೀಡಿದ್ದಾರೆ. ಜೊತೆಗೆ ನಟನೆಯಲ್ಲಿ ಒಲವು ಹೊಂದಿದ್ದು ಮೂರರಿಂದ ನಾಲ್ಕು ಡ್ರಾಮಾ ತಂಡದ ಸದಸ್ಯೆಯಾಗಿದ್ದು ಕಳೆದ ಒಂದು ವರ್ಷದಿಂದ ಮೂವತ್ತಕ್ಕೂ ಹೆಚ್ಚು ಡ್ರಾಮಾಗಳಲ್ಲಿ ಅಭಿನಯಿಸಿದ್ದಾರೆ.
ಕೇವಲ 17 ವರ್ಷದ ಇವರು ತನ್ನ ಓದಿನ ಜೊತೆಗೆ ಈ ಎಲ್ಲಾ ಸಾಧನೆ ಮಾಡಿದ್ದು. ಟಿವಿ ಛಾನೆಲ್ನಲ್ಲಿ ಕೆಲಸ ಮಾಡುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದು ಅಪ್ಪ ಅಮ್ಮನ ಹಣದಲ್ಲಿ ಮೋಜು ಮಾಡುವ ಯುವಕ ಯವತಿಯರಿಗೆ ಒಂದು ಉದಾಹರಣೆ ಎಂದರೆ ತಪ್ಪಾಗಲಾರದು.
ಇಷ್ಟೊಂದು ಸಾಧನೆ ಮಾಡಿದ್ದರೂ ಯಾವದೇ ಸಂಘ ಸಂಸ್ಥೆಗಳು ಇವರನ್ನು ಗುರುತಿಸದೇ ಇರುವುದು ನೋವಿನ ಸಂಗತಿ. ಇದರೊಂದಿಗೆ ಯಾರ ಸಹಾಯವೂ ಇಲ್ಲದೇ ಇಷ್ಟೊಂದು ಸಾಧಿಸಿದ್ದರೂ ತಮ್ಮವರಿಂದಲೇ ಹೆಜ್ಜೆ ಹೆಜ್ಜೆಗೂ ನೋವು ಅವಮಾನ ಕೊಂಕು ನುಡಿಗಳೇ ದೊರೆತ್ತದ್ದು
ಖೇದಕರ.
ಇನ್ನಾದರೂ ಇಂತಹ ಪ್ರತಿಭೆಗಳಿಗೆ ಸಿಗಬೇಕಾದ ಗೌರವ ಸಿಗಲಿ ಇವರ ಬದುಕು ಹಸನಾಗಲಿ ಸಮಾಜ ಇವರನ್ನು ಗುರುತಿಸಿ ಗೌರವಿಸುಂತಾಗಲಿ ಎನ್ನುವ ಆಶಯ ನಮ್ಮದು.
ಲೇಖನ ಮತ್ತು ಚಿತ್ರಕೃಪೆ: ರೋಹನ್ ಪಿಂಟೋ ಗೇರುಸೊಪ್ಪ
Discussion about this post