No Result
View All Result
Sagara Engulfed In The Ocean of Music
English Articles

Sagara Engulfed In The Ocean of Music

by ಕಲ್ಪ ನ್ಯೂಸ್
March 23, 2026
0

Kalpa Media House  |  Special Article by Rasikapriya  | An invigorating music festival held recently at Sagara, Shimoga Dist., took...

Read moreDetails
MAHE Introduces ‘MAGIC’ to Power AI-Driven Academic and Administrative Transformation

MAHE Introduces ‘MAGIC’ to Power AI-Driven Academic and Administrative Transformation

March 23, 2026
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

March 18, 2026
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
  • Advertise With Us
  • Grievances
  • About Us
  • Contact Us
Tuesday, March 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಆನಂದ ಕಂದ

ನಮ್ಮ ಭಾರತದ ಕುಲಕಸುಬುಗಳ ಮೇಲೆ ಜಾಗತೀಕರಣದ ದುಷ್ಪರಿಣಾಮ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
February 6, 2025
in ಆನಂದ ಕಂದ
0
ನಮ್ಮ ಭಾರತದ ಕುಲಕಸುಬುಗಳ ಮೇಲೆ ಜಾಗತೀಕರಣದ ದುಷ್ಪರಿಣಾಮ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಆನಂದಕಂದ ಲೇಖನ ಮಾಲಿಕೆ-23  |
ನಮ್ಮ ಭಾರತದಲ್ಲಿ ಪ್ರತಿಯೊಬ್ಬರೂ ಪ್ರತಿಭಾವಂತರು. ಪ್ರತಿ ಕುಲದಲ್ಲೂ ಒಂದೊಂದು ಕೆಲಸ ಇರುತ್ತಿತ್ತು. ಒಬ್ಬರಿಗಿಂತ ಇನ್ನೊಬ್ಬರು ಪ್ರತಿಭೆಯಲ್ಲಿ ಏನೂ ಕಮ್ಮಿ ಇರಲಿಲ್ಲ. ಕುಲಗಳಿಗೆ ಸಂಬಂಧಪಟ್ಟಂತೆ ಇರುವ ಕಸುಬುಗಳಿಗೆ #Occupation ಕುಲ ಕಸುಬುಗಳೆಂದು ಕರೆಯುತ್ತಾರೆ.

ಉದಾಹರಣೆಗೆ: ಅಗಸ, ಅಕ್ಕಸಾಲಿಗ, ಕಮ್ಮಾರ, ಚಮ್ಮಾರ, ದರ್ಜಿ, ಜ್ಯೋತಿಷ್ಯ, ಪೌರೋಹಿತ್ಯ, ಅಗ್ನಿಹೋತ್ರ, ಕುಂಬಾರ, ಬಳೆಗಾರ, ನೇಕಾರರು, ಮುಂತಾದವರು.

ವಂಶಪಾರಂಪರ್ಯವಾಗಿ ಬರುತ್ತಿದ್ದ ಕಾರಣ ಆ ಕುಲಸುಬುಗಳು ಮುಂದುವರೆಯುತ್ತಿದ್ದವು. ಆ ಕೆಲಸ ಮಾಡ್ದಿದ್ದರೆ ಅವರಿಗೆ ಆ ಜಾತಿಯಿಂದ ಬಹಿಷ್ಕಾರ ಹಾಕುತ್ತಿದ್ದರು. ಹಾಗಾಗಿ ಆ ಹೆದರಿಕೆಯಿಂದಲೂ ಈ ಕೆಲಸ ಮುಂದುವರೆಯುತ್ತಿತ್ತು.

Also Read>> ಗಮನಿಸಿ ! ಫೆ.7ರಂದು ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ

ಹಿಂದೆ ಒಂದು ಹಳ್ಳಿ ಎಂದರೆ ಅಲ್ಲಿ ವಾಸ ಮಾಡುವ ಜನರ ಜೊತೆಗೆ ಕುಂಬಾರ, ಅಗಸ, ಬುಟ್ಟಿ ಮಾಡುವವರು, ಕಮ್ಮಾರ, ಅಕ್ಕಸಾಲಿಗ, ನೇಕಾರ ಮತ್ತು ಮುಂತಾದವರು ವಾಸಿಸುತ್ತಿದ್ದರು.
ಅವರಿಗೆ ಏನಾದರು ವ್ಯಾಪಾರವಾಗುತ್ತಿರಲಿಲ್ಲ ಎಂದರೆ ಅವರು ಬೇರೆ ಹಳ್ಳಿ ಅಥವಾ ಊರಿಗೆ ಹೋಗುತ್ತಿರಲಿಲ್ಲ. ಏಕೆಂದರೆ ಆ ಹಳ್ಳಿಯಲ್ಲಿ ಒಂದು ಶುಭ ಅಥವಾ ಅಶುಭ ಕಾರ್ಯಕ್ರಮ ನಡೆದರೆ ಇವರೆಲ್ಲರೂ ಸಹಾಯಕ್ಕೆ ಬೇಕು.

ಈಗ ಆ ಹಳ್ಳಿಯಲ್ಲಿ ಒಂದು ಮದುವೆ ನಡೆಯುತ್ತಿದ್ದರೆ, ಚಪ್ಪರ ಹಾಕಲು ಬುಟ್ಟಿ ಹೆಣೆಯುವವರು, ಅಡಿಗೆಯ ಪಾತ್ರೆಗಳನ್ನು ತಯಾರಿಸಲು ಕಮ್ಮಾರ ಅಥವಾ ಕುಂಬಾರ, ಹೊಸ ಬಟ್ಟೆಗಳನ್ನು ನೇಯಲು ನೇಕಾರ, ಬಂಗಾರದ ಒಡವೆ ಮಾಡಿಸಲು ಅಕ್ಕಸಾಲಿಗ ಮತ್ತು ಮುಂತಾದವರು ಸಹಾಯಕ್ಕೆ ಬಂದು ಅವರ ವ್ಯಾಪಾರವನ್ನು ಮಾಡುತ್ತಿದ್ದರು.

ಇದರ ಪ್ರತಿಯಾಗಿ ಆ ಮನೆಯ/ಹಳ್ಳಿಯ ಹಿರಿಯರೆಲ್ಲರು ಈಗಿನ ತರಹ ಆ ವಸ್ತುವಿಗೆ ಪ್ರತಿಯಾಗಿ ದುಡ್ಡನ್ನು ಕೊಡುತ್ತಿರಲಿಲ್ಲ. ಅವರ ಮನೆಗಳಲ್ಲಿ ಇರುವಂತಹ ಧಾನ್ಯಗಳನ್ನು ಕೊಟ್ಟು ಅವರನ್ನು ಸಂತೋಷ ಪಡಿಸುತ್ತಿದ್ದರು. ನಂತರ ಎರಡು-ಮೂರು ತಿಂಗಳಿಗೊಮ್ಮೆ ಬರುವ ಬಳೆಗಾರರು, ಕರಡಿ ಕುಣಿಸುವವರು, ಗಂಗೆ ಎತ್ತು, ದೊಂಬರಾಟ, ಪಾತ್ರದವರು, ಜೋಕುಮಾರ ಹೇಳಿಕೆ, ಕಣಿ ಹೇಳುವವರಿಗೂ ಇದೇ ರೀತಿ ಸತ್ಕಾರ ಮಾಡಿತ್ತಿದ್ದರು. ಒಟ್ಟಿನಲ್ಲಿ ಸಹಕಾರ ಸಹಬಾಳ್ವೆಯ ಜೀವನ ಅಂದು ಸಹಜವಾಗಿತ್ತು.ನಂತರ ಪಟ್ಟಣಗಳು ಬೆಳೆಯಲು ಪ್ರಾರಂಭವಾಯಿತು. ನಗರೀಕರಣವಾದಂತೆಲ್ಲ ಓದಲೆಂದು ಬರುತ್ತಿದ್ದವರು, ದುಡಿಯಲು, ಹಣ ಸಂಪಾದನೆಗಾಗಿ ಬರಲು ಶುರು ಮಾಡಿದರು.

ಹೀಗೆ ಹಳ್ಳಿಗಳಲ್ಲಿರುವವರು ಪಟ್ಟಣಗಳಿಗೆ ಬರಲು ಶುರು ಮಾಡಿದರು ಇದು ಬೆಳೆಯುತ್ತಲೇ ಹೋಯ್ತು. ಇಲ್ಲಿ ಅವರ ಕಸುಬುಗಳಿಗೆ ಕಷ್ಟವಾದರೂ ತಮ್ಮ ಕಸುಬುಗಳನ್ನು ಬಿಡದೆ ಕುಲಕಸುಬುಗಳನ್ನು ನಡೆಸುವವರು ಹಳ್ಳಿಯಿಂದ ಪಟ್ಟಣ ಪಟ್ಟಣ ಸುತ್ತುತ್ತಿದ್ದರು.

Also Read>> ಫೆ.8 | ಸುವರ್ಣ ಸಂಸ್ಕೃತಿ ಭವನದಲ್ಲಿ ಮಕ್ಕಳಿಂದ ಯಕ್ಷಗಾನ ಪ್ರಸಂಗ

ಸುಮಾರು 1991ರ ವರೆಗೂ ಹೀಗೆ ನಡೆಯುತ್ತಿತ್ತು. ಯಾವಾಗ 1991ರಲ್ಲಿ ಸರ್ಕಾರ ಜಾಗತೀಕರಣವನ್ನು ಜಾರಿಗೆ ತಂದಿತೋ ಆಗ ಈ ಕುಲಕಸುಬುನ್ನು ನಡೆಸುವವರಿಗೆ ಕೆಲಸ ಹೋಯಿತು.(ಜಾಗತೀಕರಣ ಎಂದರೆ ನಾವು ಬೇರೆ ದೇಶಕ್ಕೆ ಹೋಗಿ ಅಥವಾ ಬೇರೆಯವರು ನಮ್ಮ ದೇಶಕ್ಕೆ ಬಂದು ಮಾರುವುದು). ಏಕೆಂದರೆ ಬೇರೆ ದೇಶಗಳಿಂದ ವ್ಯಾಪಾರ ಮಾಡಲು ಬೇರೆ ಜನರು ಬರುತ್ತರೆ. ಆದರೆ ನಾವು ಬೇರೆ ದೇಶಕ್ಕೆ ಹೋಗಿ ಮಾರುವುದಿಲ್ಲ. ಅವರು ಹಲವಾರು ದೇಶಗಳಲ್ಲಿ ಅದೇ ವಸ್ತುಗಳನ್ನು ಮಾರುತ್ತಿರುತ್ತಾರೆ. ಹಾಗಾಗಿ ಅವರು ಇಲ್ಲಿ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಾರೆ. ಆದರೆ ನಮ್ಮ ದೇಶದ ಸಂಸ್ಥೆಗಳು ಬೇರೆ ದೇಶಕ್ಕೆ ಹೋಗಿ ಮಾರುವುದು ಕಡಿಮೆ. ಆದ್ದರಿಂದ ಅವರು ಹೆಚ್ಚು ಬೆಲೆಯಲ್ಲಿ ವ್ಯಾಪಾರ ಮಾಡುತ್ತಾರೆ.ಉದಾಹರಣೆಗೆ ಬಾಟಾ `ಸಂಸ್ಥೆ ನಮ್ಮ ದೇಶದ್ದಲ್ಲ. ಅದು 70 ದೇಶಗಳಲ್ಲಿ ಮಾರುತ್ತಿದ್ದರು. ಆದರೆ ಖಾದಿಮ್’ ಸಂಸ್ಥೆ ನಮ್ಮ ದೇಶದ್ದಾಗಿದ್ದು, ಕೇವಲ ಭಾರತದ 23 ಜಿಲ್ಲೆ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮಾತ್ರ ಮಾರಿತ್ತಿದೆ. ಹಾಗಾಗಿ ಬಾಟಾ’ದವರು ಕಡಿಮೆ ಬೆಲೆಯಲ್ಲಿ ಮಾರುತ್ತಾರೆ. ಆದ್ದರಿಂದ ಎಲ್ಲರೂ ಬಾಟಾ’ ಸಂಸ್ಥೆಯ ಬೂಟು ಮತ್ತು ಚಪ್ಪಲಿಗಳನ್ನು ಖರೀದಿಸಲು ಅಪೇಕ್ಷಿಸುತ್ತಾರೆ. ಈ ರೀತಿ ಆದಾಗ ನಮ್ಮ ದೇಶದವರಿಗೆ ಮತ್ತು ಕುಲಕಸುಬುಗಳನ್ನು ನಡೆಸುವವರಿಗೆ ಲಾಭವೂ ಇಲ್ಲ ಕೆಲಸವೂ ಇಲ್ಲದ ಹಾಗಾಗುತ್ತದೆ. ನಮ್ಮವರು ತಯಾರಿಸುವುದನ್ನು ಪಾಶ್ಚಾತ್ಯರ ವಸ್ತುಗಳಿಗೆ ಮೊರೆ ಹೋಗಿ ನಮ್ಮತನವನ್ನೇ ಮಾರಿಕೊಂಡಂತಾಗಿದೆ.

ನಾವೇನು ಮಾಡಬಹುದು ಎಂದು ಯೋಚಿಸಿದಾಗ ವಿದೇಶಿ ವಸ್ತುಗಳನ್ನು ತ್ಯಜಿಸಿ ಸ್ವದೇಶಿ ವಸ್ತುಗಳನ್ನು ಖರೀದಿಸಿ, ಅವರಿಗೆ ಬೆಂಬಲಿಸುವುದು ನಮ್ಮ ಕರ್ತವ್ಯ.

ನಾವು ನಮ್ಮ ದೇಶದಲ್ಲಿ ತಯಾರಾದಂತಹ ವಸ್ತುಗಳನ್ನೇ ಖರೀದಿಸಬೇಕು. ಕುಲಕಸುಬುಗಳನ್ನು ನಡೆಸುವವರಿಗೆ ಅಥವಾ ನಡೆಸಿಕೊಂಡು ಬಂದವರು ಆ ವಿದ್ಯೆಯನ್ನು ತಪ್ಪದೇ ತಮ್ಮ ಮಕ್ಕಳಿಗೆ ಹೇಳಿಕೊಡಬೇಕು.(ಇದು ಸಹ ನಾಶವಾಗಲು ಒಂದು ಕಾರಣ). ತಮ್ಮ ಮಕ್ಕಳನ್ನು ಬೇರೆ ವಿದ್ಯೆಯನ್ನು ಓದಲು ಕಳಿಸಿ, ಇದನ್ನು ಕಲಿಸಲು ಮರೆತುಬಿಡುತ್ತಾರೆ. ಹೀಗೆ ಖಂಡಿತ ಆಗಬಾರದು ಆಗ ಕುಲಕಸುಬುಗಳು ಸ್ವಲ್ಪ ಮಟ್ಟಿಗೆ ಬೆಳೆಯುತ್ತದೆ.
ನಮ್ಮತನ, ನಮ್ಮ ದೇಸೀ ಸಂಸ್ಕೃತಿ, ಕುಲಕಸುಬುಗಳನ್ನು ಹಾಗೂ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದೇ ನಮ್ಮ ಜವಾಬ್ದಾರಿ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: AnandakandaFlaxGoldsmithIndiaKannada News WebsiteKula Kasubu of IndiaKulakasubuLatest News KannadaOccupationಅಕ್ಕಸಾಲಿಗಅಗಸಆನಂದಕಂದಕಸುಬುಪೌರೋಹಿತ್ಯ
Share197Tweet123Send
Previous Post

ಗಮನಿಸಿ ! ಫೆ.7ರಂದು ಶಿವಮೊಗ್ಗ ನಗರದ ಈ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ

Next Post

ಶಿವಮೊಗ್ಗ ಕಂಬಳ | ಟ್ರ್ಯಾಕ್ ನಿರ್ಮಾಣ ಭೂಮಿಪೂಜೆ, ಲೋಗೋ, ವೆಬ್ ಸೈಟ್ ಆರಂಭಕ್ಕೆ ಡೇಟ್ ಫಿಕ್ಸ್

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶಿವಮೊಗ್ಗ | ತುಂಗಾ ತಟದಲ್ಲಿ ಕರಾವಳಿಯ ಕಂಬಳ | ಎಲ್ಲಿ, ಯಾವಾಗ ನಡೆಯಲಿದೆ? ಇಲ್ಲಿದೆ ವಿವರ

ಶಿವಮೊಗ್ಗ ಕಂಬಳ | ಟ್ರ್ಯಾಕ್ ನಿರ್ಮಾಣ ಭೂಮಿಪೂಜೆ, ಲೋಗೋ, ವೆಬ್ ಸೈಟ್ ಆರಂಭಕ್ಕೆ ಡೇಟ್ ಫಿಕ್ಸ್

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಸ್ವಾರ್ಥ ರಹಿತ ತ್ಯಾಗದಿಂದ ಭಗತ್ ಸಿಂಗ್ ಅಮರತ್ವ | ಸುರೇಶ್ ಋಗ್ವೇದಿ ಅಭಿಮತ

ಸ್ವಾರ್ಥ ರಹಿತ ತ್ಯಾಗದಿಂದ ಭಗತ್ ಸಿಂಗ್ ಅಮರತ್ವ | ಸುರೇಶ್ ಋಗ್ವೇದಿ ಅಭಿಮತ

March 24, 2026
ಏ.11-26 | ಇಸ್ಕಾನ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ

ಏ.11-26 | ಇಸ್ಕಾನ್ ವತಿಯಿಂದ ಮಕ್ಕಳ ಬೇಸಿಗೆ ಶಿಬಿರ

March 24, 2026
ಶಿವಮೊಗ್ಗದಲ್ಲಿ ಅರಳಿದ ಮೊಗ್ಗುಗಳು-5 | 80 ವಸಂತಗಳನ್ನು ಸಾರ್ಥಕವಾಗಿ ಕಳೆದ ಸಜ್ಜನಿಕೆಯ ಸೀತಾರಾಮ

ಶಿವಮೊಗ್ಗದಲ್ಲಿ ಅರಳಿದ ಮೊಗ್ಗುಗಳು-5 | 80 ವಸಂತಗಳನ್ನು ಸಾರ್ಥಕವಾಗಿ ಕಳೆದ ಸಜ್ಜನಿಕೆಯ ಸೀತಾರಾಮ

March 24, 2026
ತೀರ್ಥಹಳ್ಳಿ-ಮಂಗಳೂರು ಸೇರಿ 3 ರೈಲ್ವೆ ಮಾರ್ಗದ ಒಪ್ಪಿಗೆಗೆ ಎಂಪಿ ರಾಘವೇಂದ್ರ ಆಗ್ರಹ

ಸ್ವಾಭಿಮಾನದ ಬದುಕಿಗೆ ವಿಶ್ವಕರ್ಮ ಯೋಜನೆ ಶಕ್ತಿ ತುಂಬಿದೆ: ಸಂಸದ ರಾಘವೇಂದ್ರ

March 24, 2026
ಗಮನಿಸಿ! ಈ ಎರಡು ದಿನ ಮೈಸೂರು-ಶಿವಮೊಗ್ಗ ರೈಲು ಸಂಚಾರದಲ್ಲಿ ಬದಲಾವಣೆ

ಗುಡ್ ನ್ಯೂಸ್ | ಹುಬ್ಬಳ್ಳಿ – ರಾಮೇಶ್ವರಂ ನಡುವೆ ವಿಶೇಷ ರೈಲು | ಇಲ್ಲಿದೆ ಡೀಟೇಲ್ಸ್

March 24, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL