ಕಲ್ಪ ಮೀಡಿಯಾ ಹೌಸ್ | ಕಾಗಿನೆಲೆ |
ಕನಕದಾಸರ #Kanakadasaru ಸಾಹಿತ್ಯ ವಿಶ್ವಮಾನ್ಯವಾಗಿದೆ. ಈ ಸಾಹಿತ್ಯಕ್ಕೆ ಯಾವುದೇ ಜಾತಿ- ಮತಗಳ ತಾರತಮ್ಯ ಮಾಡದೇ ಅದನ್ನು ಉಳಿಸಿ ಬೆಳೆಸಬೇಕು ಎಂದು ಉಡುಪಿ ಭಂಡಾರಕೇರಿ #BandarakeriMatha ಮಠದ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.
ಅವರು ಕಾಗಿನೆಲೆ ಆದಿಕೇಶವನ ಸನ್ನಿಧಿಯ ಎದುರು ಇರುವ ಭಂಡಾರಕೇರಿ ಮಠದ ಪರಂಪರೆಯ 26ನೇ ಹಿರಿಯ ಯತಿ ಶ್ರೀ ರಾಜವಂದ್ಯತೀರ್ಥರ ಮೂಲವೃಂದಾವನ ಸನ್ನಿಧಾನದಲ್ಲಿ ಶುಕ್ರವಾರ ಆರಾಧನಾ ಉತ್ಸವ ನೆರವೇರಿಸಿ ಅನುಗ್ರಹ ಸಂದೇಶ ನೀಡಿದರು.
Also Read>> ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಪಠ್ಯೇತರ ಚಟುವಟಿಕೆಗಳು ಸಹಕಾರಿ: ಶಿವಕುಮಾರ್ ಅಭಿಪ್ರಾಯ
ಭೇದ ಭಾವ ಸಲ್ಲದು
ಕನಕದಾಸರ ಸಾಹಿತ್ಯದ ಪ್ರಚಾರ, ಪ್ರಸಾರ ಮತ್ತು ಸಂರಕ್ಷಣೆಯಲ್ಲಿ ಯಾವುದೇ ಭೇದ ಭಾವ ಸಲ್ಲದು. ಅವರು ಪದ-ಪದ್ಯಗಳಲ್ಲಿ ನೀಡಿರುವ ಸಂದೇಶ ಜಗತ್ತಿನ ಎಲ್ಲ ದೇಶ- ಕಾಲಕ್ಕೂ ಅನ್ವಯವಾಗುತ್ತದೆ ಎಂದು ಸ್ವಾಮೀಜಿ ನುಡಿದರು.
ಭಕ್ತ ಕನಕದಾಸರು ಯಾವುದೇ ಒಂದು ಸಮುದಾಯದ ನಾಯಕರು ಎಂಬಂತೆ ಬಿಂಬಿಸಬಾರದು. ಅವರು ಮತ್ತು ಅವರ ಸಾಹಿತ್ಯ ನಮ್ಮ ನಾಡಿನ ಬಹುದೊಡ್ಡ ಸಂಪತ್ತು. ಮಠ-ಮಾನ್ಯಗಳಂತೆ ಸರ್ಕಾರವೂ ಕನಕ ಸಾಹಿತ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಇನ್ನಷ್ಟು ಮಾಡಬೇಕು ಎಂದು ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ಹೇಳಿದರು.
Also Read>> ಸರ್ಕಾರಿ ಶಾಲೆ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮ | ಸಚಿವ ಮಧು ಬಂಗಾರಪ್ಪ
ಹರಿದಾಸ ಸಾಹಿತ್ಯ ವಾಹಿನಿಗೆ ಅನನ್ಯ ಕೊಡುಗೆ ನೀಡಿದ ಕನಕದಾಸರಿಗೆ ಆರಾಧ್ಯ ದೈವನಾದ ಆದಿ ಕೇಶವನ ಸನ್ನಿಧಿ ಎದುರೇ ನಮ್ಮ ಪರಂಪರೆಯ ಹಿರಿಯ ಸನ್ಯಾಸಿ ಶ್ರೀ ರಾಜವಂದ್ಯ ತೀರ್ಥರ ವೃಂದಾವನವೂ ಇರುವುದು ಬಹಳ ವಿಶೇಷ.
ವೃಂದಾವನ ಸಂರಕ್ಷಣೆ
ಯಾವ ಸಂಚಾರ ವ್ಯವಸ್ಥೆಯೂ ಇಲ್ಲದ ಕಾಲದಲ್ಲಿ ಕಾಲ್ನಡಿಗೆಯಲ್ಲೇ ದೇಶ ಸಂಚಾರ ಮಾಡುತ್ತಿದ್ದ ಸಂದರ್ಭ ನಮ್ಮ ಹಿರಿಯ ಯತಿಗಳು ಈ ಕ್ಷೇತ್ರದಲ್ಲಿ ವೃಂದಾವನಸ್ಥರಾಗಿದ್ದಾರೆ. ಈ ಸನ್ನಿಧಿಯನ್ನು (ಶಿಲಾಮಂಟಪ) ಕಳೆದ ವರ್ಷ ನವೀಕರಣಗೊಳಿಸಿ ವೃಂದಾವನ ಸಂರಕ್ಷಣೆ ಮಾಡಲಾಗಿದೆ. ನಾಡಿನ ಸಂಸ್ಕೃತಿ ಮತ್ತು ಮಾಧ್ವ ಪರಂಪರೆಗೆ ಇದು ಪ್ರತೀಕವಾಗಿದೆ ಎಂದು ಶ್ರೀಗಳು ನುಡಿದರು.
ಹಿರಿಯ ಯತಿಗಳ ವೃಂದಾವನದ ಎದುರು ಶ್ರೀಗಳು ಸಂಸ್ಥಾನ ಪೂಜೆ ನೆರವೇರಿಸಿದರು. ಮಹಾ ಮಂಗಳಾರತಿ ಸಮರ್ಪಿಸಿ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಶ್ರೀಮಠದ ಶಿಷ್ಯರು ಮತ್ತು ಭಕ್ತರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post