ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪುತ್ತೂರು: ಅಶಕ್ತರಿಗೆ ನೆರವಾಗುವ ಮೂಲಕ ಇಲ್ಲಿನ ವಿಷನ್ ಸೇವಾ ಟ್ರಸ್ಟ್ ಮಾದರಿಯಾಗಿದೆ.
ಟ್ರಸ್ಟ್ ನ ಮಹತ್ವ ಪೂರ್ಣ ಯೋಜನೆಯಾದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮತ್ತು ಆಸಕ್ತರಿಗೆ ನಿರಂತರವಾಗಿ ದಾನಿಗಳ ಸಹಕಾರದಿಂದ ಪ್ರತಿ ತಿಂಗಳು ದಿನಸಿ ಸಾಮಗ್ರಿಗಳ ಕಿಟ್ ನೀಡುವ ಮಾಸಿಕ ಯೋಜನೆ ಒಳಿತು ಮಾಡು ಮನುಷ್ಯ, ಇದರ ನವೆಂಬರ್ ತಿಂಗಳ ಕಾರ್ಯಕ್ರಮವು ರೋಟರಿ ಜಿಎಲ್ ಸಭಾಭವನ ರೂಫ್ ಟಾಪ್ ಹಾಲ್’ನಲ್ಲಿ ನಡೆಯಿತು.
48 ಬಡ ರೋಗಿಗಳಿಗೆ 1,000 ರೂಪಾಯಿ ಫುಡ್ ಕಿಟ್ ನೀಡಲಾಯಿತು. ಮರದಿಂದ ಬಿದ್ದು ಬೆನ್ನು ಮೂಳೆ ಮುರಿತ ಕೊಳಕ್ಕಾದ ಪುತ್ತೂರು ತಾಲೂಕು ನಗರಸಭಾ ವ್ಯಾಪ್ತಿಯ ಕರ್ಕುಂಜ ನಿವಾಸಿ ಶ್ರೀಹರಿಶ್ಚಂದ್ರರಿಗೆ 5,000 ರೂ. ಚೆಕ್ ಮತ್ತು ಫುಡ್ ಕಿಟ್ ವಿತರಣೆ, ಮರದಿಂದ ಬಿದ್ದು ಬೆನ್ನು ಮೂಳೆ ಮುರಿತ ಗೊಂಡು ಮಲಗಿದ್ದಲ್ಲೆ ಇರುವ ತೆಕ್ಕಡ್ಕ ಮನೆ ಕೊಡಿಂಬಾಳ ಕಡಬದ ಆನಂದ ಅವರಿಗೇ 5,000 ರೂ.ಚೆಕ್ ಮತ್ತು ಫುಡ್ ಕಿಟ್ ವಿತರಣೆ, ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಮುರದಾಚಡವು ಮನೆ ಕೋಡಿಂ ಬಾಳ ಕಡಬದ ವೇದಾವತಿ ಅವರಿಗೆ 5,000 ರೂ. ಚೆಕ್ ಮತ್ತು ಫುಡ್ ಕಿಟ್ ವಿತರಣೆ ಹಾಗೂ ತುರ್ತು ಯೋಜನೆಯಾಗಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅರ್ಲ ನೆಲ್ಯಾಡಿಯ ಸುರೇಶ್ ಅವರಿಗೆ 1,500 ನಗದು ಮತ್ತು ಫುಡ್ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್’ನ ದಾನಿ ರಾಮಚಂದ್ರ ಭಟ್ ಮಡ್ಯಂಗಳ, ಗೌರವ ಸಲಹೆಗಾರರಾದ ಪ್ಯಾಟ್ರಿಕ್ ಚಿಪ್ರಿಯನ್ ಮಸ್ಕರೇನಸ್, ಕಲಾವಿದ ಕೃಷ್ಟಪ್ಪ ಶಿವನಗರ, ಮಹಮ್ಮದ್ ಬಶೀರ್, ಗೌರವಾದ್ಯಕ್ಷ ಶರತ್ ಕುಮಾರ್, ಸಂಚಾಲಕರಾದ ದಿಲೀಪ್ ಕುಮಾರ್, ಅಧ್ಯಕ್ಷ ಚೇತನ್ ಕುಮಾರ್ ಪುತ್ತೂರು, ಕಾರ್ಯದರ್ಶಿ ಮೋಹನ ಸಿಂಹವನ, ಖಜಾಂಚಿ ಶೋಭಾ, ಉಪಾಧ್ಯಕ್ಷ ಸ್ವಾತಿ, ಜ್ಯೋತಿ ಕಾರ್ಯದರ್ಶಿ ಸರಸ್ವತಿ, ಝೋಥೆ ಕಾರ್ಯದರ್ಶಿ ಸೀತಾ, ಸಂಘಟನೆ ಕಾರ್ಯದರ್ಶಿ ಗೀತಾಂಜಲಿ ಮತ್ತು ಸದಸ್ಯರು ಮುನ್ನ ಹಾಜರಿದ್ದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ವತಿಯಿಂದ ಉಚಿತವಾಗಿ ಸಭಾಂಗಣವನ್ನು ನೀಡಿದ್ದರು. ನಿರೂಪಣೆಯನ್ನು ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ನಿರ್ವಹಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post