ಬಗ್ದಮ್: ಪಾಕ್ ಉಗ್ರರು ನಿನ್ನೆ ಜಮ್ಮುವಿನ ಪುಲ್ವಾಮಾದಲ್ಲಿ ನಡೆಸಿದ ಭೀಕರ ದಾಳಿಯಲ್ಲಿ ವೀರಸ್ವರ್ಗ ಸೇರಿದ ಯೋಧರ ಪಾರ್ಥಿವ ಶರೀರಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸ್ವತಃ ಹೆಗಲುಕೊಟ್ಟಿದ್ದಾರೆ.
ಬಗ್ದಮ್’ನಲ್ಲಿರುವ ಸಿಆರ್’ಪಿಎಫ್ ಕ್ಯಾಂಪ್’ಗೆ ವೀರಸ್ವರ್ಗ ಸೇರಿದ ಎಲ್ಲ ಯೋಧರ ಪಾರ್ಥಿವ ಶರೀರಗಳನ್ನು ತಂದು, ಸಕಲ ಸೇನಾ ಗೌರವವನ್ನು ಸಲ್ಲಿಸಲಾಯಿತು.
#WATCH: Home Minister Rajnath Singh and J&K DGP Dilbagh Singh lend a shoulder to mortal remains of a CRPF soldier in Budgam. #PulwamaAttack pic.twitter.com/CN4pfBsoVr
— ANI (@ANI) February 15, 2019
ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಅವಲೋಕನದ ಹಿನ್ನೆಲೆಯಲ್ಲಿ ಇಲ್ಲಿಗೆ ಭೇಟಿ ನೀಡಿರುವ ರಾಜನಾಥ್ ಸಿಂಗ್, ಯೋಧರ ಪಾರ್ಥಿವ ಶರೀರನ್ನು ಸ್ವತಃ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ವೀರ ಯೋಧರಿಗೆ ಗೌರವ ಸಲ್ಲಿಸಿದರು. ಘಟನೆಯಿಂದ ಆಘಾತಗೊಂಡಿರುವ ಗೃಹ ಸಚಿವರ ಮುಖದಲ್ಲಿ ದುಃಖ ಮಡುಗಟ್ಟಿತ್ತು.
ರಾಜನಾಥ್ ಸಿಂಗ್ ಅವರೊಂದಿಗೆ ಜಮ್ಮು ಕಾಶ್ಮೀರ ಡಿಜಿಪಿ ದಲ್ಬೀರ್ ಸಿಂಗ್ ಅವರೂ ಸಹ ಹೆಗಲು ಕೊಟ್ಟಿದ್ದರು.
Discussion about this post