No Result
View All Result
ಚಳಿಗಾಲದ ಸೋಂಕುಗಳು & ಆಂಟಿಬಯೋಟಿಕ್ ದುರ್ಬಳಕೆ | ವೈರಲ್ ಯಾವುದು? ಅಪಾಯಕಾರಿ ಯಾವುದು?
English Articles

Winter Infections and Antibiotic Misuse: What Is Viral? What Is Dangerous?

by ಕಲ್ಪ ನ್ಯೂಸ್
January 12, 2026
0

Kalpa Media House  |  Bengaluru  | With a rise in cold, cough, fever, and respiratory infections during the winter season,...

Read moreDetails
ಶಿವಮೊಗ್ಗ | ಜ.5-9 | ಕೃಷಿ ವಿವಿಯಲ್ಲಿ ನಡೆಯಲಿದೆ ಅಂತಾರಾಷ್ಟ್ರೀಯ ಮಹತ್ವದ ಕಾರ್ಯಾಗಾರ

Shivamogga | An international workshop will be held at the Agricultural University from Jan 5-9

January 1, 2026
ನಿಮಗೂ ಹೊಟ್ಟೆ ಹಿಂಸೆ ಇದೆಯಾ? ಹಾಗಾದ್ರೆ `ವಿಂಟರ್ ಪಾರ್ಟಿ ಸಿಂಡ್ರೋಮ್’ ಇರಬಹುದು | ಏನಿದು ಕಾಯಿಲೆ?

Winter Party Syndrome: Festive Bingeing Triggers 25% Spike in Stomach Troubles”

January 1, 2026
ಲೆವೆಲ್ ಕ್ರಾಸಿಂಗ್ ಕಾಮಗಾರಿ | ಬೆಂಗಳೂರು–ಮೈಸೂರು ಪ್ಯಾಸೆಂಜರ್ ರೈಲು ಸಂಚಾರ ರದ್ದು

Major update of Shivamogga – Bengaluru Jana Shathabdi, Shivamogga – Chikkamagalur, Tumkur trains

December 27, 2025
ವಿಮಾನಗಳ ರದ್ದು | ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ | ಹಲವು ತುರ್ತು ಕ್ರಮ

Indian Railways Rationalises Fare Structure From Dec 26 | What charges for passengers

December 26, 2025
  • Advertise With Us
  • Grievances
  • About Us
  • Contact Us
Wednesday, January 14, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಪಶ್ಚಿಮಘಟ್ಟದ ಮಡಿಲಿನಲ್ಲಿರುವ ಕಮಲಶಿಲೆ ಅತಿಶಯ ಕ್ಷೇತ್ರಕ್ಕೊಮ್ಮೆ ನೀವು ಭೇಟಿ ನೀಡಲೇಬೇಕು

ಲಿಂಗರೂಪಿ ದೇವತೆಯ ಅಭಿಷೇಕಕ್ಕೆ ಇಲ್ಲಿನ ಕುಬ್ಜಾನದಿಯೇ ಉಕ್ಕುತ್ತದೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
January 28, 2020
in Special Articles
0
ಪಶ್ಚಿಮಘಟ್ಟದ ಮಡಿಲಿನಲ್ಲಿರುವ ಕಮಲಶಿಲೆ ಅತಿಶಯ ಕ್ಷೇತ್ರಕ್ಕೊಮ್ಮೆ ನೀವು ಭೇಟಿ ನೀಡಲೇಬೇಕು
Share on FacebookShare on TwitterShare on WhatsApp


ಶಿವಮೊಗ್ಗದಿಂದ ಸಾಗಿದರೆ ತೀರ್ಥಹಳ್ಳಿ-ಆಗುಂಬೆ ಘಾಟಿಯಿಳಿದು ಕುಂದಾಪುರ ರಸ್ತೆಯಲ್ಲಿ ನಿಮಗೆ ಸಿದ್ಧಾಪುರ ಎಂಬ ಊರು ಸಿಗುತ್ತದೆ. ಅಲ್ಲಿಂದ ಆರು ಕಿಮೀ ದೂರದಲ್ಲಿದೆ ಉಡುಪಿ ಜಿಲ್ಲೆಯ ಕಮಲಶಿಲೆ.

ಪುಟ್ಟ ಗುಡ್ಡಬೆಟ್ಟಗಳ ನಡುವೆ ನಿಸರ್ಗದ ಕೂಸಿನಂತಿದೆ ಕಮಲಶಿಲೆ. ಅಲ್ಲಿ ನಾಗತೀರ್ಥ ಮತ್ತು ಕುಬ್ಜಾನದಿಗಳ ಸಂಗಮವಿದೆ. ಪುಣ್ಯಕ್ಷೇತ್ರಗಳ ಅಸ್ತಿತ್ವಗಳೆಲ್ಲ ನಮ್ಮಲ್ಲಿ ನದಿ ತೀರ ಅಥವಾ ಸಂಗಮಿಸುವ ಸ್ಥಳಗಳಾಗಿರುವುದು ಭಾರತದಲ್ಲಿನ ವಿಶೇಷವಾಗಿದ್ದು, ಅದಕ್ಕೊಂದು ಐತಿಹ್ಯವೂ ಸಹ ಇರುತ್ತದೆ.

ಕೈಲಾಸದಲ್ಲಿ ಆಸ್ಥಾನ ನರ್ತಕಿಯಾಗಿದ್ದ ಪಿಂಗಲಾ ನಾಟ್ಯಮಾಡದ ಕಾರಣಕ್ಕಾಗಿ ಪಾರ್ವತಿ ಶಾಪಕ್ಕೆ ತುತ್ತಾಗುತ್ತಾಳೆ. ಅತಿ ಸುಂದರಿಯಾಗಿದ್ದ ಆಕೆ ಕುರೂಪಿ, ಕುಬ್ಜೆಯಾಗಿ ಭೂಮಿಯಲ್ಲಿ ಜನಿಸುತ್ತಾಳೆ. ಪಾಪ ಪರಿಹಾರ ಕೇಳಲಾಗಿ ತಾನು ಭೂಲೋಕದಲ್ಲಿ ಖರ ರಟ್ಟಾಸುರರ ಸಂಹಾರಕ್ಕಾಗಿ ಅವತರಿಸಿ ಬರುತ್ತೇನೆ. ರೈಕ್ವಾಮನಿಗಳ ಆಶ್ರಮದ ಬಳಿ ನಾಗತೀರ್ಥದ ಸನಿಹವಿರುವ ನದಿದಡದಲ್ಲಿ ನೀನು ತಪಸ್ಸನ್ನಾಚರಿಸು. ಅಲ್ಲಿಯೇ ಲಿಂಗರೂಪಿಯಾಗಿ ಉದ್ಭವಿಸುವೆ. ಬ್ರಾಹ್ಮೀ ದುರ್ಗಾ ಪರಮೇಶ್ವರಿಯಾಗಿ ಭಕ್ತರ ಅಭೀಷ್ಟ ನೆರವೇರಿಸುತ್ತೇನೆ. ಆಗ ನಿನಗೆ ವಿಮೋಚನೆಯ ಮಾರ್ಗ ಸೂಚಿಸುವೆ ಎಂದು ಪಾರ್ವತಿ ಅನುಗ್ರಹವಾಗುತ್ತದೆ.

ಅದರಂತೆ ಪಿಂಗಲಾ ಅಲ್ಲಿ ತಪಸ್ಸನ್ನಾಚರಿಸಿ ದೇವಿಯ ಅನುಗ್ರಹಕ್ಕೆ ಪಾತ್ರಳಾಗುತ್ತಾಳೆ. ಪಿಂಗಲಾ ನೆನಪಿಗೆ ಆಕೆಯ ಆಶ್ರಮದ ಸಮೀಪದ ನದಿಗೆ ಕುಬ್ಜಾವತಿ ಎಂದು ಹೆಸರಿಡುತ್ತಾಳೆ.

ಪ್ರತೀ ವರ್ಷ ಲಿಂಗರೂಪಿ ದೇವತೆಗೆ ನೀರಿನ ಅಭಿಷೇಕ ಸಿಂಚಿಸಲು ಕುಬ್ಜಾನದಿಯು ಉಕ್ಕಿ ಬಂದು ದೇವಳದ ಒಳಗೆ ಪ್ರವಹಿಸುತ್ತದೆ. ಲಿಂಗ ಮುಳುಗುವಂತೆ ಮಾಡುವುದನ್ನು ಯಾತ್ರಾರ್ಥಿಗಳು ನೋಡಿದ್ದಾರೆ. ಇತ್ತೀಚೆಗೆ ಮಾದ್ಯಮಗಳೂ ಈ ದೃಶ್ಯವನ್ನು ಪ್ರಸಾರ ಮಾಡಿವೆ.

ಸದ್ಯ ಈಗ ಗರ್ಭಗೃಹವು ಶಿಲಾಮಯವಾಗುತ್ತಿದೆ. ಸುವರ್ಣಗೋಪುರ ನಿರ್ಮಿಸುವ ಯೋಜನೆ ನಡೆಯುತ್ತಿದೆ. ಗರ್ಭಗೃಹದ ಮೊದಲಿಗಿದ್ದ ಬೆಳ್ಳಿ ಹೊದಿಕೆಯ ಪ್ರವೇಶದ್ವಾರದ ಚೌಕಟ್ಟನ್ನು ತೆಗೆಯಲಾಗಿದೆ.

ದೇವಳದ ಒಳಗಡೆ ಪ್ರಾಕಾರದಲ್ಲಿ ಪರಿವಾರ ದೇವರುಗಳಿವೆ. ಶ್ರೀ ವೀರಭದ್ರ ಸ್ವಾಮಿ, ಶ್ರೀ ಹೊಸಮ್ಮ, ಶ್ರೀ ಮುಂಡಂತ್ತಾಯ, ಶ್ರೀ ಸುಬ್ರಹ್ಮಣ್ಯ, ಶ್ರೀ ಈಶ್ವರ, ಶ್ರೀ ವಿಷ್ಣು, ಶ್ರೀ ಆಂಜನೇಯ, ನವಗ್ರಹ ದೇವತೆಗಳು ಹಾಗೂ ಶ್ರೀ ಗಣಪತಿ ಇಷ್ಟೂ ದೈವಗಳು ಪ್ರಾಕಾರದಲ್ಲಿ ಪೂಜೆಗೊಳ್ಳುತ್ತವೆ.

ಪೌರಾಣಿಕ ಹಿನ್ನೆಲೆ
ಕೃತಯುಗದಲ್ಲಿ ಸುಪಾರ್ಶ್ವ ಮುನಿ ಇಲ್ಲಿನ ಅರಣ್ಯ ಪ್ರದೇಶದಲ್ಲಿನ ಗುಹೆಯಲ್ಲಿ ತಪಗೈದರಂತೆ. ಹೀಗಾಗಿ ಗುಹೆಗೆ ಸುಪಾರ್ಶ್ವ ಗುಹೆ ಎಂಬ ಹೆಸರು ಬಂದಿದೆ. ಮುನಿಯ ರಕ್ಷಣೆಗೆ ಶಿವಗಣದ ಭೈರವ ಶಿವನ ಆಣತಿಯಂತೆ ಅಲ್ಲಿ ಕಾವಲಿರುತ್ತಾನೆ.

ಗುಹೆಯಲ್ಲಿ ಲಿಂಗರೂಪಿಯಾಗಿರುವ ಕಾಳಿ, ಲಕ್ಷ್ಮೀ, ಸರಸ್ವತಿಯರಿದ್ದಾರೆ. ಇದನ್ನು ಶಕ್ತಿತ್ರಯ ಸ್ವರೂಪವೆಂದು ಹೇಳಲಾಗುತ್ತದೆ. ಗಂಗೆಗೌರಿಯೆಂಬ ಜೋಡಿ ಕೆರೆಗಳಿದ್ದು, ಸನಿಹವೇ ನಾಗತೀರ್ಥವಿದೆ. ಅದು ಕಿರು ನದಿಯಾಗಿದ್ದು ಮುಂದೆ ಕುಬ್ಜಾನದಿಯಲ್ಲಿ ಸಂಗಮಗೊಳ್ಳತ್ತದೆ. ಪ್ರಸ್ತುತ ದೇವಿ ಸ್ಥಾಪನೆಯಾಗಿರುವ ಸ್ಥಳವು ಹಿಂದೆ ರೈಕ್ವಾ ಮುನಿಗಳ ಆಶ್ರಮವಾಗಿತ್ತು. ಅಲ್ಲಿಯೇ ಪಾರ್ವತಿಯು ಬ್ರಾಹ್ಮೀ ದುರ್ಗಾ ಪರಮೇಶ್ವರಿಯಾಗಿ ಲಿಂಗರೂಪದಲ್ಲಿ ಉದ್ಭವಿಸಿದ್ದಾಳೆ.

ಈಗ ದೇವಳವು ಅಭಿವೃದ್ಧಿ ಹೊಂದುತ್ತಿದೆ. ಆನುವಂಶಿಕ ಧರ್ಮದರ್ಶಿಗಳಾಗಿ ಶ್ರೀ ಸಚ್ಚಿದಾನಂದ ಚಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಸೇವೆಗಳು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ನೆರವೇರಿಸಲ್ಪಡುತ್ತವೆ. ಚೈತ್ರ ಬಹುಳದ ಮೂಲಾ ನಕ್ಷತ್ರದಂದು ದೇವಿಯ ಮಹಾರಥೋತ್ಸವ ನಡೆಯುತ್ತದೆ.

ಮತ್ತೊಂದು ವಿಶೇಷ!
ಕ್ರಿಶ 1953ರಲ್ಲಿ ಸಂತ ಶ್ರೀ ಶ್ರೀಧರ ಸ್ವಾಮಿಗಳು ಕಮಲಶಿಲೆಗೆ ಆಗಮಿಸಿದ್ದರು. ಅಂದಿನಿಂದ ಪುರುಷ ಭಕ್ತರು ಮೇಲಂಗಿ, ಒಳಂಗಿ ತೆಗೆದು ದೇವಿ ದರ್ಶನಕ್ಕೆ ಪ್ರವೇಶಿಸುವ ಸಂಪ್ರದಾಯ ಬಂದಿತಂತೆ. ಎರಡು ವರ್ಷಕ್ಕೊಮ್ಮೆ ಅಲ್ಲಿ ಮಾರಿಜಾತ್ರೆ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಕುರಿ, ಕೋಳಿ ಬಲಿ ನೀಡಲಾಗುತ್ತಿತ್ತು. ಶ್ರೀಧರ ಸ್ವಾಮಿಗಳ ಪ್ರಯತ್ನದಿಂದ ಪ್ರಾಣಿ ಬಲಿಗೆ ಬದಲು ಕುಂಬಳ ಮತ್ತು ತೆಂಗಿನ ಕಾಯಿಗಳನ್ನು ಅರ್ಪಿಸುವ ಸಂಪ್ರದಾಯ ರೂಢಿಗೆ ಬಂದಿತು.

ಇನ್ನು, ದೇವಳದಿಂದ ಗೋಶಾಲೆ, ಯಕ್ಷಗಾನ ಮೇಳ, ವಿದ್ಯಾಸಂಸ್ಥೆಗಳು ನಿರ್ವಹಿಸಲ್ಪಡುತ್ತಿವೆ. ಇಂತಹ ಹಲವು ವಿಶೇಷತೆಗಳನ್ನೊಳಗೊಂಡ ಕಮಲಶಿಲೆ, ಸುಂದರ ಪ್ರಕೃತಿಯ ನಡುವೆ ರಾರಾಜಿಸುತ್ತಿದೆ. ಮುಂದೆ ಕೊಲ್ಲೂರು ಸಮೀಪದ ಮತ್ತೊಂದು ಕ್ಷೇತ್ರ. ಹೀಗೆ ತನ್ನದೇ ಸೊಬಗಿನಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಇಲ್ಲಿ ತಂಗಲು ವಸತಿ ವ್ಯವಸ್ಥೆಯಿದ್ದು, ಮುಂಚೆಯೇ ತಿಳಿಸಿದರೆ ಕ್ಷೇತ್ರ ದರ್ಶನ ಹಾಗೂ ಪ್ರವಾಸ ಸಂಸತವಾಗಿರುತ್ತದೆ. ಅಲ್ಲದೇ, ಬಂದಂತಹ ಎಲ್ಲ ಭಕ್ತಾದಿಗಳಿಗೆ ಮಧ್ಯಾಹ್ನ ದೇವಿ ಪ್ರಸಾದ ರೂಪದ ಭೋಜನ ವ್ಯವಸ್ಥೆಯಿದೆ.

ಹೆಚ್ಚಿನ ಮಾಹಿತಿಗೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರ ಮೊ. 95915 60809, 63644 80126ಗೆ ಸಂಪರ್ಕಿಸಬಹುದು.

Get in Touch With Us info@kalpa.news Whatsapp: 9481252093

Tags: Dr SudheendraKamalashileKannada News WebsiteKubja RiverPlaces Near Western GhatsPlaces To Visit In UdupiShivamoggaShree Brahmi Durgaparameshwari TempleShrineWestern Ghatsಅಭಿಷೇಕಕಮಲಶಿಲೆಕುಬ್ಜಾನದಿಡಾ.ಸುಧೀಂದ್ರತೀರ್ಥಹಳ್ಳಿಪಶ್ಚಿಮಘಟ್ಟಪುಣ್ಯಕ್ಷೇತ್ರಶಿವಮೊಗ್ಗಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ
Share263Tweet123Send
Previous Post

ಮತಾಂಧರೇ, ಇದು ನಮ್ಮ ಸಂಸ್ಕೃತಿ: ಹರೇಕಳ ಹಾಜಬ್ಬ ಎಂಬ ಅಮೂಲ್ಯರತ್ನವನ್ನು ಜಗತ್ತಿಗೆ ಪರಿಚಯಿಸಿದ ಪ್ರಧಾನಿ

Next Post

ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು: ತಪ್ಪದೇ ಓದಲೇಬೇಕಾದ ಪುಸ್ತಕ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು: ತಪ್ಪದೇ ಓದಲೇಬೇಕಾದ ಪುಸ್ತಕ

ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು: ತಪ್ಪದೇ ಓದಲೇಬೇಕಾದ ಪುಸ್ತಕ

Leave a Reply Cancel reply

Your email address will not be published. Required fields are marked *

  • Trending
  • Latest
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
ಶಿವಮೊಗ್ಗ | ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ಶಿವಮೊಗ್ಗ | ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

January 9, 2026
ಜ.14ರಂದು ಶಿವಯೋಗಿ ಶ್ರೀ ಸಿದ್ದರಾಮೇಶ್ವರರ 853ನೇ ಜಯಂತಿ ಆಚರಣೆ: ರವಿಕುಮಾರ್

ಜ.14ರಂದು ಶಿವಯೋಗಿ ಶ್ರೀ ಸಿದ್ದರಾಮೇಶ್ವರರ 853ನೇ ಜಯಂತಿ ಆಚರಣೆ: ರವಿಕುಮಾರ್

January 12, 2026
ವಿದ್ಯೆ-ಕಲೆ-ಸಂಸ್ಕಾರದ ತ್ರಿವೇಣಿ ಸಂಗಮ | ಮಂಗಳೂರಿನ ಡಾ. ಪ್ರಿಯಾ ಹರೀಶ್

ವಿದ್ಯೆ-ಕಲೆ-ಸಂಸ್ಕಾರದ ತ್ರಿವೇಣಿ ಸಂಗಮ | ಮಂಗಳೂರಿನ ಡಾ. ಪ್ರಿಯಾ ಹರೀಶ್

January 10, 2026
ಪುತ್ತೂರು | ನಾಟ್ಯ ಲೋಕದ ವೈಭವ ಧರೆಗಿಳಿಸಿದ ವಿದ್ವಾನ್ ದೀಪಕ್ ಕುಮಾರ್

ಪುತ್ತೂರು | ನಾಟ್ಯ ಲೋಕದ ವೈಭವ ಧರೆಗಿಳಿಸಿದ ವಿದ್ವಾನ್ ದೀಪಕ್ ಕುಮಾರ್

January 12, 2026
ದೃಢ ಆತ್ಮವಿಶ್ವಾಸದೊಂದಿಗೆ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಿ: ಪ್ರಾಚಾರ್ಯ ಶಿವಕುಮಾರ ಕರೆ

ದೃಢ ಆತ್ಮವಿಶ್ವಾಸದೊಂದಿಗೆ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಿ: ಪ್ರಾಚಾರ್ಯ ಶಿವಕುಮಾರ ಕರೆ

January 14, 2026
ಭಾರತೀಯ ಸೇನೆಯು ಕ್ಷಿಪಣಿ, ರಾಕೇಟ್ ಪಡೆಗಳನ್ನು ಸೃಷ್ಠಿಸುತ್ತಿದೆ | ಸೇನಾ ಮುಖ್ಯಸ್ಥ ಹೀಗೆ ಹೇಳಿದ್ದೇಕೆ?

ಭಾರತೀಯ ಸೇನೆಯು ಕ್ಷಿಪಣಿ, ರಾಕೇಟ್ ಪಡೆಗಳನ್ನು ಸೃಷ್ಠಿಸುತ್ತಿದೆ | ಸೇನಾ ಮುಖ್ಯಸ್ಥ ಹೀಗೆ ಹೇಳಿದ್ದೇಕೆ?

January 14, 2026
ಟಾಟಾ ಮುಂಬೈ ಮ್ಯಾರಥಾನ್ 2026ರಲ್ಲಿ ದಾಖಲೆ ನಿಧಿ ಸಂಗ್ರಹ

ಟಾಟಾ ಮುಂಬೈ ಮ್ಯಾರಥಾನ್ 2026ರಲ್ಲಿ ದಾಖಲೆ ನಿಧಿ ಸಂಗ್ರಹ

January 14, 2026
ಅಧಿವೇಶನದಲ್ಲಿ ಶಾಸಕ ಡಾ.ಸರ್ಜಿ ಧ್ವನಿ | ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ

ಅಧಿವೇಶನದಲ್ಲಿ ಶಾಸಕ ಡಾ.ಸರ್ಜಿ ಧ್ವನಿ | ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ

January 14, 2026
ಹೊಸನಗರದ ಶ್ರೀ ವೀರಶೈವ ಸಹಕಾರ ಸಂಘಕ್ಕೆ ವಿಶೇಷಾಧಿಕಾರಿ ನೇಮಿಸಿ: ಸದಸ್ಯರ ಆಗ್ರಹ

ಹೊಸನಗರದ ಶ್ರೀ ವೀರಶೈವ ಸಹಕಾರ ಸಂಘಕ್ಕೆ ವಿಶೇಷಾಧಿಕಾರಿ ನೇಮಿಸಿ: ಸದಸ್ಯರ ಆಗ್ರಹ

January 13, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL