Read - < 1 minute
ನವದೆಹಲಿ, ಅ.5: ನಿರ್ಧಿಷ್ಟ ಗುರಿ ದಾಳಿ ಸಂಬಂಧ ಸಾಕಷ್ಟು ಆರೋಪಗಳು ಕೇಳಿಬಂದ ಹಿನ್ನೆಲೆ ಈ ಬಗ್ಗೆ ಪ್ರಧಾನಿ ಮೋದಿ ಕಠಿಣ ಪ್ರತಿಕ್ರಿಯೆ ನೀಡಿದ್ದಾರೆ. ಸಂಪುಟ ಸಮಿತಿ ಸಭೆ ವೇಳೆ ಈ ಬಗ್ಗೆ ಮಾತನಾಡಿದ ಪ್ರಧಾನಿ ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ನಡೆದ ನಿರ್ಧಿಷ್ಟ ಗುರಿ ದಾಳಿ ಬಗ್ಗೆ ಕೆಲವರು ಸಾಕ್ಷ್ಯ ಕೇಳುವ ಮೂಲಕ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ವಿವಿಧ ವಿಚಾರಗಳನ್ನು ಹಬ್ಬಿಸುತ್ತಿದ್ದಾರೆ. ಈ ಬಗ್ಗೆ ಪ್ರಮುಖ ಸ್ಥಾನಗಳಲ್ಲಿರುವವರೇ ಈ ರೀತಿಯಾಗಿ ಮಾತನಾಡುತ್ತಿದ್ದಾರೆ.
ಸರ್ಕಾರ ನಡೆಸಿದ ನಿರ್ಧಿಷ್ಟ ಗುರಿ ದಾಳಿ ಬಗ್ಗೆ ಸಾಕ್ಷ್ಯ ಒದಗಿಸಲಿ ಎಂಬ ಹೇಳಿಕೆಗೆ ಮೋದಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಈಗಲೂ ಸರ್ಕಾರ ನಿರ್ಧಿಷ್ಟ ಗುರಿ ದಾಳಿ ಬಗ್ಗೆ ಸಾಕ್ಷ್ಯಾಧಾರಗಳನ್ನು ಹೊಂದಿದೆ. ಈ ಮಾತುಗಳು ತೀವ್ರ ಚರ್ಚೆಗಳಿಗೆ ಪ್ರಚೋದನೆಯಾಗುತ್ತಿದೆ. ಆದ್ದರಿಂದ ಇಂತಹ ಹೇಳಿಕೆಗಳನ್ನು ನೀಡುತ್ತಿರುವವರು ಮೊದಲು ನಿಲ್ಲಿಸಲಿ ಎಂದು ಹೇಳಿದ್ದಾರೆ. ಇದೇ ಅ.14 ರಂದು ನಡೆಯುವ ಸಭೆಯಲ್ಲಿ ಈ ಬಗ್ಗೆ ರಕ್ಷಣಾ ಸಚಿವಾಲಯ ವಿವರಣೆ ನೀಡಲಿದೆ ಎಂದು ಹೇಳಿದ್ದಾರೆ.
Discussion about this post