ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬ್ಯಾಂಕಾಕ್ನ ರತನ್ ಬಂಡಿತ್ ಯೂನಿವರ್ಸಿಟಿಯ ಒಳಾಂಗಣ ಕ್ರೀಡಾಂಗಣದಲ್ಲಿ ಫೆ.15ರಂದು ನಡೆದ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ #International Karate Tournament ಶಿವಮೊಗ್ಗ ಹಾಗೂ ಉತ್ತರಕನ್ನಡ ಜಿಲ್ಲೆಯ ಕರಾಟೆ ಪಟುಗಳು ಭಾರತ ದೇಶವನ್ನು ಪ್ರತಿನಿಧಿಸಿ ನಾಲ್ಕು ಚಿನ್ನ ಹಾಗೂ ನಾಲ್ಕು ಬೆಳ್ಳಿ ಪದಕವನ್ನು ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಕರ್ನಾಟಕ ಶೋಟೊ ಕಾಯ್ ಕರಾಟೆ ಡೋ ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಜಿ.ಭಟ್ ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಟಾ ಮತ್ತು ಕಮಿಟೆ, ಬಾಲಕ, ಬಾಲಕಿಯರ ಸಬ್ ಜೂನಿಯರ್ 14 ವರ್ಷದೊಳಗಿನ ವಿಭಾಗದಲ್ಲಿ ಕರಾಟೆ ಪಟುಗಳು ಪದಕಗಳಿಸಿ ವೈಯಕ್ತಿಕ ವಿಭಾಗದಲ್ಲಿ ವಿಜೇತರಾಗಿದ್ದಾರೆ ಎಂದರು.
ಈ ಪಂದ್ಯಾವಳಿಯಲ್ಲಿ ಸುಮಾರು 17 ರಾಷ್ಟ್ರಗಳ ಕರಾಟೆ ಪಟುಗಳು ವಿವಿಧ ವಿಭಾಗಗಳಿಗೆ ಸ್ಪರ್ಧಿಸಿದ್ದರು. ಬಾಲಕ ವಿಭಾಗದಲ್ಲಿ ಉತ್ತರ ಕರ್ನಾಟಕ ಸಿದ್ದಾಪುರ ತಾಲೂಕಿನ ಶ್ರೀ ರಮಾನಂದ ಆಂಗ್ಲಶಾಲೆಯ ಸಿ.ಗೌರೀಶ್ ವಿದ್ಯಾರ್ಥಿ ಸಬ್ ಜೂನಿಯರ್ನಲ್ಲಿ 21 ರಿಂದ 25 ಕೆ.ಜಿ. ವಿಭಾಗದಲ್ಲಿ ಕಟಾ ಮತ್ತು ಕಮಿಟೆಯಲ್ಲಿ 2 ಚಿನ್ನದ ಪದಕವನ್ನು, ತೀರ್ಥಹಳ್ಳಿಯ ಸೆಂಟ್ ಮ್ಯಾರೀಸ್ ಇಂಗ್ಲೀಷ್ ಶಾಲೆಯ ಕ್ಲಿಯೋನ್ ಫೆಬಿಲಿಯೊ ಮಾರ್ಟಿಸ್, 26 ರಿಂದ 30 ಕೆ.ಜಿ. ವಿಭಾಗದಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗಳಿಸಿದ್ದಾರೆ ಎಂದರು.
ತೀರ್ಥಹಳ್ಳಿಯ ಸೇವಾಭಾರತಿ ಶಿಕ್ಷಣ ಸಂಸ್ಥೆಯ ರಾಹುಲ್ ಭಾರದ್ವಾಜ್ 46 ರಿಂದ 50 ಕೆ.ಜಿ. ವಿಭಾಗದಲ್ಲಿ ಕಟಾ ಮತ್ತು ಕಮಿಟೆಯಲ್ಲಿ 2 ಬೆಳ್ಳಿ ಪದಕವನ್ನು ಹಾಗೂ ಬಾಲಕಿಯರ ವಿಭಾಗದಲ್ಲಿ ತೀರ್ಥಹಳ್ಳಿಯ ವಾಗ್ದೇವಿ ಶಿಕ್ಷಣ ಸಂಸ್ಥೆಯ ಸಾನ್ವಿ ಜೋಯ್ಸ್, 46 ರಿಂದ 50 ಕೆ.ಜಿ. ವಿಭಾಗದಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕವನ್ನು ಗಳಿಸಿರುತ್ತಾಳೆ. ಪದಕ ಗಳಿಸುವ ಮೂಲಕ ಸ್ಪರ್ಧಿಗಳು ನಮ್ಮ ದೇಶಕ್ಕೆ ರಾಜ್ಯಕ್ಕೆ, ಜಿಲ್ಲೆಗೆ ಹಾಗೂ ಕರಾಟೆ ಸಂಸ್ಥೆಗೆ ಕೀರ್ತಿ ತಂದಿರುವ ಇವರಿಗೆ ಸಂಸ್ಥೆ ಅಭಿನಂದಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪದಕಗಳನ್ನು ಗಳಿಸಿದವರು, ಮಹಾಬಲ ಜೋಯ್ಸ್, ಚಂದ್ರಹಾಸ, ಕ್ಲೇವನ್ ಮಾರ್ಟಿಸ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















