ಕಲ್ಪ ಮೀಡಿಯಾ ಹೌಸ್ | ಮೈಸೂರು |
ನೈಋತ್ಯ ರೈಲ್ವೆಯ #SWR ಮೈಸೂರು ವಿಭಾಗವು 2025-26ನೇ ಸಾಲಿನ 70ನೇ ರೈಲ್ವೆ ಸಪ್ತಾಹವನ್ನು ಆಚರಿಸಿದ್ದು, ಈ ಸಂದರ್ಭದಲ್ಲಿ ವಿವಿಧ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು.
ಮೈಸೂರು #Mysore ಚಾಮುಂಡಿ ಕ್ಲಬ್’ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಟ್ಟು 22 ಮಂದಿ ರೈಲ್ವೆ ಸೇವಾ ಪುರಸ್ಕಾರ #RailwaySevaPuraskar ಹಾಗೂ 55 ಮಂದಿ ಡಿಆರ್’ಎಂ ಪ್ರಶಂಸಾ ಪ್ರಶಸ್ತಿಯನ್ನು ಪಡೆದರು.
Also Read>> ಮೊದಲ ದಿನವೇ ಡಿಎಂಕೆಗೆ ಸಿಎಂ ವಿಜಯ್ ಶಾಕ್ | ಹಿಂದಿನ ಅವಧಿಯ ಶ್ವೇತ ಪತ್ರ ಹೊರಡಿಸುತ್ತೇನೆ!
ರೈಲ್ವೆ ಸೇವಾ ಪುರಸ್ಕಾರ 2025-26 ಹಾಗೂ ಡಿಆರ್’ಎಂ ಪ್ರಶಂಸಾ ಪ್ರಶಸ್ತಿಗಳನ್ನು ಉದ್ಯೋಗಿಗಳಿಗೆ ಪ್ರದಾನ ಮಾಡಲಾಯಿತು. ಭಾರತೀಯ ರೈಲ್ವೆಯ ಕಾರ್ಯಕ್ಷಮತೆ ಮತ್ತು ಅಭಿವೃದ್ಧಿಗೆ ನೀಡಿದ ಅತ್ಯುತ್ತಮ ಸೇವೆ, ಸಮರ್ಪಣೆ ಮತ್ತು ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಗಳನ್ನು ನೀಡಲಾಯಿತು. ಒಟ್ಟು 22 ಮಂದಿ ರೈಲ್ವೆ ಸೇವಾ ಪುರಸ್ಕಾರವನ್ನು ಪಡೆದರೆ, 55 ಮಂದಿ ಡಿಆರ್’ಎಂ ಪ್ರಶಂಸಾ ಪ್ರಶಸ್ತಿಗೆ ಭಾಜನರಾದರು.
ಇದೇ ಸಂದರ್ಭದಲ್ಲಿ ಎಸ್ ಡಬ್ಲ್ಯೂಆರ್ ಡಬ್ಲ್ಯೂಡಬ್ಲ್ಯೂಒ/ಮೈಸೂರು ವಿಭಾಗದ ವತಿಯಿಂದ ಹಿರಿಯ ಹಾಗೂ ನಿವೃತ್ತ ರೈಲ್ವೆ ನೌಕರರನ್ನು ಗೌರವಿಸುವ ಹಿರಿಯ ಸಮರ್ಪಿತ ನೌಕರರ ಸನ್ಮಾನ ಕಾರ್ಯಕ್ರಮವೂ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಉತ್ತಮ ನಿರ್ವಹಣೆ ಮತ್ತು ಕಾರ್ಯಕ್ಷಮತೆ ಶೀಲ್ಡ್’ಗಳನ್ನು ಪ್ರದಾನ ಮಾಡಲಾಯಿತು.
ಚಿಕ್ಕಜಾಜೂರು ನಿಲ್ದಾಣವು ಅತ್ಯುತ್ತಮ ನಿರ್ವಹಿತ ಪ್ರಮುಖ ನಿಲ್ದಾಣ ಪ್ರಶಸ್ತಿಯನ್ನು ಪಡೆದರೆ, ಹೊನ್ನವಳ್ಳಿ ರಸ್ತೆ ನಿಲ್ದಾಣವು ಅತ್ಯುತ್ತಮ ನಿರ್ವಹಿತ ಸಣ್ಣ ನಿಲ್ದಾಣ ಪ್ರಶಸ್ತಿಯನ್ನು ಪಡೆದಿತು.
ಶಿವಮೊಗ್ಗ ರೈಲ್ವೆ ಕಾಲೋನಿ ಮತ್ತು ಮೊಳಕಾಲ್ಮೂರು ರೈಲ್ವೆ ಕಾಲೋನಿಗಳು ಕ್ರಮವಾಗಿ ಅತ್ಯುತ್ತಮ ನಿರ್ವಹಿತ ದೊಡ್ಡ ಮತ್ತು ಸಣ್ಣ ಕಾಲೋನಿಗಳಾಗಿ ಗುರುತಿಸಲ್ಪಟ್ಟವು.
ಮೈಸೂರು-ಸಾಯಿನಗರ ಶಿರಡಿ ವಾರಾಂತ್ಯ ಎಕ್ಸ್’ಪ್ರೆಸ್ (ರೇಕ್ ಸಂ. 16217/18) ಅತ್ಯುತ್ತಮ ನಿರ್ವಹಿತ ರೇಕ್ ಪ್ರಶಸ್ತಿಯನ್ನು ಪಡೆದರೆ, ಸುಬ್ರಹ್ಮಣ್ಯ ರಸ್ತೆ ರನ್ನಿಂಗ್ ರೂಮ್ ಅತ್ಯುತ್ತಮ ನಿರ್ವಹಿತ ರನ್ನಿಂಗ್ ರೂಮ್ ಪ್ರಶಸ್ತಿಗೆ ಪಾತ್ರವಾಯಿತು.
ಬೆಂಗಳೂರು | ಪ್ರಧಾನಿ ಮೋದಿ ತೆರಳುವ ಮಾರ್ಗ ಸಮೀಪ ಜಿಲೆಟಿನ್ ಕಡ್ಡಿಗಳು ಪತ್ತೆ | ಶಂಕಿತ ವಶಕ್ಕೆ
ಚಿತ್ರದುರ್ಗವು ಅತ್ಯುತ್ತಮ ನಿರ್ವಹಿತ ಟ್ರಾಕ್ಷನ್ ಸಬ್ ಸ್ಟೇಷನ್ ಹಾಗೂ ಎಸ್ ಎಸ್’ಇ/ಸಿಗ್ನಲ್ ವಿಭಾಗ ಪ್ರಶಸ್ತಿಗಳನ್ನು ಪಡೆದಿತು. ಹಾಸನ ವಿಭಾಗ ಎಸ್ ಎಸ್’ಇ/ಟೆಲಿಕಾಂ ಪ್ರಶಸ್ತಿಯನ್ನು ಪಡೆದರೆ, ಸಕಲೇಶಪುರ ಅತ್ಯುತ್ತಮ ಅಪಘಾತ ಪರಿಹಾರ ರೈಲು ಪ್ರಶಸ್ತಿಯನ್ನು ಪಡೆದಿತು.
ಟ್ರಾಕ್ಷನ್ ಆಪರೇಷನ್ಸ್ ವಿಭಾಗಕ್ಕೆ ನವೀನತಾ ಶೀಲ್ಡ್ ನೀಡಲಾಯಿತು. ಮೈಸೂರು ಯಾಂತ್ರಿಕ ವಿಭಾಗದ ಕಚೇರಿಗೆ ಅತ್ಯುತ್ತಮ ನಿರ್ವಹಿತ ಕಚೇರಿ ಪ್ರಶಸ್ತಿ ನೀಡಲಾಯಿತು. ಎಸ್ ಎಸ್’ಇ/ಪಿವೇ/ಕೃಷ್ಣರಾಜನಗರ ವಿಭಾಗಕ್ಕೆ ಅತ್ಯುತ್ತಮ ಪಿ.ವೇ ವಿಭಾಗ ಪ್ರಶಸ್ತಿ ನೀಡಲಾಯಿತು. ಕೋಚ್ ಮತ್ತು ವ್ಯಾಗನ್ ರೈಲ್ ಮದಾದ್ ವಾರ ರೂಮ್ ಅತ್ಯುತ್ತಮ ವಿಭಾಗೀಯ ನಿಯಂತ್ರಣವಾಗಿ ಗುರುತಿಸಲಾಯಿತು.
ಈ ಸಂದರ್ಭದಲ್ಲಿ ಮೈಸೂರು ಲಲಿತಾ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಸಮಾರಂಭಕ್ಕೆ ರಂಗು ಮತ್ತು ಚೈತನ್ಯ ತುಂಬಿದರು.
ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮುದಿತ್ ಮಿತ್ತಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದರು.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಮ್ಮಾ ಹಮೀದ್, ಶಾಖಾಧಿಕಾರಿಗಳು, ಮಾನ್ಯತೆ ಪಡೆದ ಸಂಘಗಳು ಮತ್ತು ಸಂಘಟನೆಗಳು, ಎಸ್ ಡಬ್ಲ್ಯೂಆರ್ ಡಬ್ಲ್ಯೂಡಬ್ಲ್ಯೂಒ/ಮೈಸೂರು ಸದಸ್ಯರು, ಉದ್ಯೋಗಿಗಳು, ಪ್ರಶಸ್ತಿ ವಿಜೇತರು ಹಾಗೂ ಅವರ ಕುಟುಂಬ ಸದಸ್ಯರು ಮತ್ತು ರೈಲ್ವೆ ಸಿಬ್ಬಂದಿ ಭಾಗವಹಿಸಿದ್ದರು.
Also Read>> ಕಾಂಗ್ರೆಸ್ ಎಲ್ಲಿ ಅಧಿಕಾರದಲ್ಲಿರುತ್ತದೋ ಅಲ್ಲೆಲ್ಲಾ ಗುಂಪುಗಾರಿಕೆ | ಪ್ರಧಾನಿ ಮೋದಿ ಟೀಕೆ
ತಮ್ಮ ಭಾಷಣದಲ್ಲಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮುದಿತ್ ಮಿತ್ತಲ್ ಅವರು ಪ್ರಶಸ್ತಿ ವಿಜೇತರಿಗೆ ಅಭಿನಂದನೆ ಸಲ್ಲಿಸಿ, ರೈಲ್ವೆ ನೌಕರರ ಸಮರ್ಪಣೆ ಮತ್ತು ಪರಿಶ್ರಮವನ್ನು ಶ್ಲಾಘಿಸಿದರು. ಅವರು ಸುರಕ್ಷತೆ, ಸಮಯಪಾಲನೆ ಮತ್ತು ತಂಡ ಕಾರ್ಯದ ಮಹತ್ವವನ್ನು ಒತ್ತಿಹೇಳಿ, ಉತ್ತಮತೆಗೆ ಸದಾ ಪ್ರಯತ್ನಿಸಿ ಭಾರತೀಯ ರೈಲ್ವೆಯ ಬೆಳವಣಿಗೆಗೆ ಕೈಜೋಡಿಸುವಂತೆ ಕರೆ ನೀಡಿದರು.
ಈ ಸಮಾರಂಭವು ಮೈಸೂರು ವಿಭಾಗದ ಉತ್ತಮ ಕಾರ್ಯಪಟುತ್ವವನ್ನು ಗುರುತಿಸುವ, ನವೀನತೆಯನ್ನು ಉತ್ತೇಜಿಸುವ ಮತ್ತು ದೇಶಸೇವೆಯತ್ತ ನೌಕರರನ್ನು ಪ್ರೇರೇಪಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















