ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರಿನ (Bangalore) ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ಹಾಗೂ ಅನನ್ಯ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಸಂಗೀತ ವಿದ್ವಾನ್ ಎನ್. ರಾಮಚಂದ್ರ ಅವರ ಸ್ಮರಣಾರ್ಥ ‘ಯುವ ಸಂಭ್ರಮ–2026’ ಹಾಗೂ ಕಲಾವಿದರಿಗೆ ಪ್ರಶಸ್ತಿ ಪ್ರದಾನ (Award) ಸಮಾರಂಭವನ್ನು ಸೆಪ್ಟೆಂಬರ್ 19 ಮತ್ತು 20ರಂದು ಆಯೋಜಿಸಲಾಗಿದೆ.
ಮಲ್ಲೇಶ್ವರದ 4ನೇ ಮುಖ್ಯರಸ್ತೆಯಲ್ಲಿರುವ ಅನನ್ಯ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು, ವಿವಿಧ ಯುವ ಹಾಗೂ ಪ್ರತಿಭಾವಂತ ಕಲಾವಿದರು ಗಾಯನ ಮತ್ತು ವಾದ್ಯ ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಟ್ರಸ್ಟ್ನ ಪದಾಧಿಕಾರಿಗಳು ತಿಳಿಸಿದ್ದಾರೆ.
Bangalore: ಸೆ.19ರಂದು ಸಂಗೀತ ಕಾರ್ಯಕ್ರಮ
ಸೆಪ್ಟೆಂಬರ್ 19ರಂದು ಶನಿವಾರ ಸಂಜೆ 6 ಗಂಟೆಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ವಿ|| ಪ್ರಜ್ಞಾ ಅಡಿಗ ಗಾಯನ ಪ್ರಸ್ತುತಪಡಿಸಲಿದ್ದು, ವಿ|| ಬಿ.ಆರ್. ಕುಶಾಲ್ ಪಿಟೀಲು, ವಿ|| ಲೋಕಪ್ರಿಯ ಮೃದಂಗ ಹಾಗೂ ವಿ|| ಎಸ್. ಉತ್ತಮ್ ಘಟಂನಲ್ಲಿ ಸಹಕರಿಸಲಿದ್ದಾರೆ.
ಸೆ.20ರಂದು ಕಲಾವಿದರ ಸಂಗೀತ ಸಂಜೆ
ಸೆಪ್ಟೆಂಬರ್ 20ರಂದು ಭಾನುವಾರ ಸಂಜೆ 5 ಗಂಟೆಗೆ ಮತ್ತೊಂದು ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ವಿ|| ಕಮಲಾ ದೀಪ್ತಿ ಗಾಯನ, ವಿ|| ಸಿ.ವಿ. ಶೃತಿ ಪಿಟೀಲು, ವಿ|| ನಿಶ್ಚಿತ್ ಪುತ್ತೂರು ಮೃದಂಗ ಹಾಗೂ ವಿ|| ಆರ್. ಕಾರ್ತೀಕ್ ಖಂಜಿರ ವಾದನದ ಮೂಲಕ ಸಂಗೀತಾಸಕ್ತರನ್ನು ರಂಜಿಸಲಿದ್ದಾರೆ.
ಇದೇ ದಿನ ಸಂಜೆ 7 ಗಂಟೆಗೆ ಅನನ್ಯ–ನಾದಜ್ಯೋತಿ ‘ಕಲಾಪ್ರತಿಭಾ ಪುರಸ್ಕಾರ’ ಪ್ರದಾನ ಸಮಾರಂಭ ನಡೆಯಲಿದೆ. ಈ ಬಾರಿಯ ಪ್ರಶಸ್ತಿಯನ್ನು ಗಾಯನ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ವಿ|| ಕಮಲಾ ದೀಪ್ತಿ ಹಾಗೂ ವಿ|| ಪ್ರಜ್ಞಾ ಅಡಿಗ ಅವರಿಗೆ ಪ್ರದಾನ ಮಾಡಲಾಗುವುದು.
Also read>> ದೇಹಕ್ಕೆ ಬೇಕಾದಾಗ ಮಾತ್ರ ನೀರು ಕುಡಿಯಬೇಕು: ರಾಘವೇಶ್ವರ ಶ್ರೀ
ರೋಹಿಣಿ ಸುಬ್ಬರತ್ನಂ ಮುಖ್ಯ ಅತಿಥಿ
ಕಾರ್ಯಕ್ರಮಕ್ಕೆ ಕಾಂಚನ ಎಸ್.ಎಲ್.ಎನ್. ಮ್ಯೂಸಿಕ್ ಅಕಾಡೆಮಿಯ ಕಾರ್ಯದರ್ಶಿ ವಿ|| ರೋಹಿಣಿ ಸುಬ್ಬರತ್ನಂ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಂಗೀತ ವಿದ್ವಾನ್ ಎನ್. ರಾಮಚಂದ್ರ ಅವರ ಸ್ಮರಣಾರ್ಥ ಆಯೋಜಿಸಿರುವ ಈ ಎರಡು ದಿನಗಳ ಸಂಗೀತೋತ್ಸವದಲ್ಲಿ ಸಂಗೀತ ಕ್ಷೇತ್ರದ ಕಲಾವಿದರು, ಸಂಗೀತಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಟ್ರಸ್ಟ್ನ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












