Monday, June 30, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಅಂಕಣ ಪ್ರಕಾಶ್ ಅಮ್ಮಣ್ಣಾಯ

ಈ ಮನ್ವಂತರದ ‘ರಾಷ್ಟ್ರಪಿತ’ ವೈವಸ್ವತ ಮನುವೇ ಹೊರತು ಇನ್ನಾರೂ ಅಲ್ಲ! ಯಾಕೆ ಗೊತ್ತಾ?

June 1, 2019
in ಪ್ರಕಾಶ್ ಅಮ್ಮಣ್ಣಾಯ
0 0
0
Share on facebookShare on TwitterWhatsapp
Read - 2 minutes

ಕೆಲವರಿಗೆ ರಾಷ್ಟ್ರಪಿತ ಗಾಂಧೀಜಿ, ಕೆಲವರಿಗೆ ರಾಷ್ಟ್ರ ಪಿತಾಮಹ… ಯಾರೋ ಆಗಿರಬಹುದು. ಆದರೆ ನಿಜವಾದ ಈ ಮನ್ವಂತರದ ರಾಷ್ಟ್ರಪಿತ ವೈವಸ್ವತ ಮನು. ವಿಷಾಧನೀಯ ಎಂದರೆ ಆ ಮನುವನ್ನೇ ಹಳಿಯುವುದು ನಿಂದಿಸುವುದನ್ನು ನಾವು ಕಾಣುತ್ತೇವೆ. ಯಾಕೆ ಈ ಮನುವನ್ನು ನಾವು ಸ್ಮರಿಸಬೇಕು ಎಂದರೆ ಮೊದಲಾಗಿ ಮನುವಿನ ಬಗ್ಗೆ ಅರಿವು ಇರಬೇಕು.

ಈ ಮನು ಯಾರು?
ಹದಿನಾಲ್ಕು ಮನುಗಳಲ್ಲಿ ವೈವಸ್ವತ ಮನುವೂ ಒಬ್ಬ. ಇವನು ಏಳನೆಯ ಮನುವಾಗುತ್ತಾನೆ. ಇವನ ಪೂರ್ವ ಹೆಸರು ಶ್ರಾದ್ಧಾ ದೇವ. ವಿವಸ್ವಂತನೆಂಬ ಆದಿತ್ಯನಿಂದ, ತೃಷ್ಟೃವಿನ ಮಗಳಾದ ಸಂಜ್ಞಾ ದೇವಿಯಲ್ಲಿ ವಿಶ್ವಜಿತ್ ಎಂಬ ಹೆಸರಿನಲ್ಲಿ ಜನಿಸಿದವನೀತ. ಬ್ರಹ್ಮದೇವನ 50 ನೆಯ ವರ್ಷದಲ್ಲಿ(ದೇವ ಮಾನ ವರ್ಷ) ಇವನು ರವಿಯ ಶಕ್ತಿಯಿಂದ ಜನಿಸಿದವ. ಸಕಲ ಜೀವಜಂತುಗಳಿಗೂ ಕರುಣೆ ತೋರುವವನೀತ.

ಒಂದು ದಿನ ಈತ ನದೀ ಸ್ನಾನ ಮಾಡುವಾಗ ಇವನ ಕೈಯಲ್ಲಿದ್ದ ಕಮಂಡಲದಲ್ಲಿ ಒಂದು ಮತ್ಸ್ಯದ ಮರಿಯು ನುಗ್ಗುತ್ತದೆ. ಅದನ್ನು ಮತ್ತೆ ನೀರಿಗೆ ಹಾಕೋಣ ಎಂದು ಕಂಡಲದ ನೀರನ್ನು ಚೆಲ್ಲಲು ಹೊರಟಾಗ, ಆ ಮೀನು ಮಾತನಾಡಲು ಶುರು ಮಾಡುತ್ತದೆ.’ ಹೇ ರಾಜನ್, ದೊಡ್ಡ ದೊಡ್ಡ ಮೀನುಗಳು ನನ್ನನ್ನು ನುಂಗಲು ಪ್ರಯತ್ನಿಸುವಾಗ ನಿನ್ನ ಕಮಂಡಲದೊಳಗೆ ಬಂದು ಅವಿತುಕೊಂಡೆ. ಮತ್ತೆ ನೀನು ನನ್ನನ್ನು ನೀರಿಗೆ ಬಿಟ್ಟರೆ ನನ್ನ ಸಾವು ಖಚಿತ. ದಯವಿಟ್ಟು ಜೀವ ದಾನ ಮಾಡು’ ಎಂದು ವಿನಂತಿಸಿತು.

ಕನಿಕರಗೊಂಡ ವಿಶ್ವಜಿತ್ ಚಕ್ರವರ್ತಿಯು ಅದನ್ನು ಅರಮನೆಗೆ ತಂದು ಸರೋವರದಲ್ಲಿ ಬಿಟ್ಟ. ಆದರೆ ಮರುದಿನ ಬಂದು ನೋಡಿದರೆ ಅದು ಬೃಹದ್ಗಾತ್ರದಲ್ಲಿ ಸರೋವರವನ್ನೇ ತುಂಬಿತ್ತು. ಆಗ ಮತ್ತೆ ಆ ಮತ್ಸ್ಯವು ರಾಜನಿಗೆ, ಹೇ ಚಕ್ರವರ್ತಿ, ಈಗ ನನ್ನನು ನದಿಗೆ ಸಾಗಿಸಿಬಿಡು. ನಾನು ಬಲಿಷ್ಟನಾದೆ’ ಎನ್ನುತ್ತದೆ. ಚಕ್ರವರ್ತಿಯು ಹಾಗೇ ಮಾಡಿದ.

ಆಗ ಮತ್ತೊಮ್ಮೆ ಆ ಮತ್ಸ್ಯರೂಪಿ ಪರಮಾತ್ಮನು,’ ಹೇ ದಯಾಳುವೇ, ನಾನು ನಿನ್ನನ್ನು ಪರೀಕ್ಷಿಸಲೆಂದೇ ಈ ರೀತಿ ಮಾಡಿದೆ. ನನಗೊಬ್ಬ ಪರಮ ದಯಾಳು ಮನುಷ್ಯನ ಅವಶ್ಯಕತೆ ಇತ್ತು. ನಾನು ಸಣ್ಣ ಕ್ರಿಮಿ ರೂಪದಲ್ಲಿ ನನ್ನ ಸಮಸ್ಯೆಯನ್ನು ಹೇಳಿಕೊಂಡಾಗ ನೀನು ನನ್ನನ್ನು ಕೂಡಾ ಸಾಮಾನ್ಯ ಎಂದು ತಿಳಿಯದೆ ರಕ್ಷಿಸಿದೆ.(Ignore ಮಾಡದೆ) ಇಂತಹ ಭೂ ಮಂಡಲಾಧಿಪ ಇದ್ದರೆ ಜಗತ್ತಿನ ಸಕಲ ಜೀವ ರಾಶಿಗಳಿಗೂ ಕ್ಷೇಮವೇ ಎಂಬುದು ನನಗೆ ತಿಳಿಯಿತು. ಮುಂದೆ ಏಳು ದಿನಗಳಲ್ಲಿ ಭೂ ಪ್ರಳಯ ಆಗಲಿದೆ. ಆಗ ಸಕಲ ಚರಾ ಚರಗಳೂ ನಶಿಸುತ್ತದೆ. ನೀನು ಹಡಗು, ದೋಣಿಗಳನ್ನು ನಿರ್ಮಿಸಿ ಸಕಲ ಜೀವ ಜಂತುಗಳ ಜೀವ ಕೋಶಗಳ (Cloning Culture ಎನ್ನಬಹುದು) ಗಳನ್ನೂ ಸಂಗ್ರಹಿಸಿ ರಕ್ಷಿಸಬೇಕು. ಮೇರು ಪರ್ವತಗಳಲ್ಲಿ ಋಷಿ ಮುನಿಗಳು(Scientist) ಇರುತ್ತಾರೆ. ಮತ್ತೆ ಪ್ರಳಯವು ಇಳಿಮುಖವಾಗಿ ಭೂಮಿ ಗೋಚರಿಸಿದಾಗ ಆ ಋಷಿಗಳು ನಿನ್ನ ಬಳಿ ಬರುತ್ತಾರೆ. ಅವರ ಮೂಲಕ ನೀನು ಸಂಗ್ರಹಿಸಿದ ಸಕಲ ಜೀವ ಕೋಶಗಳೂ ವೃದ್ಧಿಯಾಗಿ, ಮತ್ತೆ ಜಗತ್ತಿನ ಸ್ಥಿತಿಯು ಯಥಾ ಸ್ಥಿತಿಯಾಗುತ್ತದೆ. ಇಷ್ಟು ಕೆಲಸ ನೀನು ಮಾಡಿದಾಗ ನಿನಗೆ ವೈವಸ್ವತ ಮನು ಎಂಬ ಹೆಸರಾಗಿ, ಮನ್ವಂತರಾಧಿಪನೂ ನೀನೇ ಆಗುತ್ತಿ. ಆ ಸಕಲ ಜೀವರಾಶಿಗಳಿಗೆ ನೀನೇ ಒಂದು ನಿಯಮವನ್ನೂ ಮಾಡಿಕೊಡು. ನಂತರ ಅದುವೇ ಮನುಸ್ಮೃತಿಯಾಗುತ್ತದೆ’ ಎಂದು ಅಂತರ್ಧಾನವಾಗುತ್ತದೆ.

ಅದೇ ಪ್ರಕಾರದಲ್ಲಿ ಪ್ರಳಯವೂ ನಡೆಯುತ್ತದೆ, ಮತ್ತೆ ಜೀವ ರಾಶಿಯ ಸೃಷ್ಟಿಯೂ ಆಗುತ್ತದೆ. ಅದರ ಫಲವೇ ನಾವು. ಇಂತಹ ಮನುವನ್ನು ತುಚ್ಛವಾಗಿ ನಿಂದಿಸುವ ಪರ ಪೀಡಕರು ಇದ್ದರೇನು, ಸತ್ತರೇನು? ನೀವೇ ಹೇಳಿ. ಮನುಸ್ಮೃತಿಯು ಕಾಲ ಕಾಲಕ್ಕೆ ಅನೇಕ ಪರಿವರ್ತನೆ ಆಗಿದೆ, ಮುಂದೆಯೂ ಆಗಲಿದೆ. ಆದರೆ ತತ್ವ ಒಂದೆ. ಜಗತ್ತಿನ ಸ್ವಾಸ್ಥ್ಯ. ಜಗತ್ತು ಉದ್ಧಾರವಾಗಲೆಂದೇ ಅಂದು ಜೀವರಾಶಿಗಳ ಸೃಷ್ಟಿಯೂ, ಅದಕ್ಕೆ ಬೇಕಾದ ನಿಯಮ (ಶಾಸನ) ಸೃಷ್ಟಿಯಾಯಿತು. ಕಾಲ ಕ್ರಮೇಣ ಅದರಲ್ಲೂ ಪರಿವರ್ತನೆಗಳೂ ಆಯಿತು. ಆದರೆ ಮೂಲ ಉದ್ದೇಶ ಹಾಳಾಗಲಿಲ್ಲ.

ಈಗ ಪ್ರಗತಿ ಪರರು ಮನು ಎಂಬವ ದರಿದ್ರ, ಅದು ಬ್ರಾಹ್ಮಣರ ಪರ ಎಂದು ಒದರುವುದು ಅವರವರ ಅಜ್ಞಾನದ ಫಲವೇ ಹೊರತು, ಮನುಸ್ಮೃತಿ ಇರುವುದು ಜಗತ್ತಿನ ಸ್ವಾಸ್ಥ್ಯಕ್ಕಾಗಿ ಮಾತ್ರ. ಯಾರ್ಯಾರನ್ನೋ ಪಿತಾಮಹ ಎಂದರೆ ಅದಕ್ಕೆ ಸಮ್ಮತಿ ಇದೆ, ಶೆರಿಯತ್ ಕಾನೂನಿಗೆ ಬೆಂಬಲ ಇದೆ. ಆದರೆ ಜಗತ್ತಿನ ಮೂಲ ಪುರುಷ ವೈವಸ್ವತ ಮನು ಮಾತ್ರ ಮೂಢ ಎಂದಾದದ್ದು ಖೇದಕರ. ಅಲ್ಲ ಅಲ್ಲಾ, ಇದನ್ನು ಈ ಮೂಢರಿಗೆ ಮನುವಿನೊಳಗಿನ ಅಂತರಾರ್ಥ ತಿಳಿಯದ ದೋಷ ಎನ್ನಬಹುದು. ಈಗ ಮತ್ತೆ ಆ ಶಾಸನಕ್ಕೆ ಕಾಲಕ್ಕೆ ತಕ್ಕಂತಹ ಪರಿವರ್ತನೆಯೊಂದಿಗೆ ಅರ್ಥ ಬರುವ ಸುಸಮಯ.

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: GandhijiKannada ArticleManusmritiPrakash AmmannayaRashtrapitaSpecial ArticleVaiswatha Manuಜ್ಯೋರ್ತಿವಿಜ್ಞಾನಂಪ್ರಕಾಶ್ ಅಮ್ಮಣ್ಣಾಯಮನುಸ್ಮೃತಿರಾಷ್ಟ್ರಪಿತರಾಷ್ಟ್ರಪಿತ ಗಾಂಧೀಜಿವಿಶ್ವಜಿತ್ ಚಕ್ರವರ್ತಿವೈವಸ್ವತ ಮನು
Previous Post

ಭದ್ರಾವತಿ: ಸಿದ್ದತೆಗೊಳ್ಳುತ್ತಿದೆ ಡಿಪ್ಲೊಮಾ ಕೌನ್ಸಿಲಿಂಗ್ ನೋಡಲ್ ಕೇಂದ್ರ

Next Post

ಭದ್ರಾವತಿ: ಗ್ರಾಪಂ ಚುನಾವಣಾ ಫಲಿತಾಂಶ, ಕಾಂಗ್ರೆಸ್ ಪಕ್ಷಕ್ಕೆ ಜಯಭೇರಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಭದ್ರಾವತಿ: ಗ್ರಾಪಂ ಚುನಾವಣಾ ಫಲಿತಾಂಶ, ಕಾಂಗ್ರೆಸ್ ಪಕ್ಷಕ್ಕೆ ಜಯಭೇರಿ

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ರೈಲು ನಿಲ್ದಾಣದಲ್ಲಿ ‘ಮಾರ್ಗದರ್ಶಕ್’ ಸ್ಮಾರ್ಟ್ ಡಿಜಿಟಲ್ ಸಂಚರಣೆ ವ್ಯವಸ್ಥೆ ಆರಂಭ

June 30, 2025

ಮೈಸೂರು ರೈಲ್ವೆ ನಿಲ್ದಾಣ ಕುರಿತಾಗಿ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ನೀಡಿದ ರೈಲ್ವೆ ಇಲಾಖೆ

June 30, 2025

ಹಾಸನ | ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಒಂದೇ ದಿನ ಮೂವರ ಸಾವು | ಆತಂಕ

June 30, 2025

ಆಷಾಢ ಏಕಾದಶಿ | ಹುಬ್ಬಳ್ಳಿಯಿಂದ ಪಂಢರಪುರಕ್ಕೆ ತೆರಳುವ ಭಕ್ತರಿಗೆ ರೈಲ್ವೆ ಇಲಾಖೆ ಗುಡ್ ನ್ಯೂಸ್

June 30, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ರೈಲು ನಿಲ್ದಾಣದಲ್ಲಿ ‘ಮಾರ್ಗದರ್ಶಕ್’ ಸ್ಮಾರ್ಟ್ ಡಿಜಿಟಲ್ ಸಂಚರಣೆ ವ್ಯವಸ್ಥೆ ಆರಂಭ

June 30, 2025

ಮೈಸೂರು ರೈಲ್ವೆ ನಿಲ್ದಾಣ ಕುರಿತಾಗಿ ಪ್ರಯಾಣಿಕರಿಗೆ ಮಹತ್ವದ ಮಾಹಿತಿ ನೀಡಿದ ರೈಲ್ವೆ ಇಲಾಖೆ

June 30, 2025

ಹಾಸನ | ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಒಂದೇ ದಿನ ಮೂವರ ಸಾವು | ಆತಂಕ

June 30, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!