No Result
View All Result
SWR hubballi-railway-fire-safety-training-emergency
English Articles

Fire Safety Training Held for Railway Officials and Staff in Hubballi

by kalpa News
September 11, 2026
0

Kalpa Media House  |  Hubballi | A practical training programme on Fire Safety and Emergency Management was organised for railway...

Read moreDetails
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
  • Advertise With Us
  • Grievances
  • About Us
  • Contact Us
Friday, September 11, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Army

ಈ ಮನ್ವಂತರದ ‘ರಾಷ್ಟ್ರಪಿತ’ ವೈವಸ್ವತ ಮನುವೇ ಹೊರತು ಇನ್ನಾರೂ ಅಲ್ಲ! ಯಾಕೆ ಗೊತ್ತಾ?

kalpa News by kalpa News
June 1, 2019
in Army
0
ಈ ಮನ್ವಂತರದ ‘ರಾಷ್ಟ್ರಪಿತ’ ವೈವಸ್ವತ ಮನುವೇ ಹೊರತು ಇನ್ನಾರೂ ಅಲ್ಲ! ಯಾಕೆ ಗೊತ್ತಾ?
Share on FacebookShare on TwitterShare on WhatsApp

ಕೆಲವರಿಗೆ ರಾಷ್ಟ್ರಪಿತ ಗಾಂಧೀಜಿ, ಕೆಲವರಿಗೆ ರಾಷ್ಟ್ರ ಪಿತಾಮಹ… ಯಾರೋ ಆಗಿರಬಹುದು. ಆದರೆ ನಿಜವಾದ ಈ ಮನ್ವಂತರದ ರಾಷ್ಟ್ರಪಿತ ವೈವಸ್ವತ ಮನು. ವಿಷಾಧನೀಯ ಎಂದರೆ ಆ ಮನುವನ್ನೇ ಹಳಿಯುವುದು ನಿಂದಿಸುವುದನ್ನು ನಾವು ಕಾಣುತ್ತೇವೆ. ಯಾಕೆ ಈ ಮನುವನ್ನು ನಾವು ಸ್ಮರಿಸಬೇಕು ಎಂದರೆ ಮೊದಲಾಗಿ ಮನುವಿನ ಬಗ್ಗೆ ಅರಿವು ಇರಬೇಕು.

ಈ ಮನು ಯಾರು?
ಹದಿನಾಲ್ಕು ಮನುಗಳಲ್ಲಿ ವೈವಸ್ವತ ಮನುವೂ ಒಬ್ಬ. ಇವನು ಏಳನೆಯ ಮನುವಾಗುತ್ತಾನೆ. ಇವನ ಪೂರ್ವ ಹೆಸರು ಶ್ರಾದ್ಧಾ ದೇವ. ವಿವಸ್ವಂತನೆಂಬ ಆದಿತ್ಯನಿಂದ, ತೃಷ್ಟೃವಿನ ಮಗಳಾದ ಸಂಜ್ಞಾ ದೇವಿಯಲ್ಲಿ ವಿಶ್ವಜಿತ್ ಎಂಬ ಹೆಸರಿನಲ್ಲಿ ಜನಿಸಿದವನೀತ. ಬ್ರಹ್ಮದೇವನ 50 ನೆಯ ವರ್ಷದಲ್ಲಿ(ದೇವ ಮಾನ ವರ್ಷ) ಇವನು ರವಿಯ ಶಕ್ತಿಯಿಂದ ಜನಿಸಿದವ. ಸಕಲ ಜೀವಜಂತುಗಳಿಗೂ ಕರುಣೆ ತೋರುವವನೀತ.

ಒಂದು ದಿನ ಈತ ನದೀ ಸ್ನಾನ ಮಾಡುವಾಗ ಇವನ ಕೈಯಲ್ಲಿದ್ದ ಕಮಂಡಲದಲ್ಲಿ ಒಂದು ಮತ್ಸ್ಯದ ಮರಿಯು ನುಗ್ಗುತ್ತದೆ. ಅದನ್ನು ಮತ್ತೆ ನೀರಿಗೆ ಹಾಕೋಣ ಎಂದು ಕಂಡಲದ ನೀರನ್ನು ಚೆಲ್ಲಲು ಹೊರಟಾಗ, ಆ ಮೀನು ಮಾತನಾಡಲು ಶುರು ಮಾಡುತ್ತದೆ.’ ಹೇ ರಾಜನ್, ದೊಡ್ಡ ದೊಡ್ಡ ಮೀನುಗಳು ನನ್ನನ್ನು ನುಂಗಲು ಪ್ರಯತ್ನಿಸುವಾಗ ನಿನ್ನ ಕಮಂಡಲದೊಳಗೆ ಬಂದು ಅವಿತುಕೊಂಡೆ. ಮತ್ತೆ ನೀನು ನನ್ನನ್ನು ನೀರಿಗೆ ಬಿಟ್ಟರೆ ನನ್ನ ಸಾವು ಖಚಿತ. ದಯವಿಟ್ಟು ಜೀವ ದಾನ ಮಾಡು’ ಎಂದು ವಿನಂತಿಸಿತು.

ಕನಿಕರಗೊಂಡ ವಿಶ್ವಜಿತ್ ಚಕ್ರವರ್ತಿಯು ಅದನ್ನು ಅರಮನೆಗೆ ತಂದು ಸರೋವರದಲ್ಲಿ ಬಿಟ್ಟ. ಆದರೆ ಮರುದಿನ ಬಂದು ನೋಡಿದರೆ ಅದು ಬೃಹದ್ಗಾತ್ರದಲ್ಲಿ ಸರೋವರವನ್ನೇ ತುಂಬಿತ್ತು. ಆಗ ಮತ್ತೆ ಆ ಮತ್ಸ್ಯವು ರಾಜನಿಗೆ, ಹೇ ಚಕ್ರವರ್ತಿ, ಈಗ ನನ್ನನು ನದಿಗೆ ಸಾಗಿಸಿಬಿಡು. ನಾನು ಬಲಿಷ್ಟನಾದೆ’ ಎನ್ನುತ್ತದೆ. ಚಕ್ರವರ್ತಿಯು ಹಾಗೇ ಮಾಡಿದ.

ಆಗ ಮತ್ತೊಮ್ಮೆ ಆ ಮತ್ಸ್ಯರೂಪಿ ಪರಮಾತ್ಮನು,’ ಹೇ ದಯಾಳುವೇ, ನಾನು ನಿನ್ನನ್ನು ಪರೀಕ್ಷಿಸಲೆಂದೇ ಈ ರೀತಿ ಮಾಡಿದೆ. ನನಗೊಬ್ಬ ಪರಮ ದಯಾಳು ಮನುಷ್ಯನ ಅವಶ್ಯಕತೆ ಇತ್ತು. ನಾನು ಸಣ್ಣ ಕ್ರಿಮಿ ರೂಪದಲ್ಲಿ ನನ್ನ ಸಮಸ್ಯೆಯನ್ನು ಹೇಳಿಕೊಂಡಾಗ ನೀನು ನನ್ನನ್ನು ಕೂಡಾ ಸಾಮಾನ್ಯ ಎಂದು ತಿಳಿಯದೆ ರಕ್ಷಿಸಿದೆ.(Ignore ಮಾಡದೆ) ಇಂತಹ ಭೂ ಮಂಡಲಾಧಿಪ ಇದ್ದರೆ ಜಗತ್ತಿನ ಸಕಲ ಜೀವ ರಾಶಿಗಳಿಗೂ ಕ್ಷೇಮವೇ ಎಂಬುದು ನನಗೆ ತಿಳಿಯಿತು. ಮುಂದೆ ಏಳು ದಿನಗಳಲ್ಲಿ ಭೂ ಪ್ರಳಯ ಆಗಲಿದೆ. ಆಗ ಸಕಲ ಚರಾ ಚರಗಳೂ ನಶಿಸುತ್ತದೆ. ನೀನು ಹಡಗು, ದೋಣಿಗಳನ್ನು ನಿರ್ಮಿಸಿ ಸಕಲ ಜೀವ ಜಂತುಗಳ ಜೀವ ಕೋಶಗಳ (Cloning Culture ಎನ್ನಬಹುದು) ಗಳನ್ನೂ ಸಂಗ್ರಹಿಸಿ ರಕ್ಷಿಸಬೇಕು. ಮೇರು ಪರ್ವತಗಳಲ್ಲಿ ಋಷಿ ಮುನಿಗಳು(Scientist) ಇರುತ್ತಾರೆ. ಮತ್ತೆ ಪ್ರಳಯವು ಇಳಿಮುಖವಾಗಿ ಭೂಮಿ ಗೋಚರಿಸಿದಾಗ ಆ ಋಷಿಗಳು ನಿನ್ನ ಬಳಿ ಬರುತ್ತಾರೆ. ಅವರ ಮೂಲಕ ನೀನು ಸಂಗ್ರಹಿಸಿದ ಸಕಲ ಜೀವ ಕೋಶಗಳೂ ವೃದ್ಧಿಯಾಗಿ, ಮತ್ತೆ ಜಗತ್ತಿನ ಸ್ಥಿತಿಯು ಯಥಾ ಸ್ಥಿತಿಯಾಗುತ್ತದೆ. ಇಷ್ಟು ಕೆಲಸ ನೀನು ಮಾಡಿದಾಗ ನಿನಗೆ ವೈವಸ್ವತ ಮನು ಎಂಬ ಹೆಸರಾಗಿ, ಮನ್ವಂತರಾಧಿಪನೂ ನೀನೇ ಆಗುತ್ತಿ. ಆ ಸಕಲ ಜೀವರಾಶಿಗಳಿಗೆ ನೀನೇ ಒಂದು ನಿಯಮವನ್ನೂ ಮಾಡಿಕೊಡು. ನಂತರ ಅದುವೇ ಮನುಸ್ಮೃತಿಯಾಗುತ್ತದೆ’ ಎಂದು ಅಂತರ್ಧಾನವಾಗುತ್ತದೆ.

ಅದೇ ಪ್ರಕಾರದಲ್ಲಿ ಪ್ರಳಯವೂ ನಡೆಯುತ್ತದೆ, ಮತ್ತೆ ಜೀವ ರಾಶಿಯ ಸೃಷ್ಟಿಯೂ ಆಗುತ್ತದೆ. ಅದರ ಫಲವೇ ನಾವು. ಇಂತಹ ಮನುವನ್ನು ತುಚ್ಛವಾಗಿ ನಿಂದಿಸುವ ಪರ ಪೀಡಕರು ಇದ್ದರೇನು, ಸತ್ತರೇನು? ನೀವೇ ಹೇಳಿ. ಮನುಸ್ಮೃತಿಯು ಕಾಲ ಕಾಲಕ್ಕೆ ಅನೇಕ ಪರಿವರ್ತನೆ ಆಗಿದೆ, ಮುಂದೆಯೂ ಆಗಲಿದೆ. ಆದರೆ ತತ್ವ ಒಂದೆ. ಜಗತ್ತಿನ ಸ್ವಾಸ್ಥ್ಯ. ಜಗತ್ತು ಉದ್ಧಾರವಾಗಲೆಂದೇ ಅಂದು ಜೀವರಾಶಿಗಳ ಸೃಷ್ಟಿಯೂ, ಅದಕ್ಕೆ ಬೇಕಾದ ನಿಯಮ (ಶಾಸನ) ಸೃಷ್ಟಿಯಾಯಿತು. ಕಾಲ ಕ್ರಮೇಣ ಅದರಲ್ಲೂ ಪರಿವರ್ತನೆಗಳೂ ಆಯಿತು. ಆದರೆ ಮೂಲ ಉದ್ದೇಶ ಹಾಳಾಗಲಿಲ್ಲ.

ಈಗ ಪ್ರಗತಿ ಪರರು ಮನು ಎಂಬವ ದರಿದ್ರ, ಅದು ಬ್ರಾಹ್ಮಣರ ಪರ ಎಂದು ಒದರುವುದು ಅವರವರ ಅಜ್ಞಾನದ ಫಲವೇ ಹೊರತು, ಮನುಸ್ಮೃತಿ ಇರುವುದು ಜಗತ್ತಿನ ಸ್ವಾಸ್ಥ್ಯಕ್ಕಾಗಿ ಮಾತ್ರ. ಯಾರ್ಯಾರನ್ನೋ ಪಿತಾಮಹ ಎಂದರೆ ಅದಕ್ಕೆ ಸಮ್ಮತಿ ಇದೆ, ಶೆರಿಯತ್ ಕಾನೂನಿಗೆ ಬೆಂಬಲ ಇದೆ. ಆದರೆ ಜಗತ್ತಿನ ಮೂಲ ಪುರುಷ ವೈವಸ್ವತ ಮನು ಮಾತ್ರ ಮೂಢ ಎಂದಾದದ್ದು ಖೇದಕರ. ಅಲ್ಲ ಅಲ್ಲಾ, ಇದನ್ನು ಈ ಮೂಢರಿಗೆ ಮನುವಿನೊಳಗಿನ ಅಂತರಾರ್ಥ ತಿಳಿಯದ ದೋಷ ಎನ್ನಬಹುದು. ಈಗ ಮತ್ತೆ ಆ ಶಾಸನಕ್ಕೆ ಕಾಲಕ್ಕೆ ತಕ್ಕಂತಹ ಪರಿವರ್ತನೆಯೊಂದಿಗೆ ಅರ್ಥ ಬರುವ ಸುಸಮಯ.

ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ

Tags: GandhijiKannada ArticleManusmritiPrakash AmmannayaRashtrapitaSpecial ArticleVaiswatha Manuಜ್ಯೋರ್ತಿವಿಜ್ಞಾನಂಪ್ರಕಾಶ್ ಅಮ್ಮಣ್ಣಾಯಮನುಸ್ಮೃತಿರಾಷ್ಟ್ರಪಿತರಾಷ್ಟ್ರಪಿತ ಗಾಂಧೀಜಿವಿಶ್ವಜಿತ್ ಚಕ್ರವರ್ತಿವೈವಸ್ವತ ಮನು
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಭದ್ರಾವತಿ: ಸಿದ್ದತೆಗೊಳ್ಳುತ್ತಿದೆ ಡಿಪ್ಲೊಮಾ ಕೌನ್ಸಿಲಿಂಗ್ ನೋಡಲ್ ಕೇಂದ್ರ

Next Post

ಭದ್ರಾವತಿ: ಗ್ರಾಪಂ ಚುನಾವಣಾ ಫಲಿತಾಂಶ, ಕಾಂಗ್ರೆಸ್ ಪಕ್ಷಕ್ಕೆ ಜಯಭೇರಿ

kalpa News

kalpa News

Next Post
ಭದ್ರಾವತಿ: ಗ್ರಾಪಂ ಚುನಾವಣಾ ಫಲಿತಾಂಶ, ಕಾಂಗ್ರೆಸ್ ಪಕ್ಷಕ್ಕೆ ಜಯಭೇರಿ

ಭದ್ರಾವತಿ: ಗ್ರಾಪಂ ಚುನಾವಣಾ ಫಲಿತಾಂಶ, ಕಾಂಗ್ರೆಸ್ ಪಕ್ಷಕ್ಕೆ ಜಯಭೇರಿ

Leave a Reply Cancel reply

Your email address will not be published. Required fields are marked *

No Result
View All Result
SWR hubballi-railway-fire-safety-training-emergency
English Articles

Fire Safety Training Held for Railway Officials and Staff in Hubballi

by kalpa News
September 11, 2026
0

Kalpa Media House  |  Hubballi | A practical training programme on Fire Safety and Emergency Management was organised for railway...

Read moreDetails
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL