Monday, June 23, 2025
  • Advertise With Us
  • Grievances
  • About Us
  • Contact Us
kalpa.news
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು
No Result
View All Result
kalpa.news
No Result
View All Result
Home ಜಿಲ್ಲೆ ಚಿತ್ರದುರ್ಗ

ಶಿಕ್ಷಕರ ತ್ಯಾಗ-ಮಹತ್ವವನ್ನು ನಾಡಿಗೆ ಸಾರಿದ ಚಳ್ಳಕೆರೆ ವಿವೇಕಾನಂದ ಶಾಲೆಯ ಅಪರೂಪದ ವೇದಿಕೆ

ಗುರು-ಶಿಷ್ಯ-ಸ್ನೇಹಿತರ ಬಾಂಧವ್ಯವನ್ನು ಪ್ರತಿನಿಧಿಸಿದ ಗುರುವಂದನಾ ಕಾರ್ಯಕ್ರಮ

February 16, 2020
in ಚಿತ್ರದುರ್ಗ
0 0
0
Share on facebookShare on TwitterWhatsapp
Read - 3 minutes

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಚಳ್ಳಕೆರೆ: ಅದು ನಗರದ ಶಿಕ್ಷಣ ಕ್ಷೇತ್ರದಲ್ಲಿ ನಡೆದ ಒಂದು ಅಪರೂಪದ ಕಾರ್ಯಕ್ರಮ. ಜೀವನ ಕಲಿಸಿದ ಶಿಕ್ಷಕರಿಗೆ ಹಳೆಯ ಶಿಷ್ಯರಿಂದ ಗೌರವ ಅರ್ಪಿಸುವ ಒಂದು ಪವಿತ್ರ ವೇದಿಕೆ. ಅಲ್ಲಿ ಗುರು-ಶಿಷ್ಯರ ಬಾಂಧವ್ಯದ ಬೆಳಕಿತ್ತು, ಸ್ನೇಹಿತರ ನಡುವಿನ ಸೇತುವೆ ಮತ್ತಷ್ಟು ಗಟ್ಟಿಯಾಗಿತ್ತು.

ಹೌದು… ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಕಲಿತ 1995-96ನೆಯ ಸಾಲಿನ ವಿದ್ಯಾರ್ಥಿಗಳು ತಾವು ಎಸ್’ಎಸ್’ಎಲ್’ಸಿ ಮುಕ್ತಾಯಗೊಳಿಸಿ 25 ವರ್ಷ ಸಲ್ಲುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಶಾಲೆಯ ಎಲ್ಲ ಶಿಕ್ಷಕರಿಗೆ ಗೌರವ ಸಮರ್ಪಣೆ ಮಾಡಲು ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಎಲ್ಲರಂತೆ 1995-96ನೆಯ ಸಾಲಿನ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನ ನಿಮಿತ್ತ ಒಂದೊಂದು ಊರುಗಳಲ್ಲಿ ನೆಲೆಸಿದ್ದಾರೆ. ಆದರೆ, ತಿಂಗಳುಗಟ್ಟಲೆ ಶ್ರಮವಹಿಸಿ ಇವರನ್ನೆಲ್ಲಾ ಒಟ್ಟಾಗಿ ಸೇರಿಸಿದ ಕೆಲವು ವಿದ್ಯಾರ್ಥಿಗಳು, ತಮಗೆ ಅಂದು ಪಾಠ ಕಲಿಸಿದ್ದ ಬೇರೆ ಬೇರೆ ನಗರದಲ್ಲಿ ನೆಲೆಸಿರುವ ಶಿಕ್ಷಕರನ್ನೂ ಸಹ ಕರೆಸಿ ಸನ್ಮಾನ ಮಾಡಿ, ಜೀವಮಾನವಿಡೀ ನೆನಪಿನಲ್ಲಿಡಬಹುದಾದ ಅಪರೂಪದ್ದೊಂದು ಕಾರ್ಯಕ್ರಮ ಮಾಡಿದ್ದಾರೆ.

ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಟಿ. ರಘುಮೂರ್ತಿ, ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಪಡೆದ ಅನುಭವಗಳು ಸದಾ ಮನಸ್ಸಿನಲ್ಲಿ ಉಳಿಯುತ್ತವೆ. ಹೀಗಾಗಿ, ಈ ಹಂತದಲ್ಲಿ ಮಕ್ಕಳ ಬೌದ್ಧಿಕ ಸಾಮರ್ಥ್ಯವನ್ನು ಶಿಕ್ಷಕರು ಅರಿತು ನೈತಿಕ ಶಿಕ್ಷಣ ನೀಡುವ ಜೊತೆಯಲ್ಲಿ, ಅವರಿಗೆ ಮುಂದಿನ ಉತ್ತಮ ಬದುಕು ಕಟ್ಟಿಕೊಳ್ಳುವಲ್ಲಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.


1995-96ನೆಯ ಸಾಲಿನಲ್ಲಿ ಕಲಿತ ವಿದ್ಯಾರ್ಥಿಗಳ ಇಷ್ಟು ವರ್ಷದ ನಂತರವೂ ಸಹ ತಮ್ಮ ಶಿಕ್ಷಕರಿಗೆ ಗೌರವ ಸಲ್ಲಿಸಬೇಕು ಎಂದು ಇಂತಹ ಒಂದು ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತಸದ ವಿಚಾರ. ಇವರುಗಳು ತಮ್ಮ ಗುರುಗಳ ಮೇಲಿಟ್ಟಿರುವ ಪ್ರೀತಿ, ಭಕ್ತಿ ಹಾಗೂ ಗೌರವವನ್ನು ಇಂದಿನ ವಿದ್ಯಾರ್ಥಿಗಳೂ ಸಹ ಅಳವಡಿಸಿಕೊಳ್ಳಬೇಕು ಎಂದರು.

ವಿವೇಕಾನಂದ ಶಾಲೆಯ ಕಾರ್ಯದರ್ಶಿ ಸ್ಪೂರ್ತಿ ನಿತೇಶ್ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವುದು ನಮ್ಮ ಈಗಿನ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. ನಮ್ಮ ಶಾಲೆಯಲ್ಲಿ ಪ್ರಸ್ತುತ ಅತ್ಯುತ್ತಮ ಪಠ್ಯಶಿಕ್ಷಣ, ನೈತಿಕ ಶಿಕ್ಷಣ ಹಾಗೂ ನಮ್ಮ ವಿದ್ಯಾರ್ಥಿಗಳು ಸಮಗ್ರವಾಗಿ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಶ್ರಮಿಸುತ್ತಿದ್ದೇವೆ ಎಂದರು.

1995-96ನೆಯ ಸಾಲಿನಲ್ಲಿ ಶಿಕ್ಷಕರಾಗಿದ್ದ ಮುಖ್ಯೋಪಾಧ್ಯಾಯಿನಿ ಪ್ರಮೀಳಾ, ಶಿಕ್ಷಕರಾದ ವಿಜಯಮ್ಮ, ಎಚ್.ಎಸ್. ಮನೋರಮಾ, ನಾಗರತ್ನ, ವೀರಭದ್ರಪ್ಪ, ಮಲ್ಲಪ್ಪ, ಚಿದಾನಂದ ಮೂರ್ತಿ, ರಾಜಣ್ಣ, ಉಜ್ಜಿನಪ್ಪ, ನಾಗೇಶ್, ಶಿಕ್ಷಕೇತರ ಸಿಬ್ಬಂದಿಗಳಾದ ಅಶ್ವಾಕ್ ಹಾಗೂ ಅಹಮದ್ ಅವರುಗಳನ್ನು ಪ್ರೀತಿಯಿಂದ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯೋಪಾಧ್ಯಾಯಿನಿ ಪ್ರಮೀಳಾ, ಶಿಕ್ಷಕರಾಗಿ ನಮ್ಮ ಬಳಿ ಕಲಿಯುವ ವಿದ್ಯಾರ್ಥಿಗಳು ಕೇವಲ ಪಠ್ಯಪುಸ್ತಕದ ಜ್ಞಾನ ಪಡೆದರೆ ಸಾಲದು. ಸಮಗ್ರವಾಗಿ ವ್ಯಕ್ತಿತ್ವ ರೂಪಿಸಿಕೊಂಡು ಸಮಾಜದಲ್ಲಿ ಉತ್ತಮ ಜೀವನ ನಡೆಸುವಂತಾಗಬೇಕು ಎಂಬುದು ನಮ್ಮ ಆಶಯ. ಈ ರೀತಿ ನಮ್ಮಲ್ಲಿ ಕಲಿತು ಉತ್ತಮ ಸ್ಥಾನದಲ್ಲಿರುವ ವಿದ್ಯಾರ್ಥಿಗಳು ಇಂದು ನಮ್ಮನ್ನು ಗೌರವಿಸುತ್ತಿರುವುದಕ್ಕೆ ಹೃದಯ ತುಂಬಿ ಬರುತ್ತಿದೆ ಎಂದರು.

ತಮ್ಮ ಮನದಾಳದ ಮಾತನ್ನು ಹಂಚಿಕೊಂಡ ಶಿಕ್ಷಕ ವೀರಭದ್ರಪ್ಪ, ಯಾವುದೇ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಸುವಾಗ ಶಿಸ್ತಿನಿಂದ ಇರುತ್ತಾರೆ. ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಅವರನ್ನು ಸರಿದಾರಿಗೆ ತರುವುದು ಶಿಕ್ಷಕರ ಕರ್ತವ್ಯವಾಗಿರುವುದರಿಂದ ದಂಡಿಸುವುದು ಅನಿವಾರ್ಯವಾಗಿರುತ್ತದೆ. ಆದರೆ, ಇಂದಿನ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಹೊಡೆಯುವುದಿರಲಿ, ಜೋರಾಗಿ ಬೈಯ್ಯವುದೂ ಸಹ ಅಪರಾಧವಾಗುತ್ತಿದೆ. ಇಂತಹ ಪರಿಸ್ಥಿತಿಯಿದ್ದಾಗ ಯಾವುದೇ ಶಿಕ್ಷಕ ವಿದ್ಯಾರ್ಥಿಗಳನ್ನು ತಿದ್ದಲೂ ಸಹ ಹಿಂಜರಿಯಬೇಕಾಗುತ್ತದೆ. ಅದು ಇಡಿಯ ಶಿಕ್ಷಣ ವ್ಯವಸ್ಥೆಯ ಮೇಲೆ ಪರೋಕ್ಷ ಅಡ್ಡ ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಗಳು ಬದಲಾಗಬೇಕು ಎಂದು ಉದಾಹರಣೆ ಸಹಿತ ಇಂದಿನ ವಾಸ್ತವ ಸ್ಥಿತಿಯನ್ನು ತೆರೆದಿಟ್ಟರು.

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ರವಿಕುಮಾರ್, ಚಂದ್ರು ಮೋಹನ್, ಶಿಕ್ಷಕರಾದ ಕಿಶೋರ್ ಹಾಗೂ ಲತಾ ಮಾತನಾಡಿದರು. ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್, ನಗರಸಭೆ ಸದಸ್ಯ ಸುಜಾತಾ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಪ್ರಸನ್ನಕುಮಾರ್, ನಿರ್ದೇಶಕ ನಿತೀಶ್ ಕುಮಾರ್, ಪಾಲಯ್ಯ, ಪ್ರಹ್ಲಾದ್ ಸೇರಿದಂತೆ ಹಲವರಿದ್ದರು.

ಗುರುವಂದನಾ ಕಾರ್ಯಕ್ರಮ ಆಯೋಜಿಸಿ, ತಮ್ಮ ಶಾಲಾ ದಿನಗಳ ನೆನಪಿನ ಬುತ್ತಿಯನ್ನು ಹಂಚಿಕೊಂಡ 1995-96ರ ಸಾಲಿನ ವಿದ್ಯಾರ್ಥಿಗಳಿವರು:

ಅನಿತಾ ಪಿ.ಆರ್.
ಗೀತಾ ರಾಣಿ ಸಿ
ಜಲಜ ಎಸ್.ಡಿ.
ಜೀನತ್ ಎಚ್.
ಜೇಷ್ಠ ಎಂ.ಎಚ್.
ಕನ್ಯಾಕುಮಾರಿ ಕೆ.ಆರ್.
ಕವಿತಾ ಆರ್.ವಿ.
ಲತಾ ಕೆ.ಎನ್.
ಲತಾ ಎಸ್.
ಮಂಜುಳ ಪಿ.
ನಾಗವೇಣಿ ಆರ್.
ನಾಗವೇಣಿ ಕೆ.ಬಿ.
ನೇತ್ರಾವತಿ ಜಿ.ಎನ್.
ನಿರ್ಮಲ ಕೆ.ಆರ್.
ರೇಖಾ ಜಿ.ಬಿ.
ರೇಖಾ ಆರ್.ಎ.
ಸರಿತ ಜಿ.
ಶೈಲಜ ಎನ್.
ಶಶಿಕಲಾ ಎನ್.
ಶಿಲ್ಪ ಆರ್.
ಶಿಲ್ಪ ಜೆ.
ಸ್ನೇಹ ಜಿ.
ಸುಜಾತ ಓ.
ಸುಮ ಪಿ.
ಸುಮ ಜಿ.ಆರ್.
ಸುನೀತ ಎಸ್.ಟಿ.
ವೀಣಾ ಎಂ.
ವಿಶಾಲಾಕ್ಷಿ ಜೆ.ಎಸ್.
ಅಶ್ವತ್ಥ್‌ ನಾರಾಯಣ ಎಸ್.
ಬದ್ರಿ ಎನ್.ಎಸ್.
ಚಂದ್ರಮೋಹನ್ ಕೆ.
ದಾದಾ ಮಹಮ್ಮದ್ ರಫೀ
ದಾದಾಫೀರ್ ಎಂ.
ಫಯಾಝ್ ಉಲ್ಲಾಖಾನ್
ಹರೀಶ್ ಡಿ.ವಿ.
ಕಿಶೋರ್ ಬಿ.ಜಿ.
ಲತೀಫ್ ಸಾಬ್ ಕೆ.ಎಚ್.
ಮಲ್ಲೇಶ್ ಜೆ.
ನಾಗೇಂದ್ರಚಾರಿ ಬಿ.
ನರೇಂದ್ರ ಎಚ್.
ಪಂಪಾಪತಿರಾಜ್ ಬಿ.ವಿ.
ಪ್ರಕಾಶ್ ಕೆ.ಎಸ್.
ರಾಘವೇಂದ್ರ ಆರ್.ಎಸ್.
ರಘು ಸಿ.
ಸಂತೋಷ್ ಕುಮಾರ್ ಬಿ
ಸುರೇಂದ್ರಬಾಬು ಡಿ.ಎಸ್.
ಸುರೇಶ್ ಬಾಬು ಕೆ.ಬಿ.
ಶರೀಫ್ ಎಂ.
ಶಿವಪ್ರಸಾದ್ ಪಿ.ಎಸ್.
ಶ್ರೀನಿವಾಸ್ ಡಿ.
ತಿಪ್ಪೇಶ್ ಕುಮಾರ್ ಜೆ.
ವೀರೇಶ್ ಎಂ.
ವೀರೇಶ್ ಬಾಬು ಎಂ.ಸಿ.

Get in Touch With Us info@kalpa.news Whatsapp: 9481252093

Tags: Bayalu Seeme NewsChallakereChitradurgaHonor to TeachersMLA T RaghumurthyOld StudentsSSLCSwami Vivekananda High SchoolTeacherಗುರುಗುರುವಂದನೆಚಳ್ಳಕೆರೆಶಾಸಕ ಟಿ. ರಘುಮೂರ್ತಿಸ್ವಾಮಿ ವಿವೇಕಾನಂದ ಪ್ರೌಢಶಾಲೆಹಳೆಯ ವಿದ್ಯಾರ್ಥಿ
Previous Post

ಶಿಲ್ಪಾ ಫೌಂಡೇಷನ್ ವತಿಯಿಂದ ಮಂಡಗದ್ದೆ ಶಾಲಾ ವಿದ್ಯಾರ್ಥಿಗಳಿಗೆ ಸ್ಕೂಲ್, ಸ್ಪೋರ್ಟ್ಸ್‌ ಕಿಟ್ ವಿತರಣೆ

Next Post

ಹೊಳೆಹೊನ್ನೂರು ಬಳಿ ಬಸ್-ಬೈಕ್ ನಡುವೆ ಭೀಕರ ಅಪಘಾತ: ಗರ್ಭಿಣಿ ಸೇರಿ ಮೂವರ ಧಾರುಣ ಸಾವು

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post

ಹೊಳೆಹೊನ್ನೂರು ಬಳಿ ಬಸ್-ಬೈಕ್ ನಡುವೆ ಭೀಕರ ಅಪಘಾತ: ಗರ್ಭಿಣಿ ಸೇರಿ ಮೂವರ ಧಾರುಣ ಸಾವು

Discussion about this post

ಆಡಿಯನ್ಸ್ ಪೋಲ್

ಹಿಜಾಬ್ ವಿವಾದ/ಗಲಭೆ ಮತಾಂಧ ಶಕ್ತಿಗಳ ಷಡ್ಯಂತ್ರವೇ?

View Results

Loading ... Loading ...
https://kalahamsa.in/services/ https://kalahamsa.in/services/ https://kalahamsa.in/services/

Recent News

ಮಗಳ ಮೇಲೆ ಅತ್ಯಾಚಾರ | ತಂದೆ ಬಂಧನ

June 23, 2025

ಆರೋಗ್ಯಭರಿತ ಸುಖ ಜೀವನ ನಡೆಸಲು ಯೋಗ ಅಗತ್ಯ: ವಿನಾಯಕ ಕುಡ್ವ ಅಭಿಪ್ರಾಯ

June 23, 2025

ಶಿವಮೊಗ್ಗ | ಮುಖ್ಯಮಂತ್ರಿಗಳು ತುಟಿಕ್‍ಪಿಟಿಕ್ ಎನ್ನುತ್ತಿಲ್ಲ | ಶಾಸಕ ಚನ್ನಬಸಪ್ಪ ಗುಡುಗಿದ್ದೇಕೆ?

June 23, 2025

ಯಶಸ್ಸಿನ ಬೆನ್ನು ಹತ್ತಲು ಆತ್ಮವಿಶ್ವಾಸ ಬಹಳ ಮುಖ್ಯ: ಚಂದನ್ ರಾವ್

June 23, 2025
kalpa.news

Reproduction, in whole or in part, in any form or medium without the express written permission of Kapla News is strictly prohibited.

Follow Us

Browse by Category

  • Army
  • Counter
  • Editorial
  • English Articles
  • Others
  • Photo Gallery
  • Small Bytes
  • Special Articles
  • video
  • ಅಂಕಣ
  • ಅಜೇಯ್ ಕಿರಣ್ ಆಚಾರ್
  • ಅಂತಾರಾಷ್ಟ್ರೀಯ
  • ಅಧ್ಯಾತ್ಮ ಸಾಧನೆ
  • ಆನಂದ ಕಂದ
  • ಆರೋಗ್ಯ – ಜೀವನ ಶೈಲಿ
  • ಇದೊಂದು ಜಗತ್ತು
  • ಉಡುಪಿ
  • ಉತ್ತರ ಕನ್ನಡ
  • ಕಲಬುರಗಿ
  • ಕೈ ರುಚಿ
  • ಕೊಡಗು
  • ಕೊಪ್ಪಳ
  • ಕೋಲಾರ
  • ಕ್ರೀಡೆ
  • ಗದಗ
  • ಚಾಮರಾಜನಗರ
  • ಚಿಕ್ಕ ಬಳ್ಳಾಪುರ
  • ಚಿಕ್ಕಮಗಳೂರು
  • ಚಿತ್ರದುರ್ಗ
  • ಜಾಬ್-ಸ್ಟ್ರೀಟ್
  • ಜಿಲ್ಲೆ
  • ಜ್ಯೋತಿರ್ವಿಜ್ಞಾನ
  • ಡಾ.ಗುರುರಾಜ ಪೋಶೆಟ್ಟಿಹಳ್ಳಿ
  • ತೀರ್ಥಹಳ್ಳಿ
  • ತುಮಕೂರು
  • ದಕ್ಷ
  • ದಕ್ಷಿಣ ಕನ್ನಡ
  • ದಾವಣಗೆರೆ
  • ಧಾರವಾಡ
  • ನಾದ ಕಲ್ಪ
  • ನಿತ್ಯಾನಂದ ವಿವೇಕವಂಶಿ
  • ಪೀಪಲ್ ರಿಪೋರ್ಟಿಂಗ್
  • ಪುನೀತ್ ಜಿ. ಕೂಡ್ಲೂರು
  • ಪುರಾಣ ಮತ್ತು ಚರಿತ್ರೆ
  • ಪ್ರಕಾಶ್ ಅಮ್ಮಣ್ಣಾಯ
  • ಬಳ್ಳಾರಿ
  • ಬಾಗಲಕೋಟೆ
  • ಬೀದರ್
  • ಬೆಂ. ಗ್ರಾಮಾಂತರ
  • ಬೆಂಗಳೂರು ನಗರ
  • ಬೆಳಗಾವಿ
  • ಭದ್ರಾವತಿ
  • ಮಂಡ್ಯ
  • ಮೈಸೂರು
  • ಯಾದಗಿರಿ
  • ರಾಜಕೀಯ
  • ರಾಮನಗರ
  • ರಾಯಚೂರು
  • ರಾಷ್ಟ್ರೀಯ
  • ಲೈಫ್-ಸ್ಟೈಲ್
  • ವಾಣಿಜ್ಯ
  • ವಿಜಾಪುರ
  • ವಿಜ್ಞಾನ-ತಂತ್ರಜ್ಞಾನ
  • ವಿನಯ್ ಶಿವಮೊಗ್ಗ
  • ವೈದ್ಯೋ ನಾರಾಯಣೋ ಹರಿಃ
  • ವೈಶಿಷ್ಟ್ಯ
  • ಶಿಕಾರಿಪುರ
  • ಶಿವಮೊಗ್ಗ
  • ಸಚಿನ್ ಪಾರ್ಶ್ವನಾಥ್
  • ಸಾಗರ
  • ಸಿನೆಮಾ
  • ಸೊರಬ
  • ಹಾವೇರಿ
  • ಹಾಸನ
  • ಹೊಸನಗರ

Recent News

ಮಗಳ ಮೇಲೆ ಅತ್ಯಾಚಾರ | ತಂದೆ ಬಂಧನ

June 23, 2025

ಆರೋಗ್ಯಭರಿತ ಸುಖ ಜೀವನ ನಡೆಸಲು ಯೋಗ ಅಗತ್ಯ: ವಿನಾಯಕ ಕುಡ್ವ ಅಭಿಪ್ರಾಯ

June 23, 2025

ಶಿವಮೊಗ್ಗ | ಮುಖ್ಯಮಂತ್ರಿಗಳು ತುಟಿಕ್‍ಪಿಟಿಕ್ ಎನ್ನುತ್ತಿಲ್ಲ | ಶಾಸಕ ಚನ್ನಬಸಪ್ಪ ಗುಡುಗಿದ್ದೇಕೆ?

June 23, 2025
  • About
  • Advertise
  • Privacy & Policy
  • Contact

© 2025 Kalpa News - All Rights Reserved | Powered by Kalahamsa Infotech Pvt. ltd.

No Result
View All Result
  • ಮುಖಪುಟ
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಾಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
  • ಆರೋಗ್ಯ – ಜೀವನ ಶೈಲಿ
    • ವೈದ್ಯೋ ನಾರಾಯಣೋ ಹರಿಃ
  • ವಿಜ್ಞಾನ-ತಂತ್ರಜ್ಞಾನ
  • ಜಾಬ್-ಸ್ಟ್ರೀಟ್
  • ಸರಕಾರಿ ಯೋಜನೆಗಳು

© 2025 Kalpa News - All Rights Reserved | Powered by Kalahamsa Infotech Pvt. ltd.

Welcome Back!

Login to your account below

Forgotten Password?

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In
error: Content is protected by Kalpa News!!